
ಸಾಮಾಜಿಕ ಜಾಲತಾಣಗಳ
ಹಸಿ ಸುಳ್ಳುಗಳನು ನಂಬಿಕೊಂಡು
ಉದ್ರಿಕ್ತ ದ್ವೇಷಪ್ರೇಮಿಗಳಾಗದೆ
ಪ್ರೀತಿ, ದಯೆ ,ಕರುಣೆ ,
ಮಾನವತೆಯ ತುಂಬಿಕೊಂಡ
ನೈಜ ದೇಶಪ್ರೇಮಿಗಳಾಗೋಣ.

ಯಾರದೋ ಸಂಚಿಗೆ ಬಲಿಯಾಗಿ
ಸುಖಾಸುಮ್ಮನೆ ವಿಷ ಕಕ್ಕುವ
ಅಂಧ ದ್ವೇಷಪ್ರೇಮಿಗಳಾಗದೆ
ಸ್ವಾತಂತ್ರ್ಯ ,ಸಮಾನತೆ ,ಬ್ರಾತೃತ್ವ
ನ್ಯಾಯ,ನೀತಿ ,ಮಾತೃತ್ವ ತುಂಬಿದ
ನೈಜ ದೇಶಪ್ರೇಮಿಗಳಾಗೋಣ
ಕತ್ತಿ ಹಿಡಿವವರಿಗೆ
ಕತ್ತಿಯಿಂದಲೇ ನಾಶವಂತೆ
ದ್ವೇಷ ಉಗುಳುವವರಿಗೆ
ಕಾಲವೇ ಯಮ ಪಾಶವಂತೆ .
ನಾವೇ ಮೇಲೆನ್ನುವ
ಮತಾಂಧತೆಯು ಮಣ್ಣಾಗಿ
ಭಾರತೀಯತೆ ಚಿಗರೊಡೆಯಲಿ .
#ದ್ವೇಷಪ್ರೇಮಿಗಳಾಗದೆ ದೇಶಪ್ರೇಮಿಗಳಾಗೋಣ
-ಮನು ಪುರ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
