ಬಹಿರಂಗವಾಗುತ್ತಿರುವ ಸಿದ್ದಾಪುರದ ಸುಪ್ತ ವ್ಯವಹಾರಗಳು, ಸಮಾಜಮುಖಿಯ ಅನುಮಾನ, ಆತಂಕ ಸತ್ಯ ಮಾಡುತ್ತಿರುವ ಪೊಲೀಸರು

ಈ ತಿಂಗಳ ಪ್ರಾರಂಭದಿಂದ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೋರ್ಟಲ್ ಗಳಲ್ಲಿ ಸಿದ್ಧಾಪುರ ಮತ್ತು ಉತ್ತರಕನ್ನಡ ಜಿಲ್ಲೆಯ ಅಕ್ರಮ ವ್ಯವಹಾರಗಳ ಸರಣಿ ವರದಿಗಳು ಪ್ರಕಟವಾಗುತಿದ್ದಂತೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಸಿದ್ಧಾಪುರದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇದೇ ತಿಂಗಳು ಕನಿಷ್ಟ 25-30 ಜನರನ್ನು ಬಂಧಿಸಿದ್ದಾರೆ.
ಹೀಗೆ ಬಂಧಿತರಾದವರಲ್ಲಿ ಹೆಚ್ಚಿನವರು ಇಸ್ಫೀಟ್, ಜುಗಾರಿ, ಓ.ಸಿ. ಆಡುತಿದ್ದವರು, ಆಡಿಸುತಿದ್ದವರು ಎಂಬುದು ಗಮನಾರ್ಹ.
ಒಬ್ಬ ಕಾಲೇಜು ವಿದ್ಯಾರ್ಥಿ ಸರ್ಕಾರಿ ಕೃಪಾ ಪೋಷಿತ ಅಕ್ರಮ ದಂಧೆಗೆ ಬಲಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಸಮಾಜಮುಖಿ ವರದಿ ಮಾಡಿದ್ದಾಗ ಹಗಲು ದೇಶಭಕ್ತರು ರಾತ್ರಿ ದರೋಡೆಕೋರರು, ಕಳ್ಳರು ಆಗುವ ರಾಷ್ಟ್ರೀಯವಾದಿಗಳ ದುಷ್ಟ ಪರಿವಾರದ ಮಂಗಗಳ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗುಲಾಮಿತನದ ಕೆಸರು ಕಕ್ಕಿಕೊಂಡದ್ದಿದೆ.
ಆದರೆ ಈ ಲಾಭಬಡುಕ ಸೋಗಲಾಡಿ ಮತಾಂಧ ಹುಚ್ಚುಶ್ವಾನಗಳ ಹುಚ್ಚು ಅರಚುವಿಕೆಗೆ ಯಾರೂ ಕ್ಯಾರೆ ಎನ್ನಲಿಲ್ಲ. ಸುದೈವವೆಂದರೆ ಈ ಮತಾಂಧ ದುಷ್ಟ ಪರಿವಾರದ ವ್ಯಭಿಚಾರಿ ಧಾರ್ಮಿಕರ ಸೋಗಲಾಡಿತನದ ರಾಷ್ಟ್ರೀಯ ಸುಳ್ಳುಗಾರ ಶ್ವಾನಗಳ ಕುಂಡೆಗೆ ಒದೆಯುವಂತೆ ಉತ್ತರ ಕನ್ನಡ ಪೊಲೀಸರು ಇಂದು ಸಿದ್ಧಾಪುರದ ಐಗಳಕೊಪ್ಪದಲ್ಲಿ ನಾಗರಾಜ ಗುಡ್ಡೆಮನೆ ಎನ್ನುವ ಅಕ್ರಮ ವ್ಯವಹಾರಿಯೊಂದಿಗೆ 8 ಜನರನ್ನು ಬಂಧಿಸಿದ್ದಾರೆ.
ನಿನ್ನೆ ಹೇಳಿಕೊಳ್ಳದ ಆರೋಪಕ್ಕೆ ತುತ್ತಾದ 3 ವಿದ್ಯಾರ್ಥಿಗಳ ಬಂಧನವಾಗಿದೆ.
ಇಂದು ಬೆಂಗಳೂರಿನಲ್ಲಿ ಕಂಟ್ರಿ ಪಿಸ್ತೂಲ್ ಗಳೊಂದಿಗೆ ಪೊಲೀಸರಿಗೆ ಸೆರೆ ಸಿಕ್ಕ ವ್ಯಕ್ತಿ ಸಿದ್ಧಾಪುರದವನು ಎನ್ನುವುದು ಆತಂಕದ ವಿಚಾರ.
ಹೀಗೆ ಸಿದ್ದಾಪುರದಂಥ ಪುಟ್ಟ ನಗರದ ಜನ ತಾಲೂಕು, ಜಿಲ್ಲೆ ರಾಜ್ಯಮಟ್ಟದ ವರೆಗೆ ಅಪರಾಧ ಚಟುವಟಿಕೆಗಳಲ್ಲಿ ಬಂಧಿತರಾಗುತಿದ್ದಾರೆ ಎಂದರೆ ಇವರ ಹಿಂದೆ ಅನೇಕ ವ್ಯವಸ್ಥಿತ ಜಾಲಗಳು ಕೆಲಸಮಾಡುತ್ತಿವೆ ಎಂದರ್ಥ.
ಇಂಥ ವ್ಯವಸ್ಥೆಯನ್ನು ಪೋಶಿಸುವ ಮುಖವಾಡದ ಉದ್ದಿಮೆದಾರರ ಮನೆಗೆ ಭೇಟಿ ನೀಡುವ ಇಲ್ಲಿಯ ಶಾಸಕ, ಸಂಸದರೇ ಈ ಅಕ್ರಮವ್ಯವಹಾರಗಳ ರಕ್ಷಕರು ಎನ್ನುವ ಮಾತು ಸಿದ್ಧಾಪುರದ ನಿತ್ಯ ಚರ್ಚೆಯ ವಿಷಯವಾಗಿದೆ.
ಸಮಾಜಮುಖಿ ಸೇರಿದಂತೆ ಕೆಲವು ಮಾಧ್ಯಮಗಳು ಮಾತ್ರಎಕ್ಸ್‍ಪೋಸ್ ಮಾಡಿದ ಈ ವ್ಯವಹಾರಗಳ ಹಿಂದೆ ಸಿದ್ಧಾಪುರ ಉತ್ತರ ಕನ್ನಡ ಜಿಲ್ಲೆಯ ಜನರ ಹಿತಾಸಕ್ತಿ, ಶಾಂತಿ ಸುವ್ಯವಸ್ಥೆಯ ಕಾಳಜಿ ಇದೆ.
ನಮ್ಮೆಲ್ಲಾ ಅನುಮಾನ, ಸಂಶಯಗಳನ್ನು ಅಕ್ರಮವ್ಯವಹಾರಿಗಳನ್ನು ಬಂಧಿಸುವ ಮೂಲಕ ದಿಟಮಾಡುತ್ತಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಸಮಾಜಮುಖಿ ಕೃತಜ್ಞತೆ ಸಲ್ಲಿಸುತ್ತದೆ.
ಈ ಹಿನ್ನೆಲೆಯಲ್ಲಿ ಉತ್ತಮ ಸಿದ್ಧಾಪುರ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿದ ತೃಪ್ತಿ ನಮಗಿದೆ. ಕನಿಷ್ಟ ರಾಜ್ಯದ ಶ್ರೇಷ್ಠ ಮನಸ್ಸುಗಳಾದರೂ ಇದನ್ನು ಗಮನಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ. ಅಂದಹಾಗೆ ಸಿದ್ಧಾಪುರದ ಅಕ್ರಮ ಮದ್ಯಮಾರಾಟ, ಇಸ್ಪೀಟ್, ಜುಗಾರಿ, ಓ.ಸಿ. ಇನ್ನಿತರ ಅಕ್ರಮಗಳು ಇಷ್ಟಕ್ಕೆ ನಿಲ್ಲುತ್ತವೆ ಎನ್ನುವುದು ಕೇವಲ ನಮ್ಮ ಬೃಮೆಯಾಗಬಾರದಷ್ಟೇ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *