ರವಿವಾರ ಸಂಪೂರ್ಣ ಲಾಕ್ ಡೌನ್ ಇಲ್ಲ ಬಗೆಹರಿದ ಗೊಂದಲ

ರಾಜ್ಯದಲ್ಲಿ ನಾಳೆಯ ರವಿವಾರ 4 ನೇ ಹಂತದ ಲಾಕ್ ಡೌನ್ ಮುಗಿದು 5 ನೇ ಹಂತದ ಲಾಕ್ ಡೌನ್ ಜೂನ್ 15 ರ ವರೆಗೆ ಮುಂದುವರಿಯಲಿದೆ.

ಈ ಹಿಂದಿನ ಘೋಷಣೆಗಳ ಪ್ರಕಾರ ರವಿವಾರ ಲಾಕ್ ಡೌನ್ ಮುಂದುವರಿಯಲಿದೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಇಂದು ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ಅಂದರೆ ಮೇ31 ರಂದು ರಾಜ್ಯಾದ್ಯಂತ ಲಾಕ್ ಡೌನ್ ಇರುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಉತ್ತರ ಕನ್ನಡ ವರ್ತಮಾನ- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಟ್ಕಳ ಸೇರಿ ಎಲ್ಲಾ ತಾಲೂಕುಗಳಲ್ಲಿ ಮೇ 31 ರ ರವಿವಾರ ಕೂಡಾ ಲಾಕ್ ಡೌನ್ ಆಗಲಿದೆ ಎನ್ನುವ ಗಾಳಿಸುದ್ದಿ ತೇಲಾಡುತಿತ್ತು. ಆದರೆ ಮುಖ್ಯಮಂತ್ರಿಗಳ ಘೋಷಣೆಯ ನಂತರ ಜಿಲ್ಲಾಧಿಕಾರಿ ಹರೀಶ್ ಕುಮಾರ್ ರವಿವಾರ ಲಾಕ್ ಡೌನ್ ಇರುವುದಿಲ್ಲ ಎಂದು ಸ್ಪಸ್ಟಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳ ಪ್ರಕಟಣೆ ನಂತರ ಕೂಡಾ ಉತ್ತರಕನ್ನಡ ಜಿಲ್ಲೆಯಲ್ಲಿ ರವಿವಾರ ಲಾಕ್ ಡೌನ್ ಇರುವುದಿಲ್ಲ ಎಂದು ಸ್ಥಳಿಯ ಆಡಳಿತಗಳು ಸ್ಪಸ್ಟಪಡಿಸಿರಲಿಲ್ಲ. ಆದರೆ ಈಗಿನ ಮಾಹಿತಿಯೆಂದರೆ ಭಟ್ಳಳದ ಕೆಲವು ಪ್ರದೇಶಗಳ ನಿರ್ಬಂಧಗಳನ್ನು ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೇ,31 ರ ರವಿವಾರದ ಲಾಕ್ ಡೌನ್ ಇರುವುದಿಲ್ಲ. ಜಿಲ್ಲೆಯ ಜನರು ಎಂದಿನಂತೆ ರವಿವಾರ ಕೂಡಾ ತಮ್ಮ ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಬಹುದು.

ಈ ವಿಳಂಬ ಪ್ರಕಟಣೆಯಿಂದ ಮೀನು-ಮಾಂಸ ಮಾರಾಟಗಾರರು ಸೇರಿದಂತೆ ಕೆಲವರಿಗೆ ತೊಂದರೆಯಾಗಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತದ ಪ್ರಾಮಾಣಿಕ ಪ್ರಯತ್ನದ ನಡುವೆ ಕೂಡಾ ಗೊಂದಲಗಳಾಗುತ್ತಿರುವುದಕ್ಕೆ ಇಂದಿನ ವಿದ್ಯಮಾನ ಉದಾಹರಣೆಯಾಗಿದೆ. ಎಂದಿನಂತೆ ಇಂಥ ವಿಚಾರಗಳಲ್ಲಿ ಪ್ರಮುಖ ಜನಪ್ರತಿನಿಧಿಗಳಾದ ಶಾಸಕರು, ಸಂಸದರು ಉಪೇಕ್ಷೆ ಮಾಡುತ್ತಿರುವುದು ಯತಾಪ್ರಕಾರ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.

ಇಂದಿನ ಬಂಡಾಯದ ಹಿಂದಿನ ಸಂತೋಷರ ಕಾರ್ಯಾಚರಣೆಯ ಸುತ್ತಮುತ್ತ
ಯಡಿಯೂರಪ್ಪ ವಿರುದ್ಧ ಸಂಘದ ಕಾರ್ಯಾಚರಣೆ
ಪೌರೋಹಿತ್ಯಕ್ಕೆ ಸಿದ್ಧವಾಗಿದೆಯಾ ಹೈಕಮಾಂಡ್?

ಬಿ.ಜೆ.ಪಿ.ಯಲ್ಲಿ ಬಿರುಕು ನಿರೀಕ್ಷಿತವಾದರೂ ಕರೋನಾದ ಸಂಕಟದ ಕಾಲದಲ್ಲಿ ಯಡಿಯೂರಪ್ಪ ಹಾಸಿಕೊಂಡಿದ್ದ ನೆಲಹಾಸನ್ನೇ ಎಳೆದು 77 ರ ಹಿರಿಯ ಯಡಿಯೂರಪ್ಪನವರನ್ನು ಮೇಲೇಳದಂತೆ ಕೆಳಕ್ಕೆ ತಳ್ಳಿಬಿಡಬಹುದೆನ್ನುವ ಕಲ್ಪನೆಯನ್ನು ಸಹಾ ಮಾಡದ ಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಬಿ.ಜೆ.ಪಿ. ಯಲ್ಲಿ ಸ್ವಜಾತಿಯವರನ್ನೇ ಎತ್ತಿಕಟ್ಟಿ ತಮಾಸೆ ನೋಡಲಾಗುತ್ತಿದೆಯಾ?
ಅಥವಾ ಯಡಿಯೂರಪ್ಪ ಕಟ್ಟಿಕೊಂಡಿದ್ದ ಕೋಟೆಯ ಕಾವಲುಗಾರರನ್ನೇ ಖರೀದಿಸಿ ವೈದಿಕ ಆಟಕ್ಕೆ ಅಖಾಡದ ನೆಲ ಸಿದ್ಧಮಾಡಲಾಗುತ್ತಿದೆಯಾ ಎನ್ನುವ ಅನುಮಾನಗಳಿಗೆ ಎಡೆಯಾಗುವಂತೆ ಇಂದಿನ ವಿದ್ಯಮಾನಗಳು ನಡೆದಿವೆ.

ಗೋಕಾಕ್ ನ ಕತ್ತಿ ಸಹೋದರರು ಶಾಸಕರಿಗೆ ಔತಣಕೂಟ ಎರ್ಪಡಿಸಿ ಹಕ್ಕು ಪ್ರದಿಪಾದನೆ ಮಾಡಿ ಲಾಭ ಪಡೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಕೂಟದ ಮುಖ್ಯ ವ್ಯಕ್ತಿ ವಿಜಯಪುರದ ಬಸವರಾಜ್ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿ ತಮಗೆ ಮಂತ್ರಿಗಳನ್ನಾಗಿಸುವುದು ಸೇರಿದಂತೆ ತಮ್ಮ ಕೆಲವು ಬೇಡಿಕೆಗಳಿಗೆ ಯಡಿಯೂರಪ್ಪ ಸ್ಪಂದಿಸದಿದ್ದರೆ ಬಂಡಾಯ ಏಳುವ ಸೂಚನೆ ಕೊಟ್ಟಿದ್ದಾರೆ.
ಈ ಯೋಜನೆ, ಸೂಚನೆ ಹಿಂದೆ ಬಿ.ಜೆ.ಪಿ. ಹೈಕಮಾಂಡ್ ಕೈವಾಡದ ಶಂಕೆಯಂತೂ ಇದ್ದೇ ಇದೆ. ಆದರೆ ಒಳಗೊಳಗೆ ಯಡಿಯೂರಪ್ಪ ವಿರುದ್ಧ ಕುದಿಯುತ್ತಿರುವ ಕತ್ತಿ ಸಹೋದರರು, ಬಸವನಗೌಡ ಪಾಟೀಲ್ ರಂಥ ಖಾಲಿಡಬ್ಬಗಳ ಶಬ್ಧ ಮಾಡಿಸಿದರೆ ಯಡಿಯೂರಪ್ಪ ಸಹಜವಾಗಿ ಹೆದರುತ್ತಾರೆ ಆಗ ಈ ಕತ್ತಿ, ಯತ್ನಾಳ್ ರಿಗೆ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಟ್ಟು ಅಂತರ್ ಚಿಶಾಚಿಯಂತೆ ಅಲೆಯುತ್ತಿರುವ ಸಂತೋಷರಂಥ ವೈದಿಕರನ್ನು ಕೂಡ್ರಿಸಿದರೆ ಆಗ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ ಎನ್ನುವುದು ಬಿ.ಜೆ.ಪಿ.ಯೊಳಗಿನ ಕಟ್ಟರ್ ಸಂಘಿಗಳ ಆಲೋಚನೆ! ….. visit-samajamukhi.net

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *