ಕಾಗೇರಿ- ಹೆಬ್ಬಾರ್ ಶೀತಲ ಸಮರ, ಹಾನಿ ಮಾಡುತ್ತಾ ಅನಂತನ ಅವಾಂತರ? -0001

ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ ರಾಜಕೀಯ ವ್ಯಭಿಚಾರದ ದಿಗ್ಧರ್ಶನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
01- ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆವರಿಗೆ ರಾಜಕೀಯ ಅವಕಾಶ
02- ವಿ.ಎಸ್.ಪಾಟೀಲ್ ದ್ವಿಪಾತ್ರ
03- ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ.
ವಿಧಾನಸಭಾ ಅಧ್ಯಕ್ಷರಾಗಿರುವ
ವಿಶ್ವೇಶ್ವರ ಹೆಗಡೆಯವರಿಗೆ ರಾಜಕೀಯ ಅವಕಾಶ-
ಸತತ ಆರು ಬಾರಿ ಆಯ್ಕೆಯಾಗಿ ಈಗ ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಜ್ಜನತ್ವದ ಸೋಗಿನಲ್ಲಿ ಎಲ್ಲವನ್ನೂ ಮಾಡುವ ಚಾಣಾಕ್ಷ.
ಚುನಾವಣೆ ಗೆಲುವಿರಲಿ,ಇತರ ಕೆಲಸಗಳಿರಲಿ,ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾಗಿ ತನ್ನ ಕೆಲಸ ಸಾಧಿಸಿಕೊಳ್ಳುವ ಚಾಣಾಕ್ಷ ಕಾಗೇರಿ ಅನಾಯಾಸವಾಗಿ ಸಚಿವನಾಗುವ ಅವಕಾಶವನ್ನು ಕಳೆದುಕೊಂಡಿದ್ದುಶಿವರಾಮ ಹೆಬ್ಬಾರ್ ಕಾರಣಕ್ಕೆ.
ಶಿವರಾಮ್ ಹೆಬ್ಬಾರ್ ಎಲ್ಲೂ ಸಲ್ಲಬಲ್ಲ ನಾಯಕ. ಆದರೆ ಕಾಗೇರಿ ಶಿವರಾಮ ಹೆಬ್ಬಾರರಂತೆ ಯಾವ ಆಳಕ್ಕೂ ಇಳಿಯಬಲ್ಲ ಸಮರ್ಥರಲ್ಲ.
ಈ ವರ್ಷದ ಈ ಉಪಚುನಾವಣೆಯ ವಿಶೇಶವೆಂದರೆ……….
ಕಾಗೇರಿ ತೆರೆಮರೆಯಲ್ಲಿ ಮಾಡುತ್ತಿದ್ದ ಆಟವನ್ನು ಈ ಬಾರಿ ಇನ್ನಷ್ಟು ಬುದ್ಧಿವಂತಿಕೆಯಿಂದ ಮಾಡಲು ಅವಕಾಶ ದೊರೆತಿರುವುದು. ಸಂಘದ ವಲಯದಲ್ಲಿ ಮತ್ತು ಜಾತಿ ವ್ಯವಹಾರಗಳಲ್ಲಿ ಶಾಸಕ ಕಾಗೇರಿ ಚತುರ. ಹಿಂದುಳಿದವರು,ದಲಿತರನ್ನು ಸಮಾಧಾನಮಾಡಿದಂತೆ ನಟಿಸಿ, ಗರ್ಭಗುಡಿಯಲ್ಲಿ ಮತ್ತದೇ ವ್ಯವಹಾರ ಮಾಡುವ ನಿಪುಣ. ಇಂಥ ಕಾಗೇರಿ ಈ ಬಾರಿ ವಿಧಾನಸಭಾ ಅಧ್ಯಕ್ಷರಾಗಿರುವ ಸಂಕಟ ಅವರ ರಾಜಕೀಯ ವ್ಯವಹಾರಗಳಿಗೆ ಪೂರಕವಾಗಿದೆ.
ಪಕ್ಷದ ವಲಯ, ರಾಜಕೀಯ, ಚುನಾವಣೆ ಹೀಗೆ ಎಲ್ಲೆಂದರಲ್ಲಿ ಮೂಗು ತೂರಿಸುವ ಕಾಗೇರಿ ವಿಧಾನಸಭಾ ಅಧ್ಯಕ್ಷರಾಗಿರುವುದು ಅವರ ತೆರೆಹಿಂದಿನ ಚಟುವಟಿಕೆಗಳಿಗೆ ಇನ್ನಷ್ಟು ಪೂರಕವಾಗಿದೆ. ವಾಸ್ತವದಲ್ಲಿ ಶಿವರಾಮ ಹೆಬ್ಬಾರ್ ಹವ್ಯಕರು ಮತ್ತು ಕಠ್ಠರ್ ಬ್ರಾಹ್ಮಣರಿಗೆ ಬೇಡದ ಸರಕು. ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಕಾಗೇರಿ ತಮ್ಮ ಆತ್ಮೀಯರಿಂದ ಶಿವರಾಮ ಹೆಬ್ಬಾರ್ ಗೆಲುವು ಯಾರಿಗೂ ಶೋಭೆ ತರಲ್ಲ, ಹಾಗಾಗಿ ಅವರನ್ನು ಸೋಲಿಸುವ ಮೂಲಕ ತನಗೆ ಮಂತ್ರಿ ಭಾಗ್ಯ ಕರುಣಿಸಿ ಎಂದು ತಮ್ಮ ಆಪ್ತವಲಯದಿಂದ ಹೇಳಿಸತೊಡಗಿದ್ದಾರಂತೆ!
ಹೀಗೆ ಹೆಬ್ಬಾರರ ಗೆಲುವಿಗೆ ಮೊದಲ ಕಂಟಕವಾಗಿರುವ ಕಾಗೇರಿ ವಿ.ಎಸ್. ಪಾಟೀಲರ ಪುತ್ರನನ್ನು ಕಾಂಗ್ರೆಸ್ ಗೆ ಕಳಿಸಿ ತೆರೆಮರೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿದ್ದಾರಂತೆ! ಇದರ ಅಂಗವಾಗಿ ಪ್ರಾರಂಭವಾಗಿರುವ ಶಿವರಾಮ್ ಹೆಬ್ಬಾರ್ ಹಠಾವೋ ಪ್ರಯತ್ನ ಅವರದೇ ಪಕ್ಷ,ಅವರದೇ ಜಾತಿಯ ಅಂಗಳದಲ್ಲಿ ಪ್ರಾರಂಭವಾಗಿರುವುದು ಶಿವರಾಮ್ ಹೆಬ್ಬಾರ್ ರಿಗೆ ತಲೆಬಿಸಿ ಮಾಡುತ್ತಿರುವ ವಿದ್ಯಮಾನದ ಪ್ರಾರಂಭ ಎನ್ನಲಾಗುತ್ತಿದೆ.
ಒಂದು ವೇಳೆ ಶಿವರಾಮ್ ಹೆಬ್ಬಾರ್ ಸೋತರೆ ಬಿ.ಜೆ.ಪಿ.ಸರ್ಕಾರದಲ್ಲಿ ಕಾಗೇರಿ ಮತ್ತೆ ಸಚಿವರಾಗಿ ಜಿಲ್ಲಾ ಉಸ್ತುವಾರಿ ನಿರ್ವಹಿಸುತ್ತಾರೆ. ಈ ಉದ್ಧೇಶಕ್ಕೆ ಅಡ್ಡಿಯಾಗಿರುವ ಹೆಬ್ಬಾರ್ ರಿಗೆ ಹವ್ಯಕ ವಲಯದಲ್ಲಿ ವಿರೋಧ ಪ್ರಾರಂಭವಾಗಿರುವುದು ಹವ್ಯಕರ ರಕ್ಷಣಾತ್ಮಕ ಆಟದ ಮುನ್ನುಡಿ ಎನ್ನಲಾಗುತ್ತಿದೆ.
ವಿ.ಎಸ್. ಪಾಟೀಲ್ ದ್ವಿಪಾತ್ರ-
ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಮುಂಡಗೋಡಿನ ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾಂಗ್ರೆಸ್ ಕಡೆ ಮೊದಲ ಹೆಜ್ಜೆ ಇರಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ ಗೂಟದ ಕಾರಿಗೆ ಪಾಟೀಲ್ ರನ್ನು ಕಟ್ಟಿಹಾಕದಿದ್ದಿದ್ದರೆ ಪಾಟೀಲ್ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದರು.
ಒಂದು ಸುತ್ತಿನ ಮಾತುಕತೆ ನಂತರ ಹಿಂದೆ ಸರಿದ ಪಾಟೀಲ್ ಈಗ ಪುತ್ರ ಬಾಬುಗೌಡ ಪಾಟೀಲರನ್ನು ಕಾಂಗ್ರೆಸ್ ಅಂಗಳಕ್ಕೆ ನೂಕುವ ಮೂಲಕ ಬಿ.ಜೆ.ಪಿ. ಮತ್ತು ಹೆಬ್ಬಾರ್ ರಿಗೆ ಕೈಕೊಡಲು ನಿರ್ಧರಿಸಿದ್ದಾರೆ. ಈ ವಿಚಾರ ಬಿ.ಜೆ.ಪಿ.,ಯಡಿಯೂರಪ್ಪನವರಿಗೆ ತಿಳಿದಿದ್ದರೂ ಪಾಟೀಲ್ ಮಾಡುವ ಹಾನಿ ತುಂಬಲು ಅವರ ಬಳಿ ಅಸ್ತ್ರಗಳಿಲ್ಲ, ಹಾಗಾಗಿ ವಿಧಾನಸಭಾಧ್ಯಕ್ಷ ಕಾಗೇರಿ ಮತ್ತು ವಿ.ಎಸ್. ಪಾಟೀಲ್ ಶತ್ರುವಿನ ಶತ್ರು ಮಿತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಪರವಾಗಿ ಕೆಲಸಕ್ಕೆ ಅನುಕೂಲಮಾಡಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ….(ಮುಂದುವರಿದಿದೆ) ಗುತ್ತಿಮನೆ ಕುಂಬಾರಿಕೆ &ಕುಶಲ ಕೈಗಾರಿಕಾ ಸಂಘಕ್ಕೆ ಬೇಕು ಹೊಸರೂಪ
ಸಿದ್ಧಾಪುರ ತಾಲೂಕಿನ ಏಕೈಕ ಕರಕುಶಲ ಕೈಗಾರಿಕಾ ಕೆಲಸಗಾರರ ಸಂಘ ಪುನಶ್ಚೇತನಕ್ಕೆ ಕಾಯುತ್ತಾ ಉಸಿರು ಹಿಡಿದುಕೊಂಡಿದೆ. ಸಹಕಾರಿ ಜಿಲ್ಲೆಯೆಂದೇ ಪ್ರಖ್ಯಾತವಾಗಿರುವ ಉತ್ತರಕನ್ನಡದಲ್ಲಿ ತೋಟಗಾರಿಕೆ,ಕೃಷಿ, ಕೈಗಾರಿಕೆಗಳನ್ನೊಳಗೊಂಡ ವಿವಿದೋದ್ಧೇಶ ಸಹಕಾರಿ ಸಂಘಗಳು ಉತ್ತಮ ಕೆಲಸಗಳ ಮೂಲಕ ಸಾಧನೆ ಮಾಡಿವೆ.
ಇಂಥ ಘನ ಉದ್ದೇಶದಿಂದ ಸಿದ್ದಾಪುರದ ಪ್ರಮುಖರಿಂದ ಪ್ರಾರಂಭವಾದ ಕಾನಗೋಡು ಗ್ರಾ.ಪಂ. ಐಗೋಡಿನ ಗುತ್ತಿಮನೆ ಕುಂಬಾರ ಕರಕುಶಲ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘ ತನ್ನ ನಾಲ್ಕು ದಶಕದ ಅವಧಿಯುದ್ದಕ್ಕೂ ಕುಂಟುತ್ತಾ ಸಾಗುತ್ತಿರುವುದು ಅದರ ಉದ್ಧೇಶಕ್ಕೆ ಅಪವಾದವಾದಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *