about adc h.k. krushnamoorty-ಸೇವಾ ಸರ್ವೋತ್ತಮ ಕೃಷ್ಣಮೂರ್ತಿ ಯವರಿಗೆ ವ್ಯಾಪಕ ಸ್ವಾಗತ ಸಿಗಲು ಕಾರಣವೇನು?

ಉತ್ತರಕನ್ನಡ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಎಚ್.ಕೆ.ಕೃಷ್ಣಮೂರ್ತಿಯವರಿಗೆ ಕರಾವಳಿ-ಮಲೆನಾಡಿನಾದ್ಯಂತ ವ್ಯಾಪಕ ಸ್ವಾಗತ, ಪ್ರೀತಿಯ ಆಮಂತ್ರಣ ದೊರೆತಿದೆ. ಹೀಗೆ ವ್ಯಾಪಕ ಸ್ವಾಗತ ಸ್ವೀಕರಿಸಿರುವ ಕೃಷ್ಣಮೂರ್ತಿ ಶಿವಮೊಗ್ಗ ಜಿಲ್ಲೆಯ ಸಾಗರದ ಮಂಡಗಳಲೆಯವರು,ಅವರು ಉತ್ತರ ಕನ್ನಡದ ಸಿದ್ಧಾಪುರದ ಅಳಿಯ ಅದಕ್ಕಿಂತ ಹೆಚ್ಚಾಗಿ ಅವರು ಉತ್ತರ ಕನ್ನಡ ಶಿವಮೊಗ್ಗ,ಮಂಗಳೂರುಗಳಿಗೆ ಆಪ್ತರಾಗಲು ಕಾರಣ ಅವರ ಸೇವೆಯ ವೈಖರಿಮತ್ತು ಸ್ವಭಾವದ ಸೊಬಗು ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ಇಪ್ಪತ್ತು ವರ್ಷಗಳ ಹಿಂದೆ ತಹಸಿಲ್ಧಾರರಾಗಿ ನೇಮಕವಾದಾಗ ಹಾನಗಲ್ ನಿಂದ ಪ್ರಾರಂಭಿಸಿ ಹಳೆಮೈಸೂರುಭಾಗ, ಕರಾವಳಿ, ಮಲೆನಾಡಿನಲ್ಲೇ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯುದ್ದಕ್ಕೂ ಕೃಷ್ಣಮೂರ್ತಿಯವರ ಜನಪರ ಆಡಳಿತ ಅವರನ್ನು ಈ ಭಾಗದ ಜನಾನುರಾಗಿಯನ್ನಾಗಿಸಿದೆ. ಶಿರಸಿ, ಶಿವಮೊಗ್ಗ, ಪುತ್ತೂರು, ಕೆ.ಆರ್ ಪೇಟೆಗಳಲ್ಲಿ ತಹಸಿಲ್ಧಾರ, ಉಪವಿಭಾಗೀಯ ಅಧಿಕಾರಿಯಾಗಿ ಹೆಸರು ಮಾಡಿರುವ ಇವರಿಗೆ ಕೆ.ಆರ್. ಪೇಟೆಯಲ್ಲಿ ಉತ್ತಮ ಚುನಾವಣಾಧಿಕಾರಿ, ಶಿವಮೊಗ್ಗದಲ್ಲಿ ಸೇವಾ ಸರ್ವೋತ್ತಮ ಪುರಸ್ಕಾರಗಳು ಲಭಿಸಿವೆ. ಈ ಗೌರವ, ಪ್ರಶಸ್ತಿಗಳಿಗಿಂತ ಹಿಂದಿನ 20 ವರ್ಷಗಳ ಅವರ ಜೀವನಾನುಭವ ಕೃಷ್ಣಮೂರ್ತಿಯವರನ್ನು ಮಾನವೀಯ ಅಧಿಕಾರಿಯನ್ನಾಗಿಸಿತೆ? ಎಂದು ಪ್ರಶ್ನಿಸಿದರೆ ಅವರ ಆಪ್ತರು, ಹಿತೈಶಿಗಳೆಲ್ಲಾ ಹೌದು ಎನ್ನುತ್ತಾರೆ.
ಬಾಲಕ ಕೃಷ್ಣಮೂರ್ತಿ ಮಂಡಗಳಲೆಯ ಕೃಷಿ ಕುಟುಂಬದ ಕುಡಿ, ಇನ್ನಿಬ್ಬರು ಸಹೋದರರಂತೆಯೇ ಮಂಡಗಳಲೆ, ನಂತರ ತಾಳಗುಪ್ಪಾದ ಚೂರಿಕಟ್ಟೆಯ ಹತ್ತಿಪ್ಪತ್ತು ಕಿಲೋ ಮೀಟರ್ ದೂರದ ಪ್ರೌಢಶಾಲೆ, ಕಾಲೇಜುಗಳಿಗೆ ಕಾಲ್ನಡಿಗೆಯಲ್ಲೇ ಬರುತಿದ್ದ ಪ್ರತಿಭಾವಂತ ವಿದ್ಯಾರ್ಥಿ ಸಾಗರದಲ್ಲಿ ಪದವಿಮಾಡಿ, ಸ್ನಾತಕೋತ್ತರ ಪದವಿಧರರಾಗಿ ಎರಡ್ಮೂರು ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತಿದ್ದಾಗ ದಿನಕ್ಕೆ ಗಳಿಸುತಿದ್ದುದು ನೂರರ ಲೆಕ್ಕದ ವೇತನ.

ನಂತರ ಕ.ಲೋ.ಸೇ.ಆ. ದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ತಹಸಿಲ್ಧಾರರರಾಗುತ್ತಾರೆ. ಎಳೆವಯಸ್ಸಿನಲ್ಲಿ ಕಂಡುಂಡ ನೋವು ನಲಿವುಗಳ ಆಧಾರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಜನಪರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಇಂಥ ಗ್ರಾಮೀಣ, ಬಡತನದ ಹಿನ್ನೆಲೆಯ ವ್ಯಕ್ತಿ ಸೇವೆ ಸಲ್ಲಿಸಿದ ಕಡೆಗಳಲ್ಲೆಲ್ಲಾ ಜನಪರ ಎಂದು ಕರೆಸಿಕೊಳ್ಳುವ ಹಿಂದೆ ಅವರ ಶ್ರಮವಿದೆ. ಶಿರಸಿ- ಹೊಸನಗರ, ಶಿವಮೊಗ್ಗ. ಕೆ.ಆರ್. ಪೇಟೆ, ಪುತ್ತೂರು ಹೀಗೆ ಇದೇ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿ ಜನಪ್ರೀಯರಾದ ವಿರಳ ಅಧಿಕಾರಿಗಳಲ್ಲಿ ಕೃಷ್ಣಮೂರ್ತಿ ಒಬ್ಬರು. ಕಾರವಾರಕ್ಕೆ ತೆರಳಿ ಇವರನ್ನು ಅಭಿನಂದಿಸಿ, ಶುಭಕೋರುತ್ತಿರುವ ಸಾರ್ವಜನಿಕರಿಗೆ ಕೃಷ್ಣಮೂರ್ತಿ ಗೆಳೆಯ, ಆಪ್ತ, ಸಂಬಂಧಿಗಿಂತ ಹೆಚ್ಚಾಗಿ ಹೃದಯವಂತ, ಜನಪರ ಅಧಿಕಾರಿ.ಅವರಿಗೆ, ಅವರ ಪರಿಶ್ರಮದ ಪ್ರಾಮಾಣಿಕ ಸೇವೆಗೆ ಸಮಾಜಮುಖಿ ಶುಭಕೋರಿ ಅಭಿನಂದಿಸುತ್ತದೆ.

( another achiver)ಪ್ರಗತಿಪರ ಕೃಷಿಕನ ನೀರಿಂಗಿಸುವ ಕೆಲಸಕ್ಕೆ ಅಪಾರ ಮೆಚ್ಚುಗೆ
ಹೆಸರು-ದ್ಯಾವಾ ನಾಯ್ಕ ಯಾನೆ,ಡಿ.ಕೆ. ನಾಯ್ಕ, ಊರು-ತೆಂಗಿನಮನೆ, ಹವ್ಯಾಸ-ಸಾಮಾಜಿಕ ಕೆಲಸ, ರಾಜಕೀಯ
ಹೀಗೆ ಪರಿಚಯಿಸಬಹುದಾದ ಡಿ.ಕೆ.ನಾಯ್ಕರ ಮನೆಗೆ ಕಾರವಾರ ಆಕಾಶವಾಣಿಯ ರಾಮಡಗಿಯವರೊಂದಿಗೆ ತೆರಳಿದ್ದೆ. ರಾಮಡಗಿ ಮತ್ತು ನಮ್ಮ ತಂಡ ಕಂಡ ಡಿ.ಕೆ.ನಾಯ್ಕ ತಮ್ಮ ಎಂದಿನ ಸರಳತೆಯಲ್ಲಿ ನಮ್ಮನ್ನು ಕರೆದು ಉಪಚರಿಸಿದ್ದರು. ನಾಲ್ಕೈದು ಎಕರೆ ಜಾಗದ ಬಹುತೇಕ ಅಡಿಕೆ ಮರಗಳಲ್ಲಿ ನಳನಳಿಸುತಿದ್ದ ಕಾಳುಮೆಣಸಿನ ಬಳ್ಳಿಗಳ ಎಲೆ ಸವರಿ ಹ್ಯಾಗಿದೆ ನೋಡಿ ಈ ಬಳ್ಳಿಗಳಿಂದ 5-6 ಕ್ವಿಂಟಾಲ್ ಕಾಳು ಮೆಣಸು ಕೊಯ್ದಿದ್ದೇನಿ ಎಂದು ಖುಷಿಯಿಂದ ಹೇಳಿದ್ದರು. ಕಾಳುಮೆಣಸು ಬೆಳೆಯುವ ಬಗೆಯನ್ನು ವಿವರಿಸಿದ್ದರು. ತಾಲೂಕಿನ ಪ್ರಮುಖ ಕಾಳುಮೆಣಸು ಬೆಳೆಗಾರರಲ್ಲಿ ಒಬ್ಬರಾಗಿದ್ದ ಡಿ.ಕೆ.ನಾಯ್ಕರ ತೋಟ,ಕಾಳುಮೆಣಸು ನೋಡಿ ನಾವೂ ಖುಷಿಪಟ್ಟಿದ್ದೆವು. ಮತ್ತೊಮ್ಮೆ ಬನ್ನಿ ಎಂದು ನಮಗೆ ಆಹ್ವಾನ ನೀಡಿದ್ದ ಡಿ.ಕೆ.ನಾಯ್ಕರನ್ನು ಮತ್ತೊಮ್ಮೆ ಕಂಡು ಬರಬೇಕೆಂಬ ಆಸೆ ಫಲಿಸಿರಿರಲಿಲ್ಲ………… visit-samajamukhi.net & samajamukhi kannesh youtube channel

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *