ಟಿ.ಎಸ್.ಎಸ್. ವಿರುದ್ಧ ಹೆಗ್ಗೋಡಮನೆ ಕುಟುಂಬದ ಆರೋಪ, ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು, ಟಿ.ಎಸ್.ಎಸ್. ನಲ್ಲಿ ಬಾಲ ದೇಹ ಅಲ್ಲಾಡಿಸುವ ಅವ್ಯವಸ್ಥೆ ವಿರುದ್ಧ ಸಮರ

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಸ್.ಎಸ್. ಮತ್ತು ಅದರ ಸಮೂಹ ಸಂಸ್ಥೆಯ ಻಻ಅಂಗ ಶಿರಸಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಻ಅದರ ಸದಸ್ಯರಿಂದಲೇ ಅಪಸ್ವರ ಕೇಳಿ ಬಂದಿದ್ದು ಈ ಸಂಸ್ಥೆಯ ಸೇವೆ, ಕಾರ್ಯವೈಖರಿ ವಿರುದ್ಧ ಗುರುತರ ಆರೋಪ ಮಾಡಿರುವ ಸಿದ್ಧಾಪುರ ಹೆಗ್ಗೋಡಮನೆ ಗೌಡರ ಕುಟುಂಬ ಟಿ.ಎಸ್.ಎಸ್. ಸಂಸ್ಥೆ ಸೇವೆಯ ಹೆಸರಲ್ಲಿ ವಾಣಿಜ್ಯದ ಲಾಭದ ವ್ಯವಹಾರದಲ್ಲಿ ತೊಡಗಿದ್ದು ಈ ಲಾಭಬಡುಕತನದಿಂದಾಗಿ ಸದಸ್ಯರಿಗೆ,ಸ್ಥಳಿಯರಿಗೆ ಅನ್ಯಾಯವಾಗುತ್ತಿದೆ ಎಂದು ದೂ ರಿದೆ.

ಇಂದು ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ಕರೆದ ಮಾಧ್ಯಮಗೋಷ್ಠಿ ಯಲ್ಲಿ ಈ ಆರೋಪ ಮಾಡಿರುವ ಹೆಗ್ಗೋಡಮನೆ ಸಹೋದರರು ಟಿ.ಎಸ್.ಎಸ್. ನಲ್ಲಿ ನಾವು ಹಲವಾರು ವರ್ಷಗಳಿಂದ ಸದಸ್ಯರಾಗಿ ವ್ಯವಹರಿಸುತಿದ್ದೇವೆ. ನಮ್ಮ ವ್ಯಾಪಾರವ್ಯವಹಾರ, ಖರೀದಿ-ಮಾರಾಟಗಳೆಲ್ಲಾ ಟಿ.ಎಸ್.ಎಸ್. ನಲ್ಲೇ ನಡೆಯುತ್ತಿದೆ. ಆದರೆ ನಮಗೆ ಈ ಸಂಸ್ಥೆ ಎಷ್ಟು ಗೌರವ ನೀಡುತ್ತಿದೆ ಎನ್ನುವುದು ಆಗಷ್ಟ್ 18 ರಿಂದ 21 ರ ಻ಅವಧಿಯಲ್ಲಿ ಅರ್ಥವಾಗಿದೆ. ನಮ್ಮ ಸಹೋದರ ಜಯಶೀಲ ಗೌಡ ಈ ಸಂಸ್ಥೆಯ ಬೇಜವಾಬ್ಧಾರಿ, ನಿರ್ಲಕ್ಷದಿಂದಾಗಿ ಮರಣಹೊಂದುವಂತಾಯಿತು. ನಮ್ಮಂಥ ಪರಿಚಿತರು,ಒಡನಾಟದ ವ್ಯಕ್ತಿಗಳಿಗೇ ಹೀಗಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ ಹೆಗ್ಗೋಡಮನೆ ಸಹೋದರರು. ಅಗತ್ಯವಿದ್ದಾಗ ನಿರ್ಲಕ್ಷ ಮಾಡಿ ನಂತರ ಶವಸಂಸ್ಕಾರದ ವೆಚ್ಚವನ್ನು ಮನೆಗೆ ತಲುಪಿಸುವಾಗಲೂ ಸೌಜನ್ಯ ತೋರಲಿಲ್ಲ ಹಾಗಾಗಿ ಟಿ.ಎಸ್.ಎಸ್. ನೆರವು ಹತ್ತು ಸಾವಿರವನ್ನು ತಿರಸ್ಕರಿಸುವ ಜೊತೆಗೆ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು ನೀಡಿದ್ದೇವೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ವಿವರಿಸಿದರು.

ಘಟನೆಯ ವಿವರ- ಹೆಗ್ಗೋಡಮನೆ ಕುಟುಂಬದ ಜಯಶೀಲ ಸದಾಶಿವ ಗೌಡರ್ ಆಗಷ್ಟ್ 18 ರಂದು ಸಿದ್ಧಾಪುರ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಮಾರ್ಗದರ್ಶನದಂತೆ 19 ರಂದು ಶಿರಸಿಯ ಟಿ.ಎಸ್.ಎಸ್. ಆಸ್ಫತ್ರೆ ಕಡವೆ ವೈದ್ಯಕೀಯ ಸಂಸ್ಥೆಯ ಆಸ್ಫತ್ರೆಗೆ ಹೆಚ್ಚಿನ ಪರೀಕ್ಷೆ, ಚಿಕಿತ್ಸೆಗೆ ರವಾನಿಸುತ್ತಾರೆ. ಅಲ್ಲಿ ಆಸ್ಫತ್ರೆಗೆ ಪ್ರವೇಶ ನೀಡದ ಻ಅಲ್ಲಿಯ ಸಿಬ್ಬಂದಿಗಳು ಆಸ್ಫತ್ರೆಯ ಹೊರಗೆ ರೋಗಿಯನ್ನು ಕಾಯಿಸುತ್ತಾರೆ. ನಂತರ ಹುಬ್ಬಳ್ಳಿ ಕೆ.ಎಂ.ಸಿ. ಯಲ್ಲಿ ಅವಶ್ಯ ಚಿಕಿತ್ಸೆ ಪಡೆಯುವ ಮೊದಲು ವಿಳಂಬವಾಗಿ ಜಯಶೀಲ ಗೌಡರ್ ಆಗಷ್ಟ್ 22 ರಂದು ಮರಣ ಹೊಂದುತ್ತಾರೆ.

ಮಾಧ್ಯಮಗೋಷ್ಥಿಯ ಪ್ರಮುಖ ಻ಅಂಶಗಳು- ನಾವೆಲ್ಲಾ ಟಿ.ಎಸ್.ಎಸ್. ನ ಸದಸ್ಯರು ಆದರೆ ನಮ್ಮಂಥ ಻಻ಅನೇಕ ಸದಸ್ಯರ ಹಣದಿಂದ ಸ್ಥಾಪನೆಯಾಗಿ ನಡೆಯುತ್ತಿರುವ ಟಿ.ಎಸ್.ಎಸ್. ಆಸ್ಫತ್ರೆಯಲ್ಲಿ ನಮಗೆ ಅವಕಾಶ, ವ್ಯವಸ್ಥೆ ಸಿಗದಿದ್ದರೆ ಸಾಮಾನ್ಯರ ಪಾಡೇನು? ಈಗಾಗಲೇ ಅವರ ಻ಅಂತ್ಯಸಂಸ್ಕಾರದ ಹಣವನ್ನು ತಿರಸ್ಕರಿಸಿ ಆಸ್ಫತ್ರೆ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ.ಸಿದ್ಧಾಪುರದಲ್ಲಿ ಲೋಕೇಶ್ ಡಾಕ್ಟರ್ ಬಿಟ್ಟರೆ ಸರ್ಕಾರಿ ಆಸ್ಫತ್ರೆಯಲ್ಲಿ ವ್ಯವಸ್ಥೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ಆಪತ್ಕಾಲದಲ್ಲಿ ನಮ್ಮ ಸಂಸ್ಥೆಯ ಟಿ.ಎಸ್.ಎಸ್. ಆಸ್ಫತ್ರೆ ಇದೆ ಎಂದು ತೆರಳಿದರೆ, ಅಲ್ಲಿ ನಮಗೆ ಪ್ರವೇಶವೇ ಇಲ್ಲ, ಹುಬ್ಬಳ್ಳಿ ಕೆ.ಎಂ.ಸಿ. ಅವ್ಯವಸ್ಥೆಯ ಕೊಂಪೆ ಇಂಥ ಻ಅವ್ಯವಸ್ಥೆ, ತೊಂದರೆಗಳನ್ನು ಕೇಳಲು ಸರ್ಕಾರ, ಜನಪ್ರತಿನಿಧಿಗಳಿಲ್ಲವೆ? ಹೀಗಾದರೆ ಜನಸಾಮಾನ್ಯರ ಪಾಡೇನು? ಇದಕ್ಕೆ ನ್ಯಾಯ ದೊರಕಿಸುವವರ್ಯಾರು? -ಸಿ.ಎಸ್. ಗೌಡರ್,ನಿವೃತ್ತ ನೌಕರರ ಸಂಘದ ಻಻ಅಧ್ಯಕ್ಷ

ಸಿದ್ಧಾಪುರದಲ್ಲಿ ಸರ್ಕಾರಿ, ಖಾಸಗಿ ಆಸ್ಫತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಿಗಬೇಕು. ಅನಿವಾರ್ಯ ಪ್ರಸಂಗಗಳಲ್ಲಿ ಉಪಯೋಗಕ್ಕೆ ಬಾರದ ಇಲ್ಲಿಯ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸುವತ್ತ ಸರ್ಕಾರ ಗಮನ ಹರಿಸಬೇಕು -ಪರಮೇಶ್ವರಯ್ಯ ಕಾನಳ್ಳಿ ಮಠ, ಻ಅಧ್ಯಕ್ಷರು ವೀರಶೈವ ಕ್ಷೇಮಾಭಿವೃದ್ಧಿ ಸಂಘ ಸಿದ್ಧಾಪುರ.

ನಮಗೆ ಟಿ.ಎಸ್.ಎಸ್. ಅಥವಾ ಮತ್ತ್ಯಾರ ನೆರವಿನ ಻಻ಅಗತ್ಯವಿಲ್ಲ. ನಮ್ಮ ಕುಟುಂಬಕ್ಕಾದ ಻಻ಅನ್ಯಾಯ ಮತ್ಯಾವ ಕುಟುಂಬಕ್ಕೂ ಆಗಬಾರದು. ಸಾಯುವವರನ್ನು ಉಳಿಸುವ ನಮ್ಮ ಕುಟುಂಬಕ್ಕೆ ನಮ್ಮವರನ್ನೇ ಉಳಿಸಿಕೊಳ್ಳದ ಻ಅನಿವಾರ್ಯತೆಗೆ ಸಿಕ್ಕಿಸಿದ್ದು ಇಲ್ಲಿಯ ವೈದ್ಯಕೀಯ ಻ಅವ್ಯವಸ್ಥೆ, ಟಿ.ಎಸ್.ಎಸ್. ನ ಬೇಜವಾಬ್ಧಾರಿ. ಹಣ, ಖಾತೆಗೆ ಟಿ.ಎಸ್.ಎಸ್. ಸೇವೆ, ಅನಿವಾರ್ಯತೆಗೆ ಕಡವೆ ಸಂಸ್ಥೆಗೂ ಟಿ.ಎಸ್.ಎಸ್. ಗೂ ಸಂಬಂಧವಿಲ್ಲ ಎಂದರೆ…. ನಮಗಾದ ನೋವು ಇತರ ಸದಸ್ಯರಿಗೆ ಆಗಬಾರದು. ಈ ಬಗ್ಗೆ ಇತರ ಸದಸ್ಯರೂ ಎಚ್ಚೆತ್ತುಕೊಳ್ಳಬೇಕು. – ಸುಧೀರ್ ಗೌಡರ್, ತಾ.ಪಂ. ಅಧ್ಯಕ್ಷ ಸಿದ್ಧಾಪುರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *