siddapur,s spl- ಮುಕುಂದ ಜೋಡಿ ಸೂಪರ್ ದಂಪತಿಗಳು

ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ!
ಮುಕುಂದ ಜೋಡಿ
ಸೂಪರ್ ದಂಪತಿಗಳು
ಸಿದ್ಧಾಪುರದಲ್ಲಿ ಸದ್ದಿಲ್ಲದೆ ನಡೆದ ಕಲರ್ ಸೂಪರ್ ವಾಹಿನಿಯ ಸೂಪರ್ ದಂಪತಿಗಳ ಆಯ್ಕೆಯಲ್ಲಿ ನಗರದ ಹಾಡುಗಾರ ಮುಕುಂದ ಪೈ ದಂಪತಿಗಳು ಆಯ್ಕೆಯಾಗಿದ್ದಾರೆ.
ನಗರದ ಹೊಸಪೇಟೆಯ ಮುಕುಂದ ಖಾಸಗಿ ಉದ್ಯೋಗಿ ಮತ್ತು ಹವ್ಯಾಸಿ ಹಾಡುಗಾರ. ಅವರ ಪತ್ನಿ ಶಾಲಾ ಶಿಕ್ಷಕಿ ಮಾತು-ಹಾಡು, ರಗಳೆ,ತಮಾಸೆಗಳ ಈ ದಂಪತಿಗಳು ತಮ್ಮ ವಿಶೇಶ ಅರ್ಹತೆಗಳಿಂದ ಸೂಪರ್ ದಂಪತಿಗಳಾಗಿಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಟೆಂಪೋಕ್ಕೆ ಬಿತ್ತು 50ಸಾವಿರ ದಂಡ!
ಸಿದ್ಧಾಪುರ ತಾಲೂಕಿನ ಟೆಂಪೋ ಡ್ರೈವರ್ ರೊಬ್ಬರಿಗೆ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ಬರೋಬ್ಬರಿ 51 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಸಿದ್ಧಾಪುರದಿಂದ ಪರ ಊರಿಗೆ ಹೋಗುವ ವಾಹನ ಚಾಲಕರು, ಮಾಲಕರು ಸಾರಿಗೆ ನಿಯಮ ಕಟ್ಟುನಿಟ್ಟಾಗಿ ಅನುಸರಿಸುವುದು ದುಸ್ಥರ. ಇಂಥ ಸ್ಥಿತಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೊಂಡೊಯ್ಯುತಿದ್ದ ಆರೋಪದ ಮೇಲೆ ಟೆಂಪೋ ಚಾಲಕನಿಗೆ 51 ಸಾವಿರ ದಂಡ ವಿಧಿಸಿದ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ದಾಖಲೆ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಿಂದ ಪ್ರಾರಂಭವಾಗಿ ದೇಶದ ಯಾವ ಮೂಲೆಯಲ್ಲಿ ಈ ರೀತಿ ದುಬಾರಿ ದಂಡ ವಿಧಿಸಿದರೂ ಅಲ್ಲಿನ ಜನಪ್ರತಿನಿಧಿಗಳು ಬಾಧಿತರ ನೆರವಿಗೆ ಬಂದು ಅಧಿಕಾರಿಗಳಿಗೆ ಹಣ್ಣುಗಾಯಿ, ನೀರುಗಾಯಿ ಮಾಡುತಿದ್ದರು ಆದರೆ ನಮ್ಮ ಮೈಕ್ ಮತ್ತು ಸ್ಫೀಕರ್ 5 ವರ್ಷಕ್ಕೊಮ್ಮೆ ಹಿಂದೂ,ಹಿಂದುತ್ವದ ಮುವಾಡದ ವೈದಿಕನೀಚತನಗಳಿಂದ ಸೌಂಡುಮಾಡುವುದು ಬಿಟ್ಟರೆ ಜನ ಸಾಯುತಿದ್ದರೂ ‘ಅಧಿಕಾರಿಗಳೇ ಅವರನ್ನು ಕಾನೂನಿನ ಪ್ರಕಾರ ಬದುಕಿಸಲು ಬಂದರೆ ಬದುಕಿಸಿ ಇಲ್ಲವಾದರೆ ಜನಿವಾರ ನೋಡಿ ಕತೆಮುಗಿಸಿ’ ಎನ್ನುತ್ತಾರಾದ್ದರಿಂದ ಇವರನ್ನು ಹಿಂದುತ್ವದ ಕಾರಣಕ್ಕೆ ಆಯ್ಕೆಮಾಡಿದ್ದಕ್ಕೆ ನಾವು ಜೀವ ಬಿಡಬೇಕಾಗಿದೆ ಎಂದು ಜನಸಾಮಾನ್ಯ ಚಾಲಕ,ಮಾಲಕರು ಗೊಣಗಿದರು ಎನ್ನಲಾಗಿದೆ.

ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ!
ತಾಲೂಕಿನ ಹೇರೂರಿನ ಅಡಿಕೆ ವ್ಯಾಪಾರಿಗಳು ಎನ್ನಲಾದ ಇಬ್ಬರನ್ನು ಮೊನ್ನೆ ಶಿರಸಿ ಪೊಲೀಸರು ದಾಖಲೆ ಇಲ್ಲದ ಹಣ ಸಾಗಿಸುತಿದ್ದ ಆರೋಪದ ಮೇಲೆ ಬಂಧಿಸಿ 56 ಲಕ್ಷಗಳನ್ನು ವಶಕ್ಕೆ ಪಡೆದಿದ್ದಾರೆ.
ತೆರಿಗೆ ತಪ್ಪಿಸಿ ಅಡಿಕೆ ಮಾರುವ ಜಾಲದ ಹವಾಲಾ ಹಣ ಇದಾಗಿರುವ ಬಗ್ಗೆ ಗುಮಾನಿಗಳಿವೆ. ಕೇಂದ್ರದ ಗಬ್ಬರ್ ಸಿಂಗ್ ತೆರಿಗೆಯಿಂದ ಕಂಗೆಟ್ಟ ಅಡಿಕೆ ವ್ಯಾಪಾರಿಗಳು ಹವಾಲಾ ಮೂಲಕ ಅಡಿಕೆ ವಹಿವಾಟು ನಡೆಸುತಿದ್ದಾರೆ ಎನ್ನುವ ಆರೋಪಕ್ಕೆ ಈ ಪ್ರಕರಣ ಪುಷ್ಠಿ ನೀಡಿದಂತಾಗಿದೆ.

ಕರ್ಚಿಗೊಂದು ಮೋರಿ!
ನಗರದ ಪ.ಪಂ. ವ್ಯಾಪ್ತಿಯ ಹಾಳದಕಟ್ಟಾ ಬಳಿ ನಾಮಕಾವಾಸ್ಥೆ ಮೋರಿ ಒಂದನ್ನು ಕಟ್ಟಿದ್ದು, ಈ ಕೆಲಸದ ಕಳಪೆ, ಕಾಮಗಾರಿ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಸ್ಥಳಿಯರಿಗೆ ಪ.ಪಂ. ಪ್ರಮುಖ ಮುಖಂಡರೊಬ್ಬರು ಇದರ ಕತೆ ಬಿಡಿ, ಒಂದುವರ್ಷದೊಳಗೆ ಇದಕ್ಕೆ ದೊಡ್ಡ ಮೋರಿಯನ್ನೇ ನಿರ್ಮಿಸುತ್ತೇವೆ ಎಂದು ಆಶ್ವಾಸನೆ ನೀಡಿ ಈ ಕೆಲಸ ಜನರಿಗಾಗಿ ಅಲ್ಲ ಎಂದು ಸಮಾಜಾಯಿಸಿ ನೀಡಿರುವ ಬಗ್ಗೆ ನಗರದಲ್ಲಿ ಚರ್ಚೆ ನಡೆಯುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

  1. ಇ -ಪತ್ರಿಕೆ ವೇಗವಾಗಿ ಜನರನ್ನು ಹೆಚ್ಚು ಸೆಳೆಯುತ್ತಿದೆ.ಶುಭವಾಗಲಿ

Leave a Reply

Your email address will not be published. Required fields are marked *