

ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.


ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಮುಂಡಿಗೆಕೆರೆ, ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ ಸೇರಿದಂತೆ ಒಟ್ಟು 5 ಪ್ರದೇಶಗಳನ್ನು ಪಾರಂಪರಿಕ ತಾಣಗಳಿಗೆ ಸೇರ್ಪಡೆಗೊಳಿಸಲು ವಿಶ್ವ ಪರಿಸರ ದಿನಾಚರಣೆಯ ವೇಳೆ ಅರಣ್ಯ ಇಲಾಖೆ ಹಾಗೂ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ.
ಉತ್ತರ ಕನ್ನಡದ ಶಿರಸಿಯ ಸೋಂದಾ ಬಳಿ ಇರುವ ಮುಂಡಿಗೆಕೆರೆ ಸಣ್ಣ ಸರೋವರವಾಗಿದ್ದು, ಈ ಪ್ರದೇಶವನ್ನು ಪಾರಂಪರಿಕ ತಾಣ ಎಂದು ಗುರುತಿಸಲು ಸ್ಥಳೀಯ ಪಂಚಾಯತ್ ನಲ್ಲಿ 3 ತಿಂಗಳ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಈಗಾಗಲೇ ಈ ಪ್ರದೇಶವನ್ನು ಪಕ್ಷಿಧಾಮ ಎಂದು ಗುರುತಿಸಲಾಗಿದ್ದು, ಇದೇ ಸರಣಿಯಲ್ಲಿ ಇನ್ನೂ 10 ಸರೋವರಗಳನ್ನು ರಕ್ಷಿಸಲು ಮಂಡಳಿ ನಿರ್ಧರಿಸಿದೆ.
ಜೀವವೈವಿಧ್ಯ ಮಂಡಳಿಯ ಸದಸ್ಯರು ಕೊಪ್ಪಳದ ಜೂರಿಬೆಟ್ಟ, ತುಮಕೂರಿನ ಸಿದ್ಧರಬೆಟ್ಟ, ರಾಮನಗರ, ಚಿಕ್ಕಮಗಳೂರಿನ ಗುಡ್ಡಗಳನ್ನು ಪಾರಂಪರಿಕ ತಾಣಗಳಿಗೆ ಸೇರಿಸಲು ಕ್ರಮ ಕೈಗೊಂಡಿದ್ದಾರೆ.
ಬೋರ್ಡ್ ನ ಅಧ್ಯಕ್ಷ ಅನಂತ್ ಹೆಗ್ಡೆ ಈ ಬಗ್ಗೆ ಮಾತನಾಡಿದ್ದು, ಈ ಎಲ್ಲಾ ಪ್ರದೇಶಗಳನ್ನು ಪಾರಂಪರಿಕ ಸ್ಥಳಗಳನ್ನಾಗಿ ಘೋಷಿಸುವವರೆಗೂ ಸ್ಥಳೀಯ ಆಡಳಿತಕ್ಕೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದ ಅಂಬರಗುಡ್ಡ, ಬೆಂಗಳೂರಿನ ಗಾಂಧಿ ಜಿಕೆವಿಕೆ, ದೇವನಹಳ್ಳಿಯ ನಲ್ಲೂರು ಹುಣಸೆ ತೋಪು, ಚಿಕ್ಕಮಗಳೂರಿನ ಹೊಗ್ರೆಕನ್ ಗಳನ್ನು ಈಗಾಗಲೇ ಪಾರಂಪರಿಕ ತಾಣಗಳನ್ನಾಗಿ ಘೋಷಣೆ ಮಾಡಲಾಗಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
