ರವಿವಾರ ಸಂಪೂರ್ಣ ಲಾಕ್ ಡೌನ್ ಇಲ್ಲ ಬಗೆಹರಿದ ಗೊಂದಲ

ರಾಜ್ಯದಲ್ಲಿ ನಾಳೆಯ ರವಿವಾರ 4 ನೇ ಹಂತದ ಲಾಕ್ ಡೌನ್ ಮುಗಿದು 5 ನೇ ಹಂತದ ಲಾಕ್ ಡೌನ್ ಜೂನ್ 15 ರ ವರೆಗೆ ಮುಂದುವರಿಯಲಿದೆ.

ಈ ಹಿಂದಿನ ಘೋಷಣೆಗಳ ಪ್ರಕಾರ ರವಿವಾರ ಲಾಕ್ ಡೌನ್ ಮುಂದುವರಿಯಲಿದೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಇಂದು ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ಅಂದರೆ ಮೇ31 ರಂದು ರಾಜ್ಯಾದ್ಯಂತ ಲಾಕ್ ಡೌನ್ ಇರುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಉತ್ತರ ಕನ್ನಡ ವರ್ತಮಾನ- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಟ್ಕಳ ಸೇರಿ ಎಲ್ಲಾ ತಾಲೂಕುಗಳಲ್ಲಿ ಮೇ 31 ರ ರವಿವಾರ ಕೂಡಾ ಲಾಕ್ ಡೌನ್ ಆಗಲಿದೆ ಎನ್ನುವ ಗಾಳಿಸುದ್ದಿ ತೇಲಾಡುತಿತ್ತು. ಆದರೆ ಮುಖ್ಯಮಂತ್ರಿಗಳ ಘೋಷಣೆಯ ನಂತರ ಜಿಲ್ಲಾಧಿಕಾರಿ ಹರೀಶ್ ಕುಮಾರ್ ರವಿವಾರ ಲಾಕ್ ಡೌನ್ ಇರುವುದಿಲ್ಲ ಎಂದು ಸ್ಪಸ್ಟಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳ ಪ್ರಕಟಣೆ ನಂತರ ಕೂಡಾ ಉತ್ತರಕನ್ನಡ ಜಿಲ್ಲೆಯಲ್ಲಿ ರವಿವಾರ ಲಾಕ್ ಡೌನ್ ಇರುವುದಿಲ್ಲ ಎಂದು ಸ್ಥಳಿಯ ಆಡಳಿತಗಳು ಸ್ಪಸ್ಟಪಡಿಸಿರಲಿಲ್ಲ. ಆದರೆ ಈಗಿನ ಮಾಹಿತಿಯೆಂದರೆ ಭಟ್ಳಳದ ಕೆಲವು ಪ್ರದೇಶಗಳ ನಿರ್ಬಂಧಗಳನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೇ,31 ರ ರವಿವಾರದ ಲಾಕ್ ಡೌನ್ ಇರುವುದಿಲ್ಲ. ಜಿಲ್ಲೆಯ ಜನರು ಎಂದಿನಂತೆ ರವಿವಾರ ಕೂಡಾ ತಮ್ಮ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಬಹುದು.

ಈ ವಿಳಂಬ ಪ್ರಕಟಣೆಯಿಂದ ಮೀನು-ಮಾಂಸ ಮಾರಾಟಗಾರರು ಸೇರಿದಂತೆ ಕೆಲವರಿಗೆ ತೊಂದರೆಯಾಗಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಪ್ರಾಮಾಣಿಕ ಪ್ರಯತ್ನದ ನಡುವೆ ಕೂಡಾ ಗೊಂದಲಗಳಾಗುತ್ತಿರುವುದಕ್ಕೆ ಇಂದಿನ ವಿದ್ಯಮಾನ ಉದಾಹರಣೆಯಾಗಿದೆ. ಎಂದಿನಂತೆ ಇಂಥ ವಿಚಾರಗಳಲ್ಲಿ ಪ್ರಮುಖ ಜನಪ್ರತಿನಿಧಿಗಳಾದ ಶಾಸಕರು, ಸಂಸದರು ಉಪೇಕ್ಷೆ ಮಾಡುತ್ತಿರುವುದು ಯತಾಪ್ರಕಾರ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.

ಇಂದಿನ ಬಂಡಾಯದ ಹಿಂದಿನ ಸಂತೋಷರ ಕಾರ್ಯಾಚರಣೆಯ ಸುತ್ತಮುತ್ತ
ಯಡಿಯೂರಪ್ಪ ವಿರುದ್ಧ ಸಂಘದ ಕಾರ್ಯಾಚರಣೆ
ಪೌರೋಹಿತ್ಯಕ್ಕೆ ಸಿದ್ಧವಾಗಿದೆಯಾ ಹೈಕಮಾಂಡ್?

ಬಿ.ಜೆ.ಪಿ.ಯಲ್ಲಿ ಬಿರುಕು ನಿರೀಕ್ಷಿತವಾದರೂ ಕರೋನಾದ ಸಂಕಟದ ಕಾಲದಲ್ಲಿ ಯಡಿಯೂರಪ್ಪ ಹಾಸಿಕೊಂಡಿದ್ದ ನೆಲಹಾಸನ್ನೇ ಎಳೆದು 77 ರ ಹಿರಿಯ ಯಡಿಯೂರಪ್ಪನವರನ್ನು ಮೇಲೇಳದಂತೆ ಕೆಳಕ್ಕೆ ತಳ್ಳಿಬಿಡಬಹುದೆನ್ನುವ ಕಲ್ಪನೆಯನ್ನು ಸಹಾ ಮಾಡದ ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಬಿ.ಜೆ.ಪಿ. ಯಲ್ಲಿ ಸ್ವಜಾತಿಯವರನ್ನೇ ಎತ್ತಿಕಟ್ಟಿ ತಮಾಸೆ ನೋಡಲಾಗುತ್ತಿದೆಯಾ?
ಅಥವಾ ಯಡಿಯೂರಪ್ಪ ಕಟ್ಟಿಕೊಂಡಿದ್ದ ಕೋಟೆಯ ಕಾವಲುಗಾರರನ್ನೇ ಖರೀದಿಸಿ ವೈದಿಕ ಆಟಕ್ಕೆ ಅಖಾಡದ ನೆಲ ಸಿದ್ಧಮಾಡಲಾಗುತ್ತಿದೆಯಾ ಎನ್ನುವ ಅನುಮಾನಗಳಿಗೆ ಎಡೆಯಾಗುವಂತೆ ಇಂದಿನ ವಿದ್ಯಮಾನಗಳು ನಡೆದಿವೆ.

ಗೋಕಾಕ್ ನ ಕತ್ತಿ ಸಹೋದರರು ಶಾಸಕರಿಗೆ ಔತಣಕೂಟ ಎರ್ಪಡಿಸಿ ಹಕ್ಕು ಪ್ರದಿಪಾದನೆ ಮಾಡಿ ಲಾಭ ಪಡೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಕೂಟದ ಮುಖ್ಯ ವ್ಯಕ್ತಿ ವಿಜಯಪುರದ ಬಸವರಾಜ್ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿ ತಮಗೆ ಮಂತ್ರಿಗಳನ್ನಾಗಿಸುವುದು ಸೇರಿದಂತೆ ತಮ್ಮ ಕೆಲವು ಬೇಡಿಕೆಗಳಿಗೆ ಯಡಿಯೂರಪ್ಪ ಸ್ಪಂದಿಸದಿದ್ದರೆ ಬಂಡಾಯ ಏಳುವ ಸೂಚನೆ ಕೊಟ್ಟಿದ್ದಾರೆ.
ಈ ಯೋಜನೆ, ಸೂಚನೆ ಹಿಂದೆ ಬಿ.ಜೆ.ಪಿ. ಹೈಕಮಾಂಡ್ ಕೈವಾಡದ ಶಂಕೆಯಂತೂ ಇದ್ದೇ ಇದೆ. ಆದರೆ ಒಳಗೊಳಗೆ ಯಡಿಯೂರಪ್ಪ ವಿರುದ್ಧ ಕುದಿಯುತ್ತಿರುವ ಕತ್ತಿ ಸಹೋದರರು, ಬಸವನಗೌಡ ಪಾಟೀಲ್ ರಂಥ ಖಾಲಿಡಬ್ಬಗಳ ಶಬ್ಧ ಮಾಡಿಸಿದರೆ ಯಡಿಯೂರಪ್ಪ ಸಹಜವಾಗಿ ಹೆದರುತ್ತಾರೆ ಆಗ ಈ ಕತ್ತಿ, ಯತ್ನಾಳ್ ರಿಗೆ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಟ್ಟು ಅಂತರ್ ಚಿಶಾಚಿಯಂತೆ ಅಲೆಯುತ್ತಿರುವ ಸಂತೋಷರಂಥ ವೈದಿಕರನ್ನು ಕೂಡ್ರಿಸಿದರೆ ಆಗ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ ಎನ್ನುವುದು ಬಿ.ಜೆ.ಪಿ.ಯೊಳಗಿನ ಕಟ್ಟರ್ ಸಂಘಿಗಳ ಆಲೋಚನೆ! ….. visit-samajamukhi.net

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *