ರವೀಂದ್ರ, ವಿ.ಎನ್. ನಾ., ಕೆ.ಜಿ. ನಾ.? ಹೊಸಬಾಳೆ, ದೊಡ್ಡೂರು ಯಾರಾಗ್ತಾರೆ ಡಿ.ಸಿ.ಸಿ. ಅಧ್ಯಕ್ಷ?

ಕಾಂಗ್ರೆಸ್ ನಲ್ಲಿ ಬಣಗಳ ಮೇಲಾಟ, ಬಿ.ಜೆ.ಪಿ.ಯಲ್ಲಿ ಹಿಂದುತ್ವವಾದಿಗಳ ಜಾತಿ ಪ್ರೇಮ, ಪ್ರಾಮಾಣಿಕ ಕಾರ್ಯಕರ್ತರ ಉಪೇಕ್ಷೆ ಗಳು ಸುದ್ದಿಮಾಡುತ್ತಿರುವಂತೆ ಜನತಾದಳದಲ್ಲಿ ಪಕ್ಷದ ಅಳಿವು ಉಳಿವಿನ ವಿಚಾರ ಈಗ ಚರ್ಚೆಯ ವಿಷಯಗಳಾಗಿವೆ.

ಶಿರಸಿಯಲ್ಲಿ ಬಿ.ಜೆ.ಪಿ ಯೊಂದಿಗೆ ರಾತ್ರಿ ಸ್ನೇಹ ಇಟ್ಟುಕೊಂಡಿದ್ದ ಕೆಲವು ವಲಸಿಗರು ಈಗ ತಮ್ಮ ನಾಯಕಿಯೊಬ್ಬರನ್ನು ಕರೆತರುವ ಮೂಲಕ ಬಿ.ಜೆ.ಪಿಗೆ ನೆರವಾಗಲು ಟೊಂಕಕಟ್ಟಿ ನಿಂತಿದ್ದಾರೆ ಎನ್ನುವ ವಿದ್ಯಮಾನ ಚರ್ಚೆಯಾಗುತ್ತಿರುವಂತೆ ವಲಸೆ ಅಭ್ಯರ್ಥಿಗಳ ಆಗಮನದ ಸುದ್ದಿ ತಿಳಿದ ಕೆಲವು ಕಾಂಗ್ರೆಸ್ ಮುಖಂಡರು ಬಿ.ಜೆ.ಪಿ. ಸೇರಲಿದ್ದಾರೆ ಎನ್ನುವ ಗಾಳಿಸುದ್ದಿ ಹಾರಾಡುತ್ತಿದೆ. ಈ ಬಹಿರಂಗ ವಿದ್ಯಮಾನಗಳ ನಡುವೆ ಮತ್ತೊಂದು ಪ್ರಮುಖ ವಿದ್ಯಮಾನ ಸದ್ದಿಲ್ಲದೆ ನಡೆಯುತ್ತಿದೆ.

ಅದೆಂದರೆ…… ಅದೂ ಕೂಡಾ ಕಾಂಗ್ರೆಸ್ ವಿಚಾರವೇ. ನಿರೀಕ್ಷೆಯಂತೆ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ತಮ್ಮ ಮೂರು ಅವಧಿಯ ನಿರಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಯ ಕುರ್ಚಿ ಬಿಡುತಿದ್ದಾರೆ. ಭೀಮಣ್ಣ ಅವಧಿ ಮುಕ್ತಾಯದನಂತರ ಡಿ.ಸಿ.ಸಿ. ಅಧ್ಯಕ್ಷರಾಗುವವರ್ಯಾರು? ಎನ್ನುವ ವಿಚಾರ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ರವೀಂದ್ರ ನಾಯ್ಕ, ವೆಂಕಟೇಶ ಹೆಗಡೆ ಹೊಸಬಾಳೆ, ದೀಪಕ್ ದೊಡ್ಡೂರು, ವಿ,ಎನ್. ನಾಯ್ಕ, ಕೆ.ಜಿ. ನಾಗರಾಜ್ ಇವರಲ್ಲಿ ಡಿ.ಸಿ.ಸಿ. ಅಧ್ಯಕ್ಷರಾಗುವವರ್ಯಾರು? ಎನ್ನುವ ಪ್ರಶ್ನೆ ಈಗ ಕುತೂಹಲ ಮೂಡಿಸಿದೆ.

ಸಿದ್ಧಾಪುರದ ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ,ಇನ್ನೊಬ್ಬ ಜಿ.ಪಂ ಮಾಜಿ ಸದಸ್ಯ ವೆಂಕಟೇಶ್ ಹೆಗಡೆ ಹೊಸಬಾಳೆ ಶಿರಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಪ್ರಯತ್ನಿಸುತಿದ್ದು ವಿ.ಎನ್. ನಾಯ್ಕ ಕೆ.ಪಿ.ಸಿ.ಸಿ. ಶಿರಸಿ ಉಸ್ತುವಾರಿ ಸುಷ್ಮಾ ರೆಡ್ಡಿಯವರ ಅಭ್ಯರ್ಥಿಯಾಗಿದ್ದರೆ, ವೆಂಕಟೇಶ್ ಹೆಗಡೆ ಕಾಂಗ್ರೆಸ್ ರಾಜ್ಯಮುಖಂಡರ ಸಂಪರ್ಕದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರೊಬ್ಬರ ಅಭ್ಯರ್ಥಿ ಎನ್ನಲಾಗುತ್ತಿದೆ.!

ಶಿರಸಿಯ ದೀಪಕ್ ದೊಡ್ಡೂರು,ಸಿದ್ಧಾಪುರದ ಮಾಜಿ ಬ್ಲಾಕ್ ಅಧ್ಯಕ್ಷ ಕೆ.ಜಿ. ನಾಗರಾಜ್ ದೇಶಪಾಂಡೆಯವರ ಅಭ್ಯರ್ಥಿಗಳಾಗಿದ್ದು ಇವರಿಗೆ ಈಗಿನ ಅಧ್ಯಕ್ಷರ ಭೀಮಬಲದ ಅಭಯವಿದೆ ಎನ್ನಲಾಗುತ್ತಿದೆ.

ಈ ಹೆಸರುಗಳ ಮಧ್ಯೆ ತೇಲಿಬರುತ್ತಿರುವ ಇನ್ನೊಂದು ಹೆಸರು ಎ. ರವೀಂದ್ರ ಯಾನೆ ರವೀಂದ್ರನಾಥ್ ನಾಯ್ಕ ಈ ಬಣಗಳ ಬೆಂಬಲವಿಲ್ಲದೆ ನೇರವಾಗಿ ರಾಜ್ಯ ಮುಖಂಡರ ಅಭಯದಿಂದ ಡಿ.ಸಿ.ಸಿ. ಅಧ್ಯಕ್ಷರಾಗುವ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಬಿ.ಕೆ. ಹರಿಪ್ರಸಾದ್, ಕಾಗೋಡು ತಿಮ್ಮಪ್ಪ ಸೇರಿದಂತೆ ಕೆಲವು ಪ್ರಮುಖ ನಾಯಕರು ರವೀಂದ್ರರ ಬೆನ್ನಿಗೆ ನಿಂತಿದ್ದು ಉತ್ತರ ಕನ್ನಡ ಜಿಲ್ಲೆಯ ಜಮೀನ್ಧಾರಿ ರಾಜಕಾರಣ ಮತ್ತು ಚುನಾವಣೆ ವೇಳೆಯ ವಲಸೆ ರಾಜಕಾರಣಕ್ಕೆ ವಿರುದ್ಧವಾಗಿ ಅವಿರತ ಹೋರಾಟಗಾರ, ಜನಪರ ಚಿಂತನೆಗಳ ರವೀಂದ್ರ ನಾಯ್ಕ ರೆಡ್ಡಿ ಮತ್ತು ದೇಶಪಾಂಡೆ ಗಳ ಹಣದ ರಾಜಕೀಯಕ್ಕೆ ವಿರುದ್ಧವಾಗಿ ಗುಣದ ರಾಜಕೀಯದ ಮೂಲಕ ಸೊರಗಿರುವ ಡಿ.ಸಿ.ಸಿ. ಗೆ ಜೀವತುಂಬುವ ಜವಾಬ್ಧಾರಿ ಹೊರಲಿದ್ದಾರೆ ಎನ್ನಲಾಗುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *