

ಕಾಂಗ್ರೆಸ್ ನಿಂದ ಲಾಭ-ಪ್ರಯೋಜನ ಪಡೆದವರು ಕಾಂಗ್ರೆಸ್ ನಲ್ಲಿದ್ದು ಪಕ್ಷಕ್ಕೆ ಹಾನಿ ಮಾಡುವುದಕ್ಕಿಂತ ಪಕ್ಷ ತ್ಯಜಿಸಿ ಹೊರನಡೆದರೆ ಅದರಿಂದ ಕಾಂಗ್ರೆಸ್ ಗೆ ಲಾಭ ಎಂದು ಹೇಳಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ ಕಾಂಗ್ರೆಸ್ ನಿಂದ ಹೊರಹೋಗುವವರಿಗಿಂತ ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚು ಎಂದಿದ್ದಾರೆ.

ಸಿದ್ದಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಕ ಬಿ.ಜೆ.ಪಿ. ಇತರ ಪಕ್ಷಗಳ ಆತ್ಮಸ್ಥೈರ್ಯ ಕುಂದಿಸಲು ಪ್ರಯತ್ನಿಸುತ್ತಿದೆ. ಈ ಹಿಂದೆ ಅನ್ಯ ಪಕ್ಷಗಳ ಕಾರ್ಯಕರ್ತರನ್ನೇ ದುರ್ಬಳಕೆ ಮಾಡುತಿದ್ದ ಬಿ.ಜೆ.ಪಿ. ಸ್ಥಳೀಯ ನಾಯಕರು ಈಗ ನೇರವಾಗಿ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಮಾಡುತಿದ್ದಾರೆ.
ಬಿ.ಜೆ.ಪಿ. ಯ ಕೆಟ್ಟ ರಾಜಕೀಯ ಅರಿತಿರುವ ಷಣ್ಮುಖ ಗೌಡರಂಥ ಹಿರಿಯರು ತಮ್ಮ ಆತ್ಮೀಯರನ್ನು ಬಿ.ಜೆ.ಪಿ.ಗೆ ಕಳುಹಿಸುವ ಮೂಲಕ ದಾಟಿದ ಸಂಕವನ್ನೇ ಮುರಿಯುತಿದ್ದಾರೆ. ಕಾಂಗ್ರೆಸ್ ನಿಂದ ಅಧಿಕಾರ, ಅನುಕೂಲ, ಲಾಭ ಪಡೆದ ಧುರೀಣರು ಮಾತೃಪಕ್ಷ ತ್ಯಜಿಸಿ ಅನ್ಯ ಪಕ್ಷಕ್ಕೆ ಹೋಗುವ ವಿದ್ಯಮಾನವನ್ನು ಜನಸಾಮಾನ್ಯರು, ಮತದಾರರು ಒಪ್ಪಲಾರರು ಎಂದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






