ಬೇಡ್ಕಣಿ ಸುರಂಗದ ಸ್ಮರಣೆಗೆ ಬಲಕೊಟ್ಟ ಕುಸಿತ


ಮಳೆನಿಂತು ಹೋದ ಮೇಲೆ ಭಾಗ-07
ಬಿರುಕು,ಕುಸಿತಗಳ ಒಳಗಿದೆಯಾ ಸುರಂಗ ಎನ್ನುವ ಅನುಮಾನದ ಸುತ್ತ ಚಿತ್ತ
ಬಿರುಕು ಬಿಟ್ಟ ಇಲ್ಲಿಯ (ಸಿದ್ಧಾಪುರ) ಹೆಗಡೆಮನೆ, ಮದ್ದಿನಕೇರಿ ಮತ್ತು ಭಾನ್ಕುಳಿ ನಡುವೆ ಏನಾದರು ಸಂಬಂಧವಿದೆಯಾ? ಎನ್ನುವ ಪ್ರಶ್ನೆಯೊಂದು ಈಗ ಒಡಮೂಡಿದೆ.
ಸಿದ್ಧಾಪುರದ ಮಹಾಮಳೆ, ಪ್ರವಾಹಕ್ಕೆ ಹೆಮ್ಮನಬೈಲ್, ಅಕ್ಕುಂಜಿ ಮತ್ತು ಕಲ್ಯಾಣಪುರ ಸೇರಿದಂತೆ ಕೆಲವೆಡೆ ಸಾರ್ವಜನಿಕರು ಮನೆ ಬಿಟ್ಟು ಸ್ಥಳಾಂತರವಾಗಬೇಕಾದ ಸ್ಥಿತಿ ಉದ್ಭವಿಸಿತ್ತು. ಇದೇ ವೇಳೆಗೆ ಹೆಗಡೆಮನೆ, ಮದ್ದಿನಕೇರಿ, ಸಾತನಕೇರಿ, ಭಾನ್ಕುಳಿಗಳಲ್ಲಿ ಧರೆ ಕುಸಿದಿತ್ತು. ಭಾನ್ಕುಳಿಯಲ್ಲಂತೂ ಹತ್ತು ಅಡಿಯಷ್ಟು ಕೆಳಕ್ಕೆ ಕುಸಿದ ಭೂಮಿ ಗದ್ದೆಗಳನ್ನು ಮೇಲಕ್ಕೆತ್ತಿತ್ತು. ಈ ವಿದ್ಯಮಾನದ ನಂತರ ಭಾನ್ಕುಳಿಯಲ್ಲಿ ಒಂದು ಮನೆ, ಮದ್ದಿನಕೇರಿಯ 2 ಮನೆಗಳು, ಹೆಗಡೆಮನೆಯ ಒಂದು ಮನೆ ಸ್ಥಳಾಂತರಿಸಬೇಕೆಂದು ತಾಲೂಕಾ ಆಡಳಿತ ನಿರ್ಧೇಶನ ನೀಡಿತ್ತು.
ಮಳೆಯ ನಂತರ ಈ ಗ್ರಾಮಗಳು ಭಾದಿತ ಕುಟುಂಬಗಳೆಲ್ಲಾ ನಿಟ್ಟುಸಿರು ಬಿಟ್ಟಂತಿವೆ.ಆದರೆ ಈ ಭಾಗದಲ್ಲಿ ಬಿಳಗಿ ಅರಸರ ಕಾಲದ ಸುರಂಗ ಒಂದಿದ್ದುಅದು ಬೇಡ್ಕಣಿಯಿಂದ ಉತ್ತರ ಮತ್ತು ದಕ್ಷಿಣಾಭಿಮುಖವಾಗಿದೆ ಎನ್ನಲಾಗುತ್ತಿದೆ.
ಆ ಕಾಲದ ಆ ಸುರಂಗಕ್ಕೂ ಈ ಭಾಗದ ಈಗಿನ ಕುಸಿತಗಳಿಗೂ ಸಂಬಂಧವಿದೆಯಾ ಎನ್ನುವ ಪ್ರಶ್ನೆ ಈಗ ಕೆಲವರ ತಲೆತಿನ್ನತೊಡಗಿದೆ. ಬೇಡ್ಕಣಿಯಿಂದ ಮದ್ದಿನಕೇರಿ,ಸಾತನಕೇರಿ, ಹೆಗಡೆಮನೆ, ಗುಂಜಗೋಡು ಭಾಗದಲ್ಲಿ ಈ ಸುರಂಗದ ವ್ಯಾಪ್ತಿ ಇರಬಹುದಾಗಿದ್ದು ಆ ಭಾಗದಲ್ಲಿ ನಿರಂತರವಾಗಿ ಕುಸಿಯುತ್ತಿರುವ ಭೂಮಿ-ಧರೆಗಳ ಹಿಂದೆ ಈ ಸುರಂಗದ ಹಿನ್ನೆಲೆ ಇರಬಹುದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಬಿಳಗಿಯಿಂದ ಬೇಡ್ಕಣಿಯ ವರೆಗೆ ಕೋಟೆ (ಕೋಟೆ ಹನುಮಂತ) ಇದರ ಒಳಭಾಗದಲ್ಲಿ ಸುರಂಗ ಇತ್ಯಾದಿ ಇರಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದೇ ಭಾಗದಲ್ಲಿ ಮೇಲಿಂದ ಮೇಲೆ ಕುಸಿತಗಳಾಗುತ್ತಿರುವುದು ಇವುಗಳ ಅಸ್ಥಿತ್ವದ ಹಿನ್ನೆಲೆಯ ಕಾರಣಕ್ಕೇ ಎನ್ನುವ ಅನುಮಾನಗಳು ಬಲವಾಗುವಂತೆ ಕೆಲವು ಐತಿಹಾಸಿಕ ಸಾಕ್ಷಗಳೂ ಸಿಗತೊಡಗಿವೆ.
ಈ ಬಗ್ಗೆ ಸಂಶೋಧನೆ ಮಾಡುವವರು, ಇತಿಹಾಸ ತಜ್ಞರು ಈ ಸಾಧ್ಯತೆಗಳ ಬಗ್ಗೆ ಅನ್ವೇಷಣೆ ಮಾಡಿದರೆ ಸತ್ಯಶೋಧನೆಯಾಗಬಹುದೆಂದು ಈಗ ಊಹಿಸಲು ಅವಕಾಶವಿದೆ.

ಬಿಳಗಿ ಸುತ್ತ ಮುತ್ತ ಕೈ ಹಾಕಿದಲ್ಲೆಲ್ಲಾ ಪುರಾತನ ಅವಶೇಶಗಳು, ಪಳಯುಳಿಕೆಗಳು ಸಿಗುತ್ತವೆ.
ಬೇಡ್ಕಣಿ ಸುತ್ತಮುತ್ತ ಒಂದು ಸುರಂಗಮಾರ್ಗವಿದೆ ಎನ್ನುವ ಹಿರಿಯರ ಮಾತು ಸುಳ್ಳಿರಲಿಕ್ಕಿಲ್ಲ. ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಲಕ್ಷ್ಮೀಶ ಹೆಗಡೆ ಸೋಂದಾ, ಇತಿಹಾಸತಜ್ಞ
ನಾಡಿನ ಸಮಸ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು
ಇಂದು ನಮ್ಮ ಭಾಗದ ಮಳೆಹಾನಿ ವೀಕ್ಷಣೆಗೆ ಆಗಮಿಸುತ್ತಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ
ಸ್ವಾಗತ-ಸುಸ್ವಾಗತ
ನಾಗರಾಜ್ ನಾಯ್ಕ ಬೇಡ್ಕಣಿ,
ಜಿ.ಪಂ. ಸದಸ್ಯರು ದೊಡ್ಮನೆಕ್ಷೇತ್ರ ಸಿದ್ಧಾಪುರ (ಉ.ಕ.)
ಗೌರಿ-ಗಣೇಶ ಹಬ್ಬದಿಂದ ಶುಭಾರಂಭ ಮಾಡಿರುವ ಸಿದ್ದಾಪುರದ ಮೊದಲ ಪಿಜ್ಜಾಹೌಸ್ ಐಸ್ ಗ್ಯಾಲಾಕ್ಷಿ ಕಾರ್ನರ್ ನಿಂದ ಸಮಸ್ತರಿಗೆ
ಗಣೇಶ ಚತುರ್ಥಿ ಮತ್ತು ಮೊಹರಂ ಶುಭಾಶಯಗಳು

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

Latest Posts

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಾದ ಮಾಹಿತಿ ಬಹಿರಂಗವಾಗಿದೆ. ನಾಣಿಕಟ್ಟಾ ಪ್ರದೇಶದಲ್ಲಿ ಆಗಂತುಕರು ಕಡವೆಯನ್ನು ಕೊಂದು ಪರಾರಿಯಾಗಿದ್ದರು. ಈ ಭೇಟೆ ಪ್ರಕರಣದ ಜಾಡು ಹಿಡಿದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *