ಜಿಲ್ಲಾ ಅಪರಾಧನಿಗ್ರಹದಳದ ಸಾಧನೆ ೨.೫ ಕೋಟಿಮೌಲ್ಯದ ಬ್ರೌನ್‌ಶುಗರ್ ವಶ, ಅಂಕೋಲಾ & ಸಿದ್ದಾಪುರ ಮೂಲದ ತಲಾ ಇಬ್ಬರು ಅಂದರ್

ನಿಶ್ಚಿತ ಉದ್ಯೋಗವಿಲ್ಲದೆ ಕೋಟ್ಯಾಂತರ ದುಡಿಯವ ನಾಲ್ಕು ಜನ ಯುವಕರ ವ್ಯವಹಾರಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್‌ರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಂತರ್ ರಾಜ್ಯ, ವಿದೇಶಗಳಿಗೆ ಮಾದಕ ಬ್ರೌನ್‌ಶುಗರ್ ಸಾಗಿಸುವ ತಂಡವೊಂದನ್ನು ಅಂಕೋಲಾದಲ್ಲಿ ಸೆರೆಹಿಡಿದು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ನಾಲ್ವರಲ್ಲಿ ಸಿದ್ದಾಪುರದ ವೀರಭದ್ರ ಹೆಗಡೆ ಮತ್ತು ಪ್ರವೀಣ ಭಟ್ ಸೇರಿರುವುದು ವಿಶೇಶ. ಅಂಕೋಲಾದ ವ್ಯಕ್ತಿಗಳಿಬ್ಬರು ಮತ್ತು ಸಿದ್ಧಾಪುರದ ಎರಡುಜನ ಯುವಕರು ಎರಡು ಕಾರ್‌ಗಳನ್ನು ಬಳಸಿ ಮಾದಕ ಬ್ರೌನ್‌ಶುಗರ್ ಸಾಗಿಸುವ ಮಾಹಿತಿ ಉತ್ತರಕನ್ನಡ ಜಿಲ್ಲಾ ಅಪರಾಧ ನಿಗ್ರಹ ದಳಕ್ಕೆ ಸಿಕ್ಕಿತ್ತು. ಕೆಲವು ದಿವಸಗಳಿಂದ ಬಲೆಬೀಸಿದ್ದ ಈ ಪೊಲೀಸರು ಅಂಕೋಲಾದ ಗುನಗಾ, ಭಾಗ್ವತ್ ರೊಂದಿಗೆ ಸಿದ್ದಾಪುರದ ವೀರಭದ್ರ ಮತ್ತು ಪ್ರವೀಣ ಮಾಡುತ್ತಿರುವ ವ್ಯವಹಾರ, ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು.
ಸಾರ್ವಜನಿಕರು, ಇಲಾಖೆಯ ಮಾಹಿತಿಗಳು ತನಿಖಾ ದಳಕ್ಕೆ ಸಿಗುತ್ತಿದ್ದಂತೆ ಜಾಗೃತರಾದ ತನಿಖಾ ದಳದ ಅಧಿಕಾರಿಗಳು ಮಾಲಿನೊಂದಿಗೆ ಆರೋಪಿಗಳನ್ನು ಹಿಡಿಯಲು ಹೊಂಚುಹಾಕಿದ್ದರು. ನಿರೀಕ್ಷೆಯಂತೆ ಗೋವಾದಿಂದ ಕಾರವಾರ ಮೂಲಕ ಘಟ್ಟದ ಮೇಲೆ ಸಾಗಬೇಕಾಗಿದ್ದ ಈ ವಾಹನಗಳಲ್ಲಿದ್ದ ೨.೫ ಕೋಟಿ ಮೌಲ್ಯದ ಮಾದಕ ವಸ್ತುಗಳೊಂದಿಗೆ ಈ ನಾಲ್ವರು ಅಂಕೋಲಾ ಬಾಳೆಗುಳಿ ಬಳಿ ಪೊಲೀಸರ ಕೈಗೆ ಸಿಕ್ಕರು.

ಈ ಬಗ್ಗೆ ವಿಶೇಶ ಮಾಹಿತಿ ಕಲೆಹಾಕಿ, ತನಿಖೆ ನಡೆಸಿದ ಪೊಲೀಸರು ನಾಲ್ಕುಜನ ಅಫೀಮು ಸಾಗಾಟಗಾರರೊಂದಿಗೆ ಎರಡುಕಾರ್ ಗಳು ಹಾಗೂ ೨.೫ ಕೋಟಿ ಮೌಲ್ಯದ ಬ್ರೌನ್‌ಶುಗರ್ ವಶ ಪಡಿಸಿಕೊಂಡಿದ್ದಾರೆ.

ಯುವರತ್ನ,
ಜೇಮ್ಸ್ ಟ್ರೆಂಡಿಂಗ್
ಬೆಂಗಳೂರು,ಮಾ.೧೮- ಮಾ.೧೭ ರಂದು ಸರಳವಾಗಿ ಜನ್ಮದಿನ ಆಚರಿಸಿಕೊಂಡ ಪುನೀತ್‌ರಾಜ್‌ಕುಮಾರರ ಎರಡು ಹೊಸ ಸಿನೆಮಾಗಳ ಟೀಜರ್ ಮಂಗಳವಾರ ಬಿಡುಗಡೆಯಾಗಿವೆ.
ಬಿಡುಗಡೆಯಾಗಿ ಒಂದುದಿವಸದೊಳಗೆ ಕೋಟ್ಯಾಂತರ ಜನರು ಈ ಟೀಜರ್ ಗಳನ್ನು ನೋಡಿ ಖುಷಿಪಟ್ಟಿದ್ದರೆ, ಬಿಡುಗಡೆಯಾಗಿ ಒಂದು ತಾಸಿನೊಳಗೆ ೫ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.
ಸಂತೋಷ್ ಆನಂದರಾಮ್ ನಿರ್ಧೇಶನದ ಯುವರತ್ನದ ಡೈಲಾಗ್

ಸೀಟಿಗೆ ಹೊಡೆದಾಡುವವನು ಡಾನ್ ಅದರಲ್ಲಿ ಕೂಡ್ರುವವನು ನಾನ್

ಅಪಾರ ಜನಮೆಚ್ಚುಗೆ ಗಳಿಸಿದೆ.
ಇನ್ನೊಂದು ನೂತನ ಚಿತ್ರ ಜೇಮ್ಸ್ ನ ವಿಡಿಯೋ ಟೀಜರ್ ಕೂಡಾ ಟ್ರೆಂಡಿಂಗ್ ಆಗಿದ್ದು ಪುನೀತ್‌ರಾಜ್ ಮಿಷನ್‌ಗನ್‌ನಿಂದ ವಾಹನವೊಂದನ್ನು ಉಡಾಯಿಸುವ ಚಿತ್ರವನ್ನು ಒಂದೇ ದಿನದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ಟ್ರೆಂಡಿಂಗ್ ಆಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *