ಬೇಡ್ಕಣಿ ಸುರಂಗದ ಸ್ಮರಣೆಗೆ ಬಲಕೊಟ್ಟ ಕುಸಿತ


ಮಳೆನಿಂತು ಹೋದ ಮೇಲೆ ಭಾಗ-07
ಬಿರುಕು,ಕುಸಿತಗಳ ಒಳಗಿದೆಯಾ ಸುರಂಗ ಎನ್ನುವ ಅನುಮಾನದ ಸುತ್ತ ಚಿತ್ತ
ಬಿರುಕು ಬಿಟ್ಟ ಇಲ್ಲಿಯ (ಸಿದ್ಧಾಪುರ) ಹೆಗಡೆಮನೆ, ಮದ್ದಿನಕೇರಿ ಮತ್ತು ಭಾನ್ಕುಳಿ ನಡುವೆ ಏನಾದರು ಸಂಬಂಧವಿದೆಯಾ? ಎನ್ನುವ ಪ್ರಶ್ನೆಯೊಂದು ಈಗ ಒಡಮೂಡಿದೆ.
ಸಿದ್ಧಾಪುರದ ಮಹಾಮಳೆ, ಪ್ರವಾಹಕ್ಕೆ ಹೆಮ್ಮನಬೈಲ್, ಅಕ್ಕುಂಜಿ ಮತ್ತು ಕಲ್ಯಾಣಪುರ ಸೇರಿದಂತೆ ಕೆಲವೆಡೆ ಸಾರ್ವಜನಿಕರು ಮನೆ ಬಿಟ್ಟು ಸ್ಥಳಾಂತರವಾಗಬೇಕಾದ ಸ್ಥಿತಿ ಉದ್ಭವಿಸಿತ್ತು. ಇದೇ ವೇಳೆಗೆ ಹೆಗಡೆಮನೆ, ಮದ್ದಿನಕೇರಿ, ಸಾತನಕೇರಿ, ಭಾನ್ಕುಳಿಗಳಲ್ಲಿ ಧರೆ ಕುಸಿದಿತ್ತು. ಭಾನ್ಕುಳಿಯಲ್ಲಂತೂ ಹತ್ತು ಅಡಿಯಷ್ಟು ಕೆಳಕ್ಕೆ ಕುಸಿದ ಭೂಮಿ ಗದ್ದೆಗಳನ್ನು ಮೇಲಕ್ಕೆತ್ತಿತ್ತು. ಈ ವಿದ್ಯಮಾನದ ನಂತರ ಭಾನ್ಕುಳಿಯಲ್ಲಿ ಒಂದು ಮನೆ, ಮದ್ದಿನಕೇರಿಯ 2 ಮನೆಗಳು, ಹೆಗಡೆಮನೆಯ ಒಂದು ಮನೆ ಸ್ಥಳಾಂತರಿಸಬೇಕೆಂದು ತಾಲೂಕಾ ಆಡಳಿತ ನಿರ್ಧೇಶನ ನೀಡಿತ್ತು.
ಮಳೆಯ ನಂತರ ಈ ಗ್ರಾಮಗಳು ಭಾದಿತ ಕುಟುಂಬಗಳೆಲ್ಲಾ ನಿಟ್ಟುಸಿರು ಬಿಟ್ಟಂತಿವೆ.ಆದರೆ ಈ ಭಾಗದಲ್ಲಿ ಬಿಳಗಿ ಅರಸರ ಕಾಲದ ಸುರಂಗ ಒಂದಿದ್ದುಅದು ಬೇಡ್ಕಣಿಯಿಂದ ಉತ್ತರ ಮತ್ತು ದಕ್ಷಿಣಾಭಿಮುಖವಾಗಿದೆ ಎನ್ನಲಾಗುತ್ತಿದೆ.
ಆ ಕಾಲದ ಆ ಸುರಂಗಕ್ಕೂ ಈ ಭಾಗದ ಈಗಿನ ಕುಸಿತಗಳಿಗೂ ಸಂಬಂಧವಿದೆಯಾ ಎನ್ನುವ ಪ್ರಶ್ನೆ ಈಗ ಕೆಲವರ ತಲೆತಿನ್ನತೊಡಗಿದೆ. ಬೇಡ್ಕಣಿಯಿಂದ ಮದ್ದಿನಕೇರಿ,ಸಾತನಕೇರಿ, ಹೆಗಡೆಮನೆ, ಗುಂಜಗೋಡು ಭಾಗದಲ್ಲಿ ಈ ಸುರಂಗದ ವ್ಯಾಪ್ತಿ ಇರಬಹುದಾಗಿದ್ದು ಆ ಭಾಗದಲ್ಲಿ ನಿರಂತರವಾಗಿ ಕುಸಿಯುತ್ತಿರುವ ಭೂಮಿ-ಧರೆಗಳ ಹಿಂದೆ ಈ ಸುರಂಗದ ಹಿನ್ನೆಲೆ ಇರಬಹುದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಬಿಳಗಿಯಿಂದ ಬೇಡ್ಕಣಿಯ ವರೆಗೆ ಕೋಟೆ (ಕೋಟೆ ಹನುಮಂತ) ಇದರ ಒಳಭಾಗದಲ್ಲಿ ಸುರಂಗ ಇತ್ಯಾದಿ ಇರಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದೇ ಭಾಗದಲ್ಲಿ ಮೇಲಿಂದ ಮೇಲೆ ಕುಸಿತಗಳಾಗುತ್ತಿರುವುದು ಇವುಗಳ ಅಸ್ಥಿತ್ವದ ಹಿನ್ನೆಲೆಯ ಕಾರಣಕ್ಕೇ ಎನ್ನುವ ಅನುಮಾನಗಳು ಬಲವಾಗುವಂತೆ ಕೆಲವು ಐತಿಹಾಸಿಕ ಸಾಕ್ಷಗಳೂ ಸಿಗತೊಡಗಿವೆ.
ಈ ಬಗ್ಗೆ ಸಂಶೋಧನೆ ಮಾಡುವವರು, ಇತಿಹಾಸ ತಜ್ಞರು ಈ ಸಾಧ್ಯತೆಗಳ ಬಗ್ಗೆ ಅನ್ವೇಷಣೆ ಮಾಡಿದರೆ ಸತ್ಯಶೋಧನೆಯಾಗಬಹುದೆಂದು ಈಗ ಊಹಿಸಲು ಅವಕಾಶವಿದೆ.

ಬಿಳಗಿ ಸುತ್ತ ಮುತ್ತ ಕೈ ಹಾಕಿದಲ್ಲೆಲ್ಲಾ ಪುರಾತನ ಅವಶೇಶಗಳು, ಪಳಯುಳಿಕೆಗಳು ಸಿಗುತ್ತವೆ.
ಬೇಡ್ಕಣಿ ಸುತ್ತಮುತ್ತ ಒಂದು ಸುರಂಗಮಾರ್ಗವಿದೆ ಎನ್ನುವ ಹಿರಿಯರ ಮಾತು ಸುಳ್ಳಿರಲಿಕ್ಕಿಲ್ಲ. ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಲಕ್ಷ್ಮೀಶ ಹೆಗಡೆ ಸೋಂದಾ, ಇತಿಹಾಸತಜ್ಞ
ನಾಡಿನ ಸಮಸ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು
ಇಂದು ನಮ್ಮ ಭಾಗದ ಮಳೆಹಾನಿ ವೀಕ್ಷಣೆಗೆ ಆಗಮಿಸುತ್ತಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ
ಸ್ವಾಗತ-ಸುಸ್ವಾಗತ
ನಾಗರಾಜ್ ನಾಯ್ಕ ಬೇಡ್ಕಣಿ,
ಜಿ.ಪಂ. ಸದಸ್ಯರು ದೊಡ್ಮನೆಕ್ಷೇತ್ರ ಸಿದ್ಧಾಪುರ (ಉ.ಕ.)
ಗೌರಿ-ಗಣೇಶ ಹಬ್ಬದಿಂದ ಶುಭಾರಂಭ ಮಾಡಿರುವ ಸಿದ್ದಾಪುರದ ಮೊದಲ ಪಿಜ್ಜಾಹೌಸ್ ಐಸ್ ಗ್ಯಾಲಾಕ್ಷಿ ಕಾರ್ನರ್ ನಿಂದ ಸಮಸ್ತರಿಗೆ
ಗಣೇಶ ಚತುರ್ಥಿ ಮತ್ತು ಮೊಹರಂ ಶುಭಾಶಯಗಳು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *