breaking news- ಹುಬ್ಬಳ್ಳಿ ಹುಡ್ಗ ಕರ್ನಾಟಕ ಮುಖ್ಯಮಂತ್ರಿ!

ಅರವಿಂದ ಬೆಲ್ಲದ್ ಮುಂದಿನ ಕರ್ನಾಟಕದ ಮುಖ್ಯಮಂತ್ರಿ, ಅರವಿಂದ ಬೆಲ್ಲದ್ ವೆಂಕಯ್ಯ ನಾಯ್ಡು,ಅಮಿತ್ಶಾ ರಿಂದ ಹಿಡಿದು ಅನೇಕ ಮುಖಂಡರ ಸಂಪರ್ಕದಲ್ಲಿದ್ದವರು.ಯಡಿಯೂರಪ್ಪನವರನ್ನು ಬದಲಾಯಿಸುವ ಕಾರ್ಯಯೋಜನೆ ಹಿಂದಿದ್ದ ವ್ಯಕ್ತಿ ಮತ್ತು ಯಡಿಯೂರಪ್ಪ ವಿರೋಧಿ ಬಣದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೇಂದ್ರಕ್ಕೆ ರಾಜ್ಯದ ವರ್ತಮಾನವನ್ನು ದಿನನಿತ್ಯ ಪೂರೈಸುತಿದ್ದವರು ಎಂದು ಹೇಳಲಾಗುತ್ತಿರುವ ಬೆಲ್ಲದ್ ಕೇಂದ್ರದ ಮುಖಂಡರ ನೆಚ್ಚಿನ ಆಯ್ಕೆ ಹಾಗಾಗಿ ಅವರ ಹೆಸರೇ ಇಂದು ಅಂತಿಮಗೊಳ್ಳುತ್ತಿದೆ ಎಂದು ಆರ್. ಎಸ್,ಎಸ್. ವಲಯ ಹೇಳುತ್ತಲೇ ಆಶ್ಚರ್ಯಕರವಾಗಿ ಇಂದು ಅಥವಾ ಒಂದು ವರ್ಷದೊಳಗೆ ಬಿ.ಎಲ್. ಸಂತೋಷ ಹೆಸರೇ ಅಂತಿಮಗೊಳ್ಳಲಿದೆ ಎನ್ನುವ ರಹಸ್ಯವನ್ನೂ ಪರಿವಾರ ಹೇಳುತ್ತಿದೆ!.

ಆದರೆ ಈ ಸಂಘ ಪರಿವಾರಕ್ಕೆ ತಲೆನೋವಾಗಿರುವ ಇನ್ನೊಂದು ಹೆಸರು ಮೂಲ ಜನತಾ ಪರಿವಾರದ ಬಸವರಾಜ್ ಬೊಮ್ಮಾಯಿ. ಬಸವರಾಜ್ ಬೊಮ್ಮಾಯಿ ಮಾಜಿಮುಖ್ಯಮಂತ್ರಿ ದಿ.ಎಸ್.ಆರ್. ಬೊಮ್ಮಾಯಿಯವರ ಪುತ್ರ. ರಾಜಕೀಯ ಮನೆತನದ ಹಿನ್ನೆಲೆ, ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಶರಣರ ಗುಣ, ವಿದ್ಯೆ-ವಿಲಯ,ಸರಳತೆ, ಬುದ್ಧಿವಂತಿಕೆ ಜೊತೆಗೆ ಚಾಣಾಕ್ಷತೆ ಈ ಎಲ್ಲಾ ಗುಣ ವಿಶೇಶಗಳ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪನವರ ಪರಮಾಪ್ತರು. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಹಾಯಾಗಿ ವಿಶ್ರಾಂತಿ ಪಡೆಯಬಹುದು ಯಾಕೆಂದರೆ ಬೊಮ್ಮಾಯಿ ಯಡಿಯೂರಪ್ಪ ಪುತ್ರರ ಆಪ್ತರು.

ಇದೇ ಕಾರಣಕ್ಕೆ ಈಗ ಬಿ.ಜೆ.ಪಿ. ಸಂಘದ ವಲಯಗಳಲ್ಲಿ ಅಳೆದುತೂಗುವ ಕೆಲಸ ನಡೆಯುತ್ತಿದೆ. ಸಂಘ ಮತ್ತು ಬಿ.ಜೆ.ಪಿ. ಹೈಕಮಾಂಡ್ ಅರವಿಂದ ಬೆಲ್ಲದ್ ಎನ್ನುವ ಉದ್ಯಮಿಯನ್ನು ಬೆಂಬಲಿಸುವ ಹಿಂದೆ ಅವರದ್ದೇ ಆದ ಲೆಕ್ಕಾಚಾರಗಳಿವೆ. ಆದರೆ ಬೊಮ್ಮಾಯಿಗೆ ಯಡಿಯೂರಪ್ಪ ಜೊತೆಗೆ ಜನತಾಪರಿವಾರದ ಸಿದ್ಧರಾಮಯ್ಯ, ಜೆ.ಡಿ.ಎಸ್. ಪರಿವಾರದ ಬೆಂಬಲವಿದೆ.

ಸಂಘ ಮೊದಲು ಬಿ.ಎಲ್. ಸಂತೋಷರನ್ನು ಮುಖ್ಯಮಂತ್ರಿ ಮಾಡುವ ಕಸರತ್ತು ಮಾಡಿ ನಂತರ ಯಾರೇ ಆಗಲಿ ಅವರು ಬ್ರಾಹ್ಮಣರಾಗಲಿ ಎಂದು ತನ್ನ ಅಭಿಪ್ರಾಯ ತೇಲಿಸಿತ್ತು. ಬ್ರಾಹ್ಮಣರನ್ನು ಅಧಿಕಾರಕ್ಕೆ ಕೂರಿಸುವ ಸಂಘದ ಯತ್ನಕ್ಕೆ ತಮ್ಮ ಧ್ವನಿ ಸೇರಿಸಿದ ಮಾಧ್ಯಮಗಳು ಜೋಷಿ, ಹೆಗಡೆ, ಸಂತೋಷ, ಇನ್ನೂ ಅನೇಕರ ಹೆಸರು ಸೇರಿಸಿ ಜನಾಭಿಪ್ರಾಯಕ್ಕೆ ಯತ್ನಿಸಿದ್ದೇ ಪ್ರಯತ್ನಿಸಿದ್ದು!

ಈಗ ಸಂಘದ ಕಾರ್ಯಾಚರಣೆಗೆ ಏಟು ಬಿದ್ದಿದೆ. ಸಂಘ, ಬಿ.ಜೆ.ಪಿ. ಹೈಕಮಾಂಡ್ ಏನೆಲ್ಲಾ ಕಸರತ್ತು ನಡೆಸಿದರೂ ಅರವಿಂದ ಬೆಲ್ಲದ್ ರಿಗೆ ಬೆಂಬಲ ಸಿಗುತ್ತಿಲ್ಲ. ಬ್ರಾಹ್ಮಣರು, ಸಂಘ, ಸಂಘದ ಹಿನ್ನೆಲೆಯ ಶ್ರೀಮಂತರು, ಸಳತೆಯ ಸೋಗಿನ ಮುಖಂಡರು ಹೀಗೆ ಏನೇನೆಲ್ಲಾ ಪ್ರಯತ್ನ, ಪ್ರಯೋಗಗಳ ನಂತರ ಈಗ ಸಂಘದ ಬೆಲ್ಲದ್ ಗೆ ಎದುರಾಗಿ ಯಡಿಯೂರಪ್ಪ ಪರಿವಾರದ ಬಸವರಾಜ್ ಬೊಮ್ಮಾಯಿ ಅಂತಿಮ ಸ್ಫರ್ಧೆಯಲ್ಲಿದ್ದಾರೆ. ಇನ್ನೇನು ಎರಡ್ಮೂರು ಗಂಟೆಗಳ ಅವಧಿಗೆ ಮೊದಲು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುವವರು ಸಂಘದ ಬೆಲ್ಲದ್ ಅಥವಾ ಜನತಾಪರಿವಾರದ ಬೊಮ್ಮಾಯಿ ಎನ್ನುವುದಷ್ಟೇ ಬಾಕಿ.

ಕಾಂಗ್ರೆಸ್ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ ಜನತಾಪರಿವಾರ ಪರಿಣಾಮಕಾರಿ ಎಂದು ಒಪ್ಪಿಕೊಂಡ ನಂತರ ಬಿ.ಜೆ.ಪಿ. ಕೂಡಾ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿ ತಮ್ಮ ಕೋಮುವಾದಿ ಪರಿವಾರಕ್ಕಿಂತ ಜನತಾ ಪರಿವಾರ ಸ್ವೀಕಾರಾರ್ಹ ಎನ್ನುವುದನ್ನು ಒಪ್ಪಿಕೊಳ್ಳಲು ಇನ್ನು ಕೆಲವೇ ಸಮಯ ಬಾಕಿ ಎನ್ನುವುದು ಈಗಿನ ವಾಸ್ತವ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *