11 ವರ್ಷ ಗಳಲ್ಲಿ 16 ಬಾರಿ ದಾಖಲೀಕರಣ! ಕೊನೆಗೂ ಜಿವನಾಧಾರವಾಗದ ಆಧಾರ್‍ನಿಂದ ತಬರನಾದ ಶ್ರೀಪತಿಯ ಕಥೆ

ಶಿವರಾಮ ಕಾರಂತರ ತಬರ ಭೂಮಿಗಾಗಿ ಹೋರಾಡಿ ಸತ್ತ ಕಥೆ ಸಾಹಿತ್ಯದಲ್ಲಿ ಛಾಪು ಮೂಡಿಸಿದ್ದು ತೀರಾ ಹಿಂದೆ. ಆದರೆ ಈಗ ತಬರನನ್ನು ನೆನಪಿಸುವಂಥ ಆಧುನಿಕ ಆಧಾರ್ ತಬರನ ಕಥೆ ಈ ವರದಿಯ ಸಾರಾಂಶ.

ಸಿದ್ಧಾಪುರದ ವಾಜಗೋಡು ಪಂಚಾಯತ್ ನ ಹುಕ್ಕಳಿಯ ರೈತಶ್ರೀಪತಿ ಸೂರಾ ನಾಯ್ಕ 2010-11 ಸುಮಾರಿಗೆ ಎಲ್ಲರಂತೆ ಆಧಾರ್ ಕಾರ್ಡ್ ಗಾಗಿ ಸರತಿಯಲ್ಲಿ ನಿಂತು ಪೋಟೋ ದಾಖಲಾತಿಯನ್ನು ಮಾಡುತ್ತಾರೆ.ಆದರೆ ಆದಾಖಲಾತಿಯಿಂದ ಅವರಿಗೆ ಆಧಾರ್ ಚೀಟಿ ಸಿಗುವುದಿಲ್ಲ. ಈ ಮೊದಲಬಾರಿಯ ಮಾಸ್ತಿಹಕ್ಕಲಿನ ಆಧಾರ್ ದಾಖಲಾತೀಕರಣದ ನಂತರ ಕಳೆದ ಹತ್ತು ವರ್ಷಗಳಲ್ಲಿ ಒಟ್ಟೂ 16 ಬಾರಿ ಆಧಾರ್ ಕಾರ್ಡ್ ಗಾಗಿ ಇವರ ಚಿತ್ರ- ದಾಖಲೆಗಳ ಸಂಗ್ರಹಣೆ ನಡೆದಿದೆ. ಆದರೆ ಒಂದೂ ಬಾರಿ ಇವರ ಆಧಾರ್ ಕಾರ್ಡ ಇವರ ವಿಳಾಸಕ್ಕೆ ಬಂದು ತಲುಪಲಿಲ್ಲ.!
ಇಂಥ ಆಧಾರ್ ರಗಳೆಯಿಂದಾಗಿ ಶ್ರೀಪತಿ ನಾಯ್ಕರಿಗೆ ಬ್ಯಾಂಕ್ ವ್ಯವಹಾರ, ಮಕ್ಕಳ ಶಿಕ್ಷಣ,ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸೇರಿದಂತೆ ಎಲ್ಲದಕ್ಕೂ ಈ ಆಧಾರ್ ಇಲ್ಲದ ತೊಂದರೆ ಶಾಪವಾಗಿ ಕಾಡಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ನಿಂದ ಹಿಡಿದು ತಹಸಿಲ್ಧಾರರು, ಜಿಲ್ಲಾಧಿಕಾರಿಗಳ ವರೆಗೆ ಇವರ ದೂರು ತಲುಪಿದೆ ಆದರೆ ಇಡೀ ಸರ್ಕಾರಿ ವ್ಯವಸ್ಥೆ ಇವರ ಆಧಾರ ಕಾರ್ಡ್ ಸಿದ್ಧಪಡಿಸಿಕೊಡಲು ವಿಫಲವಾಗಿದೆ.

ಸರ್ಕಾರ ನೀಡಬೇಕಾದ ಆಧಾರ್ ಕಾರ್ಡ್ ಇಲ್ಲದೆ ಸರ್ಕಾರಿ ಅನುಕೂಲಗಳಿಂದ ವಂಚಿತರಾಗಿರುವ ಇವರು ಈಗ ಜಿಲ್ಲಾಧಿಕಾರಿಗಳಿಗೆ ಲೀಗಲ್ ನೋಟೀಸ್ ನೀಡಿ ನಂತರ ಈ ಬಗ್ಗೆ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಇಂದು ಬಿ.ಎಸ್.ಎನ್.ಡಿ.ಪಿ. ತಾಲೂಕಾಧ್ಯಕ್ಷ ವಿನಾಯಕ ನಾಯ್ಕರ ಜೊತೆಗೆ ನಮ್ಮ ಸಮಾಜಮುಖಿ ಕಾರ್ಯಾಲಯಕ್ಕೆ ಬಂದ ಶ್ರೀಪತಿ ನಾಯ್ಕ ತಮ್ಮ ಅಳಲನ್ನು ತೋಡಿಕೊಂಡು ಸರ್ಕಾರ ನೀಡಬೇಕಾಗಿರುವ ಆಧಾರ್ ಕಾರ್ಡ್ ನೀಡದೆ ನನಗೆ ನನ್ನ ಕುಟುಂಬಕ್ಕೆ ಮಾನಸಿಕ ತೊಂದರೆ ಆರ್ಥಿಕ ಹಾನಿ ಆಗಿದೆ. ಈ ಬಗ್ಗೆ ಸೂಕ್ತಕ್ರಮ, ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಲೀಗಲ್ ನೋಟೀಸ್ ನೀಡುತ್ತೇನೆ. ನಂತರ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ ಮನವಿ ನೀಡಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ಹೋರಾಟ ಮಾಡುತ್ತೇನೆ ಎಂದರು.
ಜನಸಾಮಾನ್ಯನಿಗೆ ಗುರುತಿನ ಚೀಟಿಯಾಗಿ ಆಧಾರ್ ಕಡ್ಡಾಯ ಮಾಡಿದ ಸರ್ಕಾರ ಆಧಾರ ಚೀಟಿ ನೀಡುವ ಹೊಣೆಗಾರಿಕೆ, ಜವಾಬ್ಧಾರಿ ನಿರ್ವಹಿಸಬೇಕಲ್ಲವೆ? ಒಂದು ದಶಕದಿಂದ ಮಾನಸಿಕ, ಆರ್ಥಿಕ ಹಾನಿ ಮಾಡಿರುವ ಸರ್ಕಾರ ಇವರಿಗೆ ಪರಿಹಾರ ನೀಡಿ ಆದ ಪ್ರಮಾದ ಸರಿಪಡಿಸಬೇಕಲ್ಲವೆ? ಸಂಬಂಧಿಸಿದವರೆಲ್ಲಾ ತಾಂತ್ರಿಕ ಕಾರಣದ ನೆಪ ಕೊಡುತ್ತಾ ಸಾಗ ಹಾಕಿದರೆ ಆಗಿರುವ, ಆಗುವ ಅನ್ಯಾಯ,ಹಾನಿ ತುಂಬಿಕೊಡುವವರ್ಯಾರು? ಆಡಳಿತ ಪಕ್ಷದ ಜನಪ್ರತಿನಿಧಿಗಳು ಈ ತಬರನಿಗಾದ ಹಾನಿಗೆ ಉತ್ತರದಾಯಿಗಳಾಬೇಕಲ್ಲವೆ?

sensational news of the week-

ಬೇನಾಮಿ ಪತ್ರದ ಮೂಲಕ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು
ನಾನಲ್ಲ ಎಂದ ಕೆ.ಜಿ. ನಾಯ್ಕ!
ಸಿದ್ಧಾಪುರದ ಪೊಲೀಸ್ ಠಾಣೆಯಲ್ಲಿ ಸದಾ ಎರಡು ಗುಂಪುಗಳಿರುತ್ತವೆ ಎಂಬುದು ಬಹಿರಂಗ ಗುಟ್ಟು, ಈ ಗುಟ್ಟನ್ನು ಇಂದು ಮತ್ತೆ ಪುನರುಚ್ಛರಿಸಿದವರು
ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್.

ಇಂದು ನಡೆದ ಪೊಲೀಸ್ ವರಿಷ್ಠಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ಸೇರಿದ್ದ ಅನೇಕರು ಥರಾವರಿ ದೂರು-ದುಮ್ಮಾನಗಳನ್ನು ಹೇಳಿಕೊಂಡರು. ಹೀಗೆ ದೂರು, ದುಮ್ಮಾನ, ಆರೋಪ ಮಾಡಿದವರಲ್ಲಿ ಕಿ.ಜಿ. ನಾಯ್ಕ ಹಣಜಿಬೈಲ್ ಒಬ್ಬರು.
ಹೀಗೆ ಕೆ.ಜಿ. ನಾಯ್ಕ ಹಣಜಿಬೈಲ್ ಪತ್ರ ಬರೆದವನು ನಾನಲ್ಲ ಎಂದು ಸಮಜಾಯಿಸಿಕೊಡಲು ಒಂದು ಪ್ರಬಲ ಕಾರಣವೇ ಇದೆ. ………. ಹಳೆ ವರದಿ ನೋಡಿ, samaajamukhi you tube channel ನೋಡಿ, samajamukhi.net ಮತ್ತು samaajamukhi youtube channel ಗೆ subscribe ಆಗಿ ಸಹಕರಿಸಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *