ಜೆ. ಆಯ್. ನಾಯ್ಕ ನಿಧನ & ಗಣೇಶ್ ಹೆಗಡೆ ಜನ್ಮಶತಾಬ್ಧಿ ಹಾಗೂ ಇತರ ಸುದ್ದಿಗಳು

ಹೆಗಡೆ ಜನ್ಮಶತಾಬ್ಧಿ- ಸಮಾಜದ ಎಲ್ಲ ವರ್ಗಗಳ ಜನರ ಅಭಿಮಾನಕ್ಕೆ ಪಾತ್ರರಾಗಿದ್ದ ಗಣೇಶ ಹೆಗಡೆ ದೊಡ್ಮನೆ ಶಿರಸಿ- ಸಿದ್ದಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ವಿಶೇಷವಾಗಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಹಕಾರ ಕ್ಷೇತ್ರ, ಬ್ಯಾಂಕಿಂಗ್ ವಲಯ ಮತ್ತು ಧಾರ್ಮಿಕವಾಗಿ ನೀಡಿದ ಕೊಡುಗೆಗಳ ನೆನಪಿಗಾಗಿ ಅವರ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಆಚರಿಸಬೇಕೆಂಬ ಕೋರಿಕೆಯನ್ನು ಆಪ್ತರು ಮತ್ತು ಅಭಿಮಾನಿಗಳು ಸಲ್ಲಿಸಿದ್ದು ಈ ಕಾರ್ಯಕ್ರಮವನ್ನು ಬರುವ ಡಿಸೆಂಬರ ತಿಂಗಳಿನಲ್ಲಿ ಹಮ್ಮಿಕೊಳ್ಳಲು ಶಿಕ್ಷಣ ಪ್ರಸಾರಕ ಸಮಿತಿ ನಿರ್ಧರಿಸಿ ದೆ.

ಗಣೇಶ ಹೆಗಡೆ ದೊಡ್ಮನೆ ಜನ್ಮ ಶತಾಬ್ದಿ ಕಾರ್ಯಕ್ರಮದ ಸ್ವರೂಪವನ್ನು ನಿರ್ಧರಿಸುವ ಕುರಿತು ದಿನಾಂಕ:೦೩-೧೦-೨೦೨೧ರಂದು ಬೆಳಿಗ್ಗೆ ೧೦.೩೦ ಕ್ಕೆ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಸಭಾಭವನದಲ್ಲಿ ಸಭೆಯನ್ನು ಕರೆಯಲಾಗಿದ್ದು , ಹೆಗಡೆಯವರನ್ನು ಹತ್ತಿರದಿಂದ ಬಲ್ಲವರು, ಒಡನಾಡಿಗಳು ಮತ್ತು ಅಭಿಮಾನಿಗಳು ಈ ಸಭೆಯಲ್ಲಿ ಪಾಲ್ಗೊಂಡು ಹೆಗಡೆಯವರ ಜನ್ಮ ಶತಾಬ್ದಿ ಕಾ ರ‍್ಯಕ್ರಮದ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಲು ಉಪಾಧ್ಯಕ್ಷರಾದ ಡಾ.ಶಶಿಭೂಷಣ ವಿ ಹೆಗಡೆ ದೊಡ್ಮನೆ ಕೋರಿರುತ್ತಾರೆ.

ತ್ರಿದಿನ ಯಕ್ಷೋತ್ಸವ ಸಮಾಪನ

ಕಲೆಯನ್ನು ಆಸ್ವಾದಿಸುವುದು ಮನುಷ್ಯನ ಮೂಲಭೂತ ಅಸ್ತಿತ್ವಗಳಲ್ಲಿ ಒಂದು. ಮನಃಶಾಂತಿಗೆ ಕಲೆಯು ಆ ಮಟ್ಟಿನ ನೆಲೆಯನ್ನು ಕಲ್ಪಿಸುತ್ತದೆ. ಸಮೃದ್ಧ ಕಲೆಯೆನಿಸಿದ ಯಕ್ಷಗಾನವು ಒಂದು ಅದ್ಭುತವಾದ ಸೃಷ್ಠಿಯೇ ನಿಜ. ಇದನ್ನು ನಮ್ಮ ಭಾಗದ ಜನರು ನೋಡಿ ಆನಂದವನ್ನು ಅನುಭವಿಸುವುದಕ್ಕೆ ಉತ್ತಮ ಅಭಿರುಚಿಯ ಪ್ರದರ್ಶನಗಳನ್ನು ಏರ್ಪಡಿಸುವುದರ ಮೂಲಕ ಕಲಾಭಾಸ್ಕರವು ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಪೋಷಿಸುವ ಹೊಣೆಯೂ ನಮ್ಮೆಲ್ಲರದ್ದಾಗಿದೆ ಎಂದು ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಹೆಗಡೆ ಕೊಡ್ತಗಣಿ ಹೇಳಿದರು.

ಇಟಗಿಯ ಕಲಾಭಾಸ್ಕರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಯಕ್ಷೋತ್ಸವ-೨೦೨೧ರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಹಲವಾರು ವರ್ಷಗಳಿಂದ ಕಲಾಭಾಸ್ಕರ ಜನಶಿಕ್ಷಣವನ್ನೂ ರಾಮಾಯಣ ಹಾಗೂ ಮಹಾಭಾರತದ ಕುರಿತಾದ ತಿಳುವಳಿಕೆಯನ್ನು ನೀಡುತ್ತಿದೆ. ನಿರಂತರವಾದ ಈ ಕಾರ್ಯವು ಸೊಗಸಾಗಿ ನವು ಪೋಷಿಸಿಕೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಾಜಗೋಡು ಪಂಚಾಯತ ಸದಸ್ಯ ಶ್ರೀಪಾದ ಹೆಗಡೆ ಬೈಲಳ್ಳಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಕಲೆಯ ಭಾಗವಾಗಬೇಕು. ಎಲ್ಲರಿಗೂ ತಮ್ಮ ಮನೆಯ ಅಂಗಳದಲ್ಲಿ ಪ್ರದರ್ಶನದ ಏರ್ಪಾಡು ಮಾಡಲಾಗದಿದ್ದರೂ ಆಟ ನಡೆಯುವಲ್ಲಿ ಅವಶ್ಯವಾಗಿ ಹೋಗುವುದರ ಮೂಲಕ ಪ್ರೋತ್ಸಾಹಿಸಬಹುದು. ಸಂಘಟನೆಯು ಕಷ್ಟಸಾಧ್ಯವಾದ ಕಾಲದಲ್ಲೂ ಯಕ್ಷಗಾನಗಳು ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ರಾ.ವಿ.ಪ್ರೌಢಶಾಲೆಯ ಮುಖ್ಯಾಧ್ಯಾಪಕ ಡಿ.ಜಿ.ಪೂಜಾರ ಹಾಗೂ ಕಲಾ ಪ್ರೋತ್ಸಾಹಕರಾದ ಭುವನೇಶ್ವರಿ ಹೆಗಡೆ ಹೊಸಗದ್ದೆಯವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಮಹಾಬಲೇಶ್ವರ ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ವಂದಿಸಿದರು. ನಂತರ ಎಂ.ಎ.ಹೆಗಡೆ ದಂಟಕಲ್ ವಿರಚಿತ “ಸೀತಾ ಪರಿತ್ಯಾಗ” ಎಂಬ ಆಖ್ಯಾನದ ಯಕ್ಷಗಾನ ಪ್ರದರ್ಶನವು ನಡೆಯಿತು.

ರಾಮಾಯಣದ ಅತ್ಯಂತ ರಸಘಟ್ಟಿ ಭಾಗವಾದ ಈ ಕತೆಯ ರಂಗದಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಆದರೂ ಎಲ್ಲ ಕಲಾವಿದರ ಪರಿಶ್ರಮದಿಂದ ಉತ್ತಮ ರಂಗ ಕೃತಿಯಾಗಿ ಮೂಡಿ ಬಂತು. ಲಕ್ಷö್ಮಣನಾಗಿ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ ಹಿರಿಯ ಕಲಾವಿದ ಗೋಪಾಲ ಆಚಾರ್ಯ ತೀರ್ಥಹಳ್ಳಿಯವರು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಲಗದ್ದೆ ವಿನಾಯಕ ಹೆಗಡೆಯವರು ಗಂಭೀರವಾಗಿ ರಾಮನಾಗಿ ಕಾಣಿಸಿಕೊಂಡರು. ಪರಿತ್ಯಕ್ತ ಸೀತೆಯಾಗಿ ಹಲವು ಆಯಾಮಗಳಿಂದ ಇಟಗಿ ಮಹಾಬಲೇಶ್ವರ ಪ್ರಬುದ್ಧವಾಗಿ ಅಭಿನಯಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಯಿತು. ಗುಂಜಗೋಡು ಗಣಪತಿ ಹೆಗಡೆಯವರು ಗೂಢಚಾರ ಭದ್ರನಾಗಿ ಹಾಗೂ ವಾಸಿಷ್ಠನಾಗಿ ಅಭಿನಯಿಸಿದರು. ವಾಲ್ಮೀಕಿಯಾಗಿ ಮತ್ತು ರಜಕನಾಗಿ ಮೂರೂರು ನಾಗೇಂದ್ರ ವಿಭಿನ್ನವಾಗಿ ನಟಿಸಿದರು. ನಾಗಪತಿ ಹೆಗಡೆ ಕೊಪ್ಪ ರಜಕನ ಪತ್ನಿಯಾಗಿ ಹಾಸ್ಯರಸವನ್ನು ಹರಿಸಿದರು. ಒಟ್ಟಾರೆಯಾಗಿ ಪ್ರೇಕ್ಷಕರು ರಸಾನಂದವನ್ನು ಅನುಭವಿಸಿದರು.

ನಿಧನ
ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಜಟ್ಯಪ್ಪ ಈಸ್ರಾ ನಾಯ್ಕ, ಕಾನಗೋಡ ಗುರುವಾರ ಸ್ವಗ್ರಹದಲ್ಲಿ ನಿಧನರಾಗಿರುತ್ತಾರೆ. ಇವರು ಒಬ್ಬ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು – ಮಿತ್ರ, ಮತ್ತು ನಿವೃತ್ತ ಸಂಘದ ಸದಸ್ಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ನಿವೃತ್ತ ನೌಕರರ ಸಂಘದವರು ಸಂತಾಪ ಸೂಚಿಸಿದ್ದಾರೆ.

ಜ್ಜಾಪಿಸಲೇ ಬೇಕಾದ
ದೊಡ್ಡಪ್ಪ (ಗುರುಗಳು) ಜೆ‌.ಆಯ್. ನಾಯ್ಕ್.

1) ಎಸ್.ಬಂಗಾರಪ್ಪನವರು
ಲೋಕೋಪಯೋಗಿ ಮಂತ್ರಿ
ಆಗಿದ್ದ ಸಮಯದಲ್ಲಿ
ಕಾನಗೋಡ ನಲ್ಲಿ ಇರುವ
ಗುತ್ತಿಮನೆ ಕುಂಬಾರರ ಸೊಸೈಟಿ
ಉದ್ಘಾಟನಾ ( ಸಭಾಕಾರ್ಯಕ್ರಮ ಮಾರುತಿ ದೇವಸ್ಥಾನದಲ್ಲಿ ) ಸಮಾರಂಭದಲ್ಲಿ
ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆ ಮಾಡಿ ಬಂಗಾರಪ್ಪನವರ ಮೆಚ್ಚುಗೆ ಪಡೆದಿದ್ದರು.

2) 1978-79 ರ ಸಾಲಿನಲ್ಲಿ ಸ್ಟೈಪಂಡರಿ ಪದವಿದರರಾಗಿ ಕಾನಗೋಡ ಪ್ರಾಥಮಿಕ ಶಾಲೆಯಲ್ಲಿ part-time ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯಲು ಪ್ರೇರಣೆ ನೀಡುತ್ತಿದ್ದರು.

  1. ಮಕ್ಕಳಿಗೆ ಭಾಷಣ ಮಾಡಲು
    ಕಲಿಸುತ್ತಿದ್ದರು.
  2. ಕಲಾವಿದರಾಗಿ ಗ್ರಾಮದ ಹಲವಾರು ನಾಟಕದಲ್ಲಿ ಅಭಿನಯಿಸಿದ್ದರು.
  3. ಕಾನಗೋಡಿನ ಜಾತ್ರಾ ಕಮಿಟಿಯ ಕಾರ್ಯದರ್ಶಿಯಾಗಿ ಅದೇಷ್ಟೋ ಜವಾಬ್ದಾರಿಗಳನ್ನು ನಿರ್ವಹಿಸಿದ ವ್ಯಕ್ತಿತ್ವ ಇವರದ್ದು.

ಇನ್ನು JIN ನೆನಪು ಮಾತ್ರ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. -ಮಿಥುನ್ ದೊಡ್ಮನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *