ಕಾಗೋಡು_ಚಳವಳಿ @69

ಗೇಣಿ_ಪದ್ಧತಿ ಎಂಬ ಹೇಯ ಮತ್ತು ಅಮಾನವೀಯ ಜಮೀನ್ದಾರಿ ಶೋಷಕ ವ್ಯವಸ್ಥೆಯನ್ನು ವಿರೋಧಿಸಿ ನಿರಕ್ಷರಕುಕ್ಷಿ ಬಡ ಗೇಣಿದಾರ ರೈತರನ್ನು ಸಂಘಟಿಸಿ ಸ್ವತಂತ್ರ ಭಾರತದ ಮೊಟ್ಟಮೊದಲ ರೈತ ಕ್ರಾಂತಿಗೆ ನಾಂದಿ ಹಾಡಿದ ಹೋರಾಟಗಾರ ಇವರು.#ಎಚ್_ಗಣಪತಿಯಪ್ಪ, ಗಾಡಿ ಗಣಪತಿಯಪ್ಪ ಎಂದೇ ಹೆಸರಾದ ಈ ಮಹಾನ್ ಬಂಡಾಯಗಾರನ ಮಹತ್ವ ಕೇವಲ #ಕಾಗೋಡು_ಚಳವಳಿಯ ಕಟ್ಟಿದ್ದಷ್ಟೇ ಅಲ್ಲ; 1969ರಲ್ಲಿ ಇಂಥಹದ್ದೆ ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಹಿಂಸಾ ಕ್ರಾಂತಿಗೆ ಕಾರಣವಾದ ಪಶ್ಚಿಮಬಂಗಾಳದ #ನಕ್ಸಲ್ಬಾರಿ_ಚಳವಳಿಗೆ ಸುಮಾರು ಎರಡು ದಶಕ ಮುನ್ನವೇ(1951) ಭೂಮಾಲೀಕರ ಅಟ್ಟಹಾಸದ ಹಿಂಸಾ ದಬ್ಬಾಳಿಕೆಯ ನಡುವೆಯೂ ರಕ್ತರಹಿತ, ಹಿಂಸೆರಹಿತ ಚಳವಳಿಯಾಗಿ #ಕಾಗೋಡು_ಚಳವಳಿ ಕಟ್ಟಿದ್ದು ನಿಜವಾದ ಹೆಗ್ಗಳಿಕೆ.

ಅವರ ಆ ಅಹಿಂಸಾ ಚಳವಳಿಗೆ #ಸಮಾಜವಾದಿ_ಹೋರಾಟ ಮತ್ತು ಅದರ ಮುಂಚೂಣಿಯಲ್ಲಿದ್ದ #ಶಾಂತವೇರಿ_ಗೋಪಾಲಗೌಡರು, ಜಿ ಆರ್ ಜಿ ನಗರ್ ಕರ್ ಅವರಂಥ ಸ್ಥಳೀಯ ನಾಯಕರು ಮತ್ತು #ಡಾ_ರಾಮಮನೋಹರ_ಲೋಹಿಯಾ ಅವರಂಥ ರಾಷ್ಟ್ರೀಯ ನಾಯಕರು ನೀಡಿದ ಸೈದ್ಧಾಂತಿಕ ಮತ್ತು ತಾತ್ವಿಕ ಚೌಕಟ್ಟು ಕೂಡ ದೊಡ್ಡದು.ಇವತ್ತು ಹೈಫೈ ಮೊಬೈಲ್ ಹಿಡಿದು ಶೋಷಕ ವ್ಯವಸ್ಥೆಯ ಪರ ಟ್ರೋಲ್ ಮಾಡುವ ಮಂದಿ, ಕೇವಲ ಏಳು ದಶಕದ ಹಿಂದೆ ಕಾಲಿಗೆ ಮೆಟ್ಟು ಹಾಕಲಾಗದ, ಮೊಣಕಾಲಿನ ಕೆಳಗೆ ಪಂಚೆ ಬಿಡಲಾಗದ, ಭೂ ಒಡೆಯರ ಮುಂದೆ ತಲೆ ಎತ್ತಿ, ಕೈಕಟ್ಟಿ ನಿಲ್ಲಲಾಗದ ತಮ್ಮ ಪೂರ್ವಜರ ಎದೆಯಲ್ಲಿ ಸ್ವಾಭಿಮಾನದ ಬೀಜ ನೆಟ್ಟ ಈ ಅಜ್ಜ ಮತ್ತು ಕಾಗೋಡು ಚಳವಳಿಯನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ..

ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ಆಸ್ತಿ ಹಕ್ಕು, ದುಡಿಮೆಯ ಹಕ್ಕುನಂತಹ ಸಂವಿಧಾನಿಕ, ಪ್ರಜಾಪ್ರಭುತ್ವದ ಆಶಯಗಳನ್ನು ಅದರ ನೈಜ ಸದಾಶಯದೊಂದಿಗೆ ಜಾರಿಗೆ ತಂದ ಗಣಪತಿಯಪ್ಪ, ಇಂದು ನಮ್ಮ ನಡುವೆ ಇಲ್ಲ, ಆದರೆ ಅವರ ಹೋರಾಟದ ಫಲವಾಗಿ ಸಿಕ್ಕ ಭೂಮಿ ಕೊಟ್ಟ ಆರ್ಥಿಕ, ಸಾಮಾಜಿಕ, ರಾಜಕೀಯ ಬಲ ಮತ್ತು ಸ್ವಾಭಿಮಾನ ನಮ್ಮ ಇಂದಿನ ನೆಮ್ಮದಿಯ(ಕೆಲವೊಮ್ಮೆ ಇತಿಹಾಸ ಮರೆಯುವ ಧಿಮಾಕಿನ) ಬದುಕಿಗೆ ಕಾರಣ ಎಂಬುದನ್ನು ಮರೆಯದಿರೋಣ.

#ಉಳುವವನೇ_ಹೊಲದೊಡೆಯ ಎಂಬ ಭೂಸುಧಾರಣಾ ಕಾನೂನು ಮೂಲಕ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ದುಡಿಯುವ ರೈತನ ಬೆವರಿಗೆ ಭೂಮಿಯ ಒಡೆತನದ ಫಲಕೊಟ್ಟ #ಕಾಗೋಡು_ಚಳವಳಿ_ಚಿರಾಯುವಾಗಲಿ#ಪೂರ್ವಾಸೂರಿಗಳ_ಹೋರಾಟ_ತೆರೆಮರೆಗೆ_ಸರಿಯದಿರಲಿ

#ಶಶಿ_ಸಂಪಳ್ಳಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *