v.s.hegde death-ಆಘಾತತಂದ ಸಾವುಗಳು

ದೇಶ, ರಾಜ್ಯದಾದ್ಯಂತ ಸಾವುಗಳ ಸರಪಳಿ ಮುಂದುವರಿದಿದೆ. ಶಾಸಕರು, ಸಂಸದರ ಸಾವು-ನೋವುಗಳ ನಡುವೆ ಸಹೃಯಿ ಅಧಿಕಾರಿಗಳಾಗಿದ್ದ ವಿ.ಎಸ್. ಹೆಗಡೆ ಕಾನಗೋಡು, ಎಲ್.ಐ.ಸಿ. ಉಪವ್ಯಸ್ಥಾಪಕ ಸತೀಶ್ ಶಾನಭಾಗ ಸಾವು ಹಲವರನ್ನು ಕಾಡಿವೆ. ಸಿದ್ಧಾಪುರದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಾಗಿ ಕೆಲಸ ಮಾಡಿ ಇಲ್ಲಿಂದ ವರ್ಗಾವಣೆಯಾಗಿ, ಪದೋನ್ನತಿ ಹೊಂದಿದ್ದ ವಿ.ಎಸ್. ಹೆಗಡೆ ಜನಾನುರಾಗಿ ವ್ಯಕ್ತಿಯಾಗಿ, ಜನಪರವಾಗಿ ಕೆಲಸ ಮಾಡಿ ಇದೇ ವರ್ಷ ನಿವೃತ್ತಿಹೊಂದಿದ್ದರು. ಕರುಳು ಕ್ಯಾನ್ಸರ್ ಗೆ ತುತ್ತಾಗಿದ್ದ ಹೆಗಡೆ ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಿ ಅಲ್ಲಿಯೇ ಚಿಕಿತ್ಸೆ ಪಡೆಯುತಿದ್ದರು ಇಂದು ಬೆಳಿಗ್ಗೆ ನಿಧನರಾದ ಅವರ ಪಾರ್ಥಿವಶರೀರ ಇಂದು ರಾತ್ರಿ ಶಿರಸಿ ಕಾನಗೋಡಿಗೆ ಬರಲಿದ್ದು ನಾಳೆ ಮುಂಜಾನೆ 9.30 ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಲಾಗಿದೆ.

ಎಲ್.ಐ.ಸಿ. ಗೆ ಹಾನಿ- ಎಲ್.ಐ.ಸಿ.ಏಜೆಂಟರಾಗಿ ಸೇವೆ ಸಲ್ಲಿಸಿದ್ದ ಷಣ್ಮುಖ ಮಡಿವಾಳ ಿದೇ ವಾರ ನಿಧನರಾಗಿದ್ದಾರೆ. ಅವರು ಕರೋನಾ ಕ್ಕೆ ತುತ್ತಾಗಿರುವ ವಿಚಾರ ಅವರ ಅಂತ್ಯ ಸಂಸ್ಕಾರದ ನಂತರ ಸುದ್ದಿಯಾಗಿದೆ. ಖುಷಿಯ ಸಂಗತಿ ಎಂದರೆ ಷಣ್ಮುಖ ಮಡಿವಾಳರ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳು, ಶವ ಸಂಸ್ಕಾರದಲ್ಲಿ ಪಾಲ್ಗೊಂಡ ಬಹುತೇಕ ಎಲ್ಲರ ರ್ಯಾಪಿಡ್ ಟೆಸ್ಟ್ ಮಾದರಿಯಲ್ಲಿ ಕರೋನಾ ದೃಢಪಟ್ಟಿಲ್ಲ.

ಸಿದ್ಧಾಪುರ ಸಾಯಿನಗರದ ಎಲ್.ಐ.ಸಿ. ಏಜೆಂಟ್ ಷಣ್ಮುಖ ಸಾವಿನ ಮಾರನೇ ದಿನ ಇದೇ ಸಾಯಿನಗರದ ನಿವಾಸಿ, ಸಾಗರ ಎಲ್.ಐ.ಸಿ. ಕಛೇರಿಯ ಉಪ ವ್ಯವಸ್ಥಾಪಕ ಸತೀಶ್ ಶಾನಭಾಗ ನಿಧನ ಹಲವರ ಶೋಕಕ್ಕೆ ಕಾರಣವಾಗಿದೆ. ಉತ್ತಮ ವ್ಯಕ್ತಿ- ಮಿತಭಾಷಿಯಾಗಿದ್ದ ಸತೀಶ ಶಾನಭಾಗ ಹೃದಯಾಘಾತದಿಂದ ಮೃತಪಟ್ಟಿರುವುದು ಹಲವರ ನೋವಿಗೆ ಕಾರಣವಾಗಿದೆ.

ಎಸ್.ಪಿ.ಬಿ.- ಹಲವು ದಿವಸಗಳ ದೀರ್ಘ ಅನಾರೋಗ್ಯದಿಂದ ಬಳಲಿದ ಗಾಯಕ ಎಸ್. ಪಿ.ಬಿ. ನಿಧನ ನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಎಸ್.ಪಿ. ಬಾಲಸುಬ್ರಮಣ್ಯಂ ಹಲವು ಭಾಷೆಗಳ ಶ್ರೇಷ್ಠ ಗಾಯಕರಾಗಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಚಿತ್ರಗಳಿಗೆ ಹಾಡಿರುವುದು ಅವರ ಸಾಧನೆಗೆ ಸಾಕ್ಷಿ.

ಸಿದ್ದಾಪುರ: ತಾಲೂಕಿನ ಬಾಳೇಸರ ಸಮೀಪದ ಕಲ್ಮನೆಯ ನಾಗವೇಣಿ ಪರಮೇಶ್ವರ ಭಟ್ಟ (82) ಗುರುವಾರ ನಿಧನಹೊಂದಿದರು.
ಅವರಿಗೆ ಮೂವರು ಪುತ್ರರು,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವಿದೆ.

ಎಸ್.ಪಿ.ಬಿ. ಬಾಲಸುಬ್ರಹ್ಮಣ್ಯಂ ಶರೀರ ಹೊರಟುಹೋದರೂ
ಶಾರೀರ ನಮ್ಮ ನಡುವೆ ಇರುತ್ತದೆ : ಅರವಿಂದ ಕರ್ಕಿಕೋಡಿ
ಕಾರವಾರ: ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನ ಕನ್ನಡಕ್ಕೆ ಬಹು ದೊಡ್ಡ ನಷ್ಟ. ಬಹುಭಾಷಾ ಗಾಯಕರಾದರೂ ಕನ್ನಡವನ್ನೇ ಉಸಿರಾಡುತ್ತಿದ್ದ ಅವರು ಈ ಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಸಂತಾಪ ಸೂಚಿಸಿದ್ದಾರೆ.
ಯುವ ಗಾಯಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಎಸ್.ಪಿ.ಬಿ. ಅವರು ತನಗೆ ಮುಂದಿನ ಜನ್ಮವೊಂದಿದ್ದರೆ ಕರ್ನಾಟಕದಲ್ಲೇ ಹುಟ್ಟುತ್ತೇನೆ ಅನ್ನುವ ಅವರ ಹೃದಯಭಾವ ಕನ್ನಡಿಗರನ್ನು ಭಾವುಕರನ್ನಾಗಿಸುತ್ತಿತ್ತು. ಬಾಲಸುಬ್ರಹ್ಮಣ್ಯಂ ಅವರನ್ನು ಈ ನೆಲ ಸದಾ ಸ್ಮರಿಸುತ್ತದೆ. ಅವರ ಶರೀರ ಹೊರಟು ಹೋದರೂ ಶಾರೀರ ನಮ್ಮ ನಡುವೆ ಸದಾ ಇರುತ್ತದೆ ಎಂದು ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *