ಯಾರಾಗ್ತಾರೆ ಕರ್ನಾಟಕದ ಮುಖ್ಯಮಂತ್ರಿ… ಅರಗ ಜ್ಞಾನೇಂದ್ರ..ಶ್ರೀನಿವಾಸ್ ಪೂಜಾರಿ,ಸವದಿ, ನಿರಾಣಿ, ಜೋಷಿ,ಹೆಗಡೆ…?

ಕಾಂಗ್ರೆಸ್ ಸಿದ್ಧರಾಮಯ್ಯರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಸಮೀಕ್ಷೆ ನಡೆಸಿ ಪ್ರಾಮಾಣಿಕತೆ, ಸರಳತೆ, ಜನಪರತೆ, ಶುದ್ಧಚಾರಿತ್ರ್ಯ, ಸೈದ್ಧಾಂತಿಕ ಸ್ಫಷ್ಟತೆಗಳ ಆಧಾರದಲ್ಲಿ ಸಿದ್ಧರಾಮಯ್ಯ ಎಲ್ಲರಿಗಿಂತಲೂ ಬೆಸ್ಟ್ ಎನ್ನುವ ನಿರ್ಧಾರ ಮಾಡಿತ್ತಂತೆ! ಈಗ ಬಿ.ಜೆ.ಪಿ. ಇಂಥ ಸಮೀಕ್ಷೆ, ಜನಾಭಿಪ್ರಾಯದ ಮೊರೆ ಹೋದರೆ ಆಗ ಸಿಗುವ ಎರಡು ಹೆಸರು ಮಾಜಿ ಶಾಸಕ ಅರಗಜ್ಞಾನೇಂದ್ರ ಮತ್ತು ಸಚಿವ ಶ್ರೀನಿವಾಸ್ ಪೂಜಾರಿ ಮಾತ್ರ ಎನ್ನಲಾಗಿದೆ. ಹೇಳಿ ಕೇಳಿ ಆಶ್ಚರ್ಯಕರ ಆಯ್ಕೆಗೆ ಹೆಸರಾದ ಬಿ.ಜೆ.ಪಿ. ಹೈಕಮಾಂಡ್ ಬಿ.ಜೆ.ಪಿ. ಗೆ ಇರುವ ಜನವಿರೋಧ ಶಮನಕ್ಕೆ ರಾಜ್ಯದಲ್ಲಿ ಸರಳ ಮುಖ್ಯಮಂತ್ರಿ ನೇಮಕ ಆಗಬೇಕು ಎಂದು ನಿರ್ಧರಿಸಿದರೆ ಈ ಮಾನದಂಡದಲ್ಲೂ ಪೂಜಾರಿ ಮತ್ತು ಅರಗ ಜೊತೆಗೆ ಸೇರುವ ಮತ್ತೊಂದು ಹೆಸರು ಬಿ.ಎಲ್. ಸಂತೋಷ ಎಂದರೆ………………

ಕರ್ನಾಟಕದ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎನ್ನುತ್ತಲೇ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಹೇರಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಲಿಂಗಾಯತರ ಅಭಯದಿಂದ ರಾಜ್ಯ ಆಳುತ್ತಿರುವ ಬಿ.ಜೆ.ಪಿ. ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ಹೋಗಿ ಲಿಂಗಾಯತರ ವಿರೋಧ ಕಟ್ಟಿಕೊಳ್ಳಲು ಸಿದ್ಧವಿದೆ ಯೆ ಎಂದರೆ… ಅಲ್ಲಿಂದ ಬರುವ ಉತ್ತರ ಸವದಿ,ನಿರಾಣಿ.ಅರವಿಂದ ಬೆಲ್ಲದ ಸೇರಿದಂತೆ ಇನ್ನೂ ಎರಡ್ಮೂರು ಲಿಂಗಾಯತರೇ ನಮ್ಮ ಪಟ್ಟಿಯಲ್ಲಿದ್ದಾರೆ ಎಂದು ತೋರಿಸುತ್ತಿದೆ.

ಅಲ್ಲಿಗೆ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ, ಬಸವರಾಜ್ ಬೊಮ್ಮಾಯಿಗಳಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿಯಾಗಬಹುದು. ಹೀಗೆ ಇವರಲ್ಲಿ ಯಾರಾದರೂ ಮುಖ್ಯಮಂತ್ರಿಯಾದರೆ ನಾಯಕರು, ಮಠಾಧೀಶರ ಲಿಂಗಾಯತ್ ವಿರೋಧ ಶಮನವಾಗುತ್ತದೆ ಎನ್ನುವ ಮುಂದಾಲೋಚನೆಯಿಂದ ಈ ಕೆಲವೇ ಹೆಸರುಗಳನ್ನು ಬಿ.ಜೆ.ಪಿ. ಹಿಂದೆಮುಂದೆ ಮಾಡಿ ನಿರ್ಧಾರ ಪ್ರಕಟಿಸಲಿದೆ ಎನ್ನುವ ಮಾತಿನಲ್ಲಿ ಹುರುಳಿಲ್ಲ ಎನ್ನುವಂತಿಲ್ಲ.

rss ಬ್ರಾಹ್ಮಣ ಲಾಬಿ- ಬಿ.ಜೆ.ಪಿ. ಶಕ್ತಿ,ನಿಯಂತ್ರಕ ದಂಡವಾದ ರಾ.ಸೇ.ಸಂಘ ಬಿ.ಎಲ್. ಸಂತೋಷ್, ಪ್ರಹಲ್ಹಾದ್ ಜೋಷಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರುಗಳನ್ನು ಸೂಚಿಸಿರುವಲ್ಲಿ ಯಾವುದೇ ವಿಶೇಷವಿಲ್ಲ ಯಾಕೆಂದರೆ ಸಂಘ ಬ್ರಾಹ್ಮಣರನ್ನು ಬಿಟ್ಟು ಬೇರೆಯವರ ಪರವಾಗಿ ವಕಾಲತ್ತು ವಹಿಸಿರುವ ಪ್ರಸಂಗ ಸಂಘದ ಇತಿಹಾಸದಲ್ಲೇ ಇಲ್ಲ.

ಈ ಬ್ರಾಹ್ಮಣ, ಲಿಂಗಾಯತ ಲೆಕ್ಕಾಚಾರ, ಲಾಬಿಗಳ ನಡುವೆ ಒಕ್ಕಲಿಗರಲ್ಲಿ ಸಿ.ಟಿ.ರವಿ ಹೆಸರು ಮುಂದೆ ಮಾಡಿ ತೆರೆಮರೆಯಲ್ಲಿರುವ ಸಜ್ಜನ ಅರಗ ಜ್ಞಾನೇಂದ್ರರನ್ನು ಅಥವಾ ಸಚಿವ ಶ್ರೀನಿವಾಸ (ಈಡಿಗ) ಪೂಜಾರಿಯವರನ್ನು ನಿಷ್ಠೆ, ಪ್ರಾಮಾಣಿಕತೆ, ವಿಧೇಯತೆಗಳ ಆಧಾರದಲ್ಲಿ ಮುಖ್ಯಮಂತ್ರಿಯನ್ನಾಗಿಸಿ ಬಿ.ಎಲ್. ಸಂತೋಷರ ಮೂಲಕ ಆಡಳಿತ ನಡೆಸುವ ಲೆಕ್ಕಾಚಾರ ಬಿ.ಜೆ.ಪಿ. ಮತ್ತು ಸಂಘದ ಹೈಕಮಾಂಡ್ ಯೋಚನೆ ಎನ್ನುವ ಊಹೆಗಳೂ ಇವೆ.

ಹೀಗೆ ಲೆಕ್ಕಾಚಾರ, ಜಾತಿಲಾಬಿ, ದಲಿತರ ಕೋಟಾ ಇವುಗಳ ಮಧ್ಯೆ ಬಿ.ಜೆ.ಪಿ., ರಾ.ಸೇ.ಸಂಘದ ಗುಪ್ತಕಾರ್ಯಸೂಚಿಗಳ ನಡುವೆ ಮುಂದಿನ ವಾರ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲಕ್ಕೆ ಈವರೆಗೂ ಸಷ್ಟ ಉತ್ತರ ಸಿಕ್ಕಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *