ಈ ವರ್ಷ ಎಲ್ಲೂ ಕಾಣದ ನೇರಳೆ ಹಣ್ಣು

ಕಳೆದ ವರ್ಷ ಸಂಗ್ರಹಿಸಬೇಕೆಂದುಕೊಂಡಿದ್ದ ನೇರಳೆ ಹಣ್ಣು ಸಂಗ್ರಹಿಸಲಾಗದೆ ಮಳೆಗಾಲ ಬಂದೇ ಹೋಗಿತ್ತು. ಈ ವರ್ಷ ಹಾಗಾಗಬಾರದೆಂದು ಕಾಡು-ಮೇಡುಗಳನ್ನೆಲ್ಲಾ ಸುತ್ತಿ ನೇರಳೆಹಣ್ಣುಗಳಿಗಾಗಿ ಹುಡುಕಿದ್ದೇ ಹುಡುಕಿದ್ದು. ಆದರೆ ಈ ವರ್ಷ ಕಣ್ಣಿಗೆ ಬೀಳುವ, ಕೈ ಗೆ ಎಟುಕುವಷ್ಟು ನೇರಳೆ ಹಣ್ಣು ಬಿಡಲೇ ಇಲ್ಲ ಎನ್ನುವ ವಾಸ್ತವ ಅರಿವಾಗುವ ಸಮಯಕ್ಕೆ ಮತ್ತೊಂದು ಮಳೆಗಾಲ ಹೊಸ್ತಿಲಿಗೆ ಬಂದು ನಿಂತಿದೆ. ಮಲೆನಾಡಿನ ಗುಡ್ಡ-ಬೆಟ್ಟಗಳಲ್ಲಿ ಯತೇಚ್ಛವಾಗಿ ದೊರೆಯುವ ನೇರಳೆಹಣ್ಣುಗಳಲ್ಲಿ 2 ಡಜನ್ ಗಳಿಗೂ ಹೆಚ್ಚು ವಿಭಿನ್ನ ಪ್ರಭೇದಗಳಿವೆ ಎನ್ನುವ ಸಸ್ಯತಜ್ಞ ಎಂ.ಬಿ.ನಾಯ್ಕ ಕಡಕೇರಿ ಈ ವರ್ಷ ನೇರಳೆ ಫಸಲು ವಿರಳ ಮರಗಳಲ್ಲಿ ಫಸಲಿನ ಸಮೇಕ್ಷೆ ನಡೆಸಿದ ನಮಗೆ ಮರಗಳು ವರ್ಷಬಿಟ್ಟು ವರ್ಷ ಸಮೃದ್ಧ ಫಸಲು ನೀಡಲು ಆ ಮರದ ಹಾರ್ಮೋನು ಉತ್ಪಾದನೆ ಕಾರಣ ಎನ್ನುವ ಶೋಧನೆಯ ಸತ್ಯ ತಿಳಿಸಿದರು. ನೂರರಲ್ಲಿ ಒಂದು ಮರದಂತೆ ಎಲ್ಲೆಂದರಲ್ಲಿ ಮಲೆನಾಡಿನಾದ್ಯಂತ ಕಂಡು ಬರುವ ನೇರಳೆ ಹಣ್ಣು, ಅದರ ತೊಗಟೆ, ಕುಡಿ, ಎಲೆಗಳೆಲ್ಲಾ ಮಧುಮೇಹಕ್ಕೆ ದಿವ್ಯೌಷಧಿಗಳಂತೆ ನಮಗೆ ಈ ನೇರಳೆ ಹಿತ್ತಲಿನ ಗಿಡದಂತಾಗಿ ಅದರ ಮದ್ದಿನ ಮಹತ್ವ ತಿಳಿದಿಲ್ಲ.ವರ್ಷದಲ್ಲಿ ಸಾವಿರಾರು ಟನ್ ಬಿದ್ದು ಹಾಳಾಗುವ ಈ ನೇರಳೆಗೆ ಮಹಾನಗರಗಳಲ್ಲಿ ಪ್ರತಿ ಕಿ.ಲೋ.ಗೆ 500 ರೂ. ಗಿಂತ ಹೆಚ್ಚಿನ ಬೆಲೆ. ಈ ವರ್ಷ ಯಾರಾದರೂ ಒಂದೆರಡು ಕೆ.ಜಿ. ನೇರಳೆ ಹಣ್ಣು ಕೊಯ್ದುಕೊಡಿ ಎಂದವನಿಗೆ ನೇರಳೆಹಣ್ಣು ಸಿಗದೆ ಸಿಕ್ಕಿದ್ದು ನೇರಳೆ ಹಣ್ಣಿನ ಬಗ್ಗೆ ಮಾಹಿತಿ. ಈ ಉಪಯುಕ್ತ ಮಾಹಿತಿ ನಿಮಗೂ ತಿಳಿಯಲಿ ಎನ್ನುವ ಆಸೆಯಿಂದ ನನ್ನ ಮುನ್ನುಡಿಯೊಂದಿಗೆ ಈ ಬರಹ-

ನೀಲಿ ಸುಂದರಿ ನೇರಳೆ ಹಣ್ಣು

ಒಮ್ಮೆ ತಿಂದರೆ ಸಾಕು, ಮತ್ತೊಮ್ಮೆ ಸವಿಯಬೇಕು ಎಂದೆನಿಸುವ ಈ ನೀಲಿ ಸುಂದರಿಯನ್ನುಇಷ್ಟಪಡದವರಾರು ಹೇಳಿ? ವರುಷಕ್ಕೊಮ್ಮೆ ಕಾಣಸಿಗುವ ಈ ಹಣ್ಣು ಎಲ್ಲರಿಗೂ ಪ್ರಿಯ. ರೋಗ ಶಮನ ಮಾಡುವಲ್ಲಿ ಪ್ರಮುಖ ಔಷಧಿಯಾಗಿ ಕಾರ್ಯನಿರ್ವಹಿಸುವ ಈ ನೇರಳೆ ಹಣ್ಣು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ.

ಕಬ್ಬಿಣ, ಪೊಟಾಶಿಯಂ, ಮೇಗ್ನೇಶಿಯಂ, ಪ್ರೋಸ್ಫರಸ್, ವಿಟಮಿನ್ ಸಿ ಅಂಶಗಳನ್ನು ಹೊಂದಿದ ನೇರಳೆ ಹಣ್ಣು ಬರೀ ಆರೋಗ್ಯಕಾರಕ ಮಾತ್ರವಲ್ಲ, ಸೌಂದರ್ಯವರ್ಧಕವೂ ಹೌದು. ತಿನ್ನಲು ರುಚಿರುಚಿಯಾದ ಈ ಹಣ್ಣು ಹಲವು ರೋಗಗಳಿಗೆ ರಾಮಬಾಣ ಎಂದರೆ ನಂಬಲು ಸಾಧ್ಯವೆ?

ರಕ್ತಹೀನತೆ, ಕಾಮಾಲೆ ರೋಗ, ಹೃದಯ ಸಂಬಂಧ ಕಾಯಿಲೆ, ಹೊಟ್ಟೆ ಹುಣ್ಣು, ಬೇಧಿ, ಆಯಸಿಡಿಟಿಯಂಥ ಹತ್ತು ಹಲವು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಈ ನೀಲಿ ಸುಂದರಿಗಿದೆ. ಅಷ್ಟೇ ಅಲ್ಲದೇ ಹದೆಹರೆಯದ ಯುವಕ ಯುವತಿಯರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುವ ಮೊಡವೆಯನ್ನು ಹೋಗಲಾಡಿಸಿ ತ್ವಚೆಯ ಅಂದ ಹೆಚ್ಚಿಸುವ ಶಕ್ತಿ ಇದಕ್ಕಿದೆ.

ಆಯಂಟಿ ಬ್ಯಾಕ್ಟೀರಿಯಾ ಅಂಶ ಹೊಂದಿದ ಈ ನೇರಳೆ ಹಣ್ಣಿನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ತಡೆಗಟ್ಟಬಹುದು. ಜಾಂಬೋಲಿನ್ ಎಂಬ ಗ್ಲೂಕೋಸ್ ಅಂಶ ಇದರಲ್ಲಿರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಡಯಾಬಿಟಿಸ್ ಇರುವವರು ಕೂಡಾ ಯಾವುದೇ ಆತಂಕವಿಲ್ಲದೆ ಈ ಹಣ್ಣನ್ನು ತಿನ್ನಬಹುದು. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣ ಕ್ರಿಯೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುವ ಇದು ರಕ್ತ ಶುದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನು ಆಯಿಲ್ ಸ್ಕಿನ್ ನಿಂದ ಕಂಗಲಾಗಿರುವವರಿಗೆ ಇದು ಹೇಳಿ ಮಾಡಿಸಿದ ಮದ್ದು.

ಅಷ್ಟೇ ಅಲ್ಲದೇ ಇದರ ತಿರುಳನ್ನು ಜೆಲ್ಲಿ, ಜ್ಯಾಮ್, ವೈನ್ ಗಳ ತಯಾರಿಕೆ ಬಳಸಲಾಗುತ್ತದೆ. ಅಗಾಧ ಔಷಧಿಯ ಗುಣ ಹೊಂದಿದ ಈ ಹಣ್ಣು ತಿನ್ನಲು ತುಂಬಾ ರುಚಿ. ನೇರಳೆ ಹಣ್ಣು ಸೇವಿಸಿ ಬಾಯಿ ಚಪ್ಪರಿಸಿಕೊಳ್ಳುವುದು ಮಾತ್ರವಲ್ಲ. ಸೌಂದರ್ಯದ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. -ಅನಿತಾ ಬನಾರಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *