ನಟ ಶರಣ್ ಹೇಳಿದ ಕುತೂಹಲಕರ ಗುಟ್ಟುಗಳು! & ಯುವರತ್ನ ಹಾಡು!

ಕನ್ನಡ ಚಿತ್ರರಂಗದ ಹಾಸ್ಯನಟ ಶರಣ್ ಸ್ವಯಂ ಪ್ರಯತ್ನ, ಪ್ರತಿಭೆಯಿಂದ ಯಶಸ್ಸು ಸಾಧಿಸಿದವರು. ಕನ್ನಡದ ಪ್ರತಿಭಾವಂತ ನಟ-ನಟಿಯರಾದ ಶರಣ್-ಶೃತಿ ಅಪರೂಪದ ಅಣ್ಣ-ತಂಗಿಯರು. ಸಿದ್ಧಾಪುರದ ಬೇಡ್ಕಣಿಯಲ್ಲಿ ಗುರುಶಿಷ್ಯರು ಚಿತ್ರದ ಚತ್ರೀಕರಣದ ವೇಳೆಯಲ್ಲಿ ಸಮಾಜಮುಖಿಯೊಂದಿಗೆ ಮಾತನಾಡಿದ ಶರಣ್ ಹಲವು ಸತ್ಯ-ರಹಸ್ಯ-ಗುಟ್ಟುಗಳನ್ನು ರಟ್ಟು ಮಾಡಿದರು.

ಅವರ ಸಮಾಜಮುಖಿ ಸಂದರ್ಶನದ ಮೂರು ವಿಡಿಯೋ ತುಣುಕುಗಳು ಇಲ್ಲಿವೆ.

ಯುವರತ್ನ’ ಚಿತ್ರದ ಪಾಠಶಾಲಾ ಹಾಡು ಬ್ಲ್ಯಾಕ್ ಕಾಫಿಯಂತೆ: ಸಂಗೀತ ನಿರ್ದೇಶಕ ಎಸ್.ತಮನ್

ಪುನೀತ್ ರಾಜ್ ಕುಮಾರ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಯುವರತ್ನ’ದ ಪ್ರಮುಖ ಸಾಹಿತ್ಯ ವಿಡಿಯೊ ಹಾಡು ಪಾಠಶಾಲಾ ಬಿಡುಗಡೆಯಾಗಿದೆ. ಈ ಹಾಡು ಚಿತ್ರದ ಜೀವಾಳ ಎಂದು ಹೇಳಲಾಗುತ್ತಿದ್ದು ಸಂಗೀತ ನಿರ್ದೇಶಕ ಎಸ್ ತಮನ್ ಅವರ ಸಂಗೀತದಲ್ಲಿ ಮೂಡಿಬಂದಿದೆ.

Still from Yuvaratna

ಪುನೀತ್ ರಾಜ್ ಕುಮಾರ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಯುವರತ್ನ’ದ ಪ್ರಮುಖ ಸಾಹಿತ್ಯ ವಿಡಿಯೊ ಹಾಡು ಪಾಠಶಾಲಾ ಬಿಡುಗಡೆಯಾಗಿದೆ. ಈ ಹಾಡು ಚಿತ್ರದ ಜೀವಾಳ ಎಂದು ಹೇಳಲಾಗುತ್ತಿದ್ದು ಸಂಗೀತ ನಿರ್ದೇಶಕ ಎಸ್ ತಮನ್ ಅವರ ಸಂಗೀತದಲ್ಲಿ ಮೂಡಿಬಂದಿದೆ.

ಯುವರತ್ನ ಚಿತ್ರದ ಆರಂಭಕ್ಕೆ ರಚನೆಯಾದ ಮೊದಲ ಹಾಡು ಇದಾಗಿದ್ದು ಚಿತ್ರದ ಇಡೀ ಕಥೆ ಈ ಹಾಡಿನ ಮೂಲಕ ಮುಂದುವರಿಯುತ್ತದೆ. ಪಾಠಶಾಲಾ ಹಾಡು ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಪರಿಣಾಮವನ್ನುಂಟುಮಾಡಲಿದೆ. ಅದು ರಾಷ್ಟ್ರಗೀತೆಯಂದು ನಾನು ಭಾವಿಸುತ್ತೇನೆ. ಇದೊಂಥರಾ ಬ್ಲಾಕ್ ಕಾಫಿಯಿದ್ದಂತೆ. ಪ್ರತಿಬಾರಿ ಕೇಳಿದಾಗಲೂ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಎಸ್ ತಮನ್.

ನಾನು ಬೇಸರವಾದಾಗಲೆಲ್ಲಾ ಈ ಹಾಡನ್ನು ಕೇಳುತ್ತೇನೆ, ಇದರಿಂದ ಹೊಸ ಚೈತನ್ಯ ಪಡೆಯುತ್ತೇನೆ ಎಂದು ತಮನ್ ಹೇಳುತ್ತಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಗೀತೆಗಿದ್ದು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದರೂ, ಈ ಹಾಡು ಐದು ಭಾಷೆಗಳಲ್ಲಿ ಹೊರಬರಲಿದೆ. ವಿಶಾಲ್ ಮಿಶ್ರಾ ಹಿಂದಿ ಮತ್ತು ತೆಲುಗು ಆವೃತ್ತಿಗಳಿಗೆ ಧ್ವನಿ ನೀಡಿದ್ದರೆ, ವಿಜಯ್ ಯೇಸುದಾಸ್ ಇದನ್ನು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಹಾಡಿದ್ದಾರೆ.

ಇದು ಪ್ರತಿಯೊಬ್ಬರಿಗೂ ಬೇರೆ ಭಾಷೆಯವರಿಗೂ ಇಷ್ಟವಾಗಬಹುದಾದ ಹಾಡಾಗಿರುವುದರಿಂದ ನಾವು 5 ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮನಸ್ಸಿಗೆ ಬಹಳ ಬೇಗನೆ ತಟ್ಟಬಹುದಾದ ಗೀತೆ ಇದಾಗಿದ್ದು ಕಾಲೇಜಿನ ಹಳೆಯ ದಿನಗಳನ್ನು ಮರುನೆನಪಿಸುವಂತೆ ಮಾಡಬಲ್ಲದು ಎಂದು ವಿವರಿಸುತ್ತಾರೆ.

ಯುವರತ್ನ ಚಿತ್ರದ ಪವರ್ ಆಫ್ ಯೂತ್, ನೀನಾದೆ ನಾ ಮತ್ತು ಊರಿಗೊಬ್ಬ ರಾಜ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *