ಯಾರಾಗ್ತಾರೆ ಕರ್ನಾಟಕದ ಮುಖ್ಯಮಂತ್ರಿ… ಅರಗ ಜ್ಞಾನೇಂದ್ರ..ಶ್ರೀನಿವಾಸ್ ಪೂಜಾರಿ,ಸವದಿ, ನಿರಾಣಿ, ಜೋಷಿ,ಹೆಗಡೆ…?

ಕಾಂಗ್ರೆಸ್ ಸಿದ್ಧರಾಮಯ್ಯರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಸಮೀಕ್ಷೆ ನಡೆಸಿ ಪ್ರಾಮಾಣಿಕತೆ, ಸರಳತೆ, ಜನಪರತೆ, ಶುದ್ಧಚಾರಿತ್ರ್ಯ, ಸೈದ್ಧಾಂತಿಕ ಸ್ಫಷ್ಟತೆಗಳ ಆಧಾರದಲ್ಲಿ ಸಿದ್ಧರಾಮಯ್ಯ ಎಲ್ಲರಿಗಿಂತಲೂ ಬೆಸ್ಟ್ ಎನ್ನುವ ನಿರ್ಧಾರ ಮಾಡಿತ್ತಂತೆ! ಈಗ ಬಿ.ಜೆ.ಪಿ. ಇಂಥ ಸಮೀಕ್ಷೆ, ಜನಾಭಿಪ್ರಾಯದ ಮೊರೆ ಹೋದರೆ ಆಗ ಸಿಗುವ ಎರಡು ಹೆಸರು ಮಾಜಿ ಶಾಸಕ ಅರಗಜ್ಞಾನೇಂದ್ರ ಮತ್ತು ಸಚಿವ ಶ್ರೀನಿವಾಸ್ ಪೂಜಾರಿ ಮಾತ್ರ ಎನ್ನಲಾಗಿದೆ. ಹೇಳಿ ಕೇಳಿ ಆಶ್ಚರ್ಯಕರ ಆಯ್ಕೆಗೆ ಹೆಸರಾದ ಬಿ.ಜೆ.ಪಿ. ಹೈಕಮಾಂಡ್ ಬಿ.ಜೆ.ಪಿ. ಗೆ ಇರುವ ಜನವಿರೋಧ ಶಮನಕ್ಕೆ ರಾಜ್ಯದಲ್ಲಿ ಸರಳ ಮುಖ್ಯಮಂತ್ರಿ ನೇಮಕ ಆಗಬೇಕು ಎಂದು ನಿರ್ಧರಿಸಿದರೆ ಈ ಮಾನದಂಡದಲ್ಲೂ ಪೂಜಾರಿ ಮತ್ತು ಅರಗ ಜೊತೆಗೆ ಸೇರುವ ಮತ್ತೊಂದು ಹೆಸರು ಬಿ.ಎಲ್. ಸಂತೋಷ ಎಂದರೆ………………

ಕರ್ನಾಟಕದ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎನ್ನುತ್ತಲೇ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಹೇರಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಲಿಂಗಾಯತರ ಅಭಯದಿಂದ ರಾಜ್ಯ ಆಳುತ್ತಿರುವ ಬಿ.ಜೆ.ಪಿ. ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ಹೋಗಿ ಲಿಂಗಾಯತರ ವಿರೋಧ ಕಟ್ಟಿಕೊಳ್ಳಲು ಸಿದ್ಧವಿದೆ ಯೆ ಎಂದರೆ… ಅಲ್ಲಿಂದ ಬರುವ ಉತ್ತರ ಸವದಿ,ನಿರಾಣಿ.ಅರವಿಂದ ಬೆಲ್ಲದ ಸೇರಿದಂತೆ ಇನ್ನೂ ಎರಡ್ಮೂರು ಲಿಂಗಾಯತರೇ ನಮ್ಮ ಪಟ್ಟಿಯಲ್ಲಿದ್ದಾರೆ ಎಂದು ತೋರಿಸುತ್ತಿದೆ.

ಅಲ್ಲಿಗೆ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ, ಬಸವರಾಜ್ ಬೊಮ್ಮಾಯಿಗಳಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿಯಾಗಬಹುದು. ಹೀಗೆ ಇವರಲ್ಲಿ ಯಾರಾದರೂ ಮುಖ್ಯಮಂತ್ರಿಯಾದರೆ ನಾಯಕರು, ಮಠಾಧೀಶರ ಲಿಂಗಾಯತ್ ವಿರೋಧ ಶಮನವಾಗುತ್ತದೆ ಎನ್ನುವ ಮುಂದಾಲೋಚನೆಯಿಂದ ಈ ಕೆಲವೇ ಹೆಸರುಗಳನ್ನು ಬಿ.ಜೆ.ಪಿ. ಹಿಂದೆಮುಂದೆ ಮಾಡಿ ನಿರ್ಧಾರ ಪ್ರಕಟಿಸಲಿದೆ ಎನ್ನುವ ಮಾತಿನಲ್ಲಿ ಹುರುಳಿಲ್ಲ ಎನ್ನುವಂತಿಲ್ಲ.

rss ಬ್ರಾಹ್ಮಣ ಲಾಬಿ- ಬಿ.ಜೆ.ಪಿ. ಶಕ್ತಿ,ನಿಯಂತ್ರಕ ದಂಡವಾದ ರಾ.ಸೇ.ಸಂಘ ಬಿ.ಎಲ್. ಸಂತೋಷ್, ಪ್ರಹಲ್ಹಾದ್ ಜೋಷಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರುಗಳನ್ನು ಸೂಚಿಸಿರುವಲ್ಲಿ ಯಾವುದೇ ವಿಶೇಷವಿಲ್ಲ ಯಾಕೆಂದರೆ ಸಂಘ ಬ್ರಾಹ್ಮಣರನ್ನು ಬಿಟ್ಟು ಬೇರೆಯವರ ಪರವಾಗಿ ವಕಾಲತ್ತು ವಹಿಸಿರುವ ಪ್ರಸಂಗ ಸಂಘದ ಇತಿಹಾಸದಲ್ಲೇ ಇಲ್ಲ.

ಈ ಬ್ರಾಹ್ಮಣ, ಲಿಂಗಾಯತ ಲೆಕ್ಕಾಚಾರ, ಲಾಬಿಗಳ ನಡುವೆ ಒಕ್ಕಲಿಗರಲ್ಲಿ ಸಿ.ಟಿ.ರವಿ ಹೆಸರು ಮುಂದೆ ಮಾಡಿ ತೆರೆಮರೆಯಲ್ಲಿರುವ ಸಜ್ಜನ ಅರಗ ಜ್ಞಾನೇಂದ್ರರನ್ನು ಅಥವಾ ಸಚಿವ ಶ್ರೀನಿವಾಸ (ಈಡಿಗ) ಪೂಜಾರಿಯವರನ್ನು ನಿಷ್ಠೆ, ಪ್ರಾಮಾಣಿಕತೆ, ವಿಧೇಯತೆಗಳ ಆಧಾರದಲ್ಲಿ ಮುಖ್ಯಮಂತ್ರಿಯನ್ನಾಗಿಸಿ ಬಿ.ಎಲ್. ಸಂತೋಷರ ಮೂಲಕ ಆಡಳಿತ ನಡೆಸುವ ಲೆಕ್ಕಾಚಾರ ಬಿ.ಜೆ.ಪಿ. ಮತ್ತು ಸಂಘದ ಹೈಕಮಾಂಡ್ ಯೋಚನೆ ಎನ್ನುವ ಊಹೆಗಳೂ ಇವೆ.

ಹೀಗೆ ಲೆಕ್ಕಾಚಾರ, ಜಾತಿಲಾಬಿ, ದಲಿತರ ಕೋಟಾ ಇವುಗಳ ಮಧ್ಯೆ ಬಿ.ಜೆ.ಪಿ., ರಾ.ಸೇ.ಸಂಘದ ಗುಪ್ತಕಾರ್ಯಸೂಚಿಗಳ ನಡುವೆ ಮುಂದಿನ ವಾರ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲಕ್ಕೆ ಈವರೆಗೂ ಸಷ್ಟ ಉತ್ತರ ಸಿಕ್ಕಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *