ಕಾಗೋಡು_ಚಳವಳಿ @69

ಗೇಣಿ_ಪದ್ಧತಿ ಎಂಬ ಹೇಯ ಮತ್ತು ಅಮಾನವೀಯ ಜಮೀನ್ದಾರಿ ಶೋಷಕ ವ್ಯವಸ್ಥೆಯನ್ನು ವಿರೋಧಿಸಿ ನಿರಕ್ಷರಕುಕ್ಷಿ ಬಡ ಗೇಣಿದಾರ ರೈತರನ್ನು ಸಂಘಟಿಸಿ ಸ್ವತಂತ್ರ ಭಾರತದ ಮೊಟ್ಟಮೊದಲ ರೈತ ಕ್ರಾಂತಿಗೆ ನಾಂದಿ ಹಾಡಿದ ಹೋರಾಟಗಾರ ಇವರು.#ಎಚ್_ಗಣಪತಿಯಪ್ಪ, ಗಾಡಿ ಗಣಪತಿಯಪ್ಪ ಎಂದೇ ಹೆಸರಾದ ಈ ಮಹಾನ್ ಬಂಡಾಯಗಾರನ ಮಹತ್ವ ಕೇವಲ #ಕಾಗೋಡು_ಚಳವಳಿಯ ಕಟ್ಟಿದ್ದಷ್ಟೇ ಅಲ್ಲ; 1969ರಲ್ಲಿ ಇಂಥಹದ್ದೆ ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಹಿಂಸಾ ಕ್ರಾಂತಿಗೆ ಕಾರಣವಾದ ಪಶ್ಚಿಮಬಂಗಾಳದ #ನಕ್ಸಲ್ಬಾರಿ_ಚಳವಳಿಗೆ ಸುಮಾರು ಎರಡು ದಶಕ ಮುನ್ನವೇ(1951) ಭೂಮಾಲೀಕರ ಅಟ್ಟಹಾಸದ ಹಿಂಸಾ ದಬ್ಬಾಳಿಕೆಯ ನಡುವೆಯೂ ರಕ್ತರಹಿತ, ಹಿಂಸೆರಹಿತ ಚಳವಳಿಯಾಗಿ #ಕಾಗೋಡು_ಚಳವಳಿ ಕಟ್ಟಿದ್ದು ನಿಜವಾದ ಹೆಗ್ಗಳಿಕೆ.

ಅವರ ಆ ಅಹಿಂಸಾ ಚಳವಳಿಗೆ #ಸಮಾಜವಾದಿ_ಹೋರಾಟ ಮತ್ತು ಅದರ ಮುಂಚೂಣಿಯಲ್ಲಿದ್ದ #ಶಾಂತವೇರಿ_ಗೋಪಾಲಗೌಡರು, ಜಿ ಆರ್ ಜಿ ನಗರ್ ಕರ್ ಅವರಂಥ ಸ್ಥಳೀಯ ನಾಯಕರು ಮತ್ತು #ಡಾ_ರಾಮಮನೋಹರ_ಲೋಹಿಯಾ ಅವರಂಥ ರಾಷ್ಟ್ರೀಯ ನಾಯಕರು ನೀಡಿದ ಸೈದ್ಧಾಂತಿಕ ಮತ್ತು ತಾತ್ವಿಕ ಚೌಕಟ್ಟು ಕೂಡ ದೊಡ್ಡದು.ಇವತ್ತು ಹೈಫೈ ಮೊಬೈಲ್ ಹಿಡಿದು ಶೋಷಕ ವ್ಯವಸ್ಥೆಯ ಪರ ಟ್ರೋಲ್ ಮಾಡುವ ಮಂದಿ, ಕೇವಲ ಏಳು ದಶಕದ ಹಿಂದೆ ಕಾಲಿಗೆ ಮೆಟ್ಟು ಹಾಕಲಾಗದ, ಮೊಣಕಾಲಿನ ಕೆಳಗೆ ಪಂಚೆ ಬಿಡಲಾಗದ, ಭೂ ಒಡೆಯರ ಮುಂದೆ ತಲೆ ಎತ್ತಿ, ಕೈಕಟ್ಟಿ ನಿಲ್ಲಲಾಗದ ತಮ್ಮ ಪೂರ್ವಜರ ಎದೆಯಲ್ಲಿ ಸ್ವಾಭಿಮಾನದ ಬೀಜ ನೆಟ್ಟ ಈ ಅಜ್ಜ ಮತ್ತು ಕಾಗೋಡು ಚಳವಳಿಯನ್ನು ಒಮ್ಮೆ ನೆನಪು ಮಾಡಿಕೊಳ್ಳಲಿ..

ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ಆಸ್ತಿ ಹಕ್ಕು, ದುಡಿಮೆಯ ಹಕ್ಕುನಂತಹ ಸಂವಿಧಾನಿಕ, ಪ್ರಜಾಪ್ರಭುತ್ವದ ಆಶಯಗಳನ್ನು ಅದರ ನೈಜ ಸದಾಶಯದೊಂದಿಗೆ ಜಾರಿಗೆ ತಂದ ಗಣಪತಿಯಪ್ಪ, ಇಂದು ನಮ್ಮ ನಡುವೆ ಇಲ್ಲ, ಆದರೆ ಅವರ ಹೋರಾಟದ ಫಲವಾಗಿ ಸಿಕ್ಕ ಭೂಮಿ ಕೊಟ್ಟ ಆರ್ಥಿಕ, ಸಾಮಾಜಿಕ, ರಾಜಕೀಯ ಬಲ ಮತ್ತು ಸ್ವಾಭಿಮಾನ ನಮ್ಮ ಇಂದಿನ ನೆಮ್ಮದಿಯ(ಕೆಲವೊಮ್ಮೆ ಇತಿಹಾಸ ಮರೆಯುವ ಧಿಮಾಕಿನ) ಬದುಕಿಗೆ ಕಾರಣ ಎಂಬುದನ್ನು ಮರೆಯದಿರೋಣ.

#ಉಳುವವನೇ_ಹೊಲದೊಡೆಯ ಎಂಬ ಭೂಸುಧಾರಣಾ ಕಾನೂನು ಮೂಲಕ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ದುಡಿಯುವ ರೈತನ ಬೆವರಿಗೆ ಭೂಮಿಯ ಒಡೆತನದ ಫಲಕೊಟ್ಟ #ಕಾಗೋಡು_ಚಳವಳಿ_ಚಿರಾಯುವಾಗಲಿ#ಪೂರ್ವಾಸೂರಿಗಳ_ಹೋರಾಟ_ತೆರೆಮರೆಗೆ_ಸರಿಯದಿರಲಿ

#ಶಶಿ_ಸಂಪಳ್ಳಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *