breaking news- ಹುಬ್ಬಳ್ಳಿ ಹುಡ್ಗ ಕರ್ನಾಟಕ ಮುಖ್ಯಮಂತ್ರಿ!

ಅರವಿಂದ ಬೆಲ್ಲದ್ ಮುಂದಿನ ಕರ್ನಾಟಕದ ಮುಖ್ಯಮಂತ್ರಿ, ಅರವಿಂದ ಬೆಲ್ಲದ್ ವೆಂಕಯ್ಯ ನಾಯ್ಡು,ಅಮಿತ್ಶಾ ರಿಂದ ಹಿಡಿದು ಅನೇಕ ಮುಖಂಡರ ಸಂಪರ್ಕದಲ್ಲಿದ್ದವರು.ಯಡಿಯೂರಪ್ಪನವರನ್ನು ಬದಲಾಯಿಸುವ ಕಾರ್ಯಯೋಜನೆ ಹಿಂದಿದ್ದ ವ್ಯಕ್ತಿ ಮತ್ತು ಯಡಿಯೂರಪ್ಪ ವಿರೋಧಿ ಬಣದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕೇಂದ್ರಕ್ಕೆ ರಾಜ್ಯದ ವರ್ತಮಾನವನ್ನು ದಿನನಿತ್ಯ ಪೂರೈಸುತಿದ್ದವರು ಎಂದು ಹೇಳಲಾಗುತ್ತಿರುವ ಬೆಲ್ಲದ್ ಕೇಂದ್ರದ ಮುಖಂಡರ ನೆಚ್ಚಿನ ಆಯ್ಕೆ ಹಾಗಾಗಿ ಅವರ ಹೆಸರೇ ಇಂದು ಅಂತಿಮಗೊಳ್ಳುತ್ತಿದೆ ಎಂದು ಆರ್. ಎಸ್,ಎಸ್. ವಲಯ ಹೇಳುತ್ತಲೇ ಆಶ್ಚರ್ಯಕರವಾಗಿ ಇಂದು ಅಥವಾ ಒಂದು ವರ್ಷದೊಳಗೆ ಬಿ.ಎಲ್. ಸಂತೋಷ ಹೆಸರೇ ಅಂತಿಮಗೊಳ್ಳಲಿದೆ ಎನ್ನುವ ರಹಸ್ಯವನ್ನೂ ಪರಿವಾರ ಹೇಳುತ್ತಿದೆ!.

ಆದರೆ ಈ ಸಂಘ ಪರಿವಾರಕ್ಕೆ ತಲೆನೋವಾಗಿರುವ ಇನ್ನೊಂದು ಹೆಸರು ಮೂಲ ಜನತಾ ಪರಿವಾರದ ಬಸವರಾಜ್ ಬೊಮ್ಮಾಯಿ. ಬಸವರಾಜ್ ಬೊಮ್ಮಾಯಿ ಮಾಜಿಮುಖ್ಯಮಂತ್ರಿ ದಿ.ಎಸ್.ಆರ್. ಬೊಮ್ಮಾಯಿಯವರ ಪುತ್ರ. ರಾಜಕೀಯ ಮನೆತನದ ಹಿನ್ನೆಲೆ, ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ಶರಣರ ಗುಣ, ವಿದ್ಯೆ-ವಿಲಯ,ಸರಳತೆ, ಬುದ್ಧಿವಂತಿಕೆ ಜೊತೆಗೆ ಚಾಣಾಕ್ಷತೆ ಈ ಎಲ್ಲಾ ಗುಣ ವಿಶೇಶಗಳ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪನವರ ಪರಮಾಪ್ತರು. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾದರೆ ಯಡಿಯೂರಪ್ಪ ಹಾಯಾಗಿ ವಿಶ್ರಾಂತಿ ಪಡೆಯಬಹುದು ಯಾಕೆಂದರೆ ಬೊಮ್ಮಾಯಿ ಯಡಿಯೂರಪ್ಪ ಪುತ್ರರ ಆಪ್ತರು.

ಇದೇ ಕಾರಣಕ್ಕೆ ಈಗ ಬಿ.ಜೆ.ಪಿ. ಸಂಘದ ವಲಯಗಳಲ್ಲಿ ಅಳೆದುತೂಗುವ ಕೆಲಸ ನಡೆಯುತ್ತಿದೆ. ಸಂಘ ಮತ್ತು ಬಿ.ಜೆ.ಪಿ. ಹೈಕಮಾಂಡ್ ಅರವಿಂದ ಬೆಲ್ಲದ್ ಎನ್ನುವ ಉದ್ಯಮಿಯನ್ನು ಬೆಂಬಲಿಸುವ ಹಿಂದೆ ಅವರದ್ದೇ ಆದ ಲೆಕ್ಕಾಚಾರಗಳಿವೆ. ಆದರೆ ಬೊಮ್ಮಾಯಿಗೆ ಯಡಿಯೂರಪ್ಪ ಜೊತೆಗೆ ಜನತಾಪರಿವಾರದ ಸಿದ್ಧರಾಮಯ್ಯ, ಜೆ.ಡಿ.ಎಸ್. ಪರಿವಾರದ ಬೆಂಬಲವಿದೆ.

ಸಂಘ ಮೊದಲು ಬಿ.ಎಲ್. ಸಂತೋಷರನ್ನು ಮುಖ್ಯಮಂತ್ರಿ ಮಾಡುವ ಕಸರತ್ತು ಮಾಡಿ ನಂತರ ಯಾರೇ ಆಗಲಿ ಅವರು ಬ್ರಾಹ್ಮಣರಾಗಲಿ ಎಂದು ತನ್ನ ಅಭಿಪ್ರಾಯ ತೇಲಿಸಿತ್ತು. ಬ್ರಾಹ್ಮಣರನ್ನು ಅಧಿಕಾರಕ್ಕೆ ಕೂರಿಸುವ ಸಂಘದ ಯತ್ನಕ್ಕೆ ತಮ್ಮ ಧ್ವನಿ ಸೇರಿಸಿದ ಮಾಧ್ಯಮಗಳು ಜೋಷಿ, ಹೆಗಡೆ, ಸಂತೋಷ, ಇನ್ನೂ ಅನೇಕರ ಹೆಸರು ಸೇರಿಸಿ ಜನಾಭಿಪ್ರಾಯಕ್ಕೆ ಯತ್ನಿಸಿದ್ದೇ ಪ್ರಯತ್ನಿಸಿದ್ದು!

ಈಗ ಸಂಘದ ಕಾರ್ಯಾಚರಣೆಗೆ ಏಟು ಬಿದ್ದಿದೆ. ಸಂಘ, ಬಿ.ಜೆ.ಪಿ. ಹೈಕಮಾಂಡ್ ಏನೆಲ್ಲಾ ಕಸರತ್ತು ನಡೆಸಿದರೂ ಅರವಿಂದ ಬೆಲ್ಲದ್ ರಿಗೆ ಬೆಂಬಲ ಸಿಗುತ್ತಿಲ್ಲ. ಬ್ರಾಹ್ಮಣರು, ಸಂಘ, ಸಂಘದ ಹಿನ್ನೆಲೆಯ ಶ್ರೀಮಂತರು, ಸಳತೆಯ ಸೋಗಿನ ಮುಖಂಡರು ಹೀಗೆ ಏನೇನೆಲ್ಲಾ ಪ್ರಯತ್ನ, ಪ್ರಯೋಗಗಳ ನಂತರ ಈಗ ಸಂಘದ ಬೆಲ್ಲದ್ ಗೆ ಎದುರಾಗಿ ಯಡಿಯೂರಪ್ಪ ಪರಿವಾರದ ಬಸವರಾಜ್ ಬೊಮ್ಮಾಯಿ ಅಂತಿಮ ಸ್ಫರ್ಧೆಯಲ್ಲಿದ್ದಾರೆ. ಇನ್ನೇನು ಎರಡ್ಮೂರು ಗಂಟೆಗಳ ಅವಧಿಗೆ ಮೊದಲು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗುವವರು ಸಂಘದ ಬೆಲ್ಲದ್ ಅಥವಾ ಜನತಾಪರಿವಾರದ ಬೊಮ್ಮಾಯಿ ಎನ್ನುವುದಷ್ಟೇ ಬಾಕಿ.

ಕಾಂಗ್ರೆಸ್ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ ಜನತಾಪರಿವಾರ ಪರಿಣಾಮಕಾರಿ ಎಂದು ಒಪ್ಪಿಕೊಂಡ ನಂತರ ಬಿ.ಜೆ.ಪಿ. ಕೂಡಾ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿ ತಮ್ಮ ಕೋಮುವಾದಿ ಪರಿವಾರಕ್ಕಿಂತ ಜನತಾ ಪರಿವಾರ ಸ್ವೀಕಾರಾರ್ಹ ಎನ್ನುವುದನ್ನು ಒಪ್ಪಿಕೊಳ್ಳಲು ಇನ್ನು ಕೆಲವೇ ಸಮಯ ಬಾಕಿ ಎನ್ನುವುದು ಈಗಿನ ವಾಸ್ತವ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *