ಶಿರಸಿ ಆಯುಷ್ ರಾಜಕಾರಣಕ್ಕೆ ಬಲಿಯಾಗುತ್ತಿರುವ ಸ್ಥಳಿಯ ರೋಗಿಗಳು

ಕರೋನಾ ಭಯ,ಮುನ್ನೆಚ್ಚರಿಕೆ ಹಿನ್ನೆಲೆಗಳಲ್ಲಿ ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ಪುಟಿದೆದ್ದಿದ್ದರೆ ಉತ್ತರ ಕನ್ನಡ ಜಿಲ್ಲೆಯ ಆಯುಷ್ ಇಲಾಖೆ ಸರ್ಕಾರದ ರೀತಿ-ನೀತಿಗಳನ್ನೇ ಗಾಳಿಗೆ ತೂರಿ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿರುವ ವಿದ್ಯಮಾನ ಈಗ ಚರ್ಚೆಯ ವಿಷಯವಾಗಿದೆ.

ಜಿಲ್ಲಾ ಪಂಚಾಯತ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾ ಆಯುಷ್ ಇಲಾಖೆ ರಾಜಕೀಯ ಕಾರಣಗಳಿಂದಾಗಿ ಶಿರಸಿ ಪ್ರೇರಿತ ರಾಜಕೀಯ ಹಿತಾಸಕ್ತರ ಕೊಂಪೆಯಾಗಿ ಈ ಇಲಾಖೆ ಜಾತಿ ಆಧಾರಿತ ಶ್ರೀಮಂತರ ಹಿತಾಸಕ್ತಿ ಕಾಪಾಡುವ ಸಂಘನಿಷ್ಠೆಯಿಂದ ತನ್ನ ಕರ್ತವ್ಯ, ಉದ್ಧೇಶ ಮರೆತ ವ್ಯವಸ್ಥೆಯಾಗಿ ಜಿಲ್ಲೆಯ ಆಯುಷ್ ಇಲಾಖೆಯನ್ನು ದೂರುವಂತಾಗಿದೆ.

ಈ ಬಗ್ಗೆ ಈಗಾಗಲೇ ಜಿ.ಪಂ. ಮುಖ್ಯ ಕಾರ್ಯದರ್ಶಿಯವರೆಗೂ ದೂರು ಹೋಗಿದ್ದರೂ ಶಿರಸಿಯನ್ನು ಕರ್ಮಠರ ವಠಾರವನ್ನಾಗಿಸಿಕೊಂಡು ಧಾರ್ಮಿಕತೆಯ ಹೀನ ರಾಜಕಾರಣ ಮಾಡುವ ಇಲ್ಲಿಯ ಜನಪ್ರತಿನಿಧಿಗಳು ತಮ್ಮ ಸಂಘದ ಕೂಟ, ಜಾತಿರಾಜಕೀಯಕ್ಕಾಗಿ ಆಯುಷ್ ಇಲಾಖೆಯನ್ನೇ ಬಲಿ ಕೊಡುತಿದ್ದಾರೆ ಎನ್ನುವ ಗುರುತರ ಆರೋಪಗಳಿವೆ.

ಆಯುಷ್ ಇಲಾಖೆಯಲ್ಲಿ ಸೀನಿಯರ್ ಎನ್ನುವ ಶಿರಸಿಯ ವೈದ್ಯರೊಬ್ಬರು ಶಿರಸಿ, ಬೈರುಂಬೆ, ಅಲ್ಲಿಂದ ಪರೋಕ್ಷವಾಗಿ ಪ್ರಕೃತಿ ಚಿಕಿತ್ಸೆಯ ಆಸ್ಫತ್ರೆಗೆ ಓಡಾಡುತಿದ್ದು ಇವರ ಈ ಕರ್ತವ್ಯಲೋಪಕ್ಕೆ ಸ್ಥಳಿಯ ಜನಪ್ರತಿನಿಧಿಗಳೇ ನೆರವಾಗುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.

ಶಿರಸಿ ಪ್ರೇರಿತ ಸಂಘ,ರಾಜಕೀಯ, ಮಾಧ್ಯಮಗಳ ಬೆಂಬಲದಿಂದ ಕೊಬ್ಬಿರುವ ಹಿರಿಯ ವೈದ್ಯ,ನೌಕರರ ಸಂಘದ ಜಿಲ್ಲಾಧ್ಯಕ್ಷ ಅವರೊಂದಿಗಿನ ಕೆಲವು ಅವಕಾಶವಾದಿಗಳು ಆಯುಷ್ ಇಲಾಖೆ ಮತ್ತು ಸಾರ್ವಜಜನಿಕ ಆರೋಗ್ಯವ್ಯವಸ್ಥೆಗೇ ಕಂಟಕರಾಗಿದ್ದು ಇವರನ್ನು ಪೋಶಿಸುತ್ತಿರುವ ಶಿರಸಿ ರಾಜಕಾರಣಿಗಳು ಸ್ಥಳಿಯ ರೋಗಿಗಳು ಮತ್ತು ಜಿಲ್ಲೆಯ ಆರೋಗ್ಯವ್ಯಸ್ಥೆಯನ್ನೇ ಕೆಡಿಸುತ್ತಿರುವ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವರೆಗೆ ದೂರು ಹೋಗಿದೆ.

ಶಿರಸಿ ಕೇಂದ್ರವನ್ನಾಗಿಸಿಕೊಂಡು ಉತ್ತರಕನ್ನಡದಿಂದ ರಾಜ್ಯದ ವರೆಗೆ ರಾಜಕಾರಣ ಮಾಡುವ ಇಲ್ಲಿಯ ಹಿರಿಯ ವೈದ್ಯ, ಜಿಲ್ಲೆಯ ನೌಕರರ ಸಂಘದ ಅಧ್ಯಕ್ಷರು ಆಯುಷ್ ಇಲಾಖೆಯನ್ನು ಅನಾರೋಗ್ಯದ ತಾಣವನ್ನಾಗಿಸಿದ್ದು ಇದರಿಂದ ಇವರನ್ನು ರಕ್ಷಿಸುವ ರಾಜಕಾರಣಿಗಳಿಗೆ ಪರೋಕ್ಷ ಲಾಭವಾಗುವುದಾದರೂ ಇವರಿಂದ ಶಿರಸಿಯ ಖಾಸಗಿ ಆಸ್ಫತ್ರೆಗಳು ಸ್ಥಳಿಯ ರೋಗಿಗಳನ್ನು ಸುಲಿಯಲು ಅನುಕೂಲವಾಗಿರುವ ಬಗ್ಗೆ ದಾಖಲೆಗಳೊಂದಿಗೆ ಸರ್ಕಾರಕ್ಕೆ ದೂರಲಾಗಿದೆ.

ಶಿರಸಿ-ಉತ್ತರ ಕನ್ನಡದಲ್ಲಿ ಧರ್ಮಾಧಾರಿತ ರಾಜಕಾರಣ ಮಾಡುತ್ತಾ ಸ್ವಜಾತಿ ಶ್ರೀಮಂತರನ್ನೇ ಕೊಬ್ಬಿಸುತ್ತಿರುವ ರಾಜಕಾರಣಿಗಳು ತಮ್ಮ ಸ್ವಾರ್ಥ,ಸ್ವಜಾತಿ ಹಿತಕ್ಕಾಗಿ ಅಸಹಾಯಕ ರೋಗಿಗಳನ್ನು, ಕೆಳವರ್ಗದವರು, ದುರ್ಬಲರನ್ನೇ ಶೋಶಿಸುತಿದ್ದು ಈ ಸಂಘನಿಷ್ಠ ಜಾತಿ-ಲಾಭದ ಪಟ್ಟಭದ್ರರ ಜುಗಲ್ ಬಂಧಿಯನ್ನು ಭೇದಿಸುವ ಮೂಲಕ ಸ್ಥಳಿಯರ ಹಿತಕಾಪಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯರು ರೋಸಿ ಹೋಗಿದ್ದು ಆಯುಷ್ ಇಲಾಖೆಯನ್ನು ರಾಜಕಾರಣ, ಶೋಷಣೆಯ ತಾಣ, ಅಕ್ರಮ, ಅವ್ಯವಹಾರಗಳ ಕೇಂದ್ರವಾಗಿಸಿ ರಾಜಕೀಯ ವ್ಯಕ್ತಿಗಳ ನೆರವಿನಿಂದ ಅರಾಜಕತೆ ಸೃಷ್ಟಿಸಿರುವ ವಿರುದ್ಧ ಸಂಘಟತ ಪ್ರತಿಭಟನೆಗೆ ಸಜ್ಜಾಗಿರುವ ಬಗ್ಗೆ ಸಮಾಜಮುಖಿಗೆ ಮಾಹಿತಿ ದೊರೆತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *