ಬುಧವಾರ ಶಿರಸಿಯಲ್ಲಿ ಡಿ.ಕೆ.ಶಿ.ಕಾರ್ಯಕ್ರಮ- ಟಿಕೇಟ್ ಎಲ್ಲರಿಗೂ ಬೇಕು ಸಂಘಟನೆ ಯಾರಿಗೂ ಬೇಡ!

ಬುಧವಾರ ಶಿರಸಿಯಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ರಾಜ್ಯ ಸಾರಥ್ಯ ವಹಿಸಿಕೊಂಡ ಮೇಲೆ ಡಿ.ಕೆ.ಶಿವಕುಮಾರ ಮಲೆನಾಡು, ಕರಾವಳಿ ಪ್ರವಾಸಕ್ಕೆ ಬಂದಿದ್ದು ಇದೇ ಮೊದಲ ಬಾರಿ ಏನಲ್ಲ. ಆದರೆ ಈ ಬಾರಿಯ ಭೇಟಿ ನಾನಾ ಕಾರಣಕ್ಕೆ ವಿಶೇಶವೆನಿಸಿದೆ. ತಾಲೂಕಾ ಪಂಚಾಯತ್,ಜಿಲ್ಲಾ ಪಂಚಾಯತ್ ಚುನಾವಣೆಯ ಹೊಸ್ತಿಲಲ್ಲಿ ನಿಂತು ಯೋಚಿಸುತ್ತಿರುವ ಮತದಾರರು,ಟಿಕೇಟ್ ಆಕಾಂಕ್ಷಿಗಳ ನಿರೀಕ್ಷೆ,ಉತ್ಸಾಹಗಳ ನಡುವೆ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಭೇಟಿಗೆ ಮಹತ್ವ ಪ್ರಾಪ್ತವಾಗಿದೆ. ಇನ್ನೊಂದು ವರ್ಷದ ನಂತರ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೂಡಾ ಈ ಭೇಟಿಗೆ ಮಹತ್ವವಿದೆ ಎನ್ನಲಾಗುತ್ತಿದೆ.

ಟಿಕೇಟ್ ಆಕಾಂಕ್ಷಿಗಳ ಸರ್ಕಸ್- ಮೀಸಲಾತಿ ಅನಿಶ್ಚಿತತೆ, ನ್ಯಾಯಾಲಯದ ಮೆಟ್ಟಿಲೇರಿರುವ ಮೀಸಲಾತಿ ನಿಗದಿ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಜಿ.ಪಂ., ತಾ.ಪಂ. ಚುನಾವಣೆ ಘೋಷಣೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಈ ಸಂದರ್ಭದಲ್ಲಿ ಕೂಡಾ ಈಗಿನ ಮೀಸಲಾತಿಯಂತೆ ಚುನಾವಣೆಗೆ ಸ್ಫರ್ಧಿಸುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆಡಳಿತ ಪಕ್ಷ ತನಗೆ ಅನುಕೂಲಕರವಾಗಿ ಮೀಸಲಾತಿ ನಿಗದಿಪಡಿಸಿದೆ ಎನ್ನುವ ಮೇಲ್ನೋಟದ ಆರೋಪದ ನಡುವೆ ಕೂಡಾ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಕಾಂಗ್ರೆಸ್ ಶಕ್ತಿಯ ಧ್ಯೋತಕ. ಜಿಲ್ಲೆಯ 50 ಕ್ಕೂ ಹೆಚ್ಚು ತಾ.ಪಂ. ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿ ಬಗ್ಗೆ ಆಕ್ಷೇಪಣೆಗಳಿರುವುದು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಕೂಡಾ ಮೀಸಲಾತಿ ನಿಗದಿ ಆಕ್ಷೇಪಣೆ ಎರಡಂಕಿ ಕ್ಷೇತ್ರಗಳನ್ನು ದಾಟಿರುವುದು ಮೀಸಲಾತಿ ಅಸಮರ್ಪಕತೆಗೆ ಸಾಕ್ಷಿ.

ಈ ವಿದ್ಯಮಾನದ ನಡುವೆ ಶಿರಸಿ ಕ್ಷೇತ್ರದ ವಿಧಾನಸಭಾ ಟಿಕೇಟ್ ಆಕಾಂಕ್ಷಿಗಳೂ ಈಗಲೇ ನಾನಿದ್ದೇನಿ ಎಂದು ಸೌಂಡು ಮಾಡಿರುವುದು ರಾಜ್ಯಾಧ್ಯಕ್ಷರ ಭೇಟಿಯ ಹಿನ್ನೆಲೆಯ ಕಾರಣದಿಂದ ಎನ್ನುವ ವಿಶ್ಲೇಷಣೆಗಳಿವೆ. ಹೊರಗಿನ ಅಭ್ಯರ್ಥಿಗಳು ಪ್ರತಿಸಾರಿ ಚುನಾವಣಾ ಮುನ್ನ ಶಿರಸಿ-ಉತ್ತರ ಕನ್ನಡಕ್ಕೆ ಬಂದು ನಾನಿದ್ದೇನಿ ಎನ್ನುವ ಹಿಂದೆ ಶಿರಸಿ ಕೇಂದ್ರಿತ ಪುರೋಹಿತಶಾಹಿ ತಂತ್ರಗಾರಿಕೆ ಇದೆ ಎನ್ನುವ ಆರೋಪಗಳಿವೆ. ಶಿರಸಿ ಕ್ಷೇತ್ರದಲ್ಲಿ ಒಂದು ಚುನಾವಣೆಯಿಂದ ಅರ್ಧ ಅವಧಿ ನಾಪತ್ತೆಯಾಗುವ ರಾಜ್ಯ ಮಟ್ಟದ ಪದಾಧಿಕಾರಿಗಳು ಚುನಾವಣೆಯ ಒಂದೆರಡು ವರ್ಷ ಮೊದಲು ಬಂದು ಮಾಡುವ ಗಲಿಬಿಲಿಯಿಂದಾಗಿ ಶಿರಸಿ ಕ್ಷೇತ್ರ ಕೋಮುವಾದಿಗಳ ಕೈ ವಶವಾಗುತ್ತಿದೆ ಎನ್ನುವ ಆರೋಪಗಳಿವೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಮೂರುವರ್ಷ ಕಳೆದುಹೋಗಿ ಕೊನೆಯ ಒಂದೆರಡು ವರ್ಷ ಬಂದು ಹೊರಗಿನವರು ಸರ್ಕಸ್ ನಡೆಸಲು ರಾಜ್ಯ ಕಾಂಗ್ರೆಸ್ ನ ಕೆಲವರ ಚಿತಾವಣೆ ಕಾರಣ ಎನ್ನಲಾಗುತ್ತಿದೆ.

ಸಂಘಟನೆ ಯಾರಿಗೂ ಬೇಡ- ಬೆಂಗಳೂರು ಮಟ್ಟದಲ್ಲಿ ಹಣ,ದೊಡ್ಡವರ ಸಂಪರ್ಕದಿಂದ ರಾಜ್ಯಮಟ್ಟದ ಪದಾಧಿಕಾರಗಳಾದವರು ಹುದ್ದೆಗೆ ಸೀಮಿತ ಮತ್ತು ಚುನಾವಣೆಗೆ, ಅವಕಾಶಕ್ಕೆ ಅನುಕೂಲಕ್ಕೆ ಜೋತುಬಿದ್ದವರು ಎನ್ನುವ ಆರೋಪಗಳ ನಡುವೆ ಅವರ ಕ್ರೀಯಾಶೀಲತೆಯೂ ಪರೀಕ್ಷೆಗೊಳಪಡುತ್ತಿದೆ. ನಾಲ್ಕು ಅವಧಿಯ ಒಂದುಡಜನ್ ಸುಧೀರ್ಘ ಸಮಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ ಭೀಮಣ್ಣ ನಾಯ್ಕರಿಗೆ ಪಕ್ಷದ ಕೆಲವು ಸ್ಥರದ ನಾಯಕರು,ಕೆಲವು ವಿಭಾಗಗಳು ಸಹಕರಿಸುತ್ತಿಲ್ಲ. ಈ ದುರಿತ ಕಾಲದಲ್ಲೂ ಪಕ್ಷ ಮುನ್ನೆಡೆಸಿರುವ ಭೀಮಣ್ಣ ನಾಯಕರಿಗೆ ರಾಜ್ಯ ಮಟ್ಟದ ಪದಾಧಿಕಾರಿಗಳು ಕಾಲೆಳೆಯುವ ಕೆಲಸಮಾಡುತಿದ್ದಾರೆ ಎನ್ನುವ ಗುಟ್ಟು ಬಹಿರಂಗ ಸತ್ಯ. ಈ ವಿದ್ಯಮಾನದ ನಡುವೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಹಿಂದೇಟು ಹಾಕುವ ಅನೇಕ ನಾಯಕರು ಸಂಘಟನೆ ಬೇಡ, ಅಲಂಕಾರಿಕ ಹುದ್ದೆ,ಪಕ್ಷದ ಟಿಕೇಟ್ ಮಾತ್ರ ತಮಗೆ ಬೇಕು ಎನ್ನುವ ರೀತಿ ವರ್ತಿಸುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೇ ಬೇಸರವಿದೆ ಎನ್ನಲಾಗುತ್ತಿದೆ.

ಕಾರವಾರದ ಮಾಜಿ ಶಾಸಕ ಸತೀಶ್ ಶೈಲ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಎನ್ನುತ್ತಿರುವಂತೆ ಅವರೂ ಕೂಡಾ ಡಿ.ಸಿ.ಸಿ. ಜವಾಬ್ಧಾರಿ ಬೇಡ ಎಂದಿರುವ ವರ್ತಮಾನವಿದೆ. ಸಾಯಿಗಾಂವಕರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಉತ್ಸುಕರಾದರೂ ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಮತದಾರರಾದ ನಾಮಧಾರಿ- ದೀವರು ಅಥವಾ ಹವ್ಯಕರು ಜಿಲ್ಲಾಧ್ಯಕ್ಷರಾದರೆ ಉತ್ತಮ ಎನ್ನುವ ಹಿನ್ನೆಲೆಯಲ್ಲಿ ಭಟ್ಕಳದ ಮಾಜಿ ಶಾಸಕ ಜೆ.ಡಿ.ನಾಯ್ಕರಿಗೆ ಡಿ.ಸಿ.ಸಿ. ಅಧ್ಯಕ್ಷತೆಯ ಪಟ್ಟ ಕಟ್ಟಲು ಕಾಂಗ್ರೆಸ್ ಸಿದ್ಧತೆ ಮಾಡಿರುವ ವದಂತಿ ಕೇಳಿ ಬರುತ್ತಿದೆ. ಆದರೆ ಮಾಜಿ ಶಾಸಕರಾದ ಮಂಕಾಳು ವೈದ್ಯ, ಜೆ.ಡಿ.ನಾಯ್ಕ, ಸತೀಶ್ ಶೈಲ್ ನಿರಾಕರಣೆಯ ನಂತರ ಯಾರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎನ್ನುವ ಪ್ರಶ್ನೆಗೆ ಈ ವರೆಗೂ ನಿಖರ ಉತ್ತರ ಸಿಕ್ಕಿಲ್ಲ. ಅನಿವಾರ್ಯತೆಗಳಲ್ಲೆಲ್ಲಾ ಪಕ್ಷದ ನೆರವಿಗೆ ನಿಂತ ಭೀಮಣ್ಣ ಪಕ್ಷ ಸಂಘಟನೆ ಮಾಡುತ್ತಲೇ ಸರ್ಕಾರದ ಜವಾಬ್ಧಾರಿ ಹುದ್ದೆಗೇರಬೇಕು ಎನ್ನುವ ಕಾಂಗ್ರೆಸ್ ಪಕ್ಷದ ತೀರ್ಮಾನ ಡಿ.ಸಿ.ಸಿ. ಹುದ್ದೆಯ ಅಧ್ಯ ಕ್ಷರ ಆಯ್ಕೆ ಹಿಂದೆ ಕೆಲಸ ಮಾಡುವ ಅಂಶ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣ, ವಿದ್ಯಮಾನಗಳ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಉತ್ತರ ಕನ್ನಡ ಭೇಟಿಗೆ ಮಹತ್ವವಿದೆ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಈವರೆಗೆ ಸೆರೆ ಸಿಕ್ಕವರು…೫ ಉಳಿದವರು ೨.. ಹುಡುಗಾಟದ ಪುಂಡರ ತಂಡ ಆರೆಸ್ಟ್, ಸಮಾಜಸೇವಕರಿಗೆ ನಡುಕ!

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ …. ಸೊರಬಾ ತೌಡತ್ತಿ ಆತ್ಮಹತ್ಯೆ ಪ್ರಕರಣದ ಸುರುಳಿ ಮುಂದುವರಿಯುತ್ತಿದೆ....

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ

ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ‌...

ಸಂತೋಷ್‌ ಆತ್ಮಹತ್ಯೆ ಪ್ರಕರಣ….. ತಮಿಳುನಾಡಿನಲ್ಲಿ ಆರೋಪಿಗಳ ಸೆರೆ!

ಒಂದು ಲವ್‌ ಪ್ರಕರಣ, ಪತ್ತೆದಾರಿ ರಕ್ಷಕನನ್ನಾಗಿ ಮಾಡಿ ನಂತರ ಆ ಪತ್ತೆಧಾರಿಯೇ ಹಣದ ಹಿಂದೆ ಬಿದ್ದು ತನಗೆ ಮೋಸ ಮಾಡಿದ ಪ್ರೇಯಸಿಗಾಗಿ ಪ್ರಾಣ ಕೊಡುವ...

ವಸಂತ ನಾಯ್ಕರ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…. ಕೆ.ಜಿ. ನಾಯ್ಕ ಹಣಜಿಬೈಲ್‌ ಸವಾಲು

ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಈಗಲೂ ನಿಷ್ಪಕ್ಷಪಾತ ಮತ್ತು ನಿರ್ಭೀತ ವಿಚಾರಣೆಗೆ ಒತ್ತೇಯಿಸುತ್ತೇವೆ ಎಂದು ಪ್ರತಿಪಾದಿಸಿರುವ ಬಿ.ಜೆ.ಪಿ. ನಾಯಕ ಕೆ.ಜಿ. ನಾಯ್ಕ ಹಣಜಿಬೈಲ್‌...

ಅಪರಾಧಿಗಳನ್ನು ಬಂಧಿಸಿ…ನಿರಪರಾಧಿಗಳನ್ನಲ್ಲ… ವಸಂತ ನಾಯ್ಕ

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ವಸಂತ ನಾಯ್ಕ ಬಿ.ಜೆ.ಪಿ. ಹೆಣಗಳನ್ನಿಟ್ಟುಕೊಂಡು ರಾಜಕಾರಣ ಮಾಡುವ ದರಿದ್ರ ಪಕ್ಷ, ಬಿ.ಜೆ.ಪಿ. ಮೂರ್ಖ ಮುಖಂಡರ ವಿರುದ್ಧ ರಾಜಕೀಯವಾಗಿ ಮತ್ತು...

Latest Posts

ಈವರೆಗೆ ಸೆರೆ ಸಿಕ್ಕವರು…೫ ಉಳಿದವರು ೨.. ಹುಡುಗಾಟದ ಪುಂಡರ ತಂಡ ಆರೆಸ್ಟ್, ಸಮಾಜಸೇವಕರಿಗೆ ನಡುಕ!

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ …. ಸೊರಬಾ ತೌಡತ್ತಿ ಆತ್ಮಹತ್ಯೆ ಪ್ರಕರಣದ ಸುರುಳಿ ಮುಂದುವರಿಯುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳಾ ಗಿ ತಲೆಮರೆಸಿಕೊಂಡಿದ್ದ ಒಟ್ಟೂ 7 ಜನರಲ್ಲಿ ಇಬ್ಬರು ಬಂಧನ ಕ್ಕೊಳಗಾಗಿ 24 ಗಂಟೆಯೊಳಗೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟೂ...

Recommended For You

About the Author: Kanneshwar Naik

Leave a Reply

Your email address will not be published. Required fields are marked *