siddapur,s spl- ಮುಕುಂದ ಜೋಡಿ ಸೂಪರ್ ದಂಪತಿಗಳು

ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ!
ಮುಕುಂದ ಜೋಡಿ
ಸೂಪರ್ ದಂಪತಿಗಳು
ಸಿದ್ಧಾಪುರದಲ್ಲಿ ಸದ್ದಿಲ್ಲದೆ ನಡೆದ ಕಲರ್ ಸೂಪರ್ ವಾಹಿನಿಯ ಸೂಪರ್ ದಂಪತಿಗಳ ಆಯ್ಕೆಯಲ್ಲಿ ನಗರದ ಹಾಡುಗಾರ ಮುಕುಂದ ಪೈ ದಂಪತಿಗಳು ಆಯ್ಕೆಯಾಗಿದ್ದಾರೆ.
ನಗರದ ಹೊಸಪೇಟೆಯ ಮುಕುಂದ ಖಾಸಗಿ ಉದ್ಯೋಗಿ ಮತ್ತು ಹವ್ಯಾಸಿ ಹಾಡುಗಾರ. ಅವರ ಪತ್ನಿ ಶಾಲಾ ಶಿಕ್ಷಕಿ ಮಾತು-ಹಾಡು, ರಗಳೆ,ತಮಾಸೆಗಳ ಈ ದಂಪತಿಗಳು ತಮ್ಮ ವಿಶೇಶ ಅರ್ಹತೆಗಳಿಂದ ಸೂಪರ್ ದಂಪತಿಗಳಾಗಿಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಟೆಂಪೋಕ್ಕೆ ಬಿತ್ತು 50ಸಾವಿರ ದಂಡ!
ಸಿದ್ಧಾಪುರ ತಾಲೂಕಿನ ಟೆಂಪೋ ಡ್ರೈವರ್ ರೊಬ್ಬರಿಗೆ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ಬರೋಬ್ಬರಿ 51 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಸಿದ್ಧಾಪುರದಿಂದ ಪರ ಊರಿಗೆ ಹೋಗುವ ವಾಹನ ಚಾಲಕರು, ಮಾಲಕರು ಸಾರಿಗೆ ನಿಯಮ ಕಟ್ಟುನಿಟ್ಟಾಗಿ ಅನುಸರಿಸುವುದು ದುಸ್ಥರ. ಇಂಥ ಸ್ಥಿತಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೊಂಡೊಯ್ಯುತಿದ್ದ ಆರೋಪದ ಮೇಲೆ ಟೆಂಪೋ ಚಾಲಕನಿಗೆ 51 ಸಾವಿರ ದಂಡ ವಿಧಿಸಿದ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ದಾಖಲೆ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಿಂದ ಪ್ರಾರಂಭವಾಗಿ ದೇಶದ ಯಾವ ಮೂಲೆಯಲ್ಲಿ ಈ ರೀತಿ ದುಬಾರಿ ದಂಡ ವಿಧಿಸಿದರೂ ಅಲ್ಲಿನ ಜನಪ್ರತಿನಿಧಿಗಳು ಬಾಧಿತರ ನೆರವಿಗೆ ಬಂದು ಅಧಿಕಾರಿಗಳಿಗೆ ಹಣ್ಣುಗಾಯಿ, ನೀರುಗಾಯಿ ಮಾಡುತಿದ್ದರು ಆದರೆ ನಮ್ಮ ಮೈಕ್ ಮತ್ತು ಸ್ಫೀಕರ್ 5 ವರ್ಷಕ್ಕೊಮ್ಮೆ ಹಿಂದೂ,ಹಿಂದುತ್ವದ ಮುವಾಡದ ವೈದಿಕನೀಚತನಗಳಿಂದ ಸೌಂಡುಮಾಡುವುದು ಬಿಟ್ಟರೆ ಜನ ಸಾಯುತಿದ್ದರೂ ‘ಅಧಿಕಾರಿಗಳೇ ಅವರನ್ನು ಕಾನೂನಿನ ಪ್ರಕಾರ ಬದುಕಿಸಲು ಬಂದರೆ ಬದುಕಿಸಿ ಇಲ್ಲವಾದರೆ ಜನಿವಾರ ನೋಡಿ ಕತೆಮುಗಿಸಿ’ ಎನ್ನುತ್ತಾರಾದ್ದರಿಂದ ಇವರನ್ನು ಹಿಂದುತ್ವದ ಕಾರಣಕ್ಕೆ ಆಯ್ಕೆಮಾಡಿದ್ದಕ್ಕೆ ನಾವು ಜೀವ ಬಿಡಬೇಕಾಗಿದೆ ಎಂದು ಜನಸಾಮಾನ್ಯ ಚಾಲಕ,ಮಾಲಕರು ಗೊಣಗಿದರು ಎನ್ನಲಾಗಿದೆ.

ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ!
ತಾಲೂಕಿನ ಹೇರೂರಿನ ಅಡಿಕೆ ವ್ಯಾಪಾರಿಗಳು ಎನ್ನಲಾದ ಇಬ್ಬರನ್ನು ಮೊನ್ನೆ ಶಿರಸಿ ಪೊಲೀಸರು ದಾಖಲೆ ಇಲ್ಲದ ಹಣ ಸಾಗಿಸುತಿದ್ದ ಆರೋಪದ ಮೇಲೆ ಬಂಧಿಸಿ 56 ಲಕ್ಷಗಳನ್ನು ವಶಕ್ಕೆ ಪಡೆದಿದ್ದಾರೆ.
ತೆರಿಗೆ ತಪ್ಪಿಸಿ ಅಡಿಕೆ ಮಾರುವ ಜಾಲದ ಹವಾಲಾ ಹಣ ಇದಾಗಿರುವ ಬಗ್ಗೆ ಗುಮಾನಿಗಳಿವೆ. ಕೇಂದ್ರದ ಗಬ್ಬರ್ ಸಿಂಗ್ ತೆರಿಗೆಯಿಂದ ಕಂಗೆಟ್ಟ ಅಡಿಕೆ ವ್ಯಾಪಾರಿಗಳು ಹವಾಲಾ ಮೂಲಕ ಅಡಿಕೆ ವಹಿವಾಟು ನಡೆಸುತಿದ್ದಾರೆ ಎನ್ನುವ ಆರೋಪಕ್ಕೆ ಈ ಪ್ರಕರಣ ಪುಷ್ಠಿ ನೀಡಿದಂತಾಗಿದೆ.

ಕರ್ಚಿಗೊಂದು ಮೋರಿ!
ನಗರದ ಪ.ಪಂ. ವ್ಯಾಪ್ತಿಯ ಹಾಳದಕಟ್ಟಾ ಬಳಿ ನಾಮಕಾವಾಸ್ಥೆ ಮೋರಿ ಒಂದನ್ನು ಕಟ್ಟಿದ್ದು, ಈ ಕೆಲಸದ ಕಳಪೆ, ಕಾಮಗಾರಿ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಸ್ಥಳಿಯರಿಗೆ ಪ.ಪಂ. ಪ್ರಮುಖ ಮುಖಂಡರೊಬ್ಬರು ಇದರ ಕತೆ ಬಿಡಿ, ಒಂದುವರ್ಷದೊಳಗೆ ಇದಕ್ಕೆ ದೊಡ್ಡ ಮೋರಿಯನ್ನೇ ನಿರ್ಮಿಸುತ್ತೇವೆ ಎಂದು ಆಶ್ವಾಸನೆ ನೀಡಿ ಈ ಕೆಲಸ ಜನರಿಗಾಗಿ ಅಲ್ಲ ಎಂದು ಸಮಾಜಾಯಿಸಿ ನೀಡಿರುವ ಬಗ್ಗೆ ನಗರದಲ್ಲಿ ಚರ್ಚೆ ನಡೆಯುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

1 Comment

  1. ಇ -ಪತ್ರಿಕೆ ವೇಗವಾಗಿ ಜನರನ್ನು ಹೆಚ್ಚು ಸೆಳೆಯುತ್ತಿದೆ.ಶುಭವಾಗಲಿ

Leave a Reply

Your email address will not be published. Required fields are marked *