ಪಶ್ಚಿಮ ಪದವಿಧರ ಕ್ಷೇತ್ರ ಗೆಲ್ಲುವ ಅಭ್ಯರ್ಥಿ ಯಾರು?

ರಂಗೇರಿದ ಪಶ್ಚಿಮ ಪದವೀಧರ ಕೇತ್ರದ ಪರಿಷತ್‌ ಚುನಾವಣಾ ಕಣ..!ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರೇ ಈ ಬಾರಿ ಗೆಲ್ಲುವ ಅಭ್ಯರ್ಥಿ.!!

ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿದ್ದಂತೆ ಕಣದಲ್ಲಿರುವ ಅಭ್ಯರ್ಥಿಗಳು ಅತ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದು, ನಾನಾ ಕಸರತ್ತುಗಳ ಮೂಲಕ ಪದವೀಧರರ ಓಲೈಕೆಗಾಗಿ ಹರಸಾಹಸ ಪಡುತ್ತಿದ್ದಾರೆ.ಅಂತಿಮವಾಗಿ ಕಣದಲ್ಲಿರುವ 11 ಅಭ್ಯರ್ಥಿಗಳು ಜಿಲ್ಲಾದ್ಯಂತ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರನ್ನು ಜತೆಯಲ್ಲಿರಿಸಿಕೊಂಡು ಮತದಾರರ ಓಲೈಕೆಗಾಗಿ ಅಲ್ಲಲ್ಲಿ ಸಭೆ, ಪಕ್ಷ ಸಂಘಟನೆ, ಮತದಾರರ ಭೇಟಿ, ಹಿರಿಯರ ಆಶೀರ್ವಾದ ಪಡೆಯುವಲ್ಲಿ ಶ್ರಮ ವಹಿಸುತ್ತಿದ್ದಾರೆ.

ಬಿಜೆಪಿಗೆ ಸರಕಾರದ ಬಲ–

ಬಿಜೆಪಿಯಿಂದ ಸ್ಪರ್ಧಿಸಿರುವ ಗದಗದ ಎಸ್‌.ವಿ. ಸಂಕನೂರ ಅವರು ಈಗಾಗಲೇ ಹಾವೇರಿ, ರಾಣೇಬೆನ್ನೂರ, ಹಿರೇಕೆರೂರ ಸೇರಿದಂತೆ ವಿವಿಧ ಕಡೆ ಚುರುಕಿನ ಪ್ರಚಾರ ಕೈಗೊಂಡಿದ್ದಾರೆ. ಪದವೀಧರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ಮಾಮೂ ಲಿಯಾಗಿ ಎಲ್ಲರಿಗೂ ನೀಡುತ್ತಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ಉದ್ಯೋಗ, ಉದ್ಯೋಗಮೇಳ ಆಯೋಜನೆ, ವಿವಿಧ ಇಲಾಖೆಯ ಸಿಬ್ಬಂದಿಗಳ ಸಮಸ್ಯೆಗೆ ಸ್ಪಂದಿಸಿರುವುದಾಗಿ ಸಂಕನೂರ ಹೇಳುತ್ತಿದ್ದು, ಇವು ಅವರ ಗೆಲುವಿಗೆ ಪ್ಲಸ್‌ ಪಾಯಿಂಟ್‌ ಆಗಲಿವೆ ಎಂದೇ ಎಂದು ಬಿಜೆಪಿ ಬೆಂಬಲಿಗರಲ್ಲಿ ವ್ಯಕ್ತವಾಗುವ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ‘ಕೈ’ನ ಕುಬೇರಪ್ಪರಿಗೆ ಹಿರಿಯರ ಬಲ–ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಆರ್‌.ಎಂ.ಕುಬೇರಪ್ಪನವರು ಸಹ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರ ಬೆಂಬಲ ಪಡೆದಿದ್ದಾರಲ್ಲದೆ ಈಗಾಗಲೇ ಪದವೀಧರರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿರುವ ಎಲ್ಲ ಸಮಸ್ಯೆಗಳನ್ನೂ ಈಡೇರಿಸುವ ಕುರಿತು ಪ್ರಣಾಳಿಕೆ ಬಿಡುಗಡೆ ಮಾಡಿದ್ದಷ್ಟೇ ಅಲ್ಲ ಪಕ್ಷ ಸಂಘಟನೆ ಹಾಗೂ ಸಭೆಗಳನ್ನು ಮಾಡುವ ಮೂಲಕ ಬೇರೆ ಬೇರೆ ಕಡೆಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಆಡಳಿತ ವೈಖರಿ ಹಾಗೂ ಜಾರಿಗೆ ತಂದಿದ್ದ ಯೋಜನೆಗಳು ಕುಬೇರಪ್ಪನವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂಬುದು ಕಾಂಗ್ರೆಸ್‌ ಆಪ್ತರಲ್ಲಿ ಕೇಳಿ ಬರುತ್ತಿರುವ ಅಂಶಗಳಾಗಿವೆ.

ಇನ್ನೊಂದೆಡೆ ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕೂಡ ತಮ್ಮ ಬೆಂಬಲಿಗರೊಂದಿಗೆ ಪ್ರಚಾರದಲ್ಲಿತೊಡಗಿಸಿಕೊಂಡಿದ್ದರೆ. ಒಟ್ಟಿನಲ್ಲಿ ಪಶ್ಚಿಮ ಪದವೀಧರರ ಚುನಾವಣಾ ಅಭ್ಯರ್ಥಿಗಳ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಅಕ್ಟೋಬರ್ 28 ರಂದು ನಡೆಯುವ ಮತದಾನದತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಈಗ ಕಣದಲ್ಲಿರುವ ಪ್ರಮುಖರು–* ಆರ್‌.ಎಂ ಕುಬೇರಪ್ಪ (ಕಾಂಗ್ರೆಸ್‌)* ಎಸ್‌.ವಿ ಸಂಕನೂರ (ಬಿಜೆಪಿ)* ಕಲ್ಲೂರ ಶಿವಶಂಕರಪ್ಪ ಚನ್ನಪ್ಪ (ಜೆಡಿಎಸ್‌)* ಬಿ.ಡಿ ಹಿರೇಗೌಡ್ರ* ಶಿವರಾಜ ಕಾಂಬಳೆ* ಸೋಮಶೇಖರ ಉಮರಾಣಿ* ಬಸವರಾಜ ಗುರಿಕಾರ* ಬಸವರಾಜ ಎಸ್‌ ತೆರದಾಳಈ ಪೈಕಿ ಈ ವಿಧಾನ ಪರಿಷತ್ ಚುನಾವಣೆ ನಡೆದಿರುವುದು ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪ ಹಾಗೂ ಬಿಜೆಪಿಯ ಎಸ್.ವಿ.ಸಂಕನೂರರ ನಡುವೆಯೇ. ಇಲ್ಲಿ ಜೆಡಿಎಸ್ ಕೂಡ ಆಟಕುಂಟು ಲೆಕ್ಕಕ್ಕಿಲ್ಲದ್ದು. ಇನ್ನೂ ಈ ಪಕ್ಷೇತರರು ಹೆಸರಿಗೆ ಮಾತ್ರ ಅಭ್ಯರ್ಥಿಗಳು.

ಹೀಗೆ ನಡೆಯಲಿರುವ ಈ ಚುನಾವಣೆಯಲ್ಲಿ ಮುಖ್ಯವಾಗಿ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪ ಗೆಲ್ಲುವ ಕುದುರೆಯಾಗಿದ್ದಾರೆಂದೇ ಈ ವಿಧಾನ ಪರಿಷತ್ ನಿಯಮಿತ ಅಂಕೆ-ಸಂಖ್ಯೆಯ ಮತದಾರರೇ ಹೇಳುತ್ತಿದ್ದಾರೆ.ಇರಲಿ. ಈ ಬಿಜೆಪಿಯ ಎಸ್.ವಿ.ಸಂಕನೂರರಲ್ಲವೆ ಗೆಲ್ಲುವ ಅಭ್ಯರ್ಥಿ ಎಂದು ಕೆಲ ಜನರು ಕೇಳಬಹುದು. ಅಲ್ಲವೆಂಬುದೇ ಅನಿವಾರ್ಯ ಉತ್ತರವಾಗುತ್ತದೆ ಈ ವಿಧಾನ ಪರಿಷತ್ ಚುನಾವಣೆ.ಕಾರಣವೇಕೆಂದರೆ ಈ ಚುನಾವಣೆಗೂ ಮುಂಚಿನ ಈ ಚುನಾವಣೆಗಳಲ್ಲಿ ಇದೇ ಕ್ಷೇತ್ರದಿಂದ ಅವಿರತವಾಗಿ ಗೆದ್ದು ಬರುತ್ತಿದ್ದ ಷ್ಟೇ ಅಲ್ಲ, ಸರ್ಕಾರದಲ್ಲಿ ಸಚಿವರಾಗಿ ಖಾಯಂ ಮೆರೆಯುತ್ತಿದ್ದ ಎಚ್.ಕೆ.ಪಾಟೀಲರು ಈಗಿಲ್ಲ. ಅವರು ಹಿಂಬಾಗಿಲಿನ ರಾಜಕೀಯ ಮಾಡುತ್ತಾರೆ ಎಚ್.ಕೆ.ಪಾಟೀಲ ಎಂಬ ಅಪವಾದಿಂದ ಪಾರಾಗಬೇಕಿತ್ತು. ಹಾಗಾಗಿ ಎಚ್.ಕೆ.ಪಾಟೀಲರು ಕಳೆದ ವಿಧಾನ ಸಭಾ ಚುನಾವಣೆಗೆ ನಿಂತು ಅದು ಹೇಗೋ ಗೆದ್ದು ಬಂದರು. ಈ ಹಿಂಬಾಗಿಲ ರಾಜಕೀಯದ ಪಟ್ಟದಿಂದ ಪಾರಾದರು. ಈಗ ಈ ಚುನಾವಣೆಯಲ್ಲೂ ಎಚ್.ಕೆ.ಪಾಟೀಲ ತಮ್ಮ ಹಿಂದಿದ್ದ ಆ ಚುನಾವಣಾ ಮತಗಳನ್ನು ಈಗ ಅದೇ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರಿಗೆ ಧಾರೆ ಎರೆಯುವುದು ಅನಿವಾರ್ಯವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ.ಇದೂ ಒಂದು ಮುಖ್ಯ ಕಾರಣವಾದರೂ ಆರ್.ಎಂ.ಕುಬೇರಪ್ಪ ಅವರು ತಾವೇ ಈವರೆಗೆ ಸಂಪಾದಿಸಿಕೊಂಡ ಮತಗಳು ಬೇರೇ ಇವೆ. ಇವೆಲ್ಲವೂ ಸೇರಿ ಈ ಬಾರಿ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪನವರನ್ನು ಗೆಲುವಿನ ದಡ ಮುಟ್ಟಿಸುತ್ತವೆ.ಅಲ್ಲದೇ ಆರ್.ಎಂ.ಕುಬೇರಪ್ಪ ಈ ಮೊದಲು ಇದೇ ಬಿಜೆಪಿಯಲ್ಲಿ ಕೆಲಸ ಮಾಡಿದವರು. ಆ ಕಾರಣದಿಂದ ಬಿಜೆಪಿಯಲ್ಲಿಯೂ ಆರ್.ಎಂ.ಕುಬೇರಪ್ಪರ ಮತಗಳಿವೆ ಸ್ವಂತಕ್ಕೆ. ಆ ಮತಗಳೂ ಈ ಬಾರಿ ಆರ್.ಎಂ.ಕುಬೇರಪ್ಪರನ್ನು ಕೈಹಿಡಿಯುತ್ತವಲ್ಲದೇ ಗೆಲುವಿನ ದಡ ಮುಟ್ಟಿಸುತ್ತವೆ ಎಂದೇ ಎಲ್ಲರ ಲೆಕ್ಕಾಚಾರವಾಗಿದೆಯಲ್ಲದೇ ಲೆಕ್ಕಾಚಾರದಲ್ಲಿ ಬರುವ ಬಿಜೆಪಿಯ ಈ ಎಸ್.ಬಿ.ಸಂಕನೂರರ ಮತಗಳೂ ಅನಿವಾರ್ಯವಾಗಿ ಆರ್.ಎಂ.ಕುಬೇರಪ್ಪರನ್ನು ಗೆಲುವಿನ ದಡ ಮುಟ್ಟಿಸುತ್ತವೆ ಎಂಬುದೇ ಅನಿವಾರ್ಯ ಎಲ್ಲರದೂ ಎಣಿಕೆಯಾಗಿದೆ.

ಹೀಗಿದ್ದರೂ ಆರ್.ಎಂ.ಕುಬೇರಪ್ಪರಿಗೆ ಶಿಕ್ಷಕರ ಮತಕ್ಷೇತ್ರದ ಅನಾದಿಕಾಲದಿಂದಲೂ ಎದುರಾಗಿರುವ ಬದ್ಧ ವೈರಿಯಾದ ಬಸವರಾಜ ಹೊರಟ್ಟಿಯ ಮತಗಳು ಆರ್.ಎಂ.ಕುಬೇರಪ್ಪರನ್ನು ಸೋಲಿಸಲು ಹೊಂಚು ಹಾಕಿರುವುದೂ ಇದೆ. ಈ ಹೊರಟ್ಟಿಯ ಮತಗಳು ಆರ್.ಎಂ.ಕುಬೇರಪ್ಪರನ್ನು ತುಸು ದಣಿಸಬಹುದೇ ಹೊರತುಪಡಿಸಿ ಏನೂ ಮಾಡಲಾರವು ಎಂಬ ಲೆಕ್ಕಾಚಾರವಿದೆ . ಅದಕ್ಕೆ ಕಾರಣ ಎಂದಿನ ಎಚ್.ಕೆ.ಪಾಟೀಲರ ಮತಗಳು ಅವರದೇ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರನ್ನು ಗೆಲ್ಲಿಸಬೇಕೆಂಬ ಹೈಕಮಾಂಡ್ ನ ಎಚ್ಚರಿಕೆಯೂ ಮಾತಗಳಾಗಿ ಈ ಬಾರಿ ಕೆಲಸ ಮಾಡಲಿವೆ. ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪರು ಎಂದಿನ ತಮ್ಮ ಬದ್ಧ ವೈರಿಯಾದ ಜೆಡಿಎಸ್ ನ ಬಸವರಾಜ ಹೊರಟ್ಟಿಯು ತಮ್ಮ ಪಕ್ಷದ ಅಭ್ಯರ್ಥಿಗಿಂತ ಬಿಜೆಪಿಯ ಎಸ್.ಬಿ.ಸಂಕನೂರರನ್ನು ಗೆಲಿಸುವ ಹವಣಿಕೆಯಲ್ಲಿದ್ದಾರೆ. ಆದರೆ ಬಿಜೆಪಿಯ ಎಸ್.ಬಿ.ಸಂಕನೂರರನ್ನು ಗೆಲ್ಲಿಸುವ ಎಲ್ಲಾ ಪ್ರಯತ್ನಗಳನ್ನೂ ಮೀರಿಸುತ್ತವೆ ಬಸವರಾಜ ಹೊರಟ್ಟಿಯ ಹವಣಿಕೆ .ಹಾಗಾಗಿ ಉಳಿದೆಲ್ಲಾ ಪ್ರಯತ್ನ, ಹರಸಾಹಸಗಳೇನೇ ಇರಲಿ, ಒಟ್ಟಾರೆ ಕಾಂಗ್ರೆಸ್ ನ ಆರ್.ಎಂ.ಕುಬೇರಪ್ಪ ಬಿಜೆಪಿಯ ಎಸ್.ಬಿ.ಸಂಕನೂರರನ್ನು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನವನ್ನು ತಂದುಕೊಡುತ್ತದೆಯಷ್ಟೇ ಅಲ್ಲ ಆರ್.ಎಂ.ಕುಬೇರಪ್ಪರ ಅನಾದಿಕಾಲದ ಆಸೆಯಾದ ಪರಿಷತ್ ಪ್ರವೇಶಿಸುವ ಕನಸು ನನಸಾಗಲಿದೆ..!

-# ಕೆ.ಶಿವು.ಲಕ್ಕಣ್ಣವರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *