siddapur today- ಸಾಧನೆ- ವಿಜೇತೆ-

ಸಿದ್ಧಾಪುರದ ಐಶ್ವರ್ಯ ಹೊನ್ನೆಗುಂಡಿ ಬೆಳಗಾವಿ ತಾಂತ್ರಿಕ ವಿಶ್ವ ವಿದ್ಯಾಲಯದ 2 ನೇ ರ್ಯಾಂಕ್ ಗಳಿಸಿದ್ದಾರೆ.
ನಗರದ ವೆಂಕಟೇಶ್ ಮತ್ತು ಕುಸಮಾ ಹೊನ್ನೆಗುಂಡಿಯವರಪುತ್ರಿಯಾಗಿರುವ ಇವಳು ದಾವಣಗೆರೆಯ ಬಿ.ಟಿ.ಡಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗಮಾಡಿದ್ದರು. ಶನಿವಾರ ಬೆಳಗಾವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಈ ಶ್ರೇಣಿಪ್ರದಾನ ಮಾಡಲಾಯಿತು.

ವೀರಾಗ್ರಣಿ-
ಇತ್ತೀಚೆಗೆ ಜೋಯಿಡಾದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ತಾಲೂಕಿನ ಕಾನಳ್ಳಿಯ ಚೌಡೇಶ್ವರಿ ಯುವಕ ಸಂಘದ ಸದಸ್ಯರು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಲಾವಣಿ, ಕೋಲಾಟ, ಸಣ್ಣಾಟ, ಹಾಗೂ ದೊಡ್ಡಾಟ ಸ್ಪರ್ಧೆಯಲ್ಲಿ ಪ್ರಥಮ, ಜಾನಪದ ನೃತ್ಯ, ವೀರಗಾಸೆ ಹಾಗೂ ಚರ್ಮವಾದ್ಯಮೇಳ ಸ್ಪರ್ಧೆಯಲ್ಲಿ ದ್ವೀತಿಯ ಮತ್ತು ಭಜನೆ, ರಂಗಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ವೀರಾಗ್ರಣಿ ಪ್ರಶಸ್ತಿಯನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

     ಎಂ.ಎಲ್.ಭಟ್ ಪುನರಾಯ್ಕೆ-

ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯು ದಿ-31-1-2020 ರಂದು ನಡೆದಿದ್ದು ಈ ಕೆಳಗಿನಂತೆ ಆಡಳಿತ ಮಂಡಳಿ ಸದಸ್ಯರು ಆಯ್ಕೆಯಾಗಿರುತ್ತಾರೆ.
ಮಂಜುನಾಥ ಲಕ್ಷ್ಮಣ ಭಟ್ಟ ಉಂಚಳ್ಳಿ (ಸಾಲಗಾರರಲ್ಲದ ಪ್ರತಿನಿಧಿ)
ಸುಬ್ರಾಯ ಲಕ್ಷ್ಮೀನಾರಾಯಣ ಹೆಗಡೆ ಸಾಯಿಮನೆ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ )
ಮಹಾಬಲೇಶ್ವರ ಶಿವರಾಮ ಹೆಗಡೆ ವಟರಜಡ್ಡಿ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಶ್ರೀಪತಿ ಶಂಕರ ಹೆಗಡೆ ಗೋಳಿಕೈ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಗಣಪತಿ ರಾಮಕೃಷ್ಣ ಹೆಗಡೆ ಹಿರೇಹದ್ದ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ನರಸಿಂಹ ವೆಂಕಟ್ರಮಣ ಹೆಗಡೆ ಹಿರೇಕೈ(ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಲಕ್ಷ್ಮಣ ಈಶ್ವರ ಗೌಡ ಕುಳಿಕಟ್ಟು (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಚೌಡು ರಾಮ ಗೌಡ ಬಿಳೆಕಲ್ಮನೆ (ಹಿಂದುಳಿದ “ಅ” ವರ್ಗ ಪ್ರತಿನಿಧಿ)
ಚಂದ್ರಶೇಖರ ಹುಲಿಯಾ ಗೌಡ ದಿಗೋಡಿ (ಹಿಂದುಳಿದ “ಅ” ವರ್ಗಪ್ರತಿ ನಿಧಿ)
ನೇತ್ರಾವತಿ ಮಂಜುನಾಥ ಭಟ್ಟ ಹೊಸ್ತೋಟ (ಮಹಿಳಾ ಪ್ರತಿನಿಧಿ)
ವಿಮಲಾ ಕೊಂ ತಿಮ್ಮ ನಾಯ್ಕ ಹೆಗ್ಗರಣಿ (ಮಹಿಳಾ ಪ್ರತಿನಿಧಿ)
ಮಂಜ ಗಣಪ ಹರಿಜನ ಹುಲ್ಲುಂಡೆ (ಎಸ.ಸಿ. ಪ್ರತಿನಿಧಿ)
ದಿನಾಂಕ-7-2-2020 ರಂದು ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಹಿಂದಿನ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಮಂಜುನಾಥ ಲಕ್ಷ್ಮಣ ಭಟ್ಟ ಉಂಚಳ್ಳಿ ಅಧ್ಯಕ್ಷರಾಗಿ, ಚೌಡು ರಾಮ ಗೌಡ ಬಿಳೆಕಲ್ಮನೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಚುನಾವಣಾಧಿಕಾರಿಯಾಗಿ ಶ್ರೀಧರ ಎಸ ಭಟ್ಟ (ಪ್ರಾಚಾರ್ಯರು ಪ.ಪೂ.ಕಾಲೇಜ- -ಹೆಗ್ಗರಣಿ) ಕಾರ್ಯನಿರ್ವಹಿಸಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *