sdp local express- ಕಣಸೆ ಅಪ್ಪೆಮಿಡಿ ಕಷಿ ಯಶಸ್ವಿ, ಗಣಪತಿ ನಾಯಕ ಪ್ರಥಮ

ಅಳಿದುಹೋಗುತ್ತಿರುವ ಸಸ್ಯ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಡಿನಾದ್ಯಂತ ಹಲವು ಆಸಕ್ತರು ಹಲವು ರೀತಿಯಲ್ಲಿ ಕಾಯಕಲ್ಪ ನಡೆಸುತ್ತಿದ್ದು ಅವುಗಳಲ್ಲಿ ಕಸಿ ಮಾಡುವ ಮೂಲಕ ಮೂಲ ಸಸ್ಯದ ಗುಣವಿಶೇಷಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ಒಂದು.

ಎಲ್ಲೆಡೆ ಪ್ರಸಿದ್ಧವಾಗಿದ್ದ ತಾಲೂಕಿನ ಹೇರೂರು ಭಾಗದಲ್ಲಿದ್ದ ಅನಂತಭಟ್ಟನ ಅಪ್ಪೆ ಎನ್ನುವ ಅಪ್ಪೆಮಾವಿನ ವೈಶಿಷ್ಠ್ಯವನ್ನು ಕೇಳಿ ದೂರದ ದಕ್ಷಿಣಕನ್ನಡದಿಂದ ಹೆಸರಾಂತ ತೋಟಗಾರಿಕಾ ತಜ್ಞ ಕೋ.ಲ.ಕಾರಂತರು( ಶಿವರಾಮ ಕಾರಂತರ ಅಣ್ಣ) ಸ್ವತ: ಬಂದು ಅದಕ್ಕೆ ಕಸಿ ಮಾಡಿ ಇಂದಿಗೂ ಅದರ ಸಂತತಿಯನ್ನು ಉಳಿಸಿರುವದು ಒಂದು ರೀತಿಯಲ್ಲಿ ಐತಿಹಾಸಿಕ ಸಂಗತಿಯೇ.
ಆ ನಿಟ್ಟಿನಲ್ಲಿ ವಡ್ಡನಗದ್ದೆಯ ಗಣಪತಿ ಹೆಗಡೆಯವರ ಪ್ರಯತ್ನವೂ ಶಾಘ್ಲನೀಯವಾದ್ದೇ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕಾಡಿನ ಬೀಜಗಳ ಸಂಗ್ರಹ, ಅವುಗಳ ನಾಟಿ, ಔಷಧೀಯ ಸಸ್ಯಗಳ ಸಂಗ್ರಹ, ಅವುಗಳ ಪಾಲನೆ ಮುಂತಾಗಿ ತಮ್ಮ ಬಹುತೇಕ ಸಮಯವನ್ನು ಈ ನಿಟ್ಟಿನಲ್ಲಿ ಮೀಸಲಿಡುತ್ತ ಬಂದಿರುವ ಗಣಪತಿ ಹೆಗಡೆ ಆಸಕ್ತಿಯಿಂದ ಕರಗತಮಾಡಿಕೊಂಡ ಕಸಿ ಕಟ್ಟುವ ವಿಧಾನವನ್ನು ವಿನೂತನ ರೀತಿಯಲ್ಲಿ ಮುಂದುವರೆಸಿಕೊಂಡು ಬಂದಿದ್ದಾರೆ. ಅದಕ್ಕೆ ಒಂದು ನಿದರ್ಶನ ಇತ್ತೀಚೆಗೆ ತಮ್ಮ ಭಾರತೀಸಂಪದ ಹಾಗೂ ಬಹುಕಾಲದಿಂದ ಅವರ ಕಾರ್ಯಗಳಿಗೆ ಬೆಂಬಲವಾಗಿರುವ ಪ್ರಯೋಗ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸ್ಥಳೀಯ ಅರಣ್ಯ ಇಲಾಖೆಯ ಸಹಕಾರದಲ್ಲಿ ಕೈಗೊಂಡ ಕಾರ್ಯ. ವಿನಾಶದಂಚಿನಲ್ಲಿರುವ ಕಣಸೆ ಅಪ್ಪೆ ಎಂದು ಸ್ಥಳಿಯರು ಕರೆಯುವ ಅಪ್ಪೆ ಮಾವಿನ ತಳಿಯೊಂದನ್ನು ಕಸಿ ಕಟ್ಟಿ ಅದರ ತಳಿಯನ್ನು ಉಳಿಸಿಕೊಳ್ಳಲು ಮುಂದಾದ ಗಣಪತಿ ಹೆಗಡೆ ಅದಕ್ಕೆ ಅರಣ್ಯ ಇಲಾಖೆಯ ಸಹಕಾರವನ್ನು ಕೋರಿದರು.

ತಾಲೂಕಿನ ಗಡಿಭಾಗದ ಸಾಗರ ತಾಲೂಕಿನ ಕಣಸೆ ಎನ್ನುವ ಗ್ರಾಮದಲ್ಲಿನ ರುಚಿ, ಸುವಾಸನೆಗಳಿಂದ ಪ್ರಸಿದ್ಧವಾದ ಈಗ ಶಿಥಿಲವಾಗುತ್ತಿರುವ ಸುಮಾರು 300 ವರ್ಷಗಳಿಗೂ ಹೆಚ್ಚು ವಯಸ್ಸಾಗಿರಬಹುದಾದ ಅಪ್ಪೆ ಮಾವಿನ ಮರದ ಆಯ್ದ ಸಣ್ಣ ಗೆಲ್ಲುಗಳಿಗೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಿದ ಕಾಡು ಮಾವಿನ ಮರದ ಸಸಿಯ ಜೊತೆ ಮೂರು ತಿಂಗಳ ಹಿಂದೆ ಕಸಿ ಕಟ್ಟಿದರು. ಆಗಿನ ಸೆಕ್ಷನ್ ಫಾರೆಸ್ಟರ್ ಮಂಜುನಾಥ ಸ್ವಾಮಿ ಹಾಗೂ ಇನ್ನಿತರರು ಸಹಕರಿಸಿದ್ದರು. ಹಳೆಯ ಮರದ ಉದ್ದನೆಯ ರೆಂಬೆಗಳ ತುದಿಯಲ್ಲಿನ ಗೆಲ್ಲುಗಳಿಗೆ ಪ್ರಯಾಸಪಟ್ಟು 16 ಕಾಡುªಮಾವಿನ ಸಸಿ ಜೊತೆ ಕಸಿ ಕಟ್ಟಿದ್ದು ನಂತರದಲ್ಲಿ ಪರೀಕ್ಷಿಸಿದಾಗ ಅವೆಲ್ಲ ಯಶಸ್ವಿಯಾಗಿವೆ. ನಂತರದಲ್ಲಿ ಶನಿವಾರ ಅರಣ್ಯ ಇಲಾಖೆಯ ಸೆಕ್ಷನ್ ಫಾರೆಸ್ಟರ್ ಮಂಜುನಾಥ ಚಿಕ್ಕಣ್ಣನವರ್, ಗಾರ್ಡ ಅಶೋಕ ರಾಥೋಡ ಹಾಗೂ ರಾಜು ದ್ಯಾಮಣ್ಣನವರ್ ಮತ್ತು ಪ್ರಯೋಗ ಸ್ವ.ಸೇ.ಸಂಸ್ಥೆಯ ಗಂಗಾಧರ ಕೊಳಗಿಯವರ ಜೊತೆಗೂಡಿ ಆ ಕಸಿಗೆಲ್ಲುಗಳನ್ನು ರೆಂಬೆಗಳಿಂದ ಕತ್ತರಿಸಿ ಸುರಕ್ಷಿತವಾಗಿ ಮರದಿಂದ ಇಳಿಸಿ, ಅರಣ್ಯ ಇಲಾಖೆಯ ಸುಪರ್ಧಿಗೆ ನೀಡಲಾಯಿತು.
ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಕೊಂಚ ವ್ಯತ್ಯಾಸವಾದರೂ ಕಟ್ಟಿದ ಕಸಿಯೇ ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ತಾಳ್ಮೆ, ನೈಪುಣ್ಯತೆ, ಆಸಕ್ತಿಯ ಫಲವಾಗಿ ಕಟ್ಟಿದ ಎಲ್ಲ ಕಸಿಯೂ ಯಶಸ್ವಿಯಾಗಿದೆ.
ಒಂದು ವಿಶಿಷ್ಠ ತಳಿ ಮತ್ತು ಅಳಿದುಹೋಗುತ್ತಿರುವ ಕಣಸೆ ಅಪ್ಪೆ ಮಾವಿನ ಸಂತತಿಯನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಕಣಸೆ ಅಪ್ಪೆಮಾವಿನ ಮರಕ್ಕೆ ಕಸಿ ಕಟ್ಟಿ ಅದರ ಸಸಿಗಳನ್ನು ಬೆಳೆಸುವ ನಿರ್ಧಾರ ಮಾಡಿದೆ. ಅದಕ್ಕೆ ಇಲ್ಲಿನ ಈ ಮೊದಲಿನ ಸೆಕ್ಷನ್ ಫಾರೆಸ್ಟರ್ ಮಂಜುನಾಥ ಸ್ವಾಮಿ, ಈಗಿನ ಸೆ.ಫಾರೆಸ್ಟರ್ ಮಂಜುನಾಥ್, ಗಾರ್ಡ ಅಶೋಕ ರಾಥೋಡ ಮತ್ತು ರಾಜು ದ್ಯಾಮಣ್ಣವರ್, ಮೊದಲಿನಿಂದ ನನ್ನ ಚಟುವಟಿಕೆಗಳಿಗೆ ಸಹಕರಿಸುತ್ತ ಬಂದ ಗಂಗಾಧರ ಕೊಳಗಿ ಅವರ ಸಹಕಾರ ಹೆಚ್ಚಿನದು. ಈ ಕಸಿ ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಯ ಉಸ್ತುವಾರಿಗೆ ನೀಡಲಾಗುತ್ತಿದೆ- ಗಣಪತಿ ಹೆಗಡೆ ವಡ್ಡಿನಗದ್ದೆ
ವಿನಾಶದಂಚಿನಲ್ಲಿರುವ ಸಸ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಶಾಘ್ಲನೀಯವಾದದ್ದು. ಇಂಥ ಕಾರ್ಯಗಳಿಗೆ ಅರಣ್ಯ ಇಲಾಖೆ ಯಾವತ್ತೂ ಸಹಕರಿಸುತ್ತದೆ. ಈ ರೀತಿಯ ಚಟುವಟಿಕೆ ನಿರಂತರವಾಗಿರಬೇಕು. ಗಣಪತಿ ಹೆಗಡೆ ಹಾಗೂ ಪ್ರಯೋಗ ಸಂಸ್ಥೆಗೆ ಅಭಿನಂದನೆಗಳು- ಮಂಜುನಾಥ ಚಿಕ್ಕಣ್ಣನವರ್- ಸೆಕ್ಷನ್ ಫಾರೆಸ್ಟರ್.

ಕವನ ಅಂತರಂಗದಿಂದ ಬರುವ ರಸಾನುಭವ – ಸು. ಮತ್ತಿಹಳ್ಳಿ

 ಕವನ ಅಂತರಂಗದಿಂದ ಹೊರಹೊಮ್ಮಿದ ಗಾಢ ರಸಾನುಭವ, ಅದು ಒತ್ತಾಯಪೂರ್ವಕವಾಗಿ ಹುಟ್ಟುವಂತದ್ದಲ್ಲ. ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇತ್ತೀಚಿಗೆ ಸಿದ್ದಾಪುರದ ಪೌರ್ಣಿಮಾ ಸಾಹಿತ್ಯಿಕ ಸಾಂಸ್ಕೃ ತಿಕ ವೇದಿಕೆ  ಇತ್ತೀಚೆಗೆ ನಿಧನರಾದ ಗಾನಗಾರುಡಿಗ ಡಾ. ಎಸ್ ಪಿ ಬಾಲಸುಬ್ರಮಣ್ಯಂ ರವರಿಗೆ ನುಡಿನಮನ ಸಲ್ಲಿಸಲು ಏರ್ಪಡಿಸಿದ ರಾಜ್ಯಮಟ್ಟದ ಅಂತರ್ಜಾಲ ಕವನ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 
  ಈ ಅಂತರ್ಜಾಲ ಕವನ ರಚನಾ ಸ್ಪರ್ಧೆಯಲ್ಲಿ ಒಟ್ಟು 48 ಕವಿಗಳು ಭಾಗವಹಿಸಿದ್ದು ಪ್ರಥಮ ಸ್ಥಾನ_ ಗಣಪತಿ ನಾಯಕ ಯಾದಗಿರಿ ಜಿಲ್ಲೆ¬. ದ್ವಿತೀಯ ಸ್ಥಾನ--ಸಾತು ಗೌಡ ಬಡಿಗೇರಿ ಅಂಕೋಲಾ,ತೃತೀಯ ಸ್ಥಾನ- ಶ್ರೀಮತಿ ಆಶಾ ಮಯ್ಯ ಪುತ್ತೂರು ದ.ಕ. ಕ್ರಮವಾಗಿ ಮೊದಲ 3 ಸ್ಥಾನ ಗಳಿಸಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರವನ್ನು ಅಂತರ್ಜಾಲದ ಮೂಲಕ ಸ್ವೀಕರಿಸಿದರು. ನಂತರದ 15 ಕವಿಗಳು ನಿರ್ಣಾಯಕರ ಮೆಚ್ಚುಗೆ ಗಳಿಸಿದ ಅಭಿನಂದನಾ ಪತ್ರ ಸ್ವೀಕರಿಸಿದರು. ನಿರ್ಣಾಯಕರಾಗಿ ಸಾಹಿತಿಗಳಾದ ಶ್ರೀಧರ ಶೇಟ್ ಶಿರಾಲಿ, ಕೂಡಿ ಚಂದ್ರಶೇಖರ ಶಿವಮೊಗ್ಗ, ರತ್ನಾಕರ ನಾಯ್ಕ ಪಾಲ್ಗೊಂಡಿದ್ದರು. ಪೌರ್ಣಿಮಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲ ಕೆ.ನಾಯ್ಕ ಕಾರ್ಯಕ್ರಮದ ನೇತೃತ್ವವಹಿಸಿ ನಾಡು ಹೊರನಾಡುಗಳಿಂದ ಸಕಾಲದಲ್ಲಿ ಕವನ ಕಳಿಸಿ ಕಾರ್ಯgಕ್ರಮ ಯಶಸ್ವಿಗೊಳಿಸಿದ ಎಲ್ಲ ಕವಿಗಳನ್ನು ಅಭಿನಂದಿಸಿದರು. ಉಪನ್ಯಾಸಕ ರತ್ನಾಕರ ನಾಯ್ಕ ನಿರ್ಣಾಯಕರ ಪರವಾಗಿ ಮಾತನಾಡಿದರು.  ಟಿ ಕೆ ಎಮ್ ಅಜಾದ್ ಸ್ವಾಗತಿಸಿದರು. ಪ್ರಕಾಶ ಮೌರ್ಯ ವಂದಿಸಿದರು.  

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *