


ಅನುಭವ ಮಂಟಪದಲಿವಚನ ಸುಧೆ ಹರಿಸಿದಕೋಗಿಲೆಯ ಹತ್ಯೆಯಾಯಿತು
ಶಾಂತಿ ಅಹಿಂಸೆಯಪರಿಮಳ ಪಸರಿಸಿದಪಾರಿವಾಳವೂ ಹತ್ಯೆಯಾಯಿತು


ಜಾತಿ ಧರ್ಮ ಧಿಕ್ಕರಿಸಿಪ್ರೀತಿಯ ಹುಡಿ ಹರಡಿಸಿದಆ ಪತಂಗವೂ ಹತ್ಯೆಯಾಯಿತು
ಮೌಢ್ಯ ವಿರೋಧಿಗಾಗಿನಿತ್ಯ ಕೂಗಿ ಎಬ್ಬಿಸುತ್ತಿದ್ದಕೋಳಿಯೂ ಹತ್ಯೆಯಾಯಿತು
ಹಾಲು-ಹಾಲಾಹಲವಶೋಧಿಸಿ ಸತ್ಯ ಉಲಿವಹಾಲಕ್ಕಿಯೂ ಹತ್ಯೆಯಾಯಿತು
ಗರಿಕೆಯ ಎಳೆತಂದುವೈಚಾರಿಕ ಗೂಡು ಕಟ್ಟಿದ#ಗುಬ್ಬಿಯೂ ಹತ್ಯೆಯಾಯಿತು
ಹದ್ದುಮೀರಿ ಅರಿವು ಬಿತ್ತಿದವರ ಹತ್ಯೆಯಾಗಿದೆ ಹದ್ದಿನ ಸಾಮ್ರಾಜ್ಯದಲಿ. -ಕೆ.ಬಿ.ವೀರಲಿಂಗನಗೌಡ್ರ.
ಸತ್ಯ-
ಊಟ ಬಿಡಬೇಕೆಂದಿದ್ದೆ
ಹಸಿವು ಬಿಡಲಿಲ್ಲ
ನಿದ್ದೆ ಬಿಡಬೇಕೆಂದಿದ್ದೆ
ಕನಸು ಬಿಡಲಿಲ್ಲ
ಜೀವ ಬಿಡಬೇಕೆಂದಿದ್ದೆ
ಬದುಕು ಬಿಡಲಿಲ್ಲ
ಮಾತು ಬಿಡಬೇಕೆಂದಿದ್ದೆ
ಮೌನ ಬಿಡಲಿಲ್ಲ
ಯಾವುದೂ ಬಿಡಲಾರದೆ
ಕೊನೆಗೆ ಗಡ್ಡ ಬಿಟ್ಟಿದ್ದೇನೆ,
ಯಾರಿಗೂ ಈ ಸತ್ಯ ಗೊತ್ತಿಲ್ಲ!
( ಹಳೆಯದು. ಚಿತ್ರದ ಜಾಗದಲ್ಲಿ ಯಾವುದೇ ಗಡ್ಡದ ಫೋಟೋ ಲಗತ್ತಿಸಬಹುದು.) -ಗಣೇಶ್ ಹೊಸ್ಮನೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






