ಉತ್ತರ ಕನ್ನಡ ಮರಳು ಮಾಫಿಯಾ ಹೊರಗೆಳೆದ ಕಡಕ್‌ ಅಧಿಕಾರಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ಅಧಿಕಾರಿ ವರ್ಗ, ರಾಜಕೀಯ ಮುಖಂಡರ ಬೆಸುಗೆಯಿಂದ ನಡೆಯುತಿದ್ದ ಮರಳುಮಾಫಿಯಾವನ್ನು ಹೊರಗೆಳೆಯುವಲ್ಲಿ ಜಿಲ್ಲೆಯ ಹೊಸ ಅಧಿಕಾರಿಣಿಯೊಬ್ಬರು ಯಶಸ್ವಿಯಾಗಿರುವ ಪ್ರಕರಣ ಚರ್ಚೆಗೆ ಕಾರಣವಾಗಿದೆ.

ಕೆಲವು ರಾಜಕೀಯ ನಾಯಕರ ಪೃಪಾಕಟಾಕ್ಷದಿಂದ ಕೆಲವು ಅಕ್ರಮ ಚಟುವಟಿಕೆಗಳು ನಡೆಯುವುದು ಮಾಮೂಲು ಆದರೆ ಈ ಪ್ರಕರಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನೇ ಬಳಸಿ ಕೆಲವು ಚತುರರು ಹಗಲು ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಂತಾಗಿದೆ.

ಶಿರಸಿಯ ಯುವ ರಾಜಕಾರಣಿಯೊಬ್ಬ ಹೊನ್ನಾವರ ಮೂಲದ ಪೋಲೀಸ್‌ ಪೇದೆ ಸೇರಿದ ನಾಲ್ಕೈದು ಜನರ ಕೂಟ ಸರ್ಕಾರಕ್ಕೆ ರಾಯಲ್ಟಿ ಕೊಡದೆ ರಾಜಾರೋಶವಾಗಿ ನಾಲ್ಕೈದು ವರ್ಷಗಳಿಂದ ಹೊನ್ನಾವರ ತಾಲೂಕಿನಿಂದ ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡುತಿದ್ದರು.

ಈ ಅಕ್ರಮ ದಂಧೆಯ ನೆರವಿನಿಂದ ಪ್ರಭಾವಿ ರಾಜಕಾರಣಿಗಳ ಸ್ನೇಹ ಸಂಪಾದಿಸಿ ಪಕ್ಷ, ವೇದಿಕೆಯಲ್ಲಿ ಸ್ಥಾನ ಗಿಟ್ಟಿಸುತಿದ್ದ ಯುವ ರಾಜಕಾರಣಿ ರಾಜ್ಯದ ಉಪಮುಖ್ಯಮಂತ್ರಿಗಳ ಹೆಸರು ಹೇಳಿಕೊಂಡು ಅಧಿಕಾರಿಗಳು, ಕೆಲವು ಮುಖಂಡರಿಗೂ ಹೆದರಿಸುತ್ತಿರುವ ಬಗ್ಗೆ ಈಗಲೂ ಗುಸು ಗುಸು ಕೇಳಿ ಬರುತ್ತಿದೆ.

ಶಿರಸಿಯ ಇದೇ ಯುವ ಮುಖಂಡ ಸ್ಥಳೀಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿದರೆ ತನ್ನ ಖಾಸಗಿ ಅಕ್ರಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೆರವು ಪಡೆದು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತಿದ್ದಾನೆ ಎನ್ನುವ ಗುರುತರ ಆರೋಪಗಳಿವೆ.

ಈಗಲೂ ಸರ್ಕಾರ, ಉಪಮುಖ್ಯಮಂತ್ರಿಗಳ ಹೆಸರು ಹೇಳಿಕೊಂಡು ತನ್ನ ವ್ಯವಹಾರಕ್ಕೆ ಅನುಕೂಲಮಾಡಿಕೊಡಲು ಶ್ರಮಿಸಿದ ಈ ಯುವ ಅಧ್ಯಕ್ಷನಿಗೆ ಚುನಾವಣಾ ನೀತಿ ಸಂಹಿತೆ ಬಗನಿ ಗೂಟ ಜಡಿದಿದೆ. ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಬಂದ ಹೊಸ ಅಧಿಕಾರಿ ಇಂದು ಮುಂಜಾನೆ ಈ ಯುವ ಮುಖಂಡನ ನವರಂಧ್ರಗಳಲ್ಲಿ ನೀರು ಜಿನುಗುವಂತೆ ಮಾಡಿದ್ದಾರೆ.

ತನ್ನ ಎರಡು ವಾಹನ ಜೊತೆಗೆ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳ ಎರಡು ಬೇನಾಮಿ ವಾಹನ ಇವುಗಳೊಂದಿಗೆ ಇವರ ಸ್ನೇಹಿತರ ಎರಡು ಲಾರಿಗಳಿಗೆ ಸ್ಕೆಚ್‌ ಹಾಕಿದ್ದ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ತನ್ನ ರಾಜಕೀಯ ಶಕ್ತಿ ತೋರಿಸಲು ಹೋದ ಈ ಮುಖಂಡನಿಗೆ ಅಧಿಕಾರಿಗಳು ನೀನ್ಯಾರಾದರೇನು? ಸರ್ಕಾರ, ನಿಯಮಗಳ ಮುಂದೆ ನಿನ್ನ ಪುಡಿ ರಾಜಕಾರಣ ನಡೆಯಲ್ಲ ಎಂದು ಗದುಮಿದ್ದಾರೆ. ಲಾಗಾಯ್ತಿನ ಚೋರ ಬುದ್ಧಿಯಂತೆ ರಾಜಕಾರಣ ಮಾಡಲು ನೀತಿ ಸಂಹಿತೆ ಅಡ್ಡ ಬಂದಿದೆ. ಸಾವಿರ ಲೆಕ್ಕದಲ್ಲೂ ಮತಗಳಿರದ ಈ ಪುಡಿ ನಾಯಕರ ಅಕ್ರಮ ಚಟುವಟಿಕೆ ಪಕ್ಷ, ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವ ಬಗ್ಗೆ ಆತಂಕಗೊಂಡಿರುವ ಸ್ವಪಕ್ಷೀಯರು, ವಿರೋಧ ಪಕ್ಷದ ಕೆಲವು ಮುಖಂಡರ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಇವರ ಕುಲಬಾಂಧವರೇ ಇಂಥ ಅಕ್ರಮ ವ್ಯವಹಾರಗಳಿಂದ ಶಿರಸಿ ಶಾಸಕರು, ಸರ್ಕಾರ ಮತ್ತು ಜಿಲ್ಲಾ ಕಾಂಗ್ರೆಸ್‌ ಗಳಿಗೆ ಕಂಟಕಪ್ರಾಯರಾಗಿರುವ ಬಗ್ಗೆ ತೀವ್ರ ವಿರೋಧ ಕೂಡಾ ವ್ಯಕ್ತವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *