about adc h.k. krushnamoorty-ಸೇವಾ ಸರ್ವೋತ್ತಮ ಕೃಷ್ಣಮೂರ್ತಿ ಯವರಿಗೆ ವ್ಯಾಪಕ ಸ್ವಾಗತ ಸಿಗಲು ಕಾರಣವೇನು?

ಉತ್ತರಕನ್ನಡ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಎಚ್.ಕೆ.ಕೃಷ್ಣಮೂರ್ತಿಯವರಿಗೆ ಕರಾವಳಿ-ಮಲೆನಾಡಿನಾದ್ಯಂತ ವ್ಯಾಪಕ ಸ್ವಾಗತ, ಪ್ರೀತಿಯ ಆಮಂತ್ರಣ ದೊರೆತಿದೆ. ಹೀಗೆ ವ್ಯಾಪಕ ಸ್ವಾಗತ ಸ್ವೀಕರಿಸಿರುವ ಕೃಷ್ಣಮೂರ್ತಿ ಶಿವಮೊಗ್ಗ ಜಿಲ್ಲೆಯ ಸಾಗರದ ಮಂಡಗಳಲೆಯವರು,ಅವರು ಉತ್ತರ ಕನ್ನಡದ ಸಿದ್ಧಾಪುರದ ಅಳಿಯ ಅದಕ್ಕಿಂತ ಹೆಚ್ಚಾಗಿ ಅವರು ಉತ್ತರ ಕನ್ನಡ ಶಿವಮೊಗ್ಗ,ಮಂಗಳೂರುಗಳಿಗೆ ಆಪ್ತರಾಗಲು ಕಾರಣ ಅವರ ಸೇವೆಯ ವೈಖರಿಮತ್ತು ಸ್ವಭಾವದ ಸೊಬಗು ಕಾರಣ ಎಂದರೆ ಅತಿಶಯೋಕ್ತಿಯಲ್ಲ.

ಇಪ್ಪತ್ತು ವರ್ಷಗಳ ಹಿಂದೆ ತಹಸಿಲ್ಧಾರರಾಗಿ ನೇಮಕವಾದಾಗ ಹಾನಗಲ್ ನಿಂದ ಪ್ರಾರಂಭಿಸಿ ಹಳೆಮೈಸೂರುಭಾಗ, ಕರಾವಳಿ, ಮಲೆನಾಡಿನಲ್ಲೇ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯುದ್ದಕ್ಕೂ ಕೃಷ್ಣಮೂರ್ತಿಯವರ ಜನಪರ ಆಡಳಿತ ಅವರನ್ನು ಈ ಭಾಗದ ಜನಾನುರಾಗಿಯನ್ನಾಗಿಸಿದೆ. ಶಿರಸಿ, ಶಿವಮೊಗ್ಗ, ಪುತ್ತೂರು, ಕೆ.ಆರ್ ಪೇಟೆಗಳಲ್ಲಿ ತಹಸಿಲ್ಧಾರ, ಉಪವಿಭಾಗೀಯ ಅಧಿಕಾರಿಯಾಗಿ ಹೆಸರು ಮಾಡಿರುವ ಇವರಿಗೆ ಕೆ.ಆರ್. ಪೇಟೆಯಲ್ಲಿ ಉತ್ತಮ ಚುನಾವಣಾಧಿಕಾರಿ, ಶಿವಮೊಗ್ಗದಲ್ಲಿ ಸೇವಾ ಸರ್ವೋತ್ತಮ ಪುರಸ್ಕಾರಗಳು ಲಭಿಸಿವೆ. ಈ ಗೌರವ, ಪ್ರಶಸ್ತಿಗಳಿಗಿಂತ ಹಿಂದಿನ 20 ವರ್ಷಗಳ ಅವರ ಜೀವನಾನುಭವ ಕೃಷ್ಣಮೂರ್ತಿಯವರನ್ನು ಮಾನವೀಯ ಅಧಿಕಾರಿಯನ್ನಾಗಿಸಿತೆ? ಎಂದು ಪ್ರಶ್ನಿಸಿದರೆ ಅವರ ಆಪ್ತರು, ಹಿತೈಶಿಗಳೆಲ್ಲಾ ಹೌದು ಎನ್ನುತ್ತಾರೆ.
ಬಾಲಕ ಕೃಷ್ಣಮೂರ್ತಿ ಮಂಡಗಳಲೆಯ ಕೃಷಿ ಕುಟುಂಬದ ಕುಡಿ, ಇನ್ನಿಬ್ಬರು ಸಹೋದರರಂತೆಯೇ ಮಂಡಗಳಲೆ, ನಂತರ ತಾಳಗುಪ್ಪಾದ ಚೂರಿಕಟ್ಟೆಯ ಹತ್ತಿಪ್ಪತ್ತು ಕಿಲೋ ಮೀಟರ್ ದೂರದ ಪ್ರೌಢಶಾಲೆ, ಕಾಲೇಜುಗಳಿಗೆ ಕಾಲ್ನಡಿಗೆಯಲ್ಲೇ ಬರುತಿದ್ದ ಪ್ರತಿಭಾವಂತ ವಿದ್ಯಾರ್ಥಿ ಸಾಗರದಲ್ಲಿ ಪದವಿಮಾಡಿ, ಸ್ನಾತಕೋತ್ತರ ಪದವಿಧರರಾಗಿ ಎರಡ್ಮೂರು ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತಿದ್ದಾಗ ದಿನಕ್ಕೆ ಗಳಿಸುತಿದ್ದುದು ನೂರರ ಲೆಕ್ಕದ ವೇತನ.

ನಂತರ ಕ.ಲೋ.ಸೇ.ಆ. ದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ತಹಸಿಲ್ಧಾರರರಾಗುತ್ತಾರೆ. ಎಳೆವಯಸ್ಸಿನಲ್ಲಿ ಕಂಡುಂಡ ನೋವು ನಲಿವುಗಳ ಆಧಾರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಜನಪರ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾರೆ. ಇಂಥ ಗ್ರಾಮೀಣ, ಬಡತನದ ಹಿನ್ನೆಲೆಯ ವ್ಯಕ್ತಿ ಸೇವೆ ಸಲ್ಲಿಸಿದ ಕಡೆಗಳಲ್ಲೆಲ್ಲಾ ಜನಪರ ಎಂದು ಕರೆಸಿಕೊಳ್ಳುವ ಹಿಂದೆ ಅವರ ಶ್ರಮವಿದೆ. ಶಿರಸಿ- ಹೊಸನಗರ, ಶಿವಮೊಗ್ಗ. ಕೆ.ಆರ್. ಪೇಟೆ, ಪುತ್ತೂರು ಹೀಗೆ ಇದೇ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿ ಜನಪ್ರೀಯರಾದ ವಿರಳ ಅಧಿಕಾರಿಗಳಲ್ಲಿ ಕೃಷ್ಣಮೂರ್ತಿ ಒಬ್ಬರು. ಕಾರವಾರಕ್ಕೆ ತೆರಳಿ ಇವರನ್ನು ಅಭಿನಂದಿಸಿ, ಶುಭಕೋರುತ್ತಿರುವ ಸಾರ್ವಜನಿಕರಿಗೆ ಕೃಷ್ಣಮೂರ್ತಿ ಗೆಳೆಯ, ಆಪ್ತ, ಸಂಬಂಧಿಗಿಂತ ಹೆಚ್ಚಾಗಿ ಹೃದಯವಂತ, ಜನಪರ ಅಧಿಕಾರಿ.ಅವರಿಗೆ, ಅವರ ಪರಿಶ್ರಮದ ಪ್ರಾಮಾಣಿಕ ಸೇವೆಗೆ ಸಮಾಜಮುಖಿ ಶುಭಕೋರಿ ಅಭಿನಂದಿಸುತ್ತದೆ.

( another achiver)ಪ್ರಗತಿಪರ ಕೃಷಿಕನ ನೀರಿಂಗಿಸುವ ಕೆಲಸಕ್ಕೆ ಅಪಾರ ಮೆಚ್ಚುಗೆ
ಹೆಸರು-ದ್ಯಾವಾ ನಾಯ್ಕ ಯಾನೆ,ಡಿ.ಕೆ. ನಾಯ್ಕ, ಊರು-ತೆಂಗಿನಮನೆ, ಹವ್ಯಾಸ-ಸಾಮಾಜಿಕ ಕೆಲಸ, ರಾಜಕೀಯ
ಹೀಗೆ ಪರಿಚಯಿಸಬಹುದಾದ ಡಿ.ಕೆ.ನಾಯ್ಕರ ಮನೆಗೆ ಕಾರವಾರ ಆಕಾಶವಾಣಿಯ ರಾಮಡಗಿಯವರೊಂದಿಗೆ ತೆರಳಿದ್ದೆ. ರಾಮಡಗಿ ಮತ್ತು ನಮ್ಮ ತಂಡ ಕಂಡ ಡಿ.ಕೆ.ನಾಯ್ಕ ತಮ್ಮ ಎಂದಿನ ಸರಳತೆಯಲ್ಲಿ ನಮ್ಮನ್ನು ಕರೆದು ಉಪಚರಿಸಿದ್ದರು. ನಾಲ್ಕೈದು ಎಕರೆ ಜಾಗದ ಬಹುತೇಕ ಅಡಿಕೆ ಮರಗಳಲ್ಲಿ ನಳನಳಿಸುತಿದ್ದ ಕಾಳುಮೆಣಸಿನ ಬಳ್ಳಿಗಳ ಎಲೆ ಸವರಿ ಹ್ಯಾಗಿದೆ ನೋಡಿ ಈ ಬಳ್ಳಿಗಳಿಂದ 5-6 ಕ್ವಿಂಟಾಲ್ ಕಾಳು ಮೆಣಸು ಕೊಯ್ದಿದ್ದೇನಿ ಎಂದು ಖುಷಿಯಿಂದ ಹೇಳಿದ್ದರು. ಕಾಳುಮೆಣಸು ಬೆಳೆಯುವ ಬಗೆಯನ್ನು ವಿವರಿಸಿದ್ದರು. ತಾಲೂಕಿನ ಪ್ರಮುಖ ಕಾಳುಮೆಣಸು ಬೆಳೆಗಾರರಲ್ಲಿ ಒಬ್ಬರಾಗಿದ್ದ ಡಿ.ಕೆ.ನಾಯ್ಕರ ತೋಟ,ಕಾಳುಮೆಣಸು ನೋಡಿ ನಾವೂ ಖುಷಿಪಟ್ಟಿದ್ದೆವು. ಮತ್ತೊಮ್ಮೆ ಬನ್ನಿ ಎಂದು ನಮಗೆ ಆಹ್ವಾನ ನೀಡಿದ್ದ ಡಿ.ಕೆ.ನಾಯ್ಕರನ್ನು ಮತ್ತೊಮ್ಮೆ ಕಂಡು ಬರಬೇಕೆಂಬ ಆಸೆ ಫಲಿಸಿರಿರಲಿಲ್ಲ………… visit-samajamukhi.net & samajamukhi kannesh youtube channel

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *