Beautiful poem-

*

ಪ್ರೇಮಿಸುವುದಾದರೆ

ಪ್ರೇಮಿಸುವುದಕ್ಕಾಗಿ ನೀವು
ಇಲಿಯನ್ನು ಆರಿಸಿಕೊಳ್ಳಬಾರದು;
ನೀವು ಬಿಲದೊಳಗಿನ
ಕತ್ತಲನ್ನಷ್ಟೇ ಕಾಣುವಿರಿ.

ಪ್ರೇಮಿಸುವುದಕ್ಕಾಗಿ ನೀವು
ಕಪ್ಪೆಯನ್ನು ಕಂಡು ಹಿಡಿಯಬಾರದು;
ಆಳದ ಬಾವಿಯಲ್ಲಿ ತೊಟ್ಟು
ನೀರಿಗಾಗಿ ನೀವು ದಾಹಿಸುವಿರಿ.

ನೀವು ಜೇಡದೊಂದಿಗೆ
ಪ್ರೇಮವಿಟ್ಟುಕೊಳ್ಳಬಾರದು;
ಅದು ತನ್ನ ನಿಲುವುಗಳನ್ನು ಕಾಲಿನಿಂದ
ಕಾಲಿಗೆ ಬದಲಾಯಿಸುತ್ತಿರುತ್ತದೆ.

ಏಡಿಯನ್ನು
ಪ್ರೇಮಿಸಲೇ ಬಾರದು;
ಅದು ನಿಮ್ಮನ್ನು
ಬಿಗಿಹಿಡಿದು ಕೊಲ್ಲುತ್ತದೆ.

ಪ್ರೇಮಿಸುವುದಕ್ಕಾಗಿ
ನೀವೆಂದಿಗೂ ಧನಮೋಹಿಯನ್ನು
ಆರಿಸಿಕೊಳ್ಳಬಾರದು;
ಕೊರಳಿಗೆ ಕುಣಿಕೆ ಹಾಕಿ, ಹೊತ್ತು ಹೊತ್ತಿಗೆ
ಹಾಲು ಹಿಂಡುವ ಹಸುವಾಗಿ
ನೀವು ಬದಲಾಗುವಿರಿ.

ಸ್ವಾರ್ಥಿಯನ್ನು ನೀವು ಪ್ರೇಮಿಸಬಾರದು;
ಅದು, ನೀವೇ ನಿಮ್ಮ ರಾಜ್ಯವನ್ನು
ಕಡಿದು ಕಿರಿದುಗೊಳಿಸಿ
ಸರಹದ್ದಿಗೆ ಒಳಪಡಿಸಿದಂತಾಗುತ್ತದೆ.

ಸಂಕುಚಿತ ಮನೋಭಾವದವನನ್ನು
ನೀವು ತೊರೆಯಬೇಕು;
ಅದು, ಹೂತೋಟದ ಮಧ್ಯದಲ್ಲಿರುವ
ಶಿಲೆಯ ಸುರಂಗದೊಳಗೆ ಸಿಲುಕಿಕೊಂಡಂತಾಗುತ್ತದೆ.

ಪ್ರೇಮಿಸುವುದಾದರೆ
ನೀವೊಂದು ಆಶಯವನ್ನು ಪ್ರೇಮಿಸಿ;
ಮುಳ್ಳುಬೇಲಿಗಳನ್ನು ಉರುಳಿಸುತ್ತ
ಅದು ನಿಮ್ಮನ್ನು
ಕಡಲ ವಿಸ್ತಾರದ ಮೇಲೆ ಮುನ್ನಡೆಸುತ್ತ
ಗಡಿಗಳಿಲ್ಲದ
ಆಕಾಶಕ್ಕೇರಿಸುತ್ತದೆ.

    --ಮಲಯಾಳಂ ಮೂಲ :#ಸುನಿತಾ_ಗಣೇಶ್
             --ಅನುವಾದ :#ತೇರಳಿ_ಎನ್_ಶೇಖರ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *