ಅಡಿಕೆ: ಕಳ್ಳರಿದ್ದಾರೆ ಎಚ್ಚರಿಕೆ! ಮತಾಂಧರ ಕೈವಾಡದ ಶಂಕೆ?

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಕದಿಯಲು ಬಂದ ಕಳ್ಳರು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಶಿರಸಿ-ಸಿದ್ಧಾಪುರದ ಕೆಲವೆಡೆ ಕಳ್ಳರು ಅಡಿಕೆ ಕದಿಯುವ ಹಿನ್ನೆಲೆಯಲ್ಲಿ ನಾನಾ ವೇಷಗಳಲ್ಲಿ ಹೊಂಚುಹಾಕುತಿದ್ದಾರೆ ಎನ್ನುವ ಗಾಳಿಸುದ್ದಿಗಳು ಕೇಳಿಬರುತ್ತಿವೆ.
ಕಳೆದ ವಾರ ಒಂದು ರಾತ್ರಿ ಅವರಗುಪ್ಪಾದಲ್ಲಿ (ಸಿದ್ಧಾಪುರ) ಅಡಿಕೆ ಸಂಗ್ರಹಿಸಿಟ್ಟಿದ್ದ ಮನೆಯ ಮುಂದೆ ಮಾರುತಿ ಒಮಿನಿಯಲ್ಲಿ ಬಂದಿದ್ದ ಜನರು ಹಾರ್ನ್ಮಾಡಿ ಮನೆಯ ಜನರು ಬೆಳಕು ಹೊತ್ತಿಸುತ್ತಲೇ ಪರಾರಿಯಾದ ಘಟನೆ ನಡೆದಿದೆ.
ಇದೇ ರಾತ್ರಿ ಬಹುತೇಕ ಇದೇ ಸಮಯದಲ್ಲಿ ಇದೇ ಒಮಿನಿಯಲ್ಲಿ ಬಂದಿರಬಹುದಾದ ಕೆಲವು ಜನರು ಅವರಗುಪ್ಪಾದ ಗೌಡರ್ ಮನೆಯಲ್ಲಿ ಸಂಗ್ರಹಿಸಿದ್ದ ಕೆಂಪುಅಡಿಕೆಯ ಚೀಲಗಳನ್ನು ಕೊಂಡುಯ್ಯುವ ಪ್ರಯತ್ನದಲ್ಲಿದ್ದಾಗ ಲೈಟ್ ಹಾಕಿದ ಮನೆಯವರು ಎಚ್ಚರಾಗಿರಬಹುದು ಎಂದು ತಿಳಿದು ಕಳ್ಳರು ಪರಾರಿಯಾಗಿದ್ದಾರೆ.
ಈ ಕಳ್ಳರು ಗೌಡರ ಮನೆಯ ಒಣ(ಚಾಲಿ)ಅಡಿಕೆ ಚೀಲಕ್ಕೆ ಕೈಹಾಕದೆ, ಕೆಂಪು ಅಡಿಕೆ ಚೀಲವನ್ನೇ ಹುಡುಕಿ ಬಾಗಿಲ ವರೆಗೆ ಎಳೆದುತಂದು ದಿಢೀರ್ ಹೊತ್ತಿದ ಬೆಳಕಿನಿಂದಾಗಿ ಓಡಿ ಪರಾರಿಯಾಗಿದ್ದಾರೆ. ಮನೆಯವರು ಶೌಚಕ್ಕೆ ಎದ್ದಿದ್ದರು ಎನ್ನಲಾಗಿದ್ದು. ಅಡಿಕೆ ಸಂಗ್ರಹಿಸುವ ಪ್ರದೇಶ, ಚಾಲಿ ಅಡಿಕೆ ಚೀಗಳೊಂದಿಗಿದ್ದ ಕೆಂಪು ಅಡಿಕೆ ಚೀಲವನ್ನೇ ಗುರುತಿಸಿ ಕೈ ಹಚ್ಚಿದ್ದು, ರಾತ್ರಿ 2ರಿಂದ ಮೂರರ ಅವಧಿಯಲ್ಲಿ ಈ ಘಟನೆ ನಡೆದಿದ್ದು ಈ ಎಲ್ಲಾ ಅಂಶಗಳ ಆಧಾರದಲ್ಲಿ ಸಿದ್ಧಾಪುರದಲ್ಲಿ ಸ್ಥಳಿಯರ ಸಹಕಾರ, ನೆರವಿನಿಂದ ಒಳಗಿನವರು, ಹೊರ ಊರವರೆಲ್ಲಾ ಸೇರಿ ಈ ಕಳ್ಳತನ ಮಾಡುತ್ತಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.
ಅಡಿಕೆಗೆ 30-35ಸಾವಿರಗಳಷ್ಟಿದ್ದ ಬೆಲೆ ಇತ್ತೀಚಿನ ದಿನಗಳಲ್ಲಿ ಹತ್ತು ಸಾವಿರದಷ್ಟು ಹೆಚ್ಚಿದ್ದು ಅಡಿಕೆ ಕದಿಯುವ ಕಳ್ಳರಿಗೆ ಉತ್ತೇಜನ ನೀಡಿದಂತಾಗಿದೆ.
20 ವರ್ಷಗಳ ಹಿಂದೆ ಹಗಲು ದೇಶಪ್ರೇಮಿಗಳು ರಾತ್ರಿ ಕಳ್ಳರು ಆಗಿ ಹೊನ್ನಾವರ-ಸಿದ್ಧಾಪುರ ಭಾಗದಲ್ಲಿ ದೇವಾಲಯಗಳ ಕಳ್ಳತನ ಮಾಡಿ ರಾಜಕಾರಣ ಮಾಡುತಿದ್ದ ಮತಾಂಧರಿಗೆ ಈಗ ಸರ್ಕಾರ, ಜನಪ್ರತಿನಿಧಿತ್ವ ಎಲ್ಲವೂ ಅವರ ಬಳಿಯೇ ಇರುವುದರಿಂದ ಈ ಹಗಲು ದೇಶಭಕ್ತರು ರಾತ್ರಿ ಕಳ್ಳರಾಗುವ ಮತಾಂಧರೆ ಇರಬಹುದು ಎನ್ನುವ ಶಂಕೆಯೂ ವ್ಯಕ್ತವಾಗಿದೆ.
ಅಂದಹಾಗೆ 20-25 ವರ್ಷಗಳ ಹಿಂದೆ ರಾತ್ರಿ ದೇವಸ್ಥಾನಗಳ ಕಳ್ಳತನ ಮಾಡಿ ದೇಶಭಕ್ತರ ಗೆಟಪ್ ಹಾಕುತಿದ್ದವರು ಮಾಜಿ ಸಚಿವರೊಬ್ಬರ ಆಪ್ತರು, ಹಿಂಬಾಲಕರು ಆಗಿದ್ದ ಅವರಲ್ಲಿ ಬದುಕಿರುವ ಕೆಲವರು ನಾಗಪುರದ ಅವರ ಹೆಡ್ಡಾಫೀಸ್ ಬಳಿ ಸೇರಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಪೊಲೀಸರ ಬಳಿ ಇರುವುದು ಮತಾಂಧರ ದ್ವಿಪಾತ್ರ,ತ್ರಿಪಾತ್ರಗಳಿಗೆ ದೃಷ್ಟಾಂತ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *