ಭೂಮಿ ಉಳಿಸಿಕೊಳ್ಳುವುದು ಹೇಗೆ?

-ದೇವನೂರ ಮಹಾದೇವ

ಮಣ್ಣಿನ ಜೀವಂತಿಕೆ ಕಾಪಾಡಿಕೊಳ್ಳಲು ನಾವಿಲ್ಲಿ ಆಲೋಚಿಸುತ್ತಿದ್ದೇವೆ. ಆದರೆ ಇಂದಿನ ಸರ್ಕಾರಗಳು ಭೂಮಿಯನ್ನೇ ಕೊಂದು ನೇತುಹಾಕುತ್ತಿವೆ. ಭೂಮಿಯ ಜೊತೆಗೆ ಯಾವುದೇ ನೈಸರ್ಗಿಕ ಸಂಪತ್ತಿಗೂ ಉಳಿಗಾಲವಿಲ್ಲದ ಕಡೆಗೆ ನಾವು ಚಲಿಸುತ್ತಿದ್ದೇವೆ. ಇದಕ್ಕೆ ಕೇಂದ್ರ ಜಾರಿಗೊಳಿಸಬೇಕೆಂದಿರುವ ಯಮಪಾಶದ ಜವರಾಯನಂತಿರುವ ಭೂಸ್ವಾಧೀನ ಸುಗ್ರೀವಾಜ್ಞೆ-ಇದೊಂದನ್ನೇ ನೋಡಿದರೂ ಸಾಕು. ಇಂಥ ಭೂಸ್ವಾಧೀನ ಸುಗ್ರೀವಾಜ್ಞೆ ಮನುಷ್ಯ ಮಾತ್ರದವರು ಮಾಡಲಾರರು. ಎದೆಯಲ್ಲಿ ಹೃದಯವಿಲ್ಲದ, ಮಿದುಳೊಳಗೆ ಮನಸ್ಸು ಇಲ್ಲದ ರೊಬೋಟ್ ಯಂತ್ರ ಮಾನವ ಮಾತ್ರ ಮಾಡಬಹುದಾದ ಕಾನೂನಿನಂತಿದೆ ಇದು.

ಮಣ್ಣಿನ ಜೀವಂತಿಕೆಯನ್ನು ಕಾಪಾಡಲು ಇಲ್ಲಿ ಚರ್ಚಿಸಲ್ಪಡುವ ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದಂತೆ. ಭೂ ಹಂತಕರ ಪರವಾದ ಈ ಸರ್ಕಾರಗಳು ತಮ್ಮ ಭೂ ಹತ್ಯೆಯನ್ನು ಮರೆ ಮಾಚಲು ಭೂ ಫಲವತ್ತತೆ ಕಾಪಾಡುವ ಹೆಸರಲ್ಲಿ ಒಂದಿಷ್ಟು ಹಣ ಚೆಲ್ಲಬಹುದು, ಒಂದಿಷ್ಟು ಸರ್ಕಾರಿ ಕಾರ್ಯಕ್ರಮಗಳನ್ನು ಮಾಡಲೂಬಹುದು. ಮಣ್ಣಿನ ಜೀವಂತಿಕೆ ಚರ್ಚಿಸುವತ್ತ ಗಮನ ಸೆಳೆದು ಮತ್ತಷ್ಟು ಭೂಮಿಯನ್ನು ನಿರಾಯಾಸ ಧ್ವಂಸ ಮಾಡಲೂಬಹುದು. ಇದು, ಭೂಮಿಯನ್ನು ಅಗೆದು ಬಗೆದು ಟಾರು ಮರಳು ಮಾಡಿ ಕೊಂದು ಅದರೊಳಗೆ ಜೀವ ಕಾಪಾಡುವ ಮಾತನಾಡಿದಂತಾಗುತ್ತದೆ. ಜೊತೆಗೆ ಇಂಥ ಸಮಸ್ಯೆಗಳನ್ನು ತಟ್ಟೆ ಮಾಡಿಕೊಂಡು ಒಂದಿಷ್ಟು ಜನಕ್ಕೆ ಹೊಟ್ಟೆಯಾಪ್ತಿ ನಡೆಯಬಹುದು ಅಷ್ಟೇ.

ಹಾಗಾದರೆ ಹೇಗೆ? ಭೂ ಜೀವಂತಿಕೆ ಕಾಪಾಡುವ ಸಮಸ್ಯೆಯನ್ನು ಭೂಸ್ವಾಧೀನ ಸುಗ್ರೀವಾಜ್ಞೆ ವಿರೋಧಕ್ಕೆ ತಳಕು ಹಾಕಬೇಕಾಗಿದೆ. ಎರಡನ್ನೂ ಜೊತೆಗೂಡಿಸಿ ಒಂದೇ ಎಂಬಂತೆ ನೋಡಬೇಕಾಗಿದೆ. ನಾಳೆ ಈ ಭೂಮಿ ಉಳಿಸಿಕೊಂಡು ಬದುಕಿ ಬಾಳಬೇಕಾದ ವಿದ್ಯಾರ್ಥಿ ಯುವಜನತೆಯಲ್ಲಿ ಎಚ್ಚರ ಮೂಡಿಸಬೇಕಾಗಿದೆ; ಜನಾಂದೋಲನಕ್ಕೆ ಪ್ರೇರಣೆಯಾಗಬೇಕಾಗಿದೆ. ಇದಾಗದಿದ್ದರೆ ನಾವು ಬಿಳಿಬಟ್ಟೆ ವರದಿಗಾರರೋ ವಕ್ತಾರರೋ ಆಗಿಬಿಡುತ್ತೇವೆ.

ನಮ್ಮ ಮುಂದೆ ಎಷ್ಟು ಕತ್ತಲು ಇದೆ ಎಂದರೆ-ನೈಸರ್ಗಿಕ ಸಂಪತ್ತನ್ನು ಧ್ವಂಸಿಸುವ ಭೂ ಕೊಲೆಗಡುಕರ ಕೈಗೊಂಬೆಯಾಗಿ ಇಂದಿನ ರಾಜಕಾರಣ ಕುಣಿಯುತ್ತಿದೆ. ಹಿಂದೆ ರಾಜನ ಆಸ್ಥಾನವಿತ್ತು, ಅಲ್ಲಿ ನರ್ತಕಿಯರು ಕುಣಿಯುತ್ತಿದ್ದರು. ಇಂದು ಅಂಬಾನಿ-ಅದಾನಿ ಥರದವರ ಆಸ್ಥಾನದಲ್ಲಿ ಬಣ್ಣಬಣ್ಣದ ವೇಷಧರಿಸಿ ಕುಣಿಯುವ ನರ್ತಕಿಯರಂತೆ ನಮ್ಮ ಸರ್ಕಾರಗಳಾಗಿಬಿಟ್ಟಿವೆ. ಅಂದರೆ ಯಾರಿಗೋ ಮೇಸ್ತ್ರಿಗಳಂತೆ ಇಂದಿನ ಸರ್ಕಾರಗಳು ಕೆಲಸ ಮಾಡುತ್ತಿವೆ.

ಹೇಳಿ, ಭೂಮಿ ಉಳಿಸಿಕೊಳ್ಳುವುದು ಹೇಗೆ? ಆಮೇಲೆ ಅದರೊಳಗಿನ ಮಣ್ಣಿನ ಜೀವ ಉಳಿಸಿಕೊಳ್ಳುವುದು ಹೇಗೆ?

[ಅಂತಾರಾಷ್ಟ್ರೀಯ ಮಣ್ಣು ವರ್ಷದ ಅಂಗವಾಗಿ ನೇಸರ, ಸಾಯಿಲ್, ಪ್ರಿಸ್ಟೀನ್, ಸಂವಾದ, ಗ್ರೀನ್ ಪ್ರತಿಷ್ಠಾನಗಳು ಸಂಯುಕ್ತವಾಗಿ 15.3.2015 ಭಾನುವಾರ ಮೈಸೂರಿನ ರಂಗಾಯಣದಲ್ಲಿ ಆಯೋಜಿಸಿದ್ದ ‘ನಾವರಿಯದ ಮಣ್ಣಿನ ಲೋಕ’ ಕುರಿತ ಸಂವಾದ-ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ದೇವನೂರ ಮಹಾದೇವ ಅವರ ಭಾಷಣದ ಬರಹ ರೂಪ]

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಹಾವಿನ ಸೇಡು ಹೆಣ್ಣಿನ ಮೋಸಗಳಿಗೆ ಬಹಳ ವರ್ಷಗಳ ಆಯುಷ್ಯಂತೆ! A ಉಪೇಂದ್ರ & B ಕೂಡಾ ಉಪೇಂದ್ರ!

ಶ್‌ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಉಪೇಂದ್ರರ ಮುಂದಿನ ಚಿತ್ರ ಯಾವುದು? ಎನ್ನುವ ಕುತೂಹಲದ ಪ್ರಶ್ನೆಗೆ ಉಪೇಂದ್ರ ಎ ಎಂದು ಉತ್ತರ ಕೊಟ್ಟಿದ್ದರು. ಎ.ಸಿನೆಮಾ...

ಕಶಿಗೆಯಲ್ಲಿ ಸಂಸ್ಕೃತಿ ಚಿಂತನ

ಸಿದ್ದಾಪುರತಾಲೂಕಿನ ಕಶಿಗೆಯ ಶ್ರೀ ಕೇಶವನಾರಾಯಣ ದೇವಾಲಯದ ಗಣೇಶಹೆಗಡೆ ದೊಡ್ಮನೆ ಸಭಾಭವನದಲ್ಲಿ ಮೇ.೧೭ರಂದು ಹಿರಿಯ ಪತ್ರಕರ್ತ ಜಿ.ಕೆ.ಭಟ್ಟ ಕಶಿಗೆ ಅವರ ಕುರಿತಾದ ಸಂಸ್ಕೃತಿ ಚಿಂತನ ಕಾರ್ಯಕ್ರಮ...

ಶಿರಸಿ ಪ್ರೀತಮ್‌ ಪಾಲನಕರ್‌ ಸಾವಿನ ಹಿಂದಿನ ಕಾರಣ ಏನು? ಇಲ್ಲಿದೆ ಕ್ಲೂ!

ಪ್ರೀತಮ್‌ ಪಾಲನಕರ್‌ ಆತ್ಮಹತ್ಯೆಗೆ ಕಾರಣ ಮೊಬೈಲ್‌ ಕರೆಯೆ? ಶಿರಸಿ ನಗರದ ಕಾಮಧೇನು ಜ್ಯುವೆಲ್ಲರ್ಸ್‌ ನ ಮಾಲಿಕ ಪ್ರಕಾಶ್‌ ಪಾಲನಕರ್‌ ರ ಹಿರಿಯ ಪುತ್ರ ಪ್ರೀತಮ್‌...

ಕಬೀರ್‌ ಸಾಬ್‌ ರಿಗೂ ಕಾಂಗ್ರೆಸ್‌ ಗೂ ಎತ್ತಣಿದೆತ್ತ ಸಂಬಂಧವಯ್ಯ…..

ಕಬೀರ್‌ ನಿಲ್ಕುಂದ ಎಂಬ ಫೇಸ್‌ ಬುಕ್‌ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್‌ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ. ಕಬೀರ್‌ ಎನ್ನುವ ಪಕ್ಕಾ...

ನಾಣಿಕಟ್ಟದಲ್ಲಿ‌ ವಸಂತ ಸಂಭ್ರಮ; ಸನ್ಮಾನ

ಸಿದ್ದಾಪುರ: ವಿಶ್ವಶಾಂತಿ‌ ಸೇವಾ ಟ್ರಸ್ಟ್ ಸಂಸ್ಥೆಯು‌ ನಾಣಿಕಟ್ಟದಲ್ಲಿ ತ್ಯಾಗಲಿ ಸೊಸೈಟಿಯ ಸಹಕಾರದೊಂದಿಗೆ ಮೇ.೧೮ರ ಸಂಜೆ ೫:೪೦ಕ್ಕೆ ವಸಂತ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ.ನಾಣಿಕಟ್ಟದ ಸೊಸೈಟಿಯ ಶತಮಾನೋತ್ಸವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *