prashant kishor interview-ಅಮಿತ್ ಶಾ ಕೆಲಸಕ್ಕೆ ಬಾರದ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್: ಪ್ರಶಾಂತ್ ಕಿಶೋರ್

ಅಮಿತ್ ಶಾರ ಅಭಿಮಾನಿಗಳು ಮರೆಯದೇ ಓದಿರಿ-ಪುರುಷೋತ್ತಮ ಬಿಳಿಮಲೆ:

ಹೊಸದಿಲ್ಲಿ: “ನಾನು ದುರಹಂಕಾರಿ ಎಂದು ಭಾವಿಸಬೇಡಿ, ಆದರೆ ಅಮಿತ್ ಶಾ ಅತ್ಯಂತ ಓವರ್-ರೇಟೆಡ್ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್ ಆಗಿದ್ದಾರೆ. ಅವರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ಬಹಳ ಚಾಣಾಕ್ಷ ಚುನಾವಣಾ ತಂತ್ರಜ್ಞ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಅವರಿಗೆ ತೋರಿಸಲು ಯಾವ ಸಾಧನೆಯಿದೆ?” ಎಂದು ಪಶ್ಚಿಮ ಬಂಗಾಳದಲ್ಲಿ ಅಮೋಘ ಜಯ ಸಾಧಿಸಿದ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

‘ದಿ ಟೆಲಿಗ್ರಾಫ್‍’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗೆ ಯಾವತ್ತೂ ಇತ್ತು. ಆದರೆ ಹೆಚ್ಚಿನವರು ನಮ್ಮನ್ನು ನಂಬಿರಲಿಲ್ಲ. ಅಬ್ಬರದ ಪ್ರಚಾರ ಯಾವತ್ತೂ ಚುನಾವಣೆಯಲ್ಲಿ ಗೆಲುವು ತಂದು ಕೊಡುವುದಿಲ್ಲ. ಇದು ಭಾಗಶಃ ಬಿಜೆಪಿಯ ದುರಹಂಕಾರದ, ಪ್ರಮುಖವಾಗಿ ಅಮಿತ್ ಶಾ ಅವರಂತಹ ನಾಯಕರ ದುರಹಂಕಾರದ ಪರಿಣಾಮ. ಅವರೆಲ್ಲ ಆಕಾಶದಲ್ಲಿಯೇ ಹಾರಾಡಿ, ನೆಲವನ್ನು ಮರೆತು ಬಿಟ್ಟರು. ಬಿಜೆಪಿ ತನ್ನನ್ನು ವಿಜೇತ ಎಂದು ಘೋಷಿಸಿಕೊಂಡೇ ಚುನಾವಣಾ ಕಣಕ್ಕಿಳಿಯುತ್ತದೆ, ಅವರು ಬಹಳಷ್ಟು ಸದ್ದು ಮಾತ್ರ ಮಾಡುತ್ತಾರೆ,” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಅಮಿತ್ ಶಾ ಅವರಿಗೆ ವೇದಿಕೆಯಲ್ಲಿ ನಿಲ್ಲಿಸಲು ಅತ್ಯಂತ ವರ್ಚಸ್ವಿ ನಾಯಕ ನರೇಂದ್ರ ಮೋದಿ ಇದ್ದಾರೆ. ಅವರ ಕೈಯ್ಯಲ್ಲಿ ಅಪಾರ ಸಂಪನ್ಮೂಲಗಳೂ ಇವೆ. ಸಂಘ ಬೆಂಬಲಿತ ಪಕ್ಷದ ದೊಡ್ಡ ಜಾಲವೂ ಇದೆ, ಸರಕಾರ ಮತ್ತದರ ಏಜನ್ಸಿಗಳ ಬೆಂಬಲವೂ ಇದೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಚುನಾವಣಾ ಆಯೋಗವೂ ಇದೆ. ಆದರೂ ಅವರು ಸೋತರು. ಇದು ನಿಮಗೆ ಅಮಿತ್ ಶಾ ಅವರ ಅಸಲಿ ಸಾಮರ್ಥ್ಯ ಎಂದು ತೋರಿಸುತ್ತದೆ ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಇದು ನನ್ನ ಮತ್ತು ಅಮಿತ್ ಶಾ ಅವರ ನಡುವಿನ ಮೂರನೇ ಮುಖಾಮುಖಿ ಹಾಗೂ ಮೂರು ಬಾರಿಯೂ ನಾನು ಅವರನ್ನು ಸೋಲಿಸಿದ್ದೇನೆ- ಬಿಹಾರದಲ್ಲಿ ೨೦೧೫ರಲ್ಲಿ, ದಿಲ್ಲಿಯಲ್ಲಿ ಹಾಗೂ ಈಗ ಬಂಗಾಳದಲ್ಲಿ. ಮತ್ತೆ ಆಂಧ್ರ ಮತ್ತು ಪಂಜಾಬ್‍ನಲ್ಲೂ ಅವರನ್ನು ಸೋಲಿಸಿದ್ದೇವೆ, ಅವರು ಕೆಲಸಕ್ಕೆ ಬಾರದ ರಾಜಕೀಯ ಮ್ಯಾನೇಜರ್. ಒಬ್ಬ ರಾಜಕಾರಣಿಯಾಗಿ ಅಮಿತ್ ಶಾ ಅವರ ಮೇಲೆ ನನಗೆ ದೊಡ್ಡ ಗೌರವವೇನಿಲ್ಲ ಎಂದು ನನಗೆ ಹೇಳಬೇಕಾಗಿದೆ” ಎಂದು ಪ್ರಶಾಂತ್ ಕಿಶೋರ್ ತೀಕ್ಷ್ಣ ಮಾತುಗಳನ್ನಾಡಿದ್ದಾರೆ.ಸೌಜನ್ಯ : ವಾರ್ತಾಭಾರತಿ ೪.೫.೨೦೨೧

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *