ಸ್ಪೀಕರ್ ಆಗ್ತಾರಾ ಮಂತ್ರಿ…ವಿಶ್ವೇಶ್ವರ ಹೆಗಡೆ ಸಚಿವಸ್ಥಾನದ ಗುಟ್ಟು ರಟ್ಟು ಮಾಡಿದ samajamukhi.net

ಮುಂದಿನ ಸರ್ಕಾರ ಅಸ್ಥಿತ್ವಕ್ಕೆ ಬರುವವರೆಗೂ ನಾನೇ ವಿಧಾನಸಭಾ ಅಧ್ಯಕ್ಷ ಎನ್ನುವ ವಿಶ್ವೇಶ್ವರರ ಮಾತು ಈಗಿನ ಹೊಸ ಸಚಿವ ಸಂಪುಟದ ವರೆಗೋ ಅಥವಾ ಈ ಅವಧಿಯ ನಂತರ ಮುಂದಿನ ಸರ್ಕಾರ ಬರುವವರೆಗೂ ತಾಂತ್ರಿವಾಗಿ ಸ್ಫೀಕರ್ ಆಗಿ ಮುಂದುವರಿಯುವ ಸಾಂಪ್ರದಾಯಿಕ ಶಿಷ್ಟಾಚಾರದ ಬಗ್ಗೆ ಹೇಳಿದ ಮಾತೊ ಎನ್ನುವುದಕ್ಕೆ ಈ ವಾರವೇ ಉತ್ತರ ಸಿಗಲಿದೆ.

ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ  ಎಂದು ಬಿಂಬಿತವಾಗಿದ್ದ ರಾಜ್ಯ ವಿಧಾನಸಭಾ ಅಧ್ಯಕ್ಷ ಶಿರಸಿ ಕ್ಷೇತ್ರದ  ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಈಗಿನ ಸರ್ಕಾರದಲ್ಲಿ ಸಚಿವರಾಗ್ತಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ.

ರಾಜ್ಯ ಸಚಿವ ಸಂಪುಟ ಪುನರ್ ರಚನೆಯಲ್ಲಿ ಹಿರಿಯರಿಗೆಲ್ಲಾ ಕೋಕ್ ಕೊಟ್ಟು ಹೊಸಬರಿಗೆ ಸಚಿವಸ್ಥಾನ ನೀಡಲಾಗುತ್ತಿದೆ ಎನ್ನುವ ಗಾಳಿಸುದ್ದಿಗಳ ನಡುವೆ ಮುಖ್ಯಮಂತ್ರಿ ಹುದ್ದೆಗೆ ಕಾಗೇರಿ ಹೆಸರು ಪ್ರಸ್ಥಾಪವಾದಂತೆ ಈಗ ಸಚಿವರಾಗುವ ವಿಷಯದಲ್ಲೂ ಇವರ ಹೆಸರು ಚಲಾವಣೆಯಲ್ಲಿದೆ ಎನ್ನಲಾಗುತ್ತಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಫೀಕರ್ ಆಗಿರುವುದು ಅವರ ಆಯ್ಕೆಯಲ್ಲ, ಕಾಗೇರಿ ಅನುಯಾಯಿಗಳು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವ ಬೇಡಿಕೆಯನ್ನು ಆಗಾಗ ಮುಂದಿಡುತಿದ್ದಾರೆ. ಈಗಲೂ ಕಾಗೇರಿ ಸಚಿವರಾಗಬೇಕು ಎನ್ನುವವರು ಅವರ ಆಪ್ತರೇ.
ವಿಧಾನಸಭಾ ಅಧ್ಯಕ್ಷ ಕಾಗೇರಿ ಕಳೆದ ವಾರದ ಪ್ರವಾಹದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಬೆಂಗಳೂರಿನಲ್ಲೇ ಇದ್ದರು.ಕ್ಷೇತ್ರದಲ್ಲಿ ಪ್ರವಾಹದ ಭೀಕರತೆ ಇದ್ದಾಗ ಬೆಂಗಳೂರಿನಲ್ಲಿದ್ದು ಅದಕ್ಕಿಂತ ಹಿಂದೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿ ಚರ್ಚೆಯಾಗುತಿದ್ದಾಗಲೂ ಕಾಗೇರಿ ಎಂದಿನಂತೆ ಮಾಧ್ಯಮಗಳಿಗೂ ಪ್ರತಿಕ್ರೀಯಿಸದೆ ಸುಮ್ಮನಿದ್ದರು.

ಸೊರಬಾ ಸಾಗರ ಕ್ಷೇತ್ರಗಳ ಶಾಸಕರಾದ ಕುಮಾರ ಬಂಗಾರಪ್ಪ,ಹಾಲಪ್ಪ ಜೊತೆ ಕಾರ್ಕಳದ ಸುನಿಲ್ ಕುಮಾರ್ ಸಚಿವರಾಗುವ ಆಸೆ, ನಿರೀಕ್ಷೆಯಲ್ಲಿದ್ದಾರೆ. ಈಡಿಗ ಕೋಟಾದ ಶ್ರೀನಿವಾಸ್ ಪೂಜಾರಿ ಕೈಬಿಟ್ಟು, ಕುಮಾರತ್ರಯರಿಗೆ ಕೈಕೊಟ್ಟು ಹಾಲಪ್ಪ ಮಂತ್ರಿಯಾಗುವ ತವಕದಲ್ಲಿದ್ದಾರೆ ಎನ್ನುವುದು ರಾಜಾಹುಲಿ ಯಡಿಯೂರಪ್ಪ ಗುಂಪಿನ ವರ್ತಮಾನ!


ಆದರೆ ಈಗ ಮೌನಮುರಿದಿರುವ ಕಾಗೇರಿ ಕಳೆದ ವಾರ ಪೂರ್ವನಿಗಧಿಯ ಕಾರ್ಯಕ್ರಮಗಳಲ್ಲಿ ತೊಡಗಿ ಬಿಡುವು ದೊರೆತಿರಲಿಲ್ಲ. ಈಗ ಕ್ಷೇತ್ರದಲ್ಲಿದ್ದೇನೆ ಎಂದಿದ್ದಾರೆ. ಸಚಿವ ಸಂಪುಟ ರಚನೆಯಾಗುವವರೆಗೆ ಸರ್ಕಾರದಲ್ಲಿ ಅಸ್ಥಿತ್ವದಲ್ಲಿರುವ ಹುದ್ದೆಗಳೆಂದರೆ ಅದು ಮುಖ್ಯಮಂತ್ರಿಗಳ ಸ್ಥಾನ ಮತ್ತು ವಿಧಾನಸಭಾ ಅಧ್ಯಕ್ಷರ ಹುದ್ದೆ. ಈ ಮಹತ್ವದ ಹುದ್ದೆಯಲ್ಲಿದ್ದಾಗ ಮುಖ್ಯಮಂತ್ರಿ ಎಂದು ಬಿಂಬಿತವಾಗಿದ್ದ ಹೆಗಡೆ ಎಲ್ಲೂ ಮಾತನಾಡಿರಲಿಲ್ಲ.

ಮುಖ್ಯಮಂತ್ರಿ ರೇಸ್, ತಮ್ಮ ಮುಂದಿನ ರಾಜಕಾರಣ ಯಾವ ವಿಷಯದ ಬಗ್ಗೂ ಯಾರಿಗೂ ಮಾತಿಗೆ ಸಿಗದ ವಿಶ್ವೇಶ್ವರ ಹೆಗಡೆಯವರ ಹೆಸರು ಚಾಲ್ತಿಗೆ ಬರಲು ಕಾರಣ ಅವರ ಹಿರಿತನ. ಬಿ.ಜೆ.ಪಿ.ಯ ಹಿರಿಯ ನಾಯಕರಾಗಿರುವ ಹೆಗಡೆ ಎರಡು ಬಾರಿ ಸಚಿವರು ಎರಡು ಬಾರಿ ವಿಧಾನಸಭಾ ಅಧ್ಯಕ್ಷರು ಆಗಿದ್ದವರು. ಈಗ ವಿಶ್ವೇಶ್ವರ ಹೆಗಡೆ ಸಚಿವರಾಗುತ್ತಾರೆ ಎನ್ನುವ ವದಂತಿಗಳಿಗೆ samajamukhi.net ಗೆ ಪ್ರತಿಕ್ರೀಯಿಸಿರುವ ಅವರು ಕೊಟ್ಟ ಉತ್ತರ ಚುಟುಕಾಗಿದೆ.

ವಿವಾದ, ರಗಳೆಗಳಿಂದ ದೂರ ನಿಲ್ಲುವ ವಿಶ್ವೇಶ್ವರ ಮುಂದಿನ ಸರ್ಕಾರ ಅಸ್ಥಿತ್ವಕ್ಕೆ ಬರುವವರೆಗೂ ನಾನೇ ವಿಧಾನಸಭಾ ಅಧ್ಯಕ್ಷ ಎನ್ನುವ ಅವರ ಮಾತು ಈಗಿನ ಹೊಸ ಸಚಿವ ಸಂಪುಟದ ವರೆಗೋ ಅಥವಾ ಈ ಅವಧಿಯ ನಂತರ ಮುಂದಿನ ಸರ್ಕಾರ ಬರುವವರೆಗೂ ತಾಂತ್ರಿವಾಗಿ ಸ್ಫೀಕರ್ ಆಗಿ ಮುಂದುವರಿಯುವ ಸಾಂಪ್ರದಾಯಿಕ ಶಿಷ್ಟಾಚಾರದ ಬಗ್ಗೆ ಹೇಳಿದ ಮಾತೊ ಎನ್ನುವುದಕ್ಕೆ ಈ ವಾರವೇ ಉತ್ತರ ಸಿಗಲಿದೆ.

ನಾನು ಈಗಲೂ ವಿಧಾನಸಭಾ ಅಧ್ಯಕ್ಷ ಸಚಿವನಾಗುವ ಬಗ್ಗೆ ನಾನು ಮಾತನಾಡಲು ಬರುವುದಿಲ್ಲ. ಇದೇ ಪ್ರಶ್ನೆಯನ್ನು ನೀವು ನನಗೆ ಕೇಳುವ ಬದಲು ಸಂಬಂಧಿಸಿದವರಿಗೆ ಕೇಳುವುದು ಸೂಕ್ತ.- ವಿಶ್ವೇಶ್ವರ ಹೆಗಡೆ, ಕಾಗೇರಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *