ಬಹಿರಂಗವಾಗುತ್ತಿರುವ ಸಿದ್ದಾಪುರದ ಸುಪ್ತ ವ್ಯವಹಾರಗಳು, ಸಮಾಜಮುಖಿಯ ಅನುಮಾನ, ಆತಂಕ ಸತ್ಯ ಮಾಡುತ್ತಿರುವ ಪೊಲೀಸರು

ಈ ತಿಂಗಳ ಪ್ರಾರಂಭದಿಂದ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೋರ್ಟಲ್ ಗಳಲ್ಲಿ ಸಿದ್ಧಾಪುರ ಮತ್ತು ಉತ್ತರಕನ್ನಡ ಜಿಲ್ಲೆಯ ಅಕ್ರಮ ವ್ಯವಹಾರಗಳ ಸರಣಿ ವರದಿಗಳು ಪ್ರಕಟವಾಗುತಿದ್ದಂತೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಸಿದ್ಧಾಪುರದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇದೇ ತಿಂಗಳು ಕನಿಷ್ಟ 25-30 ಜನರನ್ನು ಬಂಧಿಸಿದ್ದಾರೆ.
ಹೀಗೆ ಬಂಧಿತರಾದವರಲ್ಲಿ ಹೆಚ್ಚಿನವರು ಇಸ್ಫೀಟ್, ಜುಗಾರಿ, ಓ.ಸಿ. ಆಡುತಿದ್ದವರು, ಆಡಿಸುತಿದ್ದವರು ಎಂಬುದು ಗಮನಾರ್ಹ.
ಒಬ್ಬ ಕಾಲೇಜು ವಿದ್ಯಾರ್ಥಿ ಸರ್ಕಾರಿ ಕೃಪಾ ಪೋಷಿತ ಅಕ್ರಮ ದಂಧೆಗೆ ಬಲಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಸಮಾಜಮುಖಿ ವರದಿ ಮಾಡಿದ್ದಾಗ ಹಗಲು ದೇಶಭಕ್ತರು ರಾತ್ರಿ ದರೋಡೆಕೋರರು, ಕಳ್ಳರು ಆಗುವ ರಾಷ್ಟ್ರೀಯವಾದಿಗಳ ದುಷ್ಟ ಪರಿವಾರದ ಮಂಗಗಳ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗುಲಾಮಿತನದ ಕೆಸರು ಕಕ್ಕಿಕೊಂಡದ್ದಿದೆ.
ಆದರೆ ಈ ಲಾಭಬಡುಕ ಸೋಗಲಾಡಿ ಮತಾಂಧ ಹುಚ್ಚುಶ್ವಾನಗಳ ಹುಚ್ಚು ಅರಚುವಿಕೆಗೆ ಯಾರೂ ಕ್ಯಾರೆ ಎನ್ನಲಿಲ್ಲ. ಸುದೈವವೆಂದರೆ ಈ ಮತಾಂಧ ದುಷ್ಟ ಪರಿವಾರದ ವ್ಯಭಿಚಾರಿ ಧಾರ್ಮಿಕರ ಸೋಗಲಾಡಿತನದ ರಾಷ್ಟ್ರೀಯ ಸುಳ್ಳುಗಾರ ಶ್ವಾನಗಳ ಕುಂಡೆಗೆ ಒದೆಯುವಂತೆ ಉತ್ತರ ಕನ್ನಡ ಪೊಲೀಸರು ಇಂದು ಸಿದ್ಧಾಪುರದ ಐಗಳಕೊಪ್ಪದಲ್ಲಿ ನಾಗರಾಜ ಗುಡ್ಡೆಮನೆ ಎನ್ನುವ ಅಕ್ರಮ ವ್ಯವಹಾರಿಯೊಂದಿಗೆ 8 ಜನರನ್ನು ಬಂಧಿಸಿದ್ದಾರೆ.
ನಿನ್ನೆ ಹೇಳಿಕೊಳ್ಳದ ಆರೋಪಕ್ಕೆ ತುತ್ತಾದ 3 ವಿದ್ಯಾರ್ಥಿಗಳ ಬಂಧನವಾಗಿದೆ.
ಇಂದು ಬೆಂಗಳೂರಿನಲ್ಲಿ ಕಂಟ್ರಿ ಪಿಸ್ತೂಲ್ ಗಳೊಂದಿಗೆ ಪೊಲೀಸರಿಗೆ ಸೆರೆ ಸಿಕ್ಕ ವ್ಯಕ್ತಿ ಸಿದ್ಧಾಪುರದವನು ಎನ್ನುವುದು ಆತಂಕದ ವಿಚಾರ.
ಹೀಗೆ ಸಿದ್ದಾಪುರದಂಥ ಪುಟ್ಟ ನಗರದ ಜನ ತಾಲೂಕು, ಜಿಲ್ಲೆ ರಾಜ್ಯಮಟ್ಟದ ವರೆಗೆ ಅಪರಾಧ ಚಟುವಟಿಕೆಗಳಲ್ಲಿ ಬಂಧಿತರಾಗುತಿದ್ದಾರೆ ಎಂದರೆ ಇವರ ಹಿಂದೆ ಅನೇಕ ವ್ಯವಸ್ಥಿತ ಜಾಲಗಳು ಕೆಲಸಮಾಡುತ್ತಿವೆ ಎಂದರ್ಥ.
ಇಂಥ ವ್ಯವಸ್ಥೆಯನ್ನು ಪೋಶಿಸುವ ಮುಖವಾಡದ ಉದ್ದಿಮೆದಾರರ ಮನೆಗೆ ಭೇಟಿ ನೀಡುವ ಇಲ್ಲಿಯ ಶಾಸಕ, ಸಂಸದರೇ ಈ ಅಕ್ರಮವ್ಯವಹಾರಗಳ ರಕ್ಷಕರು ಎನ್ನುವ ಮಾತು ಸಿದ್ಧಾಪುರದ ನಿತ್ಯ ಚರ್ಚೆಯ ವಿಷಯವಾಗಿದೆ.
ಸಮಾಜಮುಖಿ ಸೇರಿದಂತೆ ಕೆಲವು ಮಾಧ್ಯಮಗಳು ಮಾತ್ರಎಕ್ಸ್‍ಪೋಸ್ ಮಾಡಿದ ಈ ವ್ಯವಹಾರಗಳ ಹಿಂದೆ ಸಿದ್ಧಾಪುರ ಉತ್ತರ ಕನ್ನಡ ಜಿಲ್ಲೆಯ ಜನರ ಹಿತಾಸಕ್ತಿ, ಶಾಂತಿ ಸುವ್ಯವಸ್ಥೆಯ ಕಾಳಜಿ ಇದೆ.
ನಮ್ಮೆಲ್ಲಾ ಅನುಮಾನ, ಸಂಶಯಗಳನ್ನು ಅಕ್ರಮವ್ಯವಹಾರಿಗಳನ್ನು ಬಂಧಿಸುವ ಮೂಲಕ ದಿಟಮಾಡುತ್ತಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಸಮಾಜಮುಖಿ ಕೃತಜ್ಞತೆ ಸಲ್ಲಿಸುತ್ತದೆ.
ಈ ಹಿನ್ನೆಲೆಯಲ್ಲಿ ಉತ್ತಮ ಸಿದ್ಧಾಪುರ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿದ ತೃಪ್ತಿ ನಮಗಿದೆ. ಕನಿಷ್ಟ ರಾಜ್ಯದ ಶ್ರೇಷ್ಠ ಮನಸ್ಸುಗಳಾದರೂ ಇದನ್ನು ಗಮನಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ. ಅಂದಹಾಗೆ ಸಿದ್ಧಾಪುರದ ಅಕ್ರಮ ಮದ್ಯಮಾರಾಟ, ಇಸ್ಪೀಟ್, ಜುಗಾರಿ, ಓ.ಸಿ. ಇನ್ನಿತರ ಅಕ್ರಮಗಳು ಇಷ್ಟಕ್ಕೆ ನಿಲ್ಲುತ್ತವೆ ಎನ್ನುವುದು ಕೇವಲ ನಮ್ಮ ಬೃಮೆಯಾಗಬಾರದಷ್ಟೇ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *