ನಟ ಶರಣ್ ಹೇಳಿದ ಕುತೂಹಲಕರ ಗುಟ್ಟುಗಳು! & ಯುವರತ್ನ ಹಾಡು!

ಕನ್ನಡ ಚಿತ್ರರಂಗದ ಹಾಸ್ಯನಟ ಶರಣ್ ಸ್ವಯಂ ಪ್ರಯತ್ನ, ಪ್ರತಿಭೆಯಿಂದ ಯಶಸ್ಸು ಸಾಧಿಸಿದವರು. ಕನ್ನಡದ ಪ್ರತಿಭಾವಂತ ನಟ-ನಟಿಯರಾದ ಶರಣ್-ಶೃತಿ ಅಪರೂಪದ ಅಣ್ಣ-ತಂಗಿಯರು. ಸಿದ್ಧಾಪುರದ ಬೇಡ್ಕಣಿಯಲ್ಲಿ ಗುರುಶಿಷ್ಯರು ಚಿತ್ರದ ಚತ್ರೀಕರಣದ ವೇಳೆಯಲ್ಲಿ ಸಮಾಜಮುಖಿಯೊಂದಿಗೆ ಮಾತನಾಡಿದ ಶರಣ್ ಹಲವು ಸತ್ಯ-ರಹಸ್ಯ-ಗುಟ್ಟುಗಳನ್ನು ರಟ್ಟು ಮಾಡಿದರು.

ಅವರ ಸಮಾಜಮುಖಿ ಸಂದರ್ಶನದ ಮೂರು ವಿಡಿಯೋ ತುಣುಕುಗಳು ಇಲ್ಲಿವೆ.

ಯುವರತ್ನ’ ಚಿತ್ರದ ಪಾಠಶಾಲಾ ಹಾಡು ಬ್ಲ್ಯಾಕ್ ಕಾಫಿಯಂತೆ: ಸಂಗೀತ ನಿರ್ದೇಶಕ ಎಸ್.ತಮನ್

ಪುನೀತ್ ರಾಜ್ ಕುಮಾರ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಯುವರತ್ನ’ದ ಪ್ರಮುಖ ಸಾಹಿತ್ಯ ವಿಡಿಯೊ ಹಾಡು ಪಾಠಶಾಲಾ ಬಿಡುಗಡೆಯಾಗಿದೆ. ಈ ಹಾಡು ಚಿತ್ರದ ಜೀವಾಳ ಎಂದು ಹೇಳಲಾಗುತ್ತಿದ್ದು ಸಂಗೀತ ನಿರ್ದೇಶಕ ಎಸ್ ತಮನ್ ಅವರ ಸಂಗೀತದಲ್ಲಿ ಮೂಡಿಬಂದಿದೆ.

Still from Yuvaratna

ಪುನೀತ್ ರಾಜ್ ಕುಮಾರ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಯುವರತ್ನ’ದ ಪ್ರಮುಖ ಸಾಹಿತ್ಯ ವಿಡಿಯೊ ಹಾಡು ಪಾಠಶಾಲಾ ಬಿಡುಗಡೆಯಾಗಿದೆ. ಈ ಹಾಡು ಚಿತ್ರದ ಜೀವಾಳ ಎಂದು ಹೇಳಲಾಗುತ್ತಿದ್ದು ಸಂಗೀತ ನಿರ್ದೇಶಕ ಎಸ್ ತಮನ್ ಅವರ ಸಂಗೀತದಲ್ಲಿ ಮೂಡಿಬಂದಿದೆ.

ಯುವರತ್ನ ಚಿತ್ರದ ಆರಂಭಕ್ಕೆ ರಚನೆಯಾದ ಮೊದಲ ಹಾಡು ಇದಾಗಿದ್ದು ಚಿತ್ರದ ಇಡೀ ಕಥೆ ಈ ಹಾಡಿನ ಮೂಲಕ ಮುಂದುವರಿಯುತ್ತದೆ. ಪಾಠಶಾಲಾ ಹಾಡು ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಪರಿಣಾಮವನ್ನುಂಟುಮಾಡಲಿದೆ. ಅದು ರಾಷ್ಟ್ರಗೀತೆಯಂದು ನಾನು ಭಾವಿಸುತ್ತೇನೆ. ಇದೊಂಥರಾ ಬ್ಲಾಕ್ ಕಾಫಿಯಿದ್ದಂತೆ. ಪ್ರತಿಬಾರಿ ಕೇಳಿದಾಗಲೂ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಎಸ್ ತಮನ್.

ನಾನು ಬೇಸರವಾದಾಗಲೆಲ್ಲಾ ಈ ಹಾಡನ್ನು ಕೇಳುತ್ತೇನೆ, ಇದರಿಂದ ಹೊಸ ಚೈತನ್ಯ ಪಡೆಯುತ್ತೇನೆ ಎಂದು ತಮನ್ ಹೇಳುತ್ತಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಗೀತೆಗಿದ್ದು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದರೂ, ಈ ಹಾಡು ಐದು ಭಾಷೆಗಳಲ್ಲಿ ಹೊರಬರಲಿದೆ. ವಿಶಾಲ್ ಮಿಶ್ರಾ ಹಿಂದಿ ಮತ್ತು ತೆಲುಗು ಆವೃತ್ತಿಗಳಿಗೆ ಧ್ವನಿ ನೀಡಿದ್ದರೆ, ವಿಜಯ್ ಯೇಸುದಾಸ್ ಇದನ್ನು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಹಾಡಿದ್ದಾರೆ.

ಇದು ಪ್ರತಿಯೊಬ್ಬರಿಗೂ ಬೇರೆ ಭಾಷೆಯವರಿಗೂ ಇಷ್ಟವಾಗಬಹುದಾದ ಹಾಡಾಗಿರುವುದರಿಂದ ನಾವು 5 ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮನಸ್ಸಿಗೆ ಬಹಳ ಬೇಗನೆ ತಟ್ಟಬಹುದಾದ ಗೀತೆ ಇದಾಗಿದ್ದು ಕಾಲೇಜಿನ ಹಳೆಯ ದಿನಗಳನ್ನು ಮರುನೆನಪಿಸುವಂತೆ ಮಾಡಬಲ್ಲದು ಎಂದು ವಿವರಿಸುತ್ತಾರೆ.

ಯುವರತ್ನ ಚಿತ್ರದ ಪವರ್ ಆಫ್ ಯೂತ್, ನೀನಾದೆ ನಾ ಮತ್ತು ಊರಿಗೊಬ್ಬ ರಾಜ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *