old is gold- ಮರಳಿ ಮರೆಯಾದ ಸವಾರಿ ಬೀರುವ ಪರಿಣಾಮ ಅಪಾರ!

ಅದೆಷ್ಟೋ ದಿನಗಳಾಗಿತ್ತು ಆ ಸಿನೆಮಾ ನೋಡಬೇಕೆಂದು ಬಯಸಿ,

ವಾಸ್ತವದಲ್ಲಿ ಅದು ಜೇಕಬ್ ವರ್ಗೀಸ್ ರ ಮೂವಿ ಎನ್ನುವ ಅರಿವು ನನಗಿರಲಿಲ್ಲ. ಆ ಸಿನೆಮಾದ ಅತ್ತಾವರರ ಹಾಡು ನನ್ನಂಥ ಅನೇಕರನ್ನು ಸೆಳೆದಿತ್ತು. ಮರಳಿ ಮರೆಯಾದೆ……. ತೆರಳಿ ತೆರೆಯಾದೆ….. ಎನ್ನುವ ಮಧುರ ಹಾಡನ್ನು ಕೇಳಿ ಸಂಬ್ರಮಿಸದವರ್ಯಾರಾದರೂ ಇದ್ದರೆ ಅದು ಅವರ ದೋಷವಷ್ಟೆ.

ಇಂಥ ಚಲನಚಿತ್ರವನ್ನು ನನ್ನ ಈಗಿನ ಕಛೇರಿಯ ಮೊಟ್ಟ ಮೊದಲ ಸಿನೇಮಾವಾಗಿ ನೋಡಿದೆ, ನಿರೀಕ್ಷೆ ಹುಸಿಯಾಗಲಿಲ್ಲ. ಆ ಸಿನೆಮಾದ ಹೆಸರು ಸವಾರಿ, 2009 ರಲ್ಲಿ ಕನ್ನಡ,ತೆಲುಗು ಎರಡು ಅವತರಣಿಕೆಗಳಲ್ಲಿ ತೆರೆಗೆ ಬಂದ ಈ ಸಿನೆಮಾದ ನಿರ್ಮಾಪಕರು ಲಾಗಾಯ್ತಿನ ಸದಭಿರುಚಿಯ ನಿರ್ಧೇಶಕ ರಾಮೋಜಿ ರಾವ್.

ಶ್ರೀಮಂತ ಉದ್ಯಮಿಯ ಮಗ ಪ್ರೀತಿ (ಪ್ರಿಯತಮೆ ಡಾ. ಜಾನಕಿ) ಯನ್ನು ಹುಡುಕಿ ಬೆಂಗಳೂರು ಬಿಡುವ ನಾಯಕ, ಮಾರ್ಗಮಧ್ಯೆ ಬೈಕ್ ಕಳ್ಳನ ಸ್ನೇಹ ಮಾಡಿ, ಶಿವಮೊಗ್ಗ, ಭದ್ರಾವತಿ, ಹಾಸನ ಸಕಲೇಶ್ ಪುರಗಳನ್ನು ಸುತ್ತಾಡಿ ಮೂಡಗೆರೆಗೆ ಹೋಗುವ ಕ್ಲೈಮ್ಯಾಕ್ಸ್ ಹಂತದಲ್ಲಿ ನಕ್ಸಲೈಟ್ ರ ಸೆರೆಗೆ ಸಿಕ್ಕು ಕಾಡಿನ ಹೋರಾಟ, ಶ್ರೀಮಂತಿಕೆಯ ಶೋಕಿಗಿಂತ ವಾಸ್ತವದ ಬದುಕಿನಲ್ಲಿ ಜನಪರವಾಗಿ ಸಮಾಜಮುಖಿಯಾಗಿ ಬದುಕುವ ಅಗತ್ಯ ಮಹತ್ವವನ್ನು ಸಾರುವ ಉತ್ತಮ ಸಂದೇಶದ ಈ ಚಿತ್ರವನ್ನು ನಿರೂಪಣೆ, ಸಂಭಾಷಣೆ, ಹಾಸ್ಯ, ಭಾವನಾತ್ಮಕತೆ, ಸೇರಿದ ಹಲವು ಮೆಲೊಡ್ರಾಮಾದ ಮೂಲಕ ಹೇಳುವ ವರ್ಗೀಸರ ಪ್ರಯತ್ನ ಎಲ್ಲರಿಗೂ ಆಪ್ತವಾಗುವಂತಿದೆ.

ಪ್ರಥ್ವಿ ಯಂಥ ಅತ್ಯುತ್ತಮ ಚಿತ್ರ ನಿರ್ಧೆಶಿರುವ ಜಾಕಬ್ ಆಕಸ್ಮಿಕವಾಗಿ ಪ್ರಥ್ವಿ ಯಶಸ್ವಿಗೊಳಿಸಿದ ನಿರ್ಧೇಶಕನಲ್ಲ, ಅವರೊಬ್ಬ ಪ್ರತಿಭಾವಂಥ, ಸದಭಿರುಚಿಯ ದಿಗ್ಧರ್ಶಕ ಎನ್ನುವುದಕ್ಕೆ ತೀರಾ ಹಿಂದೆ ಸಿಕ್ಕ ಸಾಕ್ಷಿ-ದೃಷ್ಟಾಂತ ಈ ಸಿನೆಮಾ. ಇಂಥ ಅಸಂಖ್ಯ ಚಿತ್ರಗಳು ಕನ್ನಡ ಸೇರಿದಂತೆ ಭಾರತೀಯ ಚಿತ್ರಲೋಕದಲ್ಲಿ ಬಂದು ಹೋಗಿವೆ. ಇಂಥ ಸಿನೆಮಾಗಳನ್ನು ನೋಡಲೆಂದೇ ಹಿಂದೆಲ್ಲಾ ಚಿತ್ರೋತ್ಸವಗಳು ಜಿಲ್ಲಾಮಟ್ಟದಲ್ಲಿ ನಡೆಯುತಿದ್ದವು. ಈಗ ಆ ಕೊರತೆ ಇರುವುದರಿಂದ ಜನ ಯೂಟ್ಯೂಬ್, ಓಟಿಟಿ ಗಳ ಮೊರೆಹೋಗುತಿದ್ದಾರೆ.

ಹಳೆಯ ಚಿತ್ರ- ಗೀತೆಗಳ ಮೋಹದ ನನಗೆ ಬಹುಹಿಂದೆ ನೋಡಿದ ಶರಪಂಜರ, ಸಜಾಹಿ ಕಾಲಾಪಾನಿ, ಹುಲಿಯಾ ಥರದ ಸಿನೆಮಾಗಳನ್ನು ನಮ್ಮ ನ್ಯೂಸ್ ಪೋರ್ಟಲ್ ಮೂಲಕ ಪರಿಚಯಿಸುವ ಹೆಬ್ಬಯಕೆ ಹುಟ್ಟಿಕೊಂಡಿದೆ. ಆಸಕ್ತರು ತಾವು ನೋಡಿದ ಹಳೆಯ ಅದ್ಭುತ ಸಿನೆಮಾಗಳ ಬಗ್ಗೆ ಚೆಂದವಾಗಿ ಬರೆದು ಬಹುಮಾನ ಗಳಿಸಲು ವೇದಿಕೆ ನೀಡಲು ನಾವಂತೂ ಸಿದ್ಧ, ತಡವೇಕೆ ನಿಮ್ಮ ನೆಚ್ಚಿನ ಸಿನೆಮಾದ ಬಗ್ಗೆ ಬರೆದು ನುಡಿ ಯಲ್ಲಿ ಟೈಪ್ ಮಾಡಿ samajamukhi@rediffmail ಈ mail ಗೆ ಕಳುಹಿಸಿ. ಉಳಿದಂತೆ ಕುಶಲ-ಕ್ಷೇಮ ಸಾಂಪ್ರದ……. ಕನ್ನೇಶ್,

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *