Lr act -ಭೂಮಿ ಹಕ್ಕಿನ ಪಯಣ…. ಜಿ.ಟಿ.ಸತ್ಯನಾರಾಯಣ ಬರಹ

ನಮ್ಮವರ ಜತೆ ಭೂಮಿ ಹಕ್ಕಿನ ಪಯಣ….

ಈಗ ಒಂದು ವರ್ಷಕೂ ಹಿಂದೆ 94 ಸಿ ಅಡಿಯಲ್ಲಿ ನಮ್ಮ ಊರಿನ ಹನುಮ ಲಮಾಣಿ ಸೇರಿ 7 ಕುಟುಂಬಗಳು ಅರ್ಜಿ ಸಲ್ಲಿಸಿದ್ದರು. ಅವರಿಗೆ ಹಕ್ಕು ಪತ್ರ ದೊರಕಿರಲಿಲ್ಲ. ಆದರೆ ಈಚೆಗೆ ವಿಲೇವಾರಿಯಾಗದೇ ಉಳಿದಿದ್ದ ಸಾಕಷ್ಟು ಕಡತಗಳನ್ನು ಸಾಗರದ ನೂತನ ತಹಸೀಲ್ದಾರ್ ಚಂದ್ರಶೇಖರ್ ಸಹಿ ಹಾಕಿ ವಿಲೇವಾರಿ ಮಾಡಿದ್ದಾರೆ. ಸಾಗರ ಶಾಸಕರು ಹಕ್ಕು ಪತ್ರ ವಿತರಣೆಗೆ ಕೋವಿಡ್ ಕಾರಣಕ್ಕೆ ಮೊನ್ನೆ ಮೊನ್ನೆ ಸಾಂಕೇತಿಕವಾಗಿ ವಿತರಣೆ ಮಾಡಿದ್ದರು.

ಮಾಹಿತಿ ತಿಳಿದುಕೊಂಡು ನಾನು ನಮ್ಮೂರಿನ ಈ ಕುಟುಂಬಗಳಿಗೆ ಮಾಹಿತಿ ನೀಡಿ ಈ ದಿನ ಸಮಯ ನಿಗದಿ ಮಾಡಿಕೊಂಡು ಅಧಿಕಾರಿಗಳಿಗೆ ಮುನ್ನ ಮಾಹಿತಿ ನೀಡಿ ಈಗ ಹಕ್ಕು ಪತ್ರವನ್ನ ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆದರು. ಈ ಹಕ್ಕು ಪತ್ರ ಪಟ್ಟಿಯಲ್ಲಿ ನನ್ನದೂ ಒಂದು ಇತ್ತು ಎನ್ನುವುದು ಸತ್ಯ.ಒಂದು ಅಡಿ ಭೂಮಿಯ ಒಡೆತನ ಹೊಂದಿರದ ಹನುಮ ಲಮಾಣಿ, ಗಣಪತಿ, ಮಹಾಬಲೇಶ್ವರ, ಜಯಮ್ಮ, ಶಿವರಾಮ, ಫಿಲಿಪ್ ರವರಿಗೆ ತಮ್ಮ ವಾಸದ ಮನೆ ಹಕ್ಕು ಪತ್ರ ಪಡೆದ ಖುಷಿಗೆ ಜತೆಯಾದ ಸಾಕ್ಷಿಯಾದ ಕ್ಷಣ ಇದು. ನಮ್ಮ ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಿಗರಾದ ರಾಘವೇಂದ್ರ ಮತ್ತು ಸಹಾಯಕರಾದ ಶ್ರೀಕಾಂತ್ ಮತ್ತು ಬಸವರಾಜ ಈ ಸೇವೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಿರುವುದು ನಮಗೆ ಖುಷಿ ತಂದಿದೆ.

ಮಾನ್ಯ ಶಾಶಕರು ಹಕ್ಕು ಪತ್ರ ಶೀಘ್ರ ವಿಲೇವಾರಿಗೆ ಸೂಚನೆ ನೀಡಿರುವುದು ಇಲ್ಲಿ ಕೆಲಸ ಮಾಡಿದೆ. ಶಾಸಕರನ್ನ ಅಭಿನಂದಿಸುವೆ. ಮಾನ್ಯ ಶಾಸಕರಿಗೆ ನನ್ನದೊಂದು ವಿಶೇಷ ವಿನಂತಿ. ಶರಾವತಿ ನದಿ ದಂಡೆಯ ಬಹುತೇಕ ಗ್ರಾಮಗಳಲ್ಲಿ 94 ಸಿ ಹಕ್ಕು ಪತ್ರ ಕೊಡಲು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇಯ ಅಗತ್ಯ ಇದೆ. ಉದಾಹರಣೆಗೆ ತುಮರಿ ಗ್ರಾಮ ಪಂಚಾಯಿತಿಯ ವಳಗೆರೆ, ಕಳೂರು, ಚದರವಳ್ಳಿ ಗ್ರಾಮಗಳ ಸುಮಾರು 550 ಅರ್ಜಿ ವಿಲೇವಾರಿ ಆಗದೇ ಉಳಿದಿದೆ. ಇದಕ್ಕೆ ಕಾರಣ 1970 ರಲ್ಲಿ ಮಾಡಿರುವ ವನ್ಯಜೀವಿ ವಲಯ ನೋಟಿಫಿಕೇಶನ್ ತೊಡಕಗಳು. ಒಂದು ಗ್ರಾಮದಲ್ಲಿ ಒಂದಿಷ್ಟು ಭಾಗ ಅರಣ್ಯ ಬಂದರೂ ಜಂಟಿ ಸರ್ವೇ ಕಾರಣ ನೀಡಿ ಕಡತಗಳು ಬಾಕಿ ಉಳಿಸಲಾಗಿದೆ. ಜಂಟಿ ಸರ್ವೇ ಆಗುವುದಿಲ್ಲ. ಇವರಿಗೆ ಹಕ್ಕು ಪತ್ರ ಬರುವುದಿಲ್ಲ ಎನ್ನುವ ಹಾಗಿದೆ ಈ ಸ್ಥಿತಿ. ಜಂಟಿ ಸರ್ವೇ ಮಾಡಿ ಅರ್ಹರಿಗೆ ಹಕ್ಕು ಪತ್ರ ನೀಡಿ ಉಳಿದಂತೆ ಜನವಸತಿ ಪ್ರದೇಶ ಹೊರಗೆ ಇಡುವ ನೋಟಿಫಿಕೇಶನ್ ತಿದ್ದುಪಡಿಯ ಹೆಜ್ಜೆಯನ್ನು ಇಡಲು ಶಾಸಕರು ಮುಂದಾಗಬೇಕು ಎಂದು ವಿನಂತಿಸುವೆ.

ಹಕ್ಕು ಪತ್ರ ಪಡೆದ ಈ ಹೊತ್ತಲಿ
ಮಹತ್ತರ ಕಾನೂನು ಜಾರಿ ಮಾಡಿದ ಮತ್ತು ತಿದ್ದುಪಡಿ ಮಾಡಿದ ಸಿದ್ದರಾಮಯ್ಯ ಮತ್ತು ಕಾಗೋಡು ರವರನ್ನು ನೆನೆಯುತ್ತಾ ವಿರಮಿಸುವೆ. ಚೋಮನಿಗೆ ಇಂದು ಆತನ ವಾಸಿಸುವ ಮನೆಗೆ ಹಕ್ಕು ಬಂತು.

ಅಧಿಕಾರ ಗುರಿಯಲ್ಲ ಮಾರ್ಗ ಮಾತ್ರ
ಅದು ಇರಲಿ ಬಿಡಲಿ ನಾವು ಜನರ ಜತೆ

      -ಜಿ. ಟಿ ಸತ್ಯನಾರಾಯಣ ಕರೂರು.
        16-04-2021

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *