11 ವರ್ಷ ಗಳಲ್ಲಿ 16 ಬಾರಿ ದಾಖಲೀಕರಣ! ಕೊನೆಗೂ ಜಿವನಾಧಾರವಾಗದ ಆಧಾರ್‍ನಿಂದ ತಬರನಾದ ಶ್ರೀಪತಿಯ ಕಥೆ

ಶಿವರಾಮ ಕಾರಂತರ ತಬರ ಭೂಮಿಗಾಗಿ ಹೋರಾಡಿ ಸತ್ತ ಕಥೆ ಸಾಹಿತ್ಯದಲ್ಲಿ ಛಾಪು ಮೂಡಿಸಿದ್ದು ತೀರಾ ಹಿಂದೆ. ಆದರೆ ಈಗ ತಬರನನ್ನು ನೆನಪಿಸುವಂಥ ಆಧುನಿಕ ಆಧಾರ್ ತಬರನ ಕಥೆ ಈ ವರದಿಯ ಸಾರಾಂಶ.

ಸಿದ್ಧಾಪುರದ ವಾಜಗೋಡು ಪಂಚಾಯತ್ ನ ಹುಕ್ಕಳಿಯ ರೈತಶ್ರೀಪತಿ ಸೂರಾ ನಾಯ್ಕ 2010-11 ಸುಮಾರಿಗೆ ಎಲ್ಲರಂತೆ ಆಧಾರ್ ಕಾರ್ಡ್ ಗಾಗಿ ಸರತಿಯಲ್ಲಿ ನಿಂತು ಪೋಟೋ ದಾಖಲಾತಿಯನ್ನು ಮಾಡುತ್ತಾರೆ.ಆದರೆ ಆದಾಖಲಾತಿಯಿಂದ ಅವರಿಗೆ ಆಧಾರ್ ಚೀಟಿ ಸಿಗುವುದಿಲ್ಲ. ಈ ಮೊದಲಬಾರಿಯ ಮಾಸ್ತಿಹಕ್ಕಲಿನ ಆಧಾರ್ ದಾಖಲಾತೀಕರಣದ ನಂತರ ಕಳೆದ ಹತ್ತು ವರ್ಷಗಳಲ್ಲಿ ಒಟ್ಟೂ 16 ಬಾರಿ ಆಧಾರ್ ಕಾರ್ಡ್ ಗಾಗಿ ಇವರ ಚಿತ್ರ- ದಾಖಲೆಗಳ ಸಂಗ್ರಹಣೆ ನಡೆದಿದೆ. ಆದರೆ ಒಂದೂ ಬಾರಿ ಇವರ ಆಧಾರ್ ಕಾರ್ಡ ಇವರ ವಿಳಾಸಕ್ಕೆ ಬಂದು ತಲುಪಲಿಲ್ಲ.!
ಇಂಥ ಆಧಾರ್ ರಗಳೆಯಿಂದಾಗಿ ಶ್ರೀಪತಿ ನಾಯ್ಕರಿಗೆ ಬ್ಯಾಂಕ್ ವ್ಯವಹಾರ, ಮಕ್ಕಳ ಶಿಕ್ಷಣ,ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸೇರಿದಂತೆ ಎಲ್ಲದಕ್ಕೂ ಈ ಆಧಾರ್ ಇಲ್ಲದ ತೊಂದರೆ ಶಾಪವಾಗಿ ಕಾಡಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ನಿಂದ ಹಿಡಿದು ತಹಸಿಲ್ಧಾರರು, ಜಿಲ್ಲಾಧಿಕಾರಿಗಳ ವರೆಗೆ ಇವರ ದೂರು ತಲುಪಿದೆ ಆದರೆ ಇಡೀ ಸರ್ಕಾರಿ ವ್ಯವಸ್ಥೆ ಇವರ ಆಧಾರ ಕಾರ್ಡ್ ಸಿದ್ಧಪಡಿಸಿಕೊಡಲು ವಿಫಲವಾಗಿದೆ.

ಸರ್ಕಾರ ನೀಡಬೇಕಾದ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ಅನುಕೂಲಗಳಿಂದ ವಂಚಿತರಾಗಿರುವ ಇವರು ಈಗ ಜಿಲ್ಲಾಧಿಕಾರಿಗಳಿಗೆ ಲೀಗಲ್ ನೋಟೀಸ್ ನೀಡಿ ನಂತರ ಈ ಬಗ್ಗೆ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಇಂದು ಬಿ.ಎಸ್.ಎನ್.ಡಿ.ಪಿ. ತಾಲೂಕಾಧ್ಯಕ್ಷ ವಿನಾಯಕ ನಾಯ್ಕರ ಜೊತೆಗೆ ನಮ್ಮ ಸಮಾಜಮುಖಿ ಕಾರ್ಯಾಲಯಕ್ಕೆ ಬಂದ ಶ್ರೀಪತಿ ನಾಯ್ಕ ತಮ್ಮ ಅಳಲನ್ನು ತೋಡಿಕೊಂಡು ಸರ್ಕಾರ ನೀಡಬೇಕಾಗಿರುವ ಆಧಾರ್ ಕಾರ್ಡ್ ನೀಡದೆ ನನಗೆ ನನ್ನ ಕುಟುಂಬಕ್ಕೆ ಮಾನಸಿಕ ತೊಂದರೆ ಆರ್ಥಿಕ ಹಾನಿ ಆಗಿದೆ. ಈ ಬಗ್ಗೆ ಸೂಕ್ತಕ್ರಮ, ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಲೀಗಲ್ ನೋಟೀಸ್ ನೀಡುತ್ತೇನೆ. ನಂತರ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ ಮನವಿ ನೀಡಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ಹೋರಾಟ ಮಾಡುತ್ತೇನೆ ಎಂದರು.
ಜನಸಾಮಾನ್ಯನಿಗೆ ಗುರುತಿನ ಚೀಟಿಯಾಗಿ ಆಧಾರ್ ಕಡ್ಡಾಯ ಮಾಡಿದ ಸರ್ಕಾರ ಆಧಾರ ಚೀಟಿ ನೀಡುವ ಹೊಣೆಗಾರಿಕೆ, ಜವಾಬ್ಧಾರಿ ನಿರ್ವಹಿಸಬೇಕಲ್ಲವೆ? ಒಂದು ದಶಕದಿಂದ ಮಾನಸಿಕ, ಆರ್ಥಿಕ ಹಾನಿ ಮಾಡಿರುವ ಸರ್ಕಾರ ಇವರಿಗೆ ಪರಿಹಾರ ನೀಡಿ ಆದ ಪ್ರಮಾದ ಸರಿಪಡಿಸಬೇಕಲ್ಲವೆ? ಸಂಬಂಧಿಸಿದವರೆಲ್ಲಾ ತಾಂತ್ರಿಕ ಕಾರಣದ ನೆಪ ಕೊಡುತ್ತಾ ಸಾಗ ಹಾಕಿದರೆ ಆಗಿರುವ, ಆಗುವ ಅನ್ಯಾಯ,ಹಾನಿ ತುಂಬಿಕೊಡುವವರ್ಯಾರು? ಆಡಳಿತ ಪಕ್ಷದ ಜನಪ್ರತಿನಿಧಿಗಳು ಈ ತಬರನಿಗಾದ ಹಾನಿಗೆ ಉತ್ತರದಾಯಿಗಳಾಬೇಕಲ್ಲವೆ?

sensational news of the week-

ಬೇನಾಮಿ ಪತ್ರದ ಮೂಲಕ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು
ನಾನಲ್ಲ ಎಂದ ಕೆ.ಜಿ. ನಾಯ್ಕ!
ಸಿದ್ಧಾಪುರದ ಪೊಲೀಸ್ ಠಾಣೆಯಲ್ಲಿ ಸದಾ ಎರಡು ಗುಂಪುಗಳಿರುತ್ತವೆ ಎಂಬುದು ಬಹಿರಂಗ ಗುಟ್ಟು, ಈ ಗುಟ್ಟನ್ನು ಇಂದು ಮತ್ತೆ ಪುನರುಚ್ಛರಿಸಿದವರು
ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್.

ಇಂದು ನಡೆದ ಪೊಲೀಸ್ ವರಿಷ್ಠಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ಸೇರಿದ್ದ ಅನೇಕರು ಥರಾವರಿ ದೂರು-ದುಮ್ಮಾನಗಳನ್ನು ಹೇಳಿಕೊಂಡರು. ಹೀಗೆ ದೂರು, ದುಮ್ಮಾನ, ಆರೋಪ ಮಾಡಿದವರಲ್ಲಿ ಕಿ.ಜಿ. ನಾಯ್ಕ ಹಣಜಿಬೈಲ್ ಒಬ್ಬರು.
ಹೀಗೆ ಕೆ.ಜಿ. ನಾಯ್ಕ ಹಣಜಿಬೈಲ್ ಪತ್ರ ಬರೆದವನು ನಾನಲ್ಲ ಎಂದು ಸಮಜಾಯಿಸಿಕೊಡಲು ಒಂದು ಪ್ರಬಲ ಕಾರಣವೇ ಇದೆ. ………. ಹಳೆ ವರದಿ ನೋಡಿ, samaajamukhi you tube channel ನೋಡಿ, samajamukhi.net ಮತ್ತು samaajamukhi youtube channel ಗೆ subscribe ಆಗಿ ಸಹಕರಿಸಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *