

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಕದಿಯಲು ಬಂದ ಕಳ್ಳರು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಶಿರಸಿ-ಸಿದ್ಧಾಪುರದ ಕೆಲವೆಡೆ ಕಳ್ಳರು ಅಡಿಕೆ ಕದಿಯುವ ಹಿನ್ನೆಲೆಯಲ್ಲಿ ನಾನಾ ವೇಷಗಳಲ್ಲಿ ಹೊಂಚುಹಾಕುತಿದ್ದಾರೆ ಎನ್ನುವ ಗಾಳಿಸುದ್ದಿಗಳು ಕೇಳಿಬರುತ್ತಿವೆ.
ಕಳೆದ ವಾರ ಒಂದು ರಾತ್ರಿ ಅವರಗುಪ್ಪಾದಲ್ಲಿ (ಸಿದ್ಧಾಪುರ) ಅಡಿಕೆ ಸಂಗ್ರಹಿಸಿಟ್ಟಿದ್ದ ಮನೆಯ ಮುಂದೆ ಮಾರುತಿ ಒಮಿನಿಯಲ್ಲಿ ಬಂದಿದ್ದ ಜನರು ಹಾರ್ನ್ಮಾಡಿ ಮನೆಯ ಜನರು ಬೆಳಕು ಹೊತ್ತಿಸುತ್ತಲೇ ಪರಾರಿಯಾದ ಘಟನೆ ನಡೆದಿದೆ.
ಇದೇ ರಾತ್ರಿ ಬಹುತೇಕ ಇದೇ ಸಮಯದಲ್ಲಿ ಇದೇ ಒಮಿನಿಯಲ್ಲಿ ಬಂದಿರಬಹುದಾದ ಕೆಲವು ಜನರು ಅವರಗುಪ್ಪಾದ ಗೌಡರ್ ಮನೆಯಲ್ಲಿ ಸಂಗ್ರಹಿಸಿದ್ದ ಕೆಂಪುಅಡಿಕೆಯ ಚೀಲಗಳನ್ನು ಕೊಂಡುಯ್ಯುವ ಪ್ರಯತ್ನದಲ್ಲಿದ್ದಾಗ ಲೈಟ್ ಹಾಕಿದ ಮನೆಯವರು ಎಚ್ಚರಾಗಿರಬಹುದು ಎಂದು ತಿಳಿದು ಕಳ್ಳರು ಪರಾರಿಯಾಗಿದ್ದಾರೆ.
ಈ ಕಳ್ಳರು ಗೌಡರ ಮನೆಯ ಒಣ(ಚಾಲಿ)ಅಡಿಕೆ ಚೀಲಕ್ಕೆ ಕೈಹಾಕದೆ, ಕೆಂಪು ಅಡಿಕೆ ಚೀಲವನ್ನೇ ಹುಡುಕಿ ಬಾಗಿಲ ವರೆಗೆ ಎಳೆದುತಂದು ದಿಢೀರ್ ಹೊತ್ತಿದ ಬೆಳಕಿನಿಂದಾಗಿ ಓಡಿ ಪರಾರಿಯಾಗಿದ್ದಾರೆ. ಮನೆಯವರು ಶೌಚಕ್ಕೆ ಎದ್ದಿದ್ದರು ಎನ್ನಲಾಗಿದ್ದು. ಅಡಿಕೆ ಸಂಗ್ರಹಿಸುವ ಪ್ರದೇಶ, ಚಾಲಿ ಅಡಿಕೆ ಚೀಗಳೊಂದಿಗಿದ್ದ ಕೆಂಪು ಅಡಿಕೆ ಚೀಲವನ್ನೇ ಗುರುತಿಸಿ ಕೈ ಹಚ್ಚಿದ್ದು, ರಾತ್ರಿ 2ರಿಂದ ಮೂರರ ಅವಧಿಯಲ್ಲಿ ಈ ಘಟನೆ ನಡೆದಿದ್ದು ಈ ಎಲ್ಲಾ ಅಂಶಗಳ ಆಧಾರದಲ್ಲಿ ಸಿದ್ಧಾಪುರದಲ್ಲಿ ಸ್ಥಳಿಯರ ಸಹಕಾರ, ನೆರವಿನಿಂದ ಒಳಗಿನವರು, ಹೊರ ಊರವರೆಲ್ಲಾ ಸೇರಿ ಈ ಕಳ್ಳತನ ಮಾಡುತ್ತಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.
ಅಡಿಕೆಗೆ 30-35ಸಾವಿರಗಳಷ್ಟಿದ್ದ ಬೆಲೆ ಇತ್ತೀಚಿನ ದಿನಗಳಲ್ಲಿ ಹತ್ತು ಸಾವಿರದಷ್ಟು ಹೆಚ್ಚಿದ್ದು ಅಡಿಕೆ ಕದಿಯುವ ಕಳ್ಳರಿಗೆ ಉತ್ತೇಜನ ನೀಡಿದಂತಾಗಿದೆ.
20 ವರ್ಷಗಳ ಹಿಂದೆ ಹಗಲು ದೇಶಪ್ರೇಮಿಗಳು ರಾತ್ರಿ ಕಳ್ಳರು ಆಗಿ ಹೊನ್ನಾವರ-ಸಿದ್ಧಾಪುರ ಭಾಗದಲ್ಲಿ ದೇವಾಲಯಗಳ ಕಳ್ಳತನ ಮಾಡಿ ರಾಜಕಾರಣ ಮಾಡುತಿದ್ದ ಮತಾಂಧರಿಗೆ ಈಗ ಸರ್ಕಾರ, ಜನಪ್ರತಿನಿಧಿತ್ವ ಎಲ್ಲವೂ ಅವರ ಬಳಿಯೇ ಇರುವುದರಿಂದ ಈ ಹಗಲು ದೇಶಭಕ್ತರು ರಾತ್ರಿ ಕಳ್ಳರಾಗುವ ಮತಾಂಧರೆ ಇರಬಹುದು ಎನ್ನುವ ಶಂಕೆಯೂ ವ್ಯಕ್ತವಾಗಿದೆ.
ಅಂದಹಾಗೆ 20-25 ವರ್ಷಗಳ ಹಿಂದೆ ರಾತ್ರಿ ದೇವಸ್ಥಾನಗಳ ಕಳ್ಳತನ ಮಾಡಿ ದೇಶಭಕ್ತರ ಗೆಟಪ್ ಹಾಕುತಿದ್ದವರು ಮಾಜಿ ಸಚಿವರೊಬ್ಬರ ಆಪ್ತರು, ಹಿಂಬಾಲಕರು ಆಗಿದ್ದ ಅವರಲ್ಲಿ ಬದುಕಿರುವ ಕೆಲವರು ನಾಗಪುರದ ಅವರ ಹೆಡ್ಡಾಫೀಸ್ ಬಳಿ ಸೇರಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಪೊಲೀಸರ ಬಳಿ ಇರುವುದು ಮತಾಂಧರ ದ್ವಿಪಾತ್ರ,ತ್ರಿಪಾತ್ರಗಳಿಗೆ ದೃಷ್ಟಾಂತ ಎನ್ನಲಾಗುತ್ತಿದೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
