old is gold- ಮರಳಿ ಮರೆಯಾದ ಸವಾರಿ ಬೀರುವ ಪರಿಣಾಮ ಅಪಾರ!

ಅದೆಷ್ಟೋ ದಿನಗಳಾಗಿತ್ತು ಆ ಸಿನೆಮಾ ನೋಡಬೇಕೆಂದು ಬಯಸಿ,

ವಾಸ್ತವದಲ್ಲಿ ಅದು ಜೇಕಬ್ ವರ್ಗೀಸ್ ರ ಮೂವಿ ಎನ್ನುವ ಅರಿವು ನನಗಿರಲಿಲ್ಲ. ಆ ಸಿನೆಮಾದ ಅತ್ತಾವರರ ಹಾಡು ನನ್ನಂಥ ಅನೇಕರನ್ನು ಸೆಳೆದಿತ್ತು. ಮರಳಿ ಮರೆಯಾದೆ……. ತೆರಳಿ ತೆರೆಯಾದೆ….. ಎನ್ನುವ ಮಧುರ ಹಾಡನ್ನು ಕೇಳಿ ಸಂಬ್ರಮಿಸದವರ್ಯಾರಾದರೂ ಇದ್ದರೆ ಅದು ಅವರ ದೋಷವಷ್ಟೆ.

ಇಂಥ ಚಲನಚಿತ್ರವನ್ನು ನನ್ನ ಈಗಿನ ಕಛೇರಿಯ ಮೊಟ್ಟ ಮೊದಲ ಸಿನೇಮಾವಾಗಿ ನೋಡಿದೆ, ನಿರೀಕ್ಷೆ ಹುಸಿಯಾಗಲಿಲ್ಲ. ಆ ಸಿನೆಮಾದ ಹೆಸರು ಸವಾರಿ, 2009 ರಲ್ಲಿ ಕನ್ನಡ,ತೆಲುಗು ಎರಡು ಅವತರಣಿಕೆಗಳಲ್ಲಿ ತೆರೆಗೆ ಬಂದ ಈ ಸಿನೆಮಾದ ನಿರ್ಮಾಪಕರು ಲಾಗಾಯ್ತಿನ ಸದಭಿರುಚಿಯ ನಿರ್ಧೇಶಕ ರಾಮೋಜಿ ರಾವ್.

ಶ್ರೀಮಂತ ಉದ್ಯಮಿಯ ಮಗ ಪ್ರೀತಿ (ಪ್ರಿಯತಮೆ ಡಾ. ಜಾನಕಿ) ಯನ್ನು ಹುಡುಕಿ ಬೆಂಗಳೂರು ಬಿಡುವ ನಾಯಕ, ಮಾರ್ಗಮಧ್ಯೆ ಬೈಕ್ ಕಳ್ಳನ ಸ್ನೇಹ ಮಾಡಿ, ಶಿವಮೊಗ್ಗ, ಭದ್ರಾವತಿ, ಹಾಸನ ಸಕಲೇಶ್ ಪುರಗಳನ್ನು ಸುತ್ತಾಡಿ ಮೂಡಗೆರೆಗೆ ಹೋಗುವ ಕ್ಲೈಮ್ಯಾಕ್ಸ್ ಹಂತದಲ್ಲಿ ನಕ್ಸಲೈಟ್ ರ ಸೆರೆಗೆ ಸಿಕ್ಕು ಕಾಡಿನ ಹೋರಾಟ, ಶ್ರೀಮಂತಿಕೆಯ ಶೋಕಿಗಿಂತ ವಾಸ್ತವದ ಬದುಕಿನಲ್ಲಿ ಜನಪರವಾಗಿ ಸಮಾಜಮುಖಿಯಾಗಿ ಬದುಕುವ ಅಗತ್ಯ ಮಹತ್ವವನ್ನು ಸಾರುವ ಉತ್ತಮ ಸಂದೇಶದ ಈ ಚಿತ್ರವನ್ನು ನಿರೂಪಣೆ, ಸಂಭಾಷಣೆ, ಹಾಸ್ಯ, ಭಾವನಾತ್ಮಕತೆ, ಸೇರಿದ ಹಲವು ಮೆಲೊಡ್ರಾಮಾದ ಮೂಲಕ ಹೇಳುವ ವರ್ಗೀಸರ ಪ್ರಯತ್ನ ಎಲ್ಲರಿಗೂ ಆಪ್ತವಾಗುವಂತಿದೆ.

ಪ್ರಥ್ವಿ ಯಂಥ ಅತ್ಯುತ್ತಮ ಚಿತ್ರ ನಿರ್ಧೆಶಿರುವ ಜಾಕಬ್ ಆಕಸ್ಮಿಕವಾಗಿ ಪ್ರಥ್ವಿ ಯಶಸ್ವಿಗೊಳಿಸಿದ ನಿರ್ಧೇಶಕನಲ್ಲ, ಅವರೊಬ್ಬ ಪ್ರತಿಭಾವಂಥ, ಸದಭಿರುಚಿಯ ದಿಗ್ಧರ್ಶಕ ಎನ್ನುವುದಕ್ಕೆ ತೀರಾ ಹಿಂದೆ ಸಿಕ್ಕ ಸಾಕ್ಷಿ-ದೃಷ್ಟಾಂತ ಈ ಸಿನೆಮಾ. ಇಂಥ ಅಸಂಖ್ಯ ಚಿತ್ರಗಳು ಕನ್ನಡ ಸೇರಿದಂತೆ ಭಾರತೀಯ ಚಿತ್ರಲೋಕದಲ್ಲಿ ಬಂದು ಹೋಗಿವೆ. ಇಂಥ ಸಿನೆಮಾಗಳನ್ನು ನೋಡಲೆಂದೇ ಹಿಂದೆಲ್ಲಾ ಚಿತ್ರೋತ್ಸವಗಳು ಜಿಲ್ಲಾಮಟ್ಟದಲ್ಲಿ ನಡೆಯುತಿದ್ದವು. ಈಗ ಆ ಕೊರತೆ ಇರುವುದರಿಂದ ಜನ ಯೂಟ್ಯೂಬ್, ಓಟಿಟಿ ಗಳ ಮೊರೆಹೋಗುತಿದ್ದಾರೆ.

ಹಳೆಯ ಚಿತ್ರ- ಗೀತೆಗಳ ಮೋಹದ ನನಗೆ ಬಹುಹಿಂದೆ ನೋಡಿದ ಶರಪಂಜರ, ಸಜಾಹಿ ಕಾಲಾಪಾನಿ, ಹುಲಿಯಾ ಥರದ ಸಿನೆಮಾಗಳನ್ನು ನಮ್ಮ ನ್ಯೂಸ್ ಪೋರ್ಟಲ್ ಮೂಲಕ ಪರಿಚಯಿಸುವ ಹೆಬ್ಬಯಕೆ ಹುಟ್ಟಿಕೊಂಡಿದೆ. ಆಸಕ್ತರು ತಾವು ನೋಡಿದ ಹಳೆಯ ಅದ್ಭುತ ಸಿನೆಮಾಗಳ ಬಗ್ಗೆ ಚೆಂದವಾಗಿ ಬರೆದು ಬಹುಮಾನ ಗಳಿಸಲು ವೇದಿಕೆ ನೀಡಲು ನಾವಂತೂ ಸಿದ್ಧ, ತಡವೇಕೆ ನಿಮ್ಮ ನೆಚ್ಚಿನ ಸಿನೆಮಾದ ಬಗ್ಗೆ ಬರೆದು ನುಡಿ ಯಲ್ಲಿ ಟೈಪ್ ಮಾಡಿ samajamukhi@rediffmail ಈ mail ಗೆ ಕಳುಹಿಸಿ. ಉಳಿದಂತೆ ಕುಶಲ-ಕ್ಷೇಮ ಸಾಂಪ್ರದ……. ಕನ್ನೇಶ್,

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *