prashant kishor interview-ಅಮಿತ್ ಶಾ ಕೆಲಸಕ್ಕೆ ಬಾರದ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್: ಪ್ರಶಾಂತ್ ಕಿಶೋರ್

ಅಮಿತ್ ಶಾರ ಅಭಿಮಾನಿಗಳು ಮರೆಯದೇ ಓದಿರಿ-ಪುರುಷೋತ್ತಮ ಬಿಳಿಮಲೆ:

ಹೊಸದಿಲ್ಲಿ: “ನಾನು ದುರಹಂಕಾರಿ ಎಂದು ಭಾವಿಸಬೇಡಿ, ಆದರೆ ಅಮಿತ್ ಶಾ ಅತ್ಯಂತ ಓವರ್-ರೇಟೆಡ್ ರಾಜಕೀಯ ಮತ್ತು ಚುನಾವಣಾ ಮ್ಯಾನೇಜರ್ ಆಗಿದ್ದಾರೆ. ಅವರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ಬಹಳ ಚಾಣಾಕ್ಷ ಚುನಾವಣಾ ತಂತ್ರಜ್ಞ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಅವರಿಗೆ ತೋರಿಸಲು ಯಾವ ಸಾಧನೆಯಿದೆ?” ಎಂದು ಪಶ್ಚಿಮ ಬಂಗಾಳದಲ್ಲಿ ಅಮೋಘ ಜಯ ಸಾಧಿಸಿದ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

‘ದಿ ಟೆಲಿಗ್ರಾಫ್‍’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗೆ ಯಾವತ್ತೂ ಇತ್ತು. ಆದರೆ ಹೆಚ್ಚಿನವರು ನಮ್ಮನ್ನು ನಂಬಿರಲಿಲ್ಲ. ಅಬ್ಬರದ ಪ್ರಚಾರ ಯಾವತ್ತೂ ಚುನಾವಣೆಯಲ್ಲಿ ಗೆಲುವು ತಂದು ಕೊಡುವುದಿಲ್ಲ. ಇದು ಭಾಗಶಃ ಬಿಜೆಪಿಯ ದುರಹಂಕಾರದ, ಪ್ರಮುಖವಾಗಿ ಅಮಿತ್ ಶಾ ಅವರಂತಹ ನಾಯಕರ ದುರಹಂಕಾರದ ಪರಿಣಾಮ. ಅವರೆಲ್ಲ ಆಕಾಶದಲ್ಲಿಯೇ ಹಾರಾಡಿ, ನೆಲವನ್ನು ಮರೆತು ಬಿಟ್ಟರು. ಬಿಜೆಪಿ ತನ್ನನ್ನು ವಿಜೇತ ಎಂದು ಘೋಷಿಸಿಕೊಂಡೇ ಚುನಾವಣಾ ಕಣಕ್ಕಿಳಿಯುತ್ತದೆ, ಅವರು ಬಹಳಷ್ಟು ಸದ್ದು ಮಾತ್ರ ಮಾಡುತ್ತಾರೆ,” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಅಮಿತ್ ಶಾ ಅವರಿಗೆ ವೇದಿಕೆಯಲ್ಲಿ ನಿಲ್ಲಿಸಲು ಅತ್ಯಂತ ವರ್ಚಸ್ವಿ ನಾಯಕ ನರೇಂದ್ರ ಮೋದಿ ಇದ್ದಾರೆ. ಅವರ ಕೈಯ್ಯಲ್ಲಿ ಅಪಾರ ಸಂಪನ್ಮೂಲಗಳೂ ಇವೆ. ಸಂಘ ಬೆಂಬಲಿತ ಪಕ್ಷದ ದೊಡ್ಡ ಜಾಲವೂ ಇದೆ, ಸರಕಾರ ಮತ್ತದರ ಏಜನ್ಸಿಗಳ ಬೆಂಬಲವೂ ಇದೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಚುನಾವಣಾ ಆಯೋಗವೂ ಇದೆ. ಆದರೂ ಅವರು ಸೋತರು. ಇದು ನಿಮಗೆ ಅಮಿತ್ ಶಾ ಅವರ ಅಸಲಿ ಸಾಮರ್ಥ್ಯ ಎಂದು ತೋರಿಸುತ್ತದೆ ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.

“ಇದು ನನ್ನ ಮತ್ತು ಅಮಿತ್ ಶಾ ಅವರ ನಡುವಿನ ಮೂರನೇ ಮುಖಾಮುಖಿ ಹಾಗೂ ಮೂರು ಬಾರಿಯೂ ನಾನು ಅವರನ್ನು ಸೋಲಿಸಿದ್ದೇನೆ- ಬಿಹಾರದಲ್ಲಿ ೨೦೧೫ರಲ್ಲಿ, ದಿಲ್ಲಿಯಲ್ಲಿ ಹಾಗೂ ಈಗ ಬಂಗಾಳದಲ್ಲಿ. ಮತ್ತೆ ಆಂಧ್ರ ಮತ್ತು ಪಂಜಾಬ್‍ನಲ್ಲೂ ಅವರನ್ನು ಸೋಲಿಸಿದ್ದೇವೆ, ಅವರು ಕೆಲಸಕ್ಕೆ ಬಾರದ ರಾಜಕೀಯ ಮ್ಯಾನೇಜರ್. ಒಬ್ಬ ರಾಜಕಾರಣಿಯಾಗಿ ಅಮಿತ್ ಶಾ ಅವರ ಮೇಲೆ ನನಗೆ ದೊಡ್ಡ ಗೌರವವೇನಿಲ್ಲ ಎಂದು ನನಗೆ ಹೇಳಬೇಕಾಗಿದೆ” ಎಂದು ಪ್ರಶಾಂತ್ ಕಿಶೋರ್ ತೀಕ್ಷ್ಣ ಮಾತುಗಳನ್ನಾಡಿದ್ದಾರೆ.ಸೌಜನ್ಯ : ವಾರ್ತಾಭಾರತಿ ೪.೫.೨೦೨೧

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *