ಜಿಲ್ಲಾ ಅಪರಾಧನಿಗ್ರಹದಳದ ಸಾಧನೆ ೨.೫ ಕೋಟಿಮೌಲ್ಯದ ಬ್ರೌನ್‌ಶುಗರ್ ವಶ, ಅಂಕೋಲಾ & ಸಿದ್ದಾಪುರ ಮೂಲದ ತಲಾ ಇಬ್ಬರು ಅಂದರ್

ನಿಶ್ಚಿತ ಉದ್ಯೋಗವಿಲ್ಲದೆ ಕೋಟ್ಯಾಂತರ ದುಡಿಯವ ನಾಲ್ಕು ಜನ ಯುವಕರ ವ್ಯವಹಾರಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್‌ರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಂತರ್ ರಾಜ್ಯ, ವಿದೇಶಗಳಿಗೆ ಮಾದಕ ಬ್ರೌನ್‌ಶುಗರ್ ಸಾಗಿಸುವ ತಂಡವೊಂದನ್ನು ಅಂಕೋಲಾದಲ್ಲಿ ಸೆರೆಹಿಡಿದು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ನಾಲ್ವರಲ್ಲಿ ಸಿದ್ದಾಪುರದ ವೀರಭದ್ರ ಹೆಗಡೆ ಮತ್ತು ಪ್ರವೀಣ ಭಟ್ ಸೇರಿರುವುದು ವಿಶೇಶ. ಅಂಕೋಲಾದ ವ್ಯಕ್ತಿಗಳಿಬ್ಬರು ಮತ್ತು ಸಿದ್ಧಾಪುರದ ಎರಡುಜನ ಯುವಕರು ಎರಡು ಕಾರ್‌ಗಳನ್ನು ಬಳಸಿ ಮಾದಕ ಬ್ರೌನ್‌ಶುಗರ್ ಸಾಗಿಸುವ ಮಾಹಿತಿ ಉತ್ತರಕನ್ನಡ ಜಿಲ್ಲಾ ಅಪರಾಧ ನಿಗ್ರಹ ದಳಕ್ಕೆ ಸಿಕ್ಕಿತ್ತು. ಕೆಲವು ದಿವಸಗಳಿಂದ ಬಲೆಬೀಸಿದ್ದ ಈ ಪೊಲೀಸರು ಅಂಕೋಲಾದ ಗುನಗಾ, ಭಾಗ್ವತ್ ರೊಂದಿಗೆ ಸಿದ್ದಾಪುರದ ವೀರಭದ್ರ ಮತ್ತು ಪ್ರವೀಣ ಮಾಡುತ್ತಿರುವ ವ್ಯವಹಾರ, ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು.
ಸಾರ್ವಜನಿಕರು, ಇಲಾಖೆಯ ಮಾಹಿತಿಗಳು ತನಿಖಾ ದಳಕ್ಕೆ ಸಿಗುತ್ತಿದ್ದಂತೆ ಜಾಗೃತರಾದ ತನಿಖಾ ದಳದ ಅಧಿಕಾರಿಗಳು ಮಾಲಿನೊಂದಿಗೆ ಆರೋಪಿಗಳನ್ನು ಹಿಡಿಯಲು ಹೊಂಚುಹಾಕಿದ್ದರು. ನಿರೀಕ್ಷೆಯಂತೆ ಗೋವಾದಿಂದ ಕಾರವಾರ ಮೂಲಕ ಘಟ್ಟದ ಮೇಲೆ ಸಾಗಬೇಕಾಗಿದ್ದ ಈ ವಾಹನಗಳಲ್ಲಿದ್ದ ೨.೫ ಕೋಟಿ ಮೌಲ್ಯದ ಮಾದಕ ವಸ್ತುಗಳೊಂದಿಗೆ ಈ ನಾಲ್ವರು ಅಂಕೋಲಾ ಬಾಳೆಗುಳಿ ಬಳಿ ಪೊಲೀಸರ ಕೈಗೆ ಸಿಕ್ಕರು.

ಈ ಬಗ್ಗೆ ವಿಶೇಶ ಮಾಹಿತಿ ಕಲೆಹಾಕಿ, ತನಿಖೆ ನಡೆಸಿದ ಪೊಲೀಸರು ನಾಲ್ಕುಜನ ಅಫೀಮು ಸಾಗಾಟಗಾರರೊಂದಿಗೆ ಎರಡುಕಾರ್ ಗಳು ಹಾಗೂ ೨.೫ ಕೋಟಿ ಮೌಲ್ಯದ ಬ್ರೌನ್‌ಶುಗರ್ ವಶ ಪಡಿಸಿಕೊಂಡಿದ್ದಾರೆ.

ಯುವರತ್ನ,
ಜೇಮ್ಸ್ ಟ್ರೆಂಡಿಂಗ್
ಬೆಂಗಳೂರು,ಮಾ.೧೮- ಮಾ.೧೭ ರಂದು ಸರಳವಾಗಿ ಜನ್ಮದಿನ ಆಚರಿಸಿಕೊಂಡ ಪುನೀತ್‌ರಾಜ್‌ಕುಮಾರರ ಎರಡು ಹೊಸ ಸಿನೆಮಾಗಳ ಟೀಜರ್ ಮಂಗಳವಾರ ಬಿಡುಗಡೆಯಾಗಿವೆ.
ಬಿಡುಗಡೆಯಾಗಿ ಒಂದುದಿವಸದೊಳಗೆ ಕೋಟ್ಯಾಂತರ ಜನರು ಈ ಟೀಜರ್ ಗಳನ್ನು ನೋಡಿ ಖುಷಿಪಟ್ಟಿದ್ದರೆ, ಬಿಡುಗಡೆಯಾಗಿ ಒಂದು ತಾಸಿನೊಳಗೆ ೫ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.
ಸಂತೋಷ್ ಆನಂದರಾಮ್ ನಿರ್ಧೇಶನದ ಯುವರತ್ನದ ಡೈಲಾಗ್

ಸೀಟಿಗೆ ಹೊಡೆದಾಡುವವನು ಡಾನ್ ಅದರಲ್ಲಿ ಕೂಡ್ರುವವನು ನಾನ್

ಅಪಾರ ಜನಮೆಚ್ಚುಗೆ ಗಳಿಸಿದೆ.
ಇನ್ನೊಂದು ನೂತನ ಚಿತ್ರ ಜೇಮ್ಸ್ ನ ವಿಡಿಯೋ ಟೀಜರ್ ಕೂಡಾ ಟ್ರೆಂಡಿಂಗ್ ಆಗಿದ್ದು ಪುನೀತ್‌ರಾಜ್ ಮಿಷನ್‌ಗನ್‌ನಿಂದ ವಾಹನವೊಂದನ್ನು ಉಡಾಯಿಸುವ ಚಿತ್ರವನ್ನು ಒಂದೇ ದಿನದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *