ಟಿ.ಎಸ್.ಎಸ್. ವಿರುದ್ಧ ಹೆಗ್ಗೋಡಮನೆ ಕುಟುಂಬದ ಆರೋಪ, ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು, ಟಿ.ಎಸ್.ಎಸ್. ನಲ್ಲಿ ಬಾಲ ದೇಹ ಅಲ್ಲಾಡಿಸುವ ಅವ್ಯವಸ್ಥೆ ವಿರುದ್ಧ ಸಮರ

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಸ್.ಎಸ್. ಮತ್ತು ಅದರ ಸಮೂಹ ಸಂಸ್ಥೆಯ ಻಻ಅಂಗ ಶಿರಸಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಻ಅದರ ಸದಸ್ಯರಿಂದಲೇ ಅಪಸ್ವರ ಕೇಳಿ ಬಂದಿದ್ದು ಈ ಸಂಸ್ಥೆಯ ಸೇವೆ, ಕಾರ್ಯವೈಖರಿ ವಿರುದ್ಧ ಗುರುತರ ಆರೋಪ ಮಾಡಿರುವ ಸಿದ್ಧಾಪುರ ಹೆಗ್ಗೋಡಮನೆ ಗೌಡರ ಕುಟುಂಬ ಟಿ.ಎಸ್.ಎಸ್. ಸಂಸ್ಥೆ ಸೇವೆಯ ಹೆಸರಲ್ಲಿ ವಾಣಿಜ್ಯದ ಲಾಭದ ವ್ಯವಹಾರದಲ್ಲಿ ತೊಡಗಿದ್ದು ಈ ಲಾಭಬಡುಕತನದಿಂದಾಗಿ ಸದಸ್ಯರಿಗೆ,ಸ್ಥಳಿಯರಿಗೆ ಅನ್ಯಾಯವಾಗುತ್ತಿದೆ ಎಂದು ದೂ ರಿದೆ.

ಇಂದು ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ಕರೆದ ಮಾಧ್ಯಮಗೋಷ್ಠಿ ಯಲ್ಲಿ ಈ ಆರೋಪ ಮಾಡಿರುವ ಹೆಗ್ಗೋಡಮನೆ ಸಹೋದರರು ಟಿ.ಎಸ್.ಎಸ್. ನಲ್ಲಿ ನಾವು ಹಲವಾರು ವರ್ಷಗಳಿಂದ ಸದಸ್ಯರಾಗಿ ವ್ಯವಹರಿಸುತಿದ್ದೇವೆ. ನಮ್ಮ ವ್ಯಾಪಾರವ್ಯವಹಾರ, ಖರೀದಿ-ಮಾರಾಟಗಳೆಲ್ಲಾ ಟಿ.ಎಸ್.ಎಸ್. ನಲ್ಲೇ ನಡೆಯುತ್ತಿದೆ. ಆದರೆ ನಮಗೆ ಈ ಸಂಸ್ಥೆ ಎಷ್ಟು ಗೌರವ ನೀಡುತ್ತಿದೆ ಎನ್ನುವುದು ಆಗಷ್ಟ್ 18 ರಿಂದ 21 ರ ಻ಅವಧಿಯಲ್ಲಿ ಅರ್ಥವಾಗಿದೆ. ನಮ್ಮ ಸಹೋದರ ಜಯಶೀಲ ಗೌಡ ಈ ಸಂಸ್ಥೆಯ ಬೇಜವಾಬ್ಧಾರಿ, ನಿರ್ಲಕ್ಷದಿಂದಾಗಿ ಮರಣಹೊಂದುವಂತಾಯಿತು. ನಮ್ಮಂಥ ಪರಿಚಿತರು,ಒಡನಾಟದ ವ್ಯಕ್ತಿಗಳಿಗೇ ಹೀಗಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ ಹೆಗ್ಗೋಡಮನೆ ಸಹೋದರರು. ಅಗತ್ಯವಿದ್ದಾಗ ನಿರ್ಲಕ್ಷ ಮಾಡಿ ನಂತರ ಶವಸಂಸ್ಕಾರದ ವೆಚ್ಚವನ್ನು ಮನೆಗೆ ತಲುಪಿಸುವಾಗಲೂ ಸೌಜನ್ಯ ತೋರಲಿಲ್ಲ ಹಾಗಾಗಿ ಟಿ.ಎಸ್.ಎಸ್. ನೆರವು ಹತ್ತು ಸಾವಿರವನ್ನು ತಿರಸ್ಕರಿಸುವ ಜೊತೆಗೆ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಪೊಲೀಸ್ ದೂರು ನೀಡಿದ್ದೇವೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದು ವಿವರಿಸಿದರು.

ಘಟನೆಯ ವಿವರ- ಹೆಗ್ಗೋಡಮನೆ ಕುಟುಂಬದ ಜಯಶೀಲ ಸದಾಶಿವ ಗೌಡರ್ ಆಗಷ್ಟ್ 18 ರಂದು ಸಿದ್ಧಾಪುರ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಮಾರ್ಗದರ್ಶನದಂತೆ 19 ರಂದು ಶಿರಸಿಯ ಟಿ.ಎಸ್.ಎಸ್. ಆಸ್ಫತ್ರೆ ಕಡವೆ ವೈದ್ಯಕೀಯ ಸಂಸ್ಥೆಯ ಆಸ್ಫತ್ರೆಗೆ ಹೆಚ್ಚಿನ ಪರೀಕ್ಷೆ, ಚಿಕಿತ್ಸೆಗೆ ರವಾನಿಸುತ್ತಾರೆ. ಅಲ್ಲಿ ಆಸ್ಫತ್ರೆಗೆ ಪ್ರವೇಶ ನೀಡದ ಻ಅಲ್ಲಿಯ ಸಿಬ್ಬಂದಿಗಳು ಆಸ್ಫತ್ರೆಯ ಹೊರಗೆ ರೋಗಿಯನ್ನು ಕಾಯಿಸುತ್ತಾರೆ. ನಂತರ ಹುಬ್ಬಳ್ಳಿ ಕೆ.ಎಂ.ಸಿ. ಯಲ್ಲಿ ಅವಶ್ಯ ಚಿಕಿತ್ಸೆ ಪಡೆಯುವ ಮೊದಲು ವಿಳಂಬವಾಗಿ ಜಯಶೀಲ ಗೌಡರ್ ಆಗಷ್ಟ್ 22 ರಂದು ಮರಣ ಹೊಂದುತ್ತಾರೆ.

ಮಾಧ್ಯಮಗೋಷ್ಥಿಯ ಪ್ರಮುಖ ಻ಅಂಶಗಳು- ನಾವೆಲ್ಲಾ ಟಿ.ಎಸ್.ಎಸ್. ನ ಸದಸ್ಯರು ಆದರೆ ನಮ್ಮಂಥ ಻಻ಅನೇಕ ಸದಸ್ಯರ ಹಣದಿಂದ ಸ್ಥಾಪನೆಯಾಗಿ ನಡೆಯುತ್ತಿರುವ ಟಿ.ಎಸ್.ಎಸ್. ಆಸ್ಫತ್ರೆಯಲ್ಲಿ ನಮಗೆ ಅವಕಾಶ, ವ್ಯವಸ್ಥೆ ಸಿಗದಿದ್ದರೆ ಸಾಮಾನ್ಯರ ಪಾಡೇನು? ಈಗಾಗಲೇ ಅವರ ಻ಅಂತ್ಯಸಂಸ್ಕಾರದ ಹಣವನ್ನು ತಿರಸ್ಕರಿಸಿ ಆಸ್ಫತ್ರೆ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ.ಸಿದ್ಧಾಪುರದಲ್ಲಿ ಲೋಕೇಶ್ ಡಾಕ್ಟರ್ ಬಿಟ್ಟರೆ ಸರ್ಕಾರಿ ಆಸ್ಫತ್ರೆಯಲ್ಲಿ ವ್ಯವಸ್ಥೆಯೂ ಇಲ್ಲ, ಚಿಕಿತ್ಸೆಯೂ ಇಲ್ಲ. ಆಪತ್ಕಾಲದಲ್ಲಿ ನಮ್ಮ ಸಂಸ್ಥೆಯ ಟಿ.ಎಸ್.ಎಸ್. ಆಸ್ಫತ್ರೆ ಇದೆ ಎಂದು ತೆರಳಿದರೆ, ಅಲ್ಲಿ ನಮಗೆ ಪ್ರವೇಶವೇ ಇಲ್ಲ, ಹುಬ್ಬಳ್ಳಿ ಕೆ.ಎಂ.ಸಿ. ಅವ್ಯವಸ್ಥೆಯ ಕೊಂಪೆ ಇಂಥ ಻ಅವ್ಯವಸ್ಥೆ, ತೊಂದರೆಗಳನ್ನು ಕೇಳಲು ಸರ್ಕಾರ, ಜನಪ್ರತಿನಿಧಿಗಳಿಲ್ಲವೆ? ಹೀಗಾದರೆ ಜನಸಾಮಾನ್ಯರ ಪಾಡೇನು? ಇದಕ್ಕೆ ನ್ಯಾಯ ದೊರಕಿಸುವವರ್ಯಾರು? -ಸಿ.ಎಸ್. ಗೌಡರ್,ನಿವೃತ್ತ ನೌಕರರ ಸಂಘದ ಻಻ಅಧ್ಯಕ್ಷ

ಸಿದ್ಧಾಪುರದಲ್ಲಿ ಸರ್ಕಾರಿ, ಖಾಸಗಿ ಆಸ್ಫತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಿಗಬೇಕು. ಅನಿವಾರ್ಯ ಪ್ರಸಂಗಗಳಲ್ಲಿ ಉಪಯೋಗಕ್ಕೆ ಬಾರದ ಇಲ್ಲಿಯ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸುವತ್ತ ಸರ್ಕಾರ ಗಮನ ಹರಿಸಬೇಕು -ಪರಮೇಶ್ವರಯ್ಯ ಕಾನಳ್ಳಿ ಮಠ, ಻ಅಧ್ಯಕ್ಷರು ವೀರಶೈವ ಕ್ಷೇಮಾಭಿವೃದ್ಧಿ ಸಂಘ ಸಿದ್ಧಾಪುರ.

ನಮಗೆ ಟಿ.ಎಸ್.ಎಸ್. ಅಥವಾ ಮತ್ತ್ಯಾರ ನೆರವಿನ ಻಻ಅಗತ್ಯವಿಲ್ಲ. ನಮ್ಮ ಕುಟುಂಬಕ್ಕಾದ ಻಻ಅನ್ಯಾಯ ಮತ್ಯಾವ ಕುಟುಂಬಕ್ಕೂ ಆಗಬಾರದು. ಸಾಯುವವರನ್ನು ಉಳಿಸುವ ನಮ್ಮ ಕುಟುಂಬಕ್ಕೆ ನಮ್ಮವರನ್ನೇ ಉಳಿಸಿಕೊಳ್ಳದ ಻ಅನಿವಾರ್ಯತೆಗೆ ಸಿಕ್ಕಿಸಿದ್ದು ಇಲ್ಲಿಯ ವೈದ್ಯಕೀಯ ಻ಅವ್ಯವಸ್ಥೆ, ಟಿ.ಎಸ್.ಎಸ್. ನ ಬೇಜವಾಬ್ಧಾರಿ. ಹಣ, ಖಾತೆಗೆ ಟಿ.ಎಸ್.ಎಸ್. ಸೇವೆ, ಅನಿವಾರ್ಯತೆಗೆ ಕಡವೆ ಸಂಸ್ಥೆಗೂ ಟಿ.ಎಸ್.ಎಸ್. ಗೂ ಸಂಬಂಧವಿಲ್ಲ ಎಂದರೆ…. ನಮಗಾದ ನೋವು ಇತರ ಸದಸ್ಯರಿಗೆ ಆಗಬಾರದು. ಈ ಬಗ್ಗೆ ಇತರ ಸದಸ್ಯರೂ ಎಚ್ಚೆತ್ತುಕೊಳ್ಳಬೇಕು. – ಸುಧೀರ್ ಗೌಡರ್, ತಾ.ಪಂ. ಅಧ್ಯಕ್ಷ ಸಿದ್ಧಾಪುರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *