u turn uttarkumara-ಶಿಸ್ತುಕ್ರಮ,ವಿರೋಧಕ್ಕೆ ಹೆದರಿ ಉಲ್ಟಾ ಹೊಡೆದ ಉತ್ತರಕುಮಾರ!

ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಗಾಂಧಿ ಅವಹೇಳನ ಮಾಡಿ ಸಾರ್ವಜನಿಕರಿಂದ ಚೀ..ತೂ… ಎಂದು ಉಗಿಸಿಕೊಂಡ ಮೇಲೆ ಇಂದು ತಾನು ಗಾಂಧಿ ಹೆಸರು ಹೇಳಿಲ್ಲ ಎನ್ನುವ ಮೂಲಕ ತನ್ನ ಮಾತು, ನಡವಳಿಕೆಗೆ ಯಾವ ಮಹತ್ವವಿದೆ ಎಂಬುದನ್ನು ಸಾಬೀತುಮಾಡಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ದುಷ್ಟಪರಿವಾರದ ಲಾಗಾಯ್ತಿನ ನಡವಳಿಕೆಯಂತೆ ಅನಂತಕುಮಾರ ಸ್ವಾತಂತ್ರ್ಯ ಹೋರಾಟ, ಗಾಂಧಿ ಮಹತ್ವವನ್ನು ಲೇವಡಿ ಮಾಡಿದ್ದರು. ಇಂಥ ಮತಾಂಧ ವಿವೇಕಶೂನ್ಯನ ಅವಿವೇಕದ ಮಾತು ನಡತೆಗೆ ಸಾರ್ವಜನಿಕ ವಲಯ,ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ವಿರೋಧಗಳ ಹಿನ್ನೆಲೆಯಲ್ಲಿ ತಾನು ಗಾಂಧಿ ಹೆಸರು ಹೇಳಿರಲಿಲ್ಲ ಎನ್ನುವ ಮೂಲಕ ಅನಂತಕುಮಾರ ಹೆಗಡೆ ಯು ಟರ್ನ್ ಹೊಡೆಯುವ ಮೂಲಕ ತಾನು ಉತ್ತರಕುಮಾರ ಎಂದು ಪ್ರತಿಬಿಂಬಿಸಿದ್ದಾರೆ.
ಅನಂತಕುಮಾರ ಹೆಗಡೆ ಸಂಸದರ ನಿಧಿ ಬಳಸದೆ, ಕ್ಷೇತ್ರದ ಕೆಲಸ ಮಾಡದೆ ಬೇಜವಾಬ್ಧಾರಿ ಜನಪ್ರತಿನಿಧಿಯೆಂದು ಆರೋಪಿಸಿಕೊಂಡಿರುವ ಮನುಷ್ಯ. ಕೆಲಸಮಾಡದೆ, ಜನಹಿತದ ಪರವಾಗಿ ವರ್ತಿಸದೆ ಅವಿವೇಕದ ಮಾತು, ನಡತೆಗಳಿಂದ ಕುಪ್ರಸಿದ್ಧನಾಗಿರುವ ಈ ಜನಪ್ರತಿನಿಧಿ ತನ್ನ ಅತಿರೇಕ,ಅವಿವೇಕದ ಮಾತು, ಮತಾಂಧತೆಯ ಹೀನ ನಡತೆಗಳಿಂದ ಪಕ್ಷ,ರಾಜಕೀಯ ವಲಯದಲ್ಲೂ ತಿರಸ್ಕರಿಸಲ್ಪಟ್ಟ ವ್ಯಕ್ತಿ.
ಹಿಂದಿನ ಎನ್.ಡಿ.ಎ. ಸರ್ಕಾರದಲ್ಲಿ ಸಚಿವನಾಗಿದ್ದ ಅನಂತಕುಮಾರ ಹೆಗಡೆ ರಾಜ್ಯದಲ್ಲಿ ಪ್ರಚಾರ ಮಾಡುವುದು ಬೇಡ, ಚುನಾವಣಾ ಪ್ರಚಾರಕ್ಕೆ ಅವರನ್ನು ಕರೆಯಲು ತಮ್ಮ ವಿರೋಧವಿದೆ ಎಂದು ಬಿ.ಜೆ.ಪಿ. ಮುಖಂಡರೇ ಹೈಕಮಾಂಡ್ ಗೆ ದೂರು ನೀಡಿದ್ದರು.
ನಂತರ ಚುನಾವಣೆ ಮುಗಿದು ಅನಂತಕುಮಾರರಿಗೆ ಸಚಿವಸ್ಥಾನದ ಅವಕಾಶ ತಪ್ಪಿಸಿದ್ದು ಅವರ ಅವಿವೇಕದ ನಾಲಿಗೆಯೆ.
ಕೆಲವು ದಿವಸ ಸುಮ್ಮನಿರುವುದು, ಮತಾಂಧರು, ಬ್ರಾಹ್ಮಣರ ಸಂಘಟನೆ, ಸಂಘಗಳಲ್ಲಿ ಹುಚ್ಚನಂತೆ ವರ್ತಿಸುವುದು ಮಾಡುವ ಈ ಸಂಸದ ಬುದ್ಧಿನೆಟ್ಟಗಿಲ್ಲದವನು ಎನ್ನುವುದಕ್ಕೆ 25 ವರ್ಷಗಳ ನೂರಾರು ದೃಷ್ಟಾಂತಗಳಿವೆ. ಇಂಥ ಮತಾಂಧ ವೈದಿಕ ಈಗ ಮತ್ತೆ ತನ್ನ ಹಿಂದಿನ ಚಾಳಿಯಂತೆ ಅವಿವೇಕದ ಮಾತನಾಡಿ,ಕ್ಷಮೆ ಕೇಳಿದ್ದಾರೆ. ಇಂಥ ಅವಿವೇಕದ ಮಾತು,ಅತಿರೇಕ, ಅನಾಚಾರದ ನಡವಳಿಕೆಗಳಿಂದ ಉತ್ತರಕನ್ನಡದ ಮಾನವನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಕಳೆದ ಅನಂತಹೆಗಡೆ ವಿರುದ್ಧ ಜಿಲ್ಲೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುತಂತ್ರಿಯ ಪರವಾಗಿ ಶೂದ್ರ ಸಂಘಿ ಹೇಸಿಗೆಗಳು ಬೊಗಳುತ್ತಿರುವುದು ಗುಲಾಮಿತನದ ಅತಿರೇಕ ಎನಿಸಿಕೊಳ್ಳುತ್ತಿದೆ.

ಅನಂತ ವಿರೋಧ,
ವ್ಯಾಪಕ ಖಂಡನೆ
ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧಿ ನಿಂದನೆ ಮಾಡಿದ ಸಂಸದ ಅನಂತಕುಮಾರ ಹೆಗಡೆ ಮತಾಂಧ ನಡವಳಿಕೆ ವಿರೋಧಿಸಿ ತಾಲೂಕು, ಜಿಲ್ಲೆ, ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಶಿರಸಿಯಲ್ಲಿ ಪ್ರತಿಭಟನೆ ಮಾಡಿದ ಜಿಲ್ಲಾ ಕಾಂಗ್ರೆಸ್ ನಗರದ ಮಾರುಕಟ್ಟೆಯ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಧರಣಿ ನಡೆಸಿದೆ.ಅನಂತಕುಮಾರ ಹೆಗಡೆಯವರನ್ನು ಸಂಸದ ಸ್ಥಾನದಿಂದ ವಜಾಮಾಡಲು ಆಗ್ರಹಿಸಿ ಲೋಕಸಭೆಯ ಸ್ಪೀಕರ್ ರಿಗೆ ಮನವಿ ಮಾಡಿದ್ದರೆ. ಸ್ವಯಂ ಬಿ.ಜೆ.ಪಿ. ಪಕ್ಷದ ಪ್ರಮುಖರೇ ಈ ಅವಿವೇಕಿಯ ಬಾಯಿ ಮುಚ್ಚಿಸುವಂತೆ ತಮ್ಮ ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಅನಂತ ಹೆಗಡೆಗೆ ಕ್ಷಮೆಯಾಚಿಸಲು ಪಕ್ಷದ ಆದೇಶ
ಉತ್ತರಕನ್ನಡದ ಸಂಸದ ಮಾಜಿ ಸಚಿವ ಅನಂತಕುಮಾರ ಹೆಗಡೆ ಉಸುರವಳ್ಳಿಯಂತೆ ವರ್ತಿಸುವುದು, ಮಾತನಾಡುವುದು ಅವರ ಲಾಗಾಯ್ತಿನ ಚಾಳಿ.
ಇದೇ ಮನುಷ್ಯ ಕೆಲವು ತಿಂಗಳುಗಳ ಹಿಂದೆ ಗಾಂಧಿ ಪರವಾಗಿ ಬಿ.ಜೆ.ಪಿ. ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಪರವಾಗಿ ಮಾತನಾಡಿ ನಾಟಕಮಾಡಿದ.್ದ
ಹೀಗೆ ಗಾಂಧಿ ಮಹಾತ್ಮನನ್ನು ರಾಜಕೀಯ ಲಾಭಕ್ಕಾಗಿ ಇವರು ಹೊಗಳಿದ ಹಿಂದೆಮುಂದೆ ಅವರು ಗಾಂಧಿಯನ್ನು ತೆಗಳಿದ ಸಂದರ್ಭಗಳ್ಯಾವುವು ಎಂಬುದನ್ನು ಅರಿಯಬೇಕು.
ಬ್ರಾಹ್ಮಣರ ಸಮ್ಮೇಳನ,ಬ್ರಾಹ್ಮಣರು, ಬ್ರಾಹ್ಮಣ್ಯದ ಪೋಶಕ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಮತಿವಿಕಲನಂತೆ ಅರಚಿ ತನ್ನ ಬ್ರಾಹ್ಮಣಿಕೆಯ ಹುಚ್ಚುತನ ಪ್ರದರ್ಶಿಸುವ ಈ ವೈದಿಕವೈರಸ್ ಹಿಂದುಳಿದವರು, ದಲಿತರಾದ ಭಾರತೀಯ ಬಹುಸಂಖ್ಯಾತರೆದುರು ಮತಾಂಧತೆಯ ಹಿಂದುತ್ವದ ಭಾಷಣ ಮಾಡುತ್ತಾರೆ.
ಉತ್ತರಕನ್ನಡದಲ್ಲಿ ಮತಾಂಧವೈದಿಕತೆಯನ್ನು ಬೆಂಬಲಿಸುವ ಕುತಂತ್ರಿಗಳನ್ನು ಬಿಟ್ಟರೆ ಈ ಉತ್ತರಕುಮಾರನ ಅವಾಂತರಗಳು, ಹುಚ್ಚುತನದ ಹೇಳಿಕೆಗಳನ್ನು ಉಪೇಕ್ಷಿಸುವವರೆ ಹೆಚ್ಚು, ಈ ಉಪೇಕ್ಷೆಯಲ್ಲಿ ಕೆಲವು ಬಾರಿ ಈ ವಿವೇಕಶೂನ್ಯನನ್ನು ನಿರ್ಲಕ್ಷಿಸುವುದಿರಬಹುದು ಆದರೆ ಅನೇಕಬಾರಿ ಈತನ ಹುಚ್ಚುತನಗಳನ್ನು ಉಪೇಕ್ಷಿಸಿದಂತೆ ಮಾಡಿ ಈತನ ಮಂಗಾಟಕ್ಕೆ ಪರೋಕ್ಷವಾಗಿ ಬೆಂಬಲಿಸುವ ಕುತಂತ್ರಗಳೂ ನಡೆಯುವುದುಂಟು.
ಅನಂತಕುಮಾರ ಹೆಗಡೆ ಕಾಂಗ್ರೆಸ್‍ನಿಂದಿಸುವುದು, ಜಾತ್ಯಾತೀತರು, ಪ್ರಗತಿಪರರು, ಧರ್ಮನಿರಪೇಕ್ಷರನ್ನು ದೂಷಿಸುವುದು ಸರ್ವೇಸಾಮಾನ್ಯ. ಆದರೆ ಇವರ ನಡೆ ನುಡಿಗಳನ್ನು ನೋಡಿದರೆ ಇವರ ಆಶಾಢಭೂತಿತನ, ಕಪಟತನ ಅರ್ಥವಾಗುತ್ತದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *