Beautiful poem-

*

ಪ್ರೇಮಿಸುವುದಾದರೆ

ಪ್ರೇಮಿಸುವುದಕ್ಕಾಗಿ ನೀವು
ಇಲಿಯನ್ನು ಆರಿಸಿಕೊಳ್ಳಬಾರದು;
ನೀವು ಬಿಲದೊಳಗಿನ
ಕತ್ತಲನ್ನಷ್ಟೇ ಕಾಣುವಿರಿ.

ಪ್ರೇಮಿಸುವುದಕ್ಕಾಗಿ ನೀವು
ಕಪ್ಪೆಯನ್ನು ಕಂಡು ಹಿಡಿಯಬಾರದು;
ಆಳದ ಬಾವಿಯಲ್ಲಿ ತೊಟ್ಟು
ನೀರಿಗಾಗಿ ನೀವು ದಾಹಿಸುವಿರಿ.

ನೀವು ಜೇಡದೊಂದಿಗೆ
ಪ್ರೇಮವಿಟ್ಟುಕೊಳ್ಳಬಾರದು;
ಅದು ತನ್ನ ನಿಲುವುಗಳನ್ನು ಕಾಲಿನಿಂದ
ಕಾಲಿಗೆ ಬದಲಾಯಿಸುತ್ತಿರುತ್ತದೆ.

ಏಡಿಯನ್ನು
ಪ್ರೇಮಿಸಲೇ ಬಾರದು;
ಅದು ನಿಮ್ಮನ್ನು
ಬಿಗಿಹಿಡಿದು ಕೊಲ್ಲುತ್ತದೆ.

ಪ್ರೇಮಿಸುವುದಕ್ಕಾಗಿ
ನೀವೆಂದಿಗೂ ಧನಮೋಹಿಯನ್ನು
ಆರಿಸಿಕೊಳ್ಳಬಾರದು;
ಕೊರಳಿಗೆ ಕುಣಿಕೆ ಹಾಕಿ, ಹೊತ್ತು ಹೊತ್ತಿಗೆ
ಹಾಲು ಹಿಂಡುವ ಹಸುವಾಗಿ
ನೀವು ಬದಲಾಗುವಿರಿ.

ಸ್ವಾರ್ಥಿಯನ್ನು ನೀವು ಪ್ರೇಮಿಸಬಾರದು;
ಅದು, ನೀವೇ ನಿಮ್ಮ ರಾಜ್ಯವನ್ನು
ಕಡಿದು ಕಿರಿದುಗೊಳಿಸಿ
ಸರಹದ್ದಿಗೆ ಒಳಪಡಿಸಿದಂತಾಗುತ್ತದೆ.

ಸಂಕುಚಿತ ಮನೋಭಾವದವನನ್ನು
ನೀವು ತೊರೆಯಬೇಕು;
ಅದು, ಹೂತೋಟದ ಮಧ್ಯದಲ್ಲಿರುವ
ಶಿಲೆಯ ಸುರಂಗದೊಳಗೆ ಸಿಲುಕಿಕೊಂಡಂತಾಗುತ್ತದೆ.

ಪ್ರೇಮಿಸುವುದಾದರೆ
ನೀವೊಂದು ಆಶಯವನ್ನು ಪ್ರೇಮಿಸಿ;
ಮುಳ್ಳುಬೇಲಿಗಳನ್ನು ಉರುಳಿಸುತ್ತ
ಅದು ನಿಮ್ಮನ್ನು
ಕಡಲ ವಿಸ್ತಾರದ ಮೇಲೆ ಮುನ್ನಡೆಸುತ್ತ
ಗಡಿಗಳಿಲ್ಲದ
ಆಕಾಶಕ್ಕೇರಿಸುತ್ತದೆ.

    --ಮಲಯಾಳಂ ಮೂಲ :#ಸುನಿತಾ_ಗಣೇಶ್
             --ಅನುವಾದ :#ತೇರಳಿ_ಎನ್_ಶೇಖರ್

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *