ಮಲೆನಾಡಿನ ಆರಿದ್ರಮಳೆ ಹಬ್ಬದ ವಿಶಿಷ್ಟ ಆಚರಣೆಯ ಹಿನ್ನೆಲೆ

ಗಂಡುಗಲಿ ಕುಮಾರರಾಮನ ಹೆಸರು ಕೇಳದವರುಂಟೆ?

ಬುಡಕಟ್ಟು ರಾಜಪುತ್ರ ಕುಮಾರರಾಮ ತನ್ನ ವೀರತ್ವ,ಧೀರತನ, ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದರಾಬಾದ್ ಕರ್ನಾಟಕದ ದೊರೆ. ವಿಜಯನಗರ ಸಾಂಮ್ರಾಜ್ಯದ ಮೂಲ ಪುರುಷ  ಎಂದು ಗುರುತಿಸಲಾಗುವ ಕುಮಾರ ರಾಮನನ್ನು ಹೈದರಾಬಾದ್ ಕರ್ನಾಟಕ ಜನತೆ ಈಗಲೂ ಗೌರವದಿಂದ ಸ್ಮರಿಸಿ ಆರಾಧಿಸುತ್ತಾರೆ. ಆದರೆ ಇದೇ ಕುಮಾರರಾಮನನ್ನು ಮಲೆನಾಡಿನ ಜನ ಪ್ರತಿವರ್ಷ ಸ್ಮರಿಸಿ, ಪೂಜಿಸುವ ಸಂಪ್ರದಾಯವೊಂದು ಮಲೆನಾಡು ಭಾಗದಲ್ಲಿದೆ.

ಬನವಾಸಿ,ಸಿದ್ಧಾಪುರ, ಶಿರಸಿ,ಸಾಗರ, ಸೊರಬಾಗಳು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಆಚರಿಸುವ ಹನಿಹಬ್ಬವನ್ನು ಆರಿದ್ರಮಳೆ ಹಬ್ಬ ಎಂದು ಕರೆಯುತ್ತಾರೆ. ಸಿದ್ಧಾಪುರದ ಕೋಲಶಿರ್ಸಿ,ಮನ್ಮನೆ,ಬೇಡ್ಕಣಿ,ಹುಸೂರು,ಅವರಗುಪ್ಪ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಈ ಆಚರಣೆ ವಿಜೃಂಬಣೆಯಿಂದ ನಡೆಯುತ್ತದೆ.

ಕೋಲಶಿರ್ಸಿಯಲ್ಲಿ ನಡೆಯುವ ಆರಿದ್ರಮಳೆ ಹಬ್ಬದ ಆಚರಣೆಯ ವಿಡಿಯೋ


ವಿಜಯನಗರ ಸಾಂಮ್ರಾಜ್ಯ ಮತ್ತು ಅದಕ್ಕಿಂತ ಹಿಂದೆ ಮಲೆನಾಡಿನ ಧೀವರು ಸೈನಿಕರು, ರಾಜರೂ ಆಗಿ ಮೆರೆದವರು. ತಮ್ಮ ಹಳೆಫೈಕ ಸಂಸ್ಕೃತಿ ಮತ್ತು ಸಂಪ್ರದಾಯದ ರೂಢಿಯಂತೆ ಮಳೆಗಾಲದ ಯುದ್ಧವಿರಾಮ ಕಾಲದಲ್ಲಿ ಈ ಸೈನಿಕರ ಪೂರ್ವಜರು ವರ್ಷಕ್ಕೊಮ್ಮೆ ಹನಿ ಹಬ್ಬ  ಎಂದು ಆಚರಿಸುತಿದ್ದರಂತೆ. ಪ್ರತಿವರ್ಷ ಆರಿದ್ರ ಮಳೆ ಪ್ರಾರಂಭವಾದ ಕಾಲ ಮತ್ತು ಈ ಆರಿದ್ರ ಮಳೆ ಕಳೆದ ಮೇಲೂ ಮಲೆನಾಡಿನ ಜನ ಆಚರಿಸುವ ಹನಿ ಹಬ್ಬ ಆರಿದ್ರಮಳೆ ಹಬ್ಬ  ಎಂದು ಪ್ರಸಿದ್ಧವಾಗಿದೆ. ಯುದ್ಧವಿರಾಮ ಕಾಲದಲ್ಲಿ ಕೃಷಿ ಮಾಡುತಿದ್ದ ಆದಿ ಸೈನಿಕರು ವರ್ಷಕ್ಕೊಮ್ಮೆ ಸೇರಿ ಆಚರಿಸುತಿದ್ದ ಈ ಹನಿ ಅಥವಾ ಮಳೆಹಬ್ಬದಲ್ಲಿ ರಾಮ ಆಥವಾ ಗಾಮ ಎನ್ನಲಾಗುವ ಕುಮಾರರಾಮನ ಮುಖವಾಡವನ್ನು ಪೂಜಿಸುವುದು ವಾಡಿಕೆ.


ಗಾಮನಮುಖ, ಸೈನಿಕರ ಮುಖವಾಡ, ಕುದುರೆ ಹೀಗೆ ಯುದ್ಧ,ಸೈನ್ಯವನ್ನು ಪ್ರತಿನಿಧಿಸುವ ಚಹರೆಗಳು ಈ ಹಬ್ಬದ ಕೇಂದ್ರ ಬಿಂದು. ಯುವಕರು, ನವವಿವಾಹಿತರು ಈ ಮುಖಗಳನ್ನು ಹೊತ್ತು ಗಡಿದೇವರುಗಳನ್ನು ಪೂಜಿಸಿ, ಕೆಂಡದ ಮೇಲೆ ನಡೆಯುವುದು ವಿಶೇಶವಾದರೆ ಹೆಂಗಳೆಯರು ಈ ಸೈನಿಕ ಪುರುಷರ ಕಾಲು ತೊಳೆದು ಗೌರವಿಸುವ ನವಜಾತ ಶಿಶುಗಳಿಗೆ ಆರೋಗ್ಯಕ್ಕಾಗಿ ಹೊತ್ತ ಹರಕೆಯನ್ನು ತೀರಿಸಲು ಈ ಅವಕಾಶವನ್ನು ಉಪಯೋಗಿಸುತ್ತಾರೆ. ಇಂಥ ವೈಶಿಷ್ಟ್ಯಮಯ ಆಚರಣೆ, ರೂಢಿ, ಸಂಪ್ರದಾಯಗಳ ಹಿಂದೆ ಮಲೆನಾಡಿನ ಮೂಲನಿವಾಸಿಗಳು ಶ್ರಮಿಕರು, ಯೋಧರು, ಸಾಹಸಿಗಳು ಎಂದು ನೆನಪಿಸುವ ಆಚರಣೆ. ಈ ಆಚರಣೆಯಲ್ಲಿ ಕುಮಾರರಾಮನ ಸ್ಮರಣೆ, ಆಧರಣೆಕೂಡಾ. ವೀರತನ, ಧೀರತ್ವ, ಮಹಿಳೆಯರ ಬಗೆಗಿನ ಕುಮಾರರಾಮನ ಗೌರವ ಸ್ಮರಿಸಿ, ಗೌರವಿಸುವುದೇ ಈ ಆಚರಣೆಗಳ ಹಿಂದಿನ ಉದ್ದೇಶ.ಈ ವರ್ಷದ ಈ ಆರಿದ್ರಮಳೆಯ ಹಬ್ಬದ ಸಂಬ್ರಮ ಈ ವಾರ ಮುಕ್ತಾಯವಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *