

40 ಸಾವಿರ ಕೋಟಿ ರೂಪಾಯಿ ರಕ್ಷಣೆಗಾಗಿ ಮಹಾರಾಷ್ಟ್ರದಲ್ಲಿ ಫಡ್ನವೀಸ್ ಒಂದು ದಿವಸ ಮುಖ್ಯಮಂತ್ರಿಯಾಗಿದ್ದರು ಎಂದು ಯಲ್ಲಾಪುರ ಕ್ಷೇತ್ರದಲ್ಲಿ ಹೇಳಿದ್ದ ಮಾಜಿ ಸಚಿವ ಅನಂತಕುಮಾರ ಹೆಗಡೆಯವರ ಹೇಳಿಕೆ ಮತ್ತು ನಡವಳಿಕೆಗೆ ತೀವೃ ವಿರೋಧ ವ್ಯಕ್ತವಾಗಿದೆ.
ಕಳೆದ ವಾರದ ಕೊನೆಗೆ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆ ಕೇಂದ್ರದ 40 ಸಾವಿರ ಕೋಟಿ ರೂಪಾಯಿ ರಕ್ಷಿಸಲು ಫಡ್ನವೀಸ್ ಏಕ್ ದಿನ್ ಕಾ ಮುಖ್ಯಮಂತ್ರಿ ಆಗಿದ್ದರು ಎಂದು ಅನಂತಕುಮಾರ ಹೆಗಡೆ ಯಲ್ಲಾಪುರ ಚುನಾವಣಾ ಭಾಷಣದಲ್ಲಿ ಹೇಳಿದ್ದರು.
ಈ ಹೇಳಿಕೆ ಸುಳ್ಳು ಹಾಗೇನೂ ಇಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಪ್ರತಿಕ್ರೀಯಿಸಿದ್ದರು.
ಈ ಬೆಳವಣಿಗೆಗಳ ನಂತರ ಟ್ವೀಟರ್, ಫೇಸ್ಬುಕ್ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಮತ್ತು ವರ್ತನೆಗಳ ಬಗ್ಗೆ ತೀವೃ ತರಾಟೆ ಎತ್ತಿದ್ದಾರೆ.
ಅನಂತಕುಮಾರ ಹೆಗಡೆ ಸುಳ್ಳು-ಮೋಸ,ದ್ರೋಹದ ಮೂಲಕವೇ ಮುಗ್ಧರ ದಿಕ್ಕು ತಪ್ಪಿಸುತ್ತಾರೆ. ಮತಾಂಧತೆಯ ಮತ್ತು ರಾಜಕೀಯ ಲಾಭದ ಕಾರಣಕ್ಕೆ ಅನಂತಕುಮಾರ ಹೆಗಡೆ ಸುಳ್ಳು ಹೇಳುತಿದ್ದು ಸಾರ್ವಜನಿಕ ಶಿಸ್ತು, ನಡವಳಿಕೆ ಉಲ್ಲಂಘಿಸುವ ಮೂಲಕ ಅನಂತಕುಮಾರ ತನ್ನ ಮೂರನೇ ದರ್ಜೆಯ ನಡತೆ ಪ್ರದರ್ಶಿಸುತ್ತಾರೆ. ಅನಂತಕುಮಾರ ಹೆಗಡೆ ಮತ್ತವರ ಪಕ್ಷ ಹಾಗೂ ಸಂಘ ಎಲ್ಲರನ್ನೂ ಎಲ್ಲಾ ಕಾಲದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂದು ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿ.ಜೆ.ಪಿ.ಯ ಬಿ.ಟೀಮ್ ಯಡಿಯೂರಪ್ಪನವರನ್ನು ಬಲಿ ಹಾಕಲು ನಡೆಸಿರುವ ಶಡ್ಯಂತ್ರದ ಭಾಗವಾಗಿ ಈ ಕೀಳು ವರ್ತನೆ, ನಡತೆಗಳು ನಡೆಯುತ್ತಿವೆ. ಈ ಸುಳ್ಳು ಹೇಳುವ ನಾಟಕಕಾರರನ್ನು ಮನೆಗೆ ಕಳುಹಿಸುವ ಮೂಲಕ ಜನತೆ ಪ್ರಬುದ್ಧತೆ ಮೆರೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಕರೆ ನೀಡಲಾಗಿದೆ. ಈ ಬಗ್ಗೆ ಬಿ.ಜೆ.ಪಿ. ಮುಖಂಡರು ಕೂಡಾ ಅನಂತ ಹೆಗಡೆಯನ್ನು ತೀವೃ ವಿರೋಧಿಸಿದ್ದು, ಅವಿವೇಕದ ಮಾತು, ಮತಾಂಧತೆ,ಅತಿರೇಕಗಳಿಂದ ಚುನಾವಣೆ ಗೆಲ್ಲುವ ಅವರ ಲಾಗಾಯ್ತಿನ ಚಾಳಿ ಈಗ ಪಕ್ಷ, ನಾಯಕರಿಗೆ ಮುಜುಗರ ಉಂಟುಮಾಡುತ್ತಿದೆ. ಅವರಿಂದ ಬಿ.ಜೆ.ಪಿ.,ಮುಖಂಡರನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.
