ಜಾತಿ ಸಂಘ ರಾಜಕೀಯ ಅಂಗಳವಾಗುವುದು ಸರಿಯೆ? DEEVARU-NAMADHARI ISSUE

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಜನಸಂಖ್ಯೆ ಮತ್ತು ಮತದಾರರಾಗಿರುವ ನಾಮಧಾರಿ, ಧೀವರು ಹಳೆಪೈಕ ಸಮೂದಾಯ ರಾಜಕೀಯ,ಸಾಮಾಜಿಕ ಪ್ರಾತಿನಿಧ್ಯವಿಲ್ಲದೆ ಬಳಲಲು ಇಲ್ಲಿಯ ರಾಜಕೀಯ ಹಿತಾಸಕ್ತಿ ಕಾರಣವೆ ಎನ್ನುವ ಚರ್ಚೆಯೊಂದು ಪ್ರಾರಂಭವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ನಾಲ್ಕೈದು ಲಕ್ಷಗಳಷ್ಟು ಜನಸಂಖ್ಯೆಯ ಸಮೂದಾಯಕ್ಕೆ ರಾಜಧಾನಿ ಮಟ್ಟದಲ್ಲಿ ನಾಮಧಾರಿ ಸಂಘ ಅಸ್ಥಿತ್ವದಲ್ಲಿದೆಯಾದರೂ ಅದರ ಜೊತೆ ಸಂಬಂಧ ಹೊಂದಿರುವ ಸಂಘ ಉತ್ತರ ಕನ್ನಡದಲ್ಲಿದ್ದಂತಿಲ್ಲ. ದೀವರು, ಬಿಲ್ಲವ ನಾಮಧಾರಿ, ಹಳೆಪೈಕರ ಸಮಾನ ಸಮೂದಾಯಗಳಾದ ಈಡಿಗರ ಒಟ್ಟೂ ೨೬ ಉಪಪಂಗಡಗಳು ಸೇರಿವೆಯಾದರೂ ಈ ಎಲ್ಲಾ ಸಂಘಗಳನ್ನು ಪ್ರತಿನಿಧಿಸುವ ಏಕೈಕ ಮಾತೃ ಸಂಘಟನೆ ಈ ವರೆಗೂ ಅಸ್ಥಿತ್ವಕ್ಕೇ ಬಂದಿಲ್ಲ.

೧೯೭೦-೮೦ ರ ದಶಕದಲ್ಲಿ ಪರಿಶಿಷ್ಟ ಗುಂಪಿಗೆ ಸೇರಬೇಕಿದ್ದ ಈಡಿಗ, ದೀವರು, ಬಿಲ್ಲವರ ಸಂಘವನ್ನು ಸಮೂದಾಯದಲ್ಲಿಟ್ಟು ಅವು ಪರಿಶಿಷ್ಟರ ಯಾದಿಗೆ ಬರದಂತೆ ತಡೆದವರು ಈ ಸಮೂದಾಯದ ಪ್ರಮುಖರಾದ ಕಾಗೋಡು ತಿಮ್ಮಪ್ಪ ಮತ್ತು ಎಸ್.‌ ಬಂಗಾರಪ್ಪ. ಈ ಇಬ್ಬರ ಈಡಿಗರ ರಾಜಕೀಯ ಶಕ್ತಿ-ಸಂಬಂಧಗಳ ಹಿನ್ನೆಲೆಯಲ್ಲಿ ಪರಿಶಿಷ್ಟರ ಯಾದಿ ಸೇರದ ಈಡಿಗರ ಸಮೂದಾಯ ಆ ಕಾಲದಲ್ಲಿ ರಾಜಕೀಯ ಶಕ್ತಿಯಾಗಿ ಪ್ರತಿಬಿಂಬಿತವಾಗಿದ್ದು ಸತ್ಯ. ಆದರೆ ಅದರ ನಂತರ ಶಿವಮೊಗ್ಗ, ಚಿಕ್ಕಮಂಗಳೂರು ಸೇರಿದ ಕೆಲವು ಜಿಲ್ಲೆಗಳ ದೀವರು ಈಡಿಗರೊಂದಿಗೆ ಸೇರಿಹೋಗಿದ್ದೂ ಹೌದು. ಆದರೆ ಇತರ ಜಿಲ್ಲೆಗಳಲ್ಲಿ ಈಡಿಗರ ಸಂಘಟನೆಯೊಂದಿಗೆ ಸಂಪೂರ್ಣವಾಗಿ ಸೇರದ ಕೆಲವು ಸಂಘಟನೆಗಳು ಸ್ವತಂತ್ರವಾಗಿ ಹೊರಗುಳಿದವು. ಹೀಗೆ ಜಾತಿ ಸಂಘದ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಎರಡ್ಮೂರು ಸಂಘ, ಸಂಘಟನೆಗಳಿದ್ದರೆ ಹೊರ ಜಿಲ್ಲೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ.

ಇಂಥ ಅಸ್ಫಷ್ಟತೆಗಳ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ಧಾಪುರ ಸೇರಿದಂತೆ ಕೆಲವು ತಾಲೂಕುಗಳಲ್ಲಿ ನಾಮಧಾರಿ ಸಂಘಗಳು ಸ್ವತಂತ್ರವಾಗಿ ಅಸ್ಥಿತ್ವದಲ್ಲಿವೆ. ಈ ಸ್ವತಂತ್ರ ಅಸ್ಥಿತ್ವದ ಸಂಘಗಳು ಜಿಲ್ಲಾ ಮಟ್ಟದಲ್ಲಿ ಒಟ್ಟಾಗಿ ಒಂದೇ ಸಂಘ ರಚಿಸಿಕೊಂಡಿಲ್ಲ. ಇಂಥ ಸ್ವತಂತ್ರ ಅಸ್ಥಿತ್ವದ ತಾಲೂಕು- ಜಿಲ್ಲಾಸಂಘಗಳು ಆಯಾ ಕಾಲದ ರಾಜಕೀಯ ಶಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದು ವಿಚಿತ್ರ ಇಂಥ ಸಂದರ್ಭದಲ್ಲಿ ಸಿದ್ಧಾಪುರದಲ್ಲಿ ಅಸ್ಥಿತ್ವಕ್ಕೆ ಬಂದ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘ ೧೯೯೨ ರಲ್ಲಿ ಸ್ಥಾಪನೆಯಾಗಿ ಎರಡು ದಶಕಗಳಲ್ಲಿ ಹತ್ತು ಕೋಟಿಗೂ ಮಿಕ್ಕಿದ ಆಸ್ತಿ- ವ್ಯವಹಾರ ಮಾಡಿದ್ದು ವಿಶೇಶ.

ಇಂಥ ಸಂಘದ ಅಂಗಳದಲ್ಲಿ ಚಿಕ್ಕ ಸಂಚಲನೆಯಾಗಿ ಈ ಸಂಘಗಳ ಜೊತೆಗೆ ಸಂಪರ್ಕ- ಸಂಬಂಧವೇ ಇಲ್ಲದ ಬಿ.ಎಸ್. ಎನ್.ಡಿ.ಪಿ. ಸಂಘಟನೆಯ ಅಧ್ಯಕ್ಷರಾಗಿದ್ದವರೊಬ್ಬರು ಸಂಘದ ವಿಚಾರವನ್ನು ಬಹಿರಂಗಪಡಿಸಿ ಗೊಂದಲ ಹುಟ್ಟಿಸಿದರೆಂದು ಹಲ್ಲೆಯಾದ ಬಗ್ಗೆ ಪೊಲೀಸ ಪ್ರಕರಣ ದಾಖಲಾಗಿದೆ.

ಈ ಘಟನೆ ನಂತರ ನಾಮಧಾರಿ ಅಭಿವೃದ್ಧಿ ಸಂಘ ಮಾಧ್ಯಮಗೋಷ್ಠಿ ಕರೆದು ತನ್ನ ವ್ಯವಹಾರಗಳ ಬಗ್ಗೆ ವಿವರ ನೀಡಿತು. ಈ ಬೆಳವಣಿಗೆಗಳ ನಂತರ ಮತ್ತು ಮೊದಲು ಕೂಡಾ ಸಮೂದಾಯದ ಸಂಘಟನೆಗಳಲ್ಲಿ ನೇರ ರಾಜಕೀಯ ನೇತೃತ್ವ ಸರಿಯೆ? ಎನ್ನುವ ಪ್ರಶ್ನೆ ಎದ್ದಿದೆ. ಸಮೂದಾಯದ ಸಂಘಟನೆ, ಸಂಘಗಳಲ್ಲಿ ರಾಜಕೀಯ ಪ್ರವೇಶ ಸರಿ ಎಂದಾದರೆ ಅದರ ಪೂರಕ- ಮಾರಕ ಅಂಶ ಗಳಿಗೂ ಸಂಘ ಜವಾಬ್ಧಾರಿಯಾಗಬೇಕಾಗುತ್ತದೆ. ಒಂದು ವೇಳೆ ಸಂಘದಲ್ಲಿ ರಾಜಕೀಯ ಪ್ರವೇಶ ಬೇಡ ಎಂದಾದರೆ ಆಗಲೂ ಪೂರಕ- ಮಾರಕ ಅಂಶಗಳಿಗೆ ಜವಾಬ್ಧಾರಿಯಾಗಬೇಕಾಗುತ್ತದೆ. ಸಂಘ, ಸಂಘದ ವ್ಯವಹಾರದ ವಿಚಾರ ಬಹಿರಂಗವಾಗಿ ಬೀದಿರಂಪವಾದರೆ ಆಗಲೂ ಸಂಘವೇ ಜವಾಬ್ಧಾರಿ ವಹಿಸಬೇಕಾಗುತ್ತದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *